AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Cruise Tourism: ಐಆರ್​ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ

ಐಆರ್​ಸಿಟಿಸಿಯಿಂದ ಭಾರತದಲ್ಲಿ ಮೊದಲ ಬಾರಿಗೆ ದೇಶೀಯ ಕ್ರೂಸ್ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

IRCTC Cruise Tourism: ಐಆರ್​ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ
ಕ್ರೂಸ್
TV9 Web
| Edited By: |

Updated on: Sep 18, 2021 | 11:50 AM

Share

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್​ (IRCTC)ನಿಂದ ಖಾಸಗಿ ಕಂಪೆನಿಯಾದ ಕಾರ್ಡೆಲಿಯಾ ಕ್ರೂಸಸ್ ಸಹಯೋಗದಲ್ಲಿ ದೇಶದ ಮೊದಲ ದೇಶೀಯ ಕ್ರೂಸ್​ ಅನ್ನು ಶನಿವಾರ ಆರಂಭಿಸಲಿದೆ. ಕೊವಿಡ್-19 ಪರಿಸ್ಥಿತಿ ತಿಳಿಯಾಗಿ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರೂಸ್​ಗಳು ಸಹಜವಾದ ಕಾರ್ಯಾಚರಣೆ ಆರಂಭಿಸಲಿದೆ. ಶೀಘ್ರದಲ್ಲೇ ಐಆರ್​ಸಿಟಿಸಿ ವೆಬ್​ ಪೋರ್ಟಲ್ ಮೂಲಕವಾಗಿ ಬುಕ್ಕಿಂಗ್ ಮಾಡಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆಯು ತಿಳಿಸಿದೆ. ಈ ವಿಲಾಸಿ ಪ್ರಯಾಣದ ಅನುಭವದಲ್ಲಿ ದೇಶೀಯ ಕ್ರೂಸ್​ ಬಳಸಲಾಗುತ್ತದೆ. ಅತಿಥಿಗಳನ್ನು ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಗೋವಾ, ಡಿಯು, ಕೊಚ್ಚಿ, ಲಕ್ಷದ್ವೀಪ ಮತ್ತು ಶ್ರೀಲಂಕಾದಂಥ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಅಂದಹಾಗೆ ಕಾರ್ಡೆಲಿಯಾ ಕ್ರೂಸಸ್ ಎಂಬುದು ಭಾರತದ ಪ್ರೀಮಿಯಂ ಕ್ರೂಸ್ ಲೈನರ್​ಗಳಾಗಿದ್ದು, ಭಾರತದಲ್ಲಿ ಕ್ರೂಸ್​ ಪ್ರವಾಸ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸ್ಟೈಲಿಷ್, ವಿಲಾಸಿ ಮತ್ತು ಅವೆಲ್ಲಕ್ಕೂ ಮುಖ್ಯವಾಗಿ ಭಾರತೀಯತೆಯ ಅನುಭವವು ಪ್ರವಾಸಿಗರಿಗೆ ದೊರೆಯಬೇಕು ಎಂಬ ಗುರಿಯನ್ನು ಕಾರ್ಡೆಲಿಯಾ ಹೊಂದಿದೆ. ಈ ತಿಂಗಳ ಆರಂಭದಲ್ಲಿ ಐಆರ್​ಸಿಟಿಸಿಯಿಂದ ಈ ಬಗ್ಗೆ ಹೇಳಿಕೆ ನೀಡಿದ್ದು, ದೇಶೀಯವಾದ ವಿಲಾಸಿ ಕ್ರೂಸ್​ ಜಲ ಪ್ರವಾಸೋದ್ಯಮವನ್ನು ಮಾರ್ಕೆಟಿಂಗ್ ಹಾಗೂ ಉತ್ತೇಜನ ನೀಡಲು ಕಾರ್ಡೆಲಿಯಾ ಜತೆ ಕೈಜೋಡಿಸಿ, ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದಿತ್ತು. ಐಆರ್​ಸಿಟಿಸಿ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಮತ್ತೊಂದು ವೈಶಿಷ್ಟ್ಯಪೂರ್ಣ ವಿಲಾಸಿ ಪ್ರವಾಸದ ಆಫರಿಂಗ್ ಇದು ಎಂದು ಹೇಳಲಾಗಿದೆ.

ಪ್ರವಾಸಿ ತಾಣಗಳು ಕಾರ್ಡೆಲಿಯಾ ಕ್ರೂಸಸ್​ನವರ ಕೆಲವು ಜನಪ್ರಿಯ ತಾಣಗಳಿವು: – ಮುಂಬೈ- ಗೋವಾ- ಮುಂಬೈ (ಎರಡು ರಾತ್ರಿ) – ಮುಂಬೈ- ಡಿಯು- ಮುಂಬೈ (ಎರಡು ರಾತ್ರಿ) – ಮುಂಬೈ- ಸಮುದ್ರದಲ್ಲಿ- ಮುಂಬೈ (ಎರಡು ರಾತ್ರಿ) – ಕೊಚ್ಚಿ- ಲಕ್ಷದ್ವೀಪ್- ಸಮುದ್ರದಲ್ಲಿ- ಮುಂಬೈ (4 ರಾತ್ರಿ) – ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ್-ಸಮುದ್ರದಲ್ಲಿ-ಮುಂಬೈ (4 ರಾತ್ರಿ) – ಗೋವಾ-ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ-ಸಮುದ್ರದಲ್ಲಿ-ಗೋವಾ (5 ರಾತ್ರಿ) -ಚೆನ್ನೈ- ಸಮುದ್ರದಲ್ಲಿ- ಕೊಲೊಂಬೋ (ಎರಡು ರಾತ್ರಿ) – ಚೆನ್ನೈ-ಜಾಫ್ನಾ-ಚೆನ್ನೈ (ಎರಡು ರಾತ್ರಿ) – ಚೆನ್ನೈ-ಸಮುದ್ರದಲ್ಲಿ-ಕೊಲೊಂಬೊ-ಗಾಲೆ-ಟ್ರಂಕಾಮಲಿ-ಚೆನ್ನೈ (5 ರಾತ್ರಿ)

ಕಾರ್ಡೆಲಿಯಾ ಕ್ರೂಸಸ್​ನಿಂದ ಹಲವು ವಿಶ್ರಾಂತಿ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ರೆಸ್ಟೋರೆಂಟ್, ಈಜುಕೊಳ, ಬಾರ್, ಓಪನ್ ಸಿನಿಮಾ, ಥೇಟರ್, ಮಕ್ಕಳ ಪ್ರದೇಶ, ಜಿಮ್ನಾಶಿಯಂ ಮುಂತಾದವು. ಅಂತರರಾಷ್ಟ್ರೀಯ ಕ್ರೂಸ್ ಲೈನರ್ಸ್​ನಲ್ಲಿ ಏನೆಲ್ಲ ಸೌಕರ್ಯ, ಸವಲತ್ತು, ಗುಣಮಟ್ಟ ಇರುತ್ತದೋ ಅದಕ್ಕೆ ಸಮವಾಗಿ ಈ ಕ್ರೂಸ್​ನಲ್ಲೂ ಇರುತ್ತದೆ.

ಐಆರ್​ಸಿಟಿಸಿ ಕ್ರೂಸ್ ಲೈನರ್​ಗಳು ಗೋವಾ, ಡಿಯು, ಲಕ್ಷದ್ವೀಪ, ಕೊಚ್ಚಿ ಮತ್ತು ಶ್ರೀಲಂಕಾಗೆ ಪ್ರಯಾಣಿಸುವಂಥದ್ದು ಮೊದಲಿಗೆ ಅತಿಥಿಗಳು ಭಾರತೀಯ ಸ್ಥಳಗಳಲ್ಲಿ ಸುತ್ತಾಡಲು ಅನುವು ಮಾಡಿಕೊಡುತ್ತವೆ. ಮೂಲ ಸ್ಥಳ ಮುಂಬೈ ಆಗಿರುತ್ತದೆ. ಎರಡನೇ ಹಂತದಲ್ಲಿ, 2022ರ ಮೇ ತಿಂಗಳಿಂದ ಕ್ರೂಸ್​ ಚೆನ್ನೈಗೆ ಸ್ಥಳಾಂತರ ಆಗುತ್ತದೆ. ಆಗ ಶ್ರೀಲಂಕಾದ ಸ್ಥಳಗಳಾದ ಕೊಲೊಂಬೊ, ಗಾಲೆ, ಟ್ರಂಕಾಮಲಿ ಮತ್ತು ಜಾಫ್ನಾಕ್ಕೆ ಸಂಚರಿಸುತ್ತವೆ.

ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು

(IRCTC Launched India’s First Indigenous Luxury Cruise Package With Collaboration Of Cordelia Cruise )

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ