AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC: ಐಆರ್​ಸಿಟಿಸಿ ಷೇರು ಒಂದೇ ದಿನದಲ್ಲಿ ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ

ಐಆರ್​ಸಿಟಿಸಿ ಷೇರು ಬೆಲೆ ಅಕ್ಟೋಬರ್​ 19, 2021ರಂದು ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ ಕಂಡಿದೆ. ಏಕೆ ಇಂಥ ಬೆಳವಣಿಗೆ ಆಗಿದೆ ಎಂಬುದರ ವಿವರ ಇಲ್ಲಿದೆ.

IRCTC: ಐಆರ್​ಸಿಟಿಸಿ ಷೇರು ಒಂದೇ ದಿನದಲ್ಲಿ ತಲಾ 1000 ರೂಪಾಯಿಗೂ ಹೆಚ್ಚು ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 19, 2021 | 5:33 PM

ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಡೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಷೇರುಗಳು ಮಂಗಳವಾರದ (ಅಕ್ಟೋಬರ್ 19, 2021) ವಹಿವಾಟಿನಲ್ಲಿ ಪ್ರತಿ ಷೇರಿಗೆ 1,400 ರೂಪಾಯಿ ಅಥವಾ ಶೇ 15ರಷ್ಟು ಹಠಾತ್ ಕುಸಿತವನ್ನು ಕಂಡವು. ದಿನದ ಕೊನೆಗೆ ಈ ಷೇರಿನ ಬೆಲೆ ಶೇ 8ಕ್ಕಿಂತಲೂ ಕಡಿಮೆಯಾಗಿ, ತಲಾ 5,363 ರೂಪಾಯಿಗೆ ಕೊನೆಗೊಂಡಿತು. ಐಆರ್‌ಸಿಟಿಸಿ ಷೇರುಗಳು ಇಂದಿನ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ ಮಟ್ಟವಾದ 6,393 ರೂಪಾಯಿಯನ್ನು ಮುಟ್ಟಿತು. ಆ ವೇಳೆ ಷೇರಿನ ದರವು ಶೇ 7ರಷ್ಟು ಹೆಚ್ಚಳವಾಗಿ, ಮಾರುಕಟ್ಟೆ ಬಂಡವಾಳ ಮೌಲ್ಯವು 1 ಟ್ರಿಲಿಯನ್ (ಲಕ್ಷ ಕೋಟಿ ರೂಪಾಯಿ) ದಾಟಿತ್ತು. ಮಾರ್ಕೆಟ್​ಗಳು ಕೂಡ ಇಂದು ಅಸ್ಥಿರವಾಗಿದ್ದವು. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 62,000 ಪಾಯಿಂಟ್ಸ್​ ತಲುಪಿದ ನಂತರ 49 ಅಂಕಗಳ ಕುಸಿತ ಕಂಡಿದೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್​ನಲ್ಲಿ ಹೆಚ್ಚಿನ ಲಾಭದ ಬುಕಿಂಗ್ ಕಂಡುಬಂದಿದೆ.

“ಇಂದಿನ ವಹಿವಾಟಿನಲ್ಲಿ ವಿಶೇಷವಾಗಿ ಮಿಡ್‌ಕ್ಯಾಪ್‌ಗಳು ಮತ್ತು ಸ್ಮಾಲ್‌ಕ್ಯಾಪ್ಸ್ ಕೌಂಟರ್‌ಗಳಲ್ಲಿ ಚಲನೆಯು ಕಂಡುಬಂದ ನಂತರ ಹೂಡಿಕೆದಾರರು ಈ ಹಂತಗಳಲ್ಲಿ ಜಾಗರೂಕರಾಗಿರಬೇಕು. ಹೂಡಿಕೆದಾರರು ತಮ್ಮ ಕಟ್ಟುನಿಟ್ಟಾದ ಸ್ಟಾಪ್-ಲಾಸ್ ಇರಿಸಿಕೊಳ್ಳಲು ಸೂಚಿಸಲಾಗಿದೆ. ರೈಲ್ವೇಗೆ ನಿಯಂತ್ರಕರ ನೇಮಕಾತಿಯ ಸುದ್ದಿಯು ಹೊರಬಂದ ನಂತರ ಇಂದು ರೈಲ್ವೆ ಷೇರುಗಳಲ್ಲಿ ದಿನದ ಅಂತ್ಯದಲ್ಲಿ ಒತ್ತಡದಲ್ಲಿ ಕಂಡುಬಂದವು. ಐಆರ್‌ಸಿಟಿಸಿ ಶೇ 15ರಷ್ಟು ಕುಸಿದಿದೆ. ಪವರ್ ಸ್ಟಾಕ್‌ಗಳಲ್ಲಿ ಪ್ರಮುಖ ಪ್ರಾಫಿಟ್​-ಬುಕಿಂಗ್ ಕೂಡ ಕಂಡುಬಂದಿದೆ,” ಎಂದು ವಿಶ್ಲೇಷಕರು ಹೇಳಿದ್ದಾರೆ. “ಐಆರ್​ಸಿಟಿಸಿಗೆ ಮುಂದಿನ ಬೆಂಬಲ 4750 -4500 ರೂಪಾಯಿ ಮಟ್ಟಗಳಲ್ಲಿ ಇರಲಿದ್ದು, ಅಲ್ಲಿಂದ ಪುಟಿದೇಳುವ ನಿರೀಕ್ಷೆಯಿದೆ. ಆದ್ದರಿಂದ ಕುಸಿತದ ಸಂದರ್ಭದಲ್ಲಿ ದೀರ್ಘಾವಧಿ ಹೂಡಿಕೆದಾರರಿಗೆ ಮಾತ್ರ ಸೂಚಿಸಲಾಗುತ್ತದೆ. ಪ್ರಾಫಿಟ್​ ಬುಕಿಂಗ್ ಒತ್ತಡದಲ್ಲಿ ಇರುವುದರಿಂದ ಟ್ರೇಡರ್​ಗಳು ಸ್ಟಾಪ್ ಲಾಸ್​ ಇಟ್ಟುಕೊಳ್ಳುವುದು ಮುಖ್ಯ ಹಾಗೂ ಏರಿಳಿತಗಳು ಹಾಗೇ ಮುಂದುವರಿಯಲಿದೆ,” ಎಂದು ಅವರು ಹೇಳಿದ್ದಾರೆ.

“ಐಆರ್‌ಸಿಟಿಸಿಯ ಮೂಲಭೂತ ಅಂಶಗಳು ಈಗಲೂ ಪ್ರಬಲವಾಗಿವೆ. ಆದರೆ ಇಳಿಕೆ ಓಟದ ನಂತರ ಮೌಲ್ಯಮಾಪನದ ಬಗ್ಗೆ ಕಾಳಜಿ ಇದೆ. ಟ್ರೇಡರ್​ಗಳಿಗೆ ಪ್ರತಿ ದಿನ ಹಣ ಮಾಡುವುದು ಸುಲಭವಾಗಿದೆ. ಹಾಗಾಗಿ ನಾವು ತಾಂತ್ರಿಕ ಇಳಿಕೆಯನ್ನು (Technical Correction) ನೋಡುತ್ತಿದ್ದೇವೆ. ಅಲ್ಲಿ ಮಾನಸಿಕ ಮಟ್ಟವು ರೂ. 5000 ತಕ್ಷಣದ ಬೆಂಬಲವಾಗಿದೆ. ಆದರೆ ಇದು ಕೆಳಗಿಳಿಯುವ ಅಪಾಯವಿದೆ ಮತ್ತು 20-ಡಿಎಂಎ ಕಡೆಗೆ ಹೋಗಬಹುದು ಅದು ರೂ. 4500 ಮಟ್ಟಕ್ಕೆ ಹೊಂದಿಕೆಯಾಗಬಹುದು. ಆದರೆ ರೂ. 4000- ರೂ. 3800 ಹೊಸ ಖರೀದಿ ಸ್ಥಾನಗಳನ್ನು ತೆಗೆದುಕೊಳ್ಳಲು ನಿರ್ಣಾಯಕ ಬೇಡಿಕೆ ವಲಯವಾಗಿರುತ್ತದೆ,” ಎಂದಿದ್ದಾರೆ.

ಐಆರ್​ಸಿಟಿಸಿ ಅಕ್ಟೋಬರ್ 2019ರಲ್ಲಿ ಲಿಸ್ಟಿಂಗ್ ಆಗುವ ಮೂಲಕ ಪ್ರಾಥಮಿಕ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದು ರೈಲ್ವೆ ಜಾಲದಲ್ಲಿ ಶೇ 100ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ರೈಲುಗಳಲ್ಲಿ ಕೇಟರಿಂಗ್ ಸೇವೆಗಳನ್ನು ಮತ್ತು ರೈಲು ನಿಲ್ದಾಣಗಳಲ್ಲಿನ ಪ್ರಮುಖ ಸೇವೆ ಒದಗಿಸುವ ಏಕೈಕ ಸಂಸ್ಥೆ ಇದು. ಭಾರತೀಯ ರೈಲ್ವೆಯ ಪಿಎಸ್‌ಯು ಸ್ಟಾಕ್ ತನ್ನ ಷೇರುದಾರರಿಗೆ ಅತ್ಯುತ್ತಮವಾದ ಲಾಭವನ್ನು ನೀಡುತ್ತಲೇ ಇದೆ. ಅಕ್ಟೋಬರ್ 2019ರಿಂದ ಐಆರ್‌ಸಿಟಿಸಿ ಷೇರು ಬೆಲೆ ಪ್ರತಿ ಷೇರಿಗೆ 320 ರೂಪಾಯಿಯಿಂದ ರೂ. 6,000ಕ್ಕೆ ಶೇ 1,700ರಷ್ಟು ಹೆಚ್ಚಾಗಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ಶೇ 245ರಷ್ಟು ಹೆಚ್ಚಾಗಿದೆ. ಆದರೆ ಒಂದು ವರ್ಷದ ಅವಧಿಯಲ್ಲಿ ಶೇ 275ರಷ್ಟು ಒಟ್ಟುಗೂಡಿಸಿದೆ.

ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ