AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Cruise Tourism: ಐಆರ್​ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ

ಐಆರ್​ಸಿಟಿಸಿಯಿಂದ ಭಾರತದಲ್ಲಿ ಮೊದಲ ಬಾರಿಗೆ ದೇಶೀಯ ಕ್ರೂಸ್ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

IRCTC Cruise Tourism: ಐಆರ್​ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ
ಕ್ರೂಸ್
TV9 Web
| Edited By: |

Updated on: Sep 18, 2021 | 11:50 AM

Share

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್​ (IRCTC)ನಿಂದ ಖಾಸಗಿ ಕಂಪೆನಿಯಾದ ಕಾರ್ಡೆಲಿಯಾ ಕ್ರೂಸಸ್ ಸಹಯೋಗದಲ್ಲಿ ದೇಶದ ಮೊದಲ ದೇಶೀಯ ಕ್ರೂಸ್​ ಅನ್ನು ಶನಿವಾರ ಆರಂಭಿಸಲಿದೆ. ಕೊವಿಡ್-19 ಪರಿಸ್ಥಿತಿ ತಿಳಿಯಾಗಿ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರೂಸ್​ಗಳು ಸಹಜವಾದ ಕಾರ್ಯಾಚರಣೆ ಆರಂಭಿಸಲಿದೆ. ಶೀಘ್ರದಲ್ಲೇ ಐಆರ್​ಸಿಟಿಸಿ ವೆಬ್​ ಪೋರ್ಟಲ್ ಮೂಲಕವಾಗಿ ಬುಕ್ಕಿಂಗ್ ಮಾಡಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆಯು ತಿಳಿಸಿದೆ. ಈ ವಿಲಾಸಿ ಪ್ರಯಾಣದ ಅನುಭವದಲ್ಲಿ ದೇಶೀಯ ಕ್ರೂಸ್​ ಬಳಸಲಾಗುತ್ತದೆ. ಅತಿಥಿಗಳನ್ನು ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಗೋವಾ, ಡಿಯು, ಕೊಚ್ಚಿ, ಲಕ್ಷದ್ವೀಪ ಮತ್ತು ಶ್ರೀಲಂಕಾದಂಥ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಅಂದಹಾಗೆ ಕಾರ್ಡೆಲಿಯಾ ಕ್ರೂಸಸ್ ಎಂಬುದು ಭಾರತದ ಪ್ರೀಮಿಯಂ ಕ್ರೂಸ್ ಲೈನರ್​ಗಳಾಗಿದ್ದು, ಭಾರತದಲ್ಲಿ ಕ್ರೂಸ್​ ಪ್ರವಾಸ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸ್ಟೈಲಿಷ್, ವಿಲಾಸಿ ಮತ್ತು ಅವೆಲ್ಲಕ್ಕೂ ಮುಖ್ಯವಾಗಿ ಭಾರತೀಯತೆಯ ಅನುಭವವು ಪ್ರವಾಸಿಗರಿಗೆ ದೊರೆಯಬೇಕು ಎಂಬ ಗುರಿಯನ್ನು ಕಾರ್ಡೆಲಿಯಾ ಹೊಂದಿದೆ. ಈ ತಿಂಗಳ ಆರಂಭದಲ್ಲಿ ಐಆರ್​ಸಿಟಿಸಿಯಿಂದ ಈ ಬಗ್ಗೆ ಹೇಳಿಕೆ ನೀಡಿದ್ದು, ದೇಶೀಯವಾದ ವಿಲಾಸಿ ಕ್ರೂಸ್​ ಜಲ ಪ್ರವಾಸೋದ್ಯಮವನ್ನು ಮಾರ್ಕೆಟಿಂಗ್ ಹಾಗೂ ಉತ್ತೇಜನ ನೀಡಲು ಕಾರ್ಡೆಲಿಯಾ ಜತೆ ಕೈಜೋಡಿಸಿ, ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದಿತ್ತು. ಐಆರ್​ಸಿಟಿಸಿ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಮತ್ತೊಂದು ವೈಶಿಷ್ಟ್ಯಪೂರ್ಣ ವಿಲಾಸಿ ಪ್ರವಾಸದ ಆಫರಿಂಗ್ ಇದು ಎಂದು ಹೇಳಲಾಗಿದೆ.

ಪ್ರವಾಸಿ ತಾಣಗಳು ಕಾರ್ಡೆಲಿಯಾ ಕ್ರೂಸಸ್​ನವರ ಕೆಲವು ಜನಪ್ರಿಯ ತಾಣಗಳಿವು: – ಮುಂಬೈ- ಗೋವಾ- ಮುಂಬೈ (ಎರಡು ರಾತ್ರಿ) – ಮುಂಬೈ- ಡಿಯು- ಮುಂಬೈ (ಎರಡು ರಾತ್ರಿ) – ಮುಂಬೈ- ಸಮುದ್ರದಲ್ಲಿ- ಮುಂಬೈ (ಎರಡು ರಾತ್ರಿ) – ಕೊಚ್ಚಿ- ಲಕ್ಷದ್ವೀಪ್- ಸಮುದ್ರದಲ್ಲಿ- ಮುಂಬೈ (4 ರಾತ್ರಿ) – ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ್-ಸಮುದ್ರದಲ್ಲಿ-ಮುಂಬೈ (4 ರಾತ್ರಿ) – ಗೋವಾ-ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ-ಸಮುದ್ರದಲ್ಲಿ-ಗೋವಾ (5 ರಾತ್ರಿ) -ಚೆನ್ನೈ- ಸಮುದ್ರದಲ್ಲಿ- ಕೊಲೊಂಬೋ (ಎರಡು ರಾತ್ರಿ) – ಚೆನ್ನೈ-ಜಾಫ್ನಾ-ಚೆನ್ನೈ (ಎರಡು ರಾತ್ರಿ) – ಚೆನ್ನೈ-ಸಮುದ್ರದಲ್ಲಿ-ಕೊಲೊಂಬೊ-ಗಾಲೆ-ಟ್ರಂಕಾಮಲಿ-ಚೆನ್ನೈ (5 ರಾತ್ರಿ)

ಕಾರ್ಡೆಲಿಯಾ ಕ್ರೂಸಸ್​ನಿಂದ ಹಲವು ವಿಶ್ರಾಂತಿ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ರೆಸ್ಟೋರೆಂಟ್, ಈಜುಕೊಳ, ಬಾರ್, ಓಪನ್ ಸಿನಿಮಾ, ಥೇಟರ್, ಮಕ್ಕಳ ಪ್ರದೇಶ, ಜಿಮ್ನಾಶಿಯಂ ಮುಂತಾದವು. ಅಂತರರಾಷ್ಟ್ರೀಯ ಕ್ರೂಸ್ ಲೈನರ್ಸ್​ನಲ್ಲಿ ಏನೆಲ್ಲ ಸೌಕರ್ಯ, ಸವಲತ್ತು, ಗುಣಮಟ್ಟ ಇರುತ್ತದೋ ಅದಕ್ಕೆ ಸಮವಾಗಿ ಈ ಕ್ರೂಸ್​ನಲ್ಲೂ ಇರುತ್ತದೆ.

ಐಆರ್​ಸಿಟಿಸಿ ಕ್ರೂಸ್ ಲೈನರ್​ಗಳು ಗೋವಾ, ಡಿಯು, ಲಕ್ಷದ್ವೀಪ, ಕೊಚ್ಚಿ ಮತ್ತು ಶ್ರೀಲಂಕಾಗೆ ಪ್ರಯಾಣಿಸುವಂಥದ್ದು ಮೊದಲಿಗೆ ಅತಿಥಿಗಳು ಭಾರತೀಯ ಸ್ಥಳಗಳಲ್ಲಿ ಸುತ್ತಾಡಲು ಅನುವು ಮಾಡಿಕೊಡುತ್ತವೆ. ಮೂಲ ಸ್ಥಳ ಮುಂಬೈ ಆಗಿರುತ್ತದೆ. ಎರಡನೇ ಹಂತದಲ್ಲಿ, 2022ರ ಮೇ ತಿಂಗಳಿಂದ ಕ್ರೂಸ್​ ಚೆನ್ನೈಗೆ ಸ್ಥಳಾಂತರ ಆಗುತ್ತದೆ. ಆಗ ಶ್ರೀಲಂಕಾದ ಸ್ಥಳಗಳಾದ ಕೊಲೊಂಬೊ, ಗಾಲೆ, ಟ್ರಂಕಾಮಲಿ ಮತ್ತು ಜಾಫ್ನಾಕ್ಕೆ ಸಂಚರಿಸುತ್ತವೆ.

ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು

(IRCTC Launched India’s First Indigenous Luxury Cruise Package With Collaboration Of Cordelia Cruise )

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?