AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ನಿಮ್ಮ ಬ್ಯಾಂಕ್ ಖಾತೆ ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣವಾಗಿದೆಯಾ? ಹಣ ಹಿಂಪಡೆಯುವುದು ಹೇಗೆ?

Unclaimed Bank Deposits: ಹತ್ತಕ್ಕೂ ಹೆಚ್ಚು ವರ್ಷಗಳಿಂದ ವಹಿವಾಟು ನಡೆಯದ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮತ್ತು ಟರ್ಮ್ ಡೆಪಾಸಿಟ್ ಹಣವನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ವರ್ಗೀಕರಿಸಲಾಗುತ್ತದೆ. ಇಂಥ ಇನಾಪರೇಟಿವ್ ಅಕೌಂಟ್ ಮತ್ತು ಅನ್​ಕ್ಲೈಮ್ಡ್ ಡೆಪಾಸಿಟ್​ಗಳನ್ನು ಆರ್​ಬಿಐನ ಡಿಇಒ ಫಂಡ್​ಗೆ ವರ್ಗಾಯಿಸಲಾಗುತ್ತದೆ. ಈ ಹಣವನ್ನು ಆಯಾ ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್​ಬಿಐ ವಿವಿಧ ಕ್ರಮ ಕೈಗೊಂಡಿದೆ.

RBI: ನಿಮ್ಮ ಬ್ಯಾಂಕ್ ಖಾತೆ ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಣವಾಗಿದೆಯಾ? ಹಣ ಹಿಂಪಡೆಯುವುದು ಹೇಗೆ?
ಬ್ಯಾಂಕ್ ಖಾತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 1:04 PM

Share

ಒಂದು ಬ್ಯಾಂಕ್ ಖಾತೆಯಲ್ಲಿ 10ಕ್ಕೂ ಹೆಚ್ಚು ವರ್ಷಗಳಿಂದ ವಹಿವಾಟು ನಡೆಯದೇ ಹೋದರೆ ಅಂಥವನ್ನು ಇನಾಪರೇಟಿವ್ ಬ್ಯಾಂಕ್ ಅಕೌಂಟ್ (Inoperative bank account) ಎಂದು ವರ್ಗೀಕರಿಸಲಾಗುತ್ತದೆ. ಇದು ನಿಶ್ಚಿತ ಠೇವಣಿಗಳಿಗೂ ಅನ್ವಯ ಆಗುತ್ತದೆ. ಖಾತೆದಾರರು ಮೃತಪಟ್ಟು ಅವರ ಖಾತೆಯ ಹಣಕ್ಕೆ ಯಾರೂ ಕ್ಲೈಮ್ ಮಾಡದೇ ಹೋಗಿ, ನಿಷ್ಕ್ರಿಯಗೊಂಡ ಅಕೌಂಟ್​ಗಳೇ ಹೆಚ್ಚು. ಇಂಥ ಇನಾಪರೇಟಿವ್ ಅಕೌಂಟ್​ನಿಂದ ಕ್ಲೈಮ್ ಆಗದೇ ಇರುವ ಹಣವನ್ನು ಆರ್​ಬಿಐನ ಡಿಇಎ ಫಂಡ್​ಗೆ (Depositor Education and Awareness) ವರ್ಗಾಯಿಸಲಾಗುತ್ತದೆ. ಈಗ ಇಂಥ ಅನ್​ಕ್ಲೈಮ್ಡ್ ಡೆಪಾಸಿಟ್​ಗಳ ಮೊತ್ತ 40,000 ಕೋಟಿ ರೂಗೂ ಹೆಚ್ಚಿದೆ. ಇದನ್ನು ಅದರ ವಾರಸುದಾರರಿಗೆ ತಲುಪಿಸಲು ಆರ್​ಬಿಐ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಆರ್​ಬಿಐ ಮಾರ್ಗಸೂಚಿ…

ನಿಷ್ಕ್ರಿಯ ಬ್ಯಾಂಕ್ ಖಾತೆ ಮತ್ತು ಕ್ಲೈಮ್ ಆಗದ ಠೇವಣಿ ಹಣದ ವಿಚಾರದಲ್ಲಿ ಆರ್​ಬಿಐ ಇತ್ತೀಚೆಗೆ ಕೆಲ ಮಾರ್ಗಸೂಚಿಗಳನ್ನು ಬ್ಯಾಂಕುಗಳಿಗೆ ನೀಡಿತ್ತು. ಇತ್ತೀಚಿನ ಕೆಲ ನಿಯಮಗಳಿವು:

  • ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಹಿವಾಟು ನಡೆಯದ ಖಾತೆಗಳಿವೆಯಾ ಎಂದು ಪ್ರತೀ ವರ್ಷವೂ ಬ್ಯಾಂಕುಗಳು ಪರಿಶೀಲನೆ ನಡೆಸಬೇಕು.
  • ರಿನಿವ್ ಆಗದ ಅವಧಿ ಠೇವಣಿಗಳನ್ನೂ ಪರಿಶೀಲಿಸಬೇಕು.
  • ಎರಡಕ್ಕಿಂತ ಕಡಿಮೆ ಅವಧಿ ನಿಷ್ಕ್ರಿಯವಾಗಿರುವ ಮತ್ತು ಝೀರೋ ಬ್ಯಾಲನ್ಸ್ ಇರುವ ಖಾತೆಗಳನ್ನು ಇನಾಪರೇಟಿವ್ ಅಕೌಂಟ್ ಎಂದು ವರ್ಗೀಕರಿಸಬಾರದು.

ಇದನ್ನೂ ಓದಿ: Bank Minimum Balance: ಮಿನಿಮಮ್ ಬ್ಯಾಲನ್ಸ್ ಚಿಂತೆ ಬೇಡ; ನಿಶ್ಚಿಂತೆಯಿಂದ ಹಳೇ ಖಾತೆ ರೀಓಪನ್ ಮಾಡಿ; ಆರ್​ಬಿಐ ಸೂಚನೆ ತಿಳಿದಿರಿ…

ಒಂದು ಬ್ಯಾಂಕ್ ಖಾತೆ ಇನಾಪರೇಟಿವ್ ಆಗಿಹೋದರೆ ಅದಕ್ಕೆ ಹಣವನ್ನು ಡೆಪಾಸಿಟ್ ಮಾಡಲು ಆಗುವುದಿಲ್ಲ. ಸರ್ಕಾರದ ಡಿಬಿಟಿ ವರ್ಗಾವಣೆ ಮತ್ತು ಸ್ಕಾಲರ್​ಶಿಪ್ ಹಣ ವರ್ಗಾವಣೆಗೆ ಇದರಿಂದ ತೊಂದರೆ ಆಗುತ್ತಿದೆ. ಹೀಗಾಗಿ, ಸರ್ಕಾರಕ್ಕೂ ಈ ಖಾತೆಗಳು ತಲೆನೋವಾಗಿವೆ.

ನಿಷ್ಕ್ರಿಯವಾಗಿರುವ ನಿಮ್ಮ ಹಳೆಯ ಖಾತೆ ಯಾವುದಾದರೂ ಇದ್ದಲ್ಲಿ ಮೊದಲು ಅದರಿಂದ ವಹಿವಾಟು ನಡೆಸಲು ಪ್ರಯತ್ನಿಸಿ. ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಬಹುದು. ಅಥವಾ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ಗೆ ಹೋದರೆ ಅಲ್ಲಿ ಇನಾಪರೇಟಿವ್ ಅಕೌಂಟ್​ಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಖಾತೆ ಇದೆಯಾ ಪರಿಶೀಲಿಸಿ.

ಒಂದು ವೇಳೆ ಖಾತೆದಾರರು ಮೃತಪಟ್ಟಿದ್ದರೆ ಅವರ ಮರಣ ಪ್ರಮಾಣಪತ್ರ, ವಿಳಾಸ ಪುರಾವೆ ಮತ್ತು ಗುರುತು ಪುರಾವೆ ದಾಖಲೆಗಳನ್ನು ಒದಗಿಸಿ ವಾರಸುದಾರರು ಆ ಹಣವನ್ನು ಸ್ವೀಕರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!