Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್

SBI Magnum Children's Benefit Fund: 2020ರ ಸೆಪ್ಟೆಂಬರ್ 29ರಂದು ಆರಂಭವಾದ ಎಸ್​ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ 3 ವರ್ಷದಲ್ಲಿ ಹೂಡಿಕೆಯ ಮೊತ್ತವನ್ನು 3 ಪಟ್ಟು ಹೆಚ್ಚಿಸಿದೆ. ಇದರ ಮೇಲೆ ಹಣ ಹಾಕಿದವರಿಗೆ ಭರ್ಜರಿ ಲಾಭ ಸಿಕ್ಕಿದೆ. ಪ್ರಬಲ ವಲಯಗಳಲ್ಲಿರುವ ಕಂಪನಿಗಳ ಷೇರುಗಳ ಮೇಲೆ ಈ ಮ್ಯೂಚುವಲ್ ಫಂಡ್ ಹಣ ಹಾಕಿದೆ. ಇದರಿಂದ ಇಂಡೆಕ್ಸ್ ಫಂಡ್​ಗಳಿಗಿಂತ ಇದು ಹೆಚ್ಚು ಬೆಳವಣಿಗೆ ಹೊಂದಿದೆ.

Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್
ಮ್ಯುಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2023 | 6:51 PM

ಷೇರುಗಳ ಮೇಲೆ ಹೂಡಿಕೆ ಮಾಡಲು ಮ್ಯುಚುವಲ್ ಫಂಡ್ (Mutual fund) ಇದ್ದುದರಲ್ಲಿ ಹೆಚ್ಚು ಸುರಕ್ಷತೆಯ ದಾರಿ. ದೇಶದಲ್ಲಿ ಬಹಳಷ್ಟು ಮ್ಯುಚುವಲ್ ಫಂಡ್​ಗಳಿವೆ. ಈ ಫಂಡ್​ಗಳು ಹೂಡಿಕೆದಾರರ ಹಣವನ್ನು ವಿವಿಧ ಈಕ್ವಿಟಿ, ಡೆಟ್ (debt) ಇತ್ಯಾದಿ ಕಡೆ ವಿನಿಯೋಗಿಸಿ ಲಾಭ ಸೃಷ್ಟಿಸಲು ಯತ್ನಿಸುತ್ತವೆ. ಭಾರತದಲ್ಲಿ 40ಕ್ಕೂ ಹೆಚ್ಚು ಸೆಬಿ ನೊಂದಾಯಿತ ಮ್ಯುಚುವಲ್ ಫಂಡ್ ಕಂಪನಿಗಳಿವೆ. ಒಂದೂವರೆ ಸಾವಿರದಷ್ಟು ಮ್ಯುಚುವಲ್ ಫಂಡ್ ಸ್ಕೀಮ್​ಗಳಿವೆ. ಎಲ್ಲಾ ಮ್ಯೂಚುವಲ್ ಫಂಡ್​ಗಳೂ ಲಾಭ ತರುತ್ತವೆ ಎಂದಲ್ಲ. ಹಲವು ಮ್ಯೂಚುವಲ್ ಫಂಡ್​ಗಳು ನಷ್ಟ ತಂದಿರುವುದುಂಟು. ಸರಾಸರಿಯಾಗಿ ಶೇ. 5ರಿಂದ 15ರಷ್ಟು ಲಾಭವನ್ನು ನಿರೀಕ್ಷಿಸಬಹುದು. ಇನ್ನೂ ಕೆಲ ಮ್ಯುಚುವಲ್ ಫಂಡ್​ಗಳು ಅಚ್ಚರಿ ಹುಟ್ಟುವಷ್ಟು ಲಾಭ ತರುತ್ತವೆ. ಇಂಥ ಕೆಲ ಮ್ಯುಚುವಲ್ ಫಂಡ್​ಗಳಲ್ಲಿ ಎಸ್​ಬಿಐನ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಒಂದು. 2020ರಲ್ಲಿ ಶುರುವಾದ ಈ ಸ್ಕೀಮ್ ಈ 3 ವರ್ಷದಲ್ಲಿ ಶೇ. 44.39ರ ಸಿಎಜಿಆರ್ ದರದಲ್ಲಿ ಲಾಭ ತಂದಿದೆ.

ಎಸ್​ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ತಂದ ಲಾಭವೆಷ್ಟು?

ಈ ಫಂಡ್ 2020ರ ಸೆಪ್ಟೆಂಬರ್ 29ರಂದು ಶುರುವಾಗಿದೆ. ಆಗ ಇದರ ನ್ಯೂ ಫಂಡ್ ಆಫರ್​ನಲ್ಲಿ ನೀವು 10 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಹಣ 30 ಲಕ್ಷಕ್ಕಿಂತ ಹೆಚ್ಚಿರುತ್ತಿತ್ತು. ಇದೇ ಅವಧಿಯಲ್ಲಿ ಬಿಎಸ್​ಇ ಸೆನ್ಸೆಕ್ಸ್ ಟಿಆರ್​ಐ ಇಂಡೆಕ್ಸ್ ಫಂಡ್​ನಲ್ಲಿ ನೀವು ಅಷ್ಟೇ ಹಣ ಹೂಡಿಕೆ ಮಾಡಿದ್ದರೆ 3 ವರ್ಷದಲ್ಲಿ 18 ಲಕ್ಷ ರೂ ಆಗುತ್ತಿತ್ತು. ಅಂದರೆ, ಎಸ್​ಬಿಐನ ಮ್ಯಾಗ್ನಮ್ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್ ಅದೆಷ್ಟು ಅಗಾಧವಾಗಿ ಯಶಸ್ಸು ಕಂಡಿರಬಹುದು…!

ಇದನ್ನೂ ಓದಿ: ಡೀಮ್ಯಾಟ್ ಅಕೌಂಟ್ ಇಲ್ಲದೇ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಸಾಧ್ಯವಾ? ಫೋಲಿಯೋ ಮೂಲಕ ಇನ್ವೆಸ್ಟ್ ಮಾಡಬಹುದಾ?

ನೀವು ಒಮ್ಮೆಗೇ 10 ಲಕ್ಷ ರೂ ಹೂಡಿಕೆ ಮಾಡುವ ಬದಲು ಈ ಮ್ಯೂಚುವಲ್ ಫಂಡ್​ನ ಎಸ್​ಐಪಿ ಯೋಜನೆ ಅಡಿ ತಿಂಗಳಿಗೆ 10,000 ರೂನಂತೆ ಹೂಡಿಕೆ ಮಾಡುತ್ತಾ ಬಂದಿದ್ದರೆ ನಿಮ್ಮ ಈವರೆಗಿನ 3.60 ಲಕ್ಷ ರೂ ಹೂಡಿಕೆಯು 5.41 ಲಕ್ಷ ರೂ ಆಗಿರುತ್ತಿತ್ತು.

ಎಸ್​ಬಿಐ ಮ್ಯಾಗ್ನಂ ಚಿಲ್ಡ್ರನ್ಸ್ ಬೆನಿಫಿಟ್ ಫಂಡ್​ನ ವಿಶೇಷತೆ ಏನು?

ಈ ಫಂಡ್ ಯಾವುದೋ ಒಂದು ಕ್ಷೇತ್ರದ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದಿಲ್ಲ. ವಿವಿಧ ವಲಯಗಳಿಂದ ಕಂಪನಿಗಳನ್ನು ಹೆಕ್ಕಿ ಅವುಗಳ ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಸರ್ಕಾರಿ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗಳಲ್ಲೂ ಇದು ಹೂಡಿಕೆ ಮಾಡುತ್ತದೆ. ಹಾಗೆಯೇ, ವಿದೇಶೀ ಷೇರುಪೇಟೆಗಳಲ್ಲೂ ಹೂಡಿಕೆ ಮಾಡುತ್ತದೆ.

ಆರ್ ಶ್ರೀನಿವಾಸನ್ ಅವರು ಈಕ್ವಿಟಿ ಹೂಡಿಕೆಗಳನ್ನು ನಿರ್ವಹಿಸುತ್ತಾರೆ. ದಿನೇಶ್ ಅಹುಜಾ ಅವರು ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ನಿರ್ವಹಿಸುತ್ತಾರೆ. ಮೋಹಿತ್ ಜೈನ್ ವಿದೇಶೀ ಷೇರುಗಳ ಮೇಲಿನ ಹೂಡಿಕೆಯನ್ನು ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಮೂರು ವರ್ಷಗಳ ಹಿಂದೆ ಆರಂಭವಾದ ಈ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆದಾರರ ಮೊತ್ತ 1,200 ಕೋಟಿ ರೂಗೂ ಹೆಚ್ಚಿದೆ. 29 ಕಂಪನಿಗಳ ಷೇರುಗಳ ಮೇಲೆ ಹೆಚ್ಚಿನ ಹೂಡಿಕೆ ಇದೆ. ಈ ಎಲ್ಲಾ ಕಂಪನಿಗಳು ಸಾಕಷ್ಟು ಲಾಭ ತಂದುಕೊಡುವ ವಲಯದಲ್ಲಿರುವಂಥವು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್