AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ

IT Notice to LIC: ಎಲ್​ಐಸಿ ಸಂಸ್ಥೆ 290 ಕೋಟಿ ರೂ ಪಾವತಿಸಬೇಕೆಂದು ಜಿಎಸ್​ಟಿ ನೋಟೀಸ್ ಜಾರಿಯಾಗಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ 84 ಕೋಟಿ ರೂಗೆ ಒತ್ತಾಯಿಸಿ ನೋಟೀಸ್ ಜಾರಿ ಮಾಡಿದೆ. ಸೆಪ್ಟೆಂಬರ್ 29ರಂದು ಎಲ್​ಐಸಿಗೆ ಐಟಿ ಇಲಾಖೆ ನೋಟೀಸ್ ಹೊರಡಿಸಿದೆ. ಮೂರು ವರ್ಷಗಳಲ್ಲಿ ಆದಾಯ ತೆರಿಗೆಯ ವಿವಿಧ ನಿಯಮಗಳನ್ನು ಎಲ್​ಐಸಿ ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ದಂಡ ವಿಧಿಸಿ ನೋಟೀಸ್ ಕೊಡಲಾಗಿದೆ.

ಎಲ್​ಐಸಿ ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್; ಮೇಲ್ಮನವಿ ಸಲ್ಲಿಸಲು ವಿಮಾ ನಿಗಮ ನಿರ್ಧಾರ
ಭಾರತೀಯ ಜೀವ ವಿಮಾ ನಿಗಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 10:12 AM

Share

ನವದೆಹಲಿ, ಅಕ್ಟೋಬರ್ 5: ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವುದು ತಿಳಿದುಬಂದಿದೆ. ಇದು ಮೂರು ಅಸೆಸ್ಮೆಂಟ್ ವರ್ಷಗಳಲ್ಲಿ ಎಲ್​ಐಸಿ ಕಟ್ಟದೇ ಉಳಿದಿರುವ ತೆರಿಗೆ ಮೊತ್ತ ಎನ್ನಲಾಗಿದೆ. ಕಳೆದ ವಾರವೇ (ಸೆಪ್ಟೆಂಬರ್ 29) ಐಟಿ ನೋಟೀಸ್ ಜಾರಿಯಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಎಲ್​ಐಸಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಈ ವಿಚಾರವನ್ನು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಎಲ್​ಐಸಿ ತಿಳಿಸಿದೆ.

2012-13, 2018-19 ಮತ್ತು 2019-20ರ ಅಸೆಸ್ಮೆಂಟ್ ವರ್ಷಗಳಲ್ಲಿ ಸರಿಯಾಗಿ ತೆರಿಗೆ ಪಾವತಿಸಿದೇ ಇರುವುದಕ್ಕೆ ಎಲ್​ಐಸಿಗೆ ದಂಡ ವಿಧಿಸಲಾಗಿದೆ. 2012-13ರ ಅಸೆಸ್ಮೆಂಟ್ ವರ್ಷ, ಎಂದರೆ 2011-12ರ ಹಣಕಾಸು ವರ್ಷದಲ್ಲಿ 12.61 ಕೋಟಿ ರೂ ದಂಡ ಹಾಕಲಾಗಿದೆ. 2018-19ರ ಅಸೆಸ್ಮೆಂಟ್ ವರ್ಷಕ್ಕೆ 33.82 ಕೋಟಿ ರೂ ಹಾಗೂ 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂ ದಂಡ ವಿಧಿಸಲಾಗಿದೆ.

1961ರ ಐಟಿ ಕಾಯ್ದೆಯ 271(1)(ಸಿ) ಮತ್ತು 270ಎ ಸೆಕ್ಷನ್​ಗಳ ನಿಯಮಗಳನ್ನು ಎಲ್​ಐಸಿ ಉಲ್ಲಂಘಿಸಿದ್ದು, ಅದಕ್ಕೆ ದಂಡ ವಿಧಿಸಲಾಗಿದೆ ಎಂದು ಸೆಪ್ಟೆಂಬರ್ 29ರಂದು ಸಲ್ಲಿಸಿದ ನೋಟೀಸ್​ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆಗೆ ಸರ್ಕಾರದಿಂದ ಅಧಿಸೂಚನೆ; ಈ ಮಂಡಳಿ ಯಾಕೆ ಮುಖ್ಯ? ಇಲ್ಲಿದೆ ಡೀಟೇಲ್ಸ್

ಕಳೆದ ತಿಂಗಳು 290 ಕೋಟಿ ರೂ ಮೊತ್ತ ಪಾವತಿಸಲು ಜಿಎಸ್​ಟಿ ನೋಟೀಸ್

ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಎಲ್​ಐಸಿ ಸಂಸ್ಥೆಗೆ ಜಿಎಸ್​ಟಿ ನೋಟೀಸ್ ನೀಡಲಾಗಿತ್ತು. ಒಟ್ಟು 290 ರೂ ಜಿಎಸ್​ಟಿ ಕಟ್ಟಬೇಕಿದೆ ಎಂಬುದಾಗಿತ್ತು ಆ ನೋಟೀಸ್. 166.8 ಕೋಟಿ ರೂ ಜಿಎಸ್​ಟಿ ಮೂಲ ಮೊತ್ತ, ಅದಕ್ಕೆ 107.1 ಕೋಟಿ ರೂ ಮೊತ್ತದ ತೆರಿಗೆ ಹಾಗೂ 16.7 ಕೋಟಿ ರೂ ಮೊತ್ತದ ದಂಡ ಒಟ್ಟು ಸೇರಿ 290 ಕೋಟಿ ರೂ ಹಣ ಕಟ್ಟಬೇಕಿದೆ ಎಂದು ತೆರಿಗೆ ಇಲಾಖೆ ಆಗ್ರಹಿಸಿತ್ತು. ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ದುರ್ಬಳಕೆ ಸೇರಿದಂತೆ ಎಲ್​ಐಸಿಯಿಂದ ವಿವಿಧ ನಿಯಮ ಉಲ್ಲಂಘನೆಗಳಾಗಿವೆ ಎಂಬ ಆರೋಪ ಇದೆ.

ಇದನ್ನೂ ಓದಿ: Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್

ಅದಾದ ಬೆನ್ನಲ್ಲೇ ಎಲ್​ಐಸಿಯ ಷೇರುಗಳು ಹಿನ್ನಡೆ ಕಂಡಿದ್ದವು. ಸೆಪ್ಟೆಂಬರ್ 28ರಿಂದ ಅದರ ಷೇರುಬೆಲೆ ಸತತವಾಗಿ ಕುಸಿಯುತ್ತಾ ಬರುತ್ತಿದೆ. 650 ರೂ ಇದ್ದ ಅದರ ಷೇರುಬೆಲೆ ಇದೀಗ 639 ರೂಗೆ ಇಳಿದಿದೆ.

ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್​ಐಸಿ 2022ರ ಮೇ ತಿಂಗಳಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿತ್ತು. 826 ರೂ ಇದ್ದ ಷೇರಿನ ಆರಂಭಿಕ ಬೆಲೆ ಇದೀಗ 186 ರೂಗೂ ಹೆಚ್ಚು ಮೊತ್ತದಷ್ಟು ಕುಸಿತ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ