Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?

How to become crorepati: ಮ್ಯುಚುವಲ್ ಫಂಡ್ ಎಸ್​ಐಪಿ ವಿಚಾರದಲ್ಲಿ 15 X 15 X 15 ಸೂತ್ರವೊಂದನ್ನು ತಜ್ಞರು ಮುಂದಿಡುತ್ತಾರೆ. ಇದು ಕೋಟ್ಯಧಿಪತಿ ಆಗಿಸುವಂತಹ ಸೂತ್ರ. ನೀವು ತಿಂಗಳಿಗೆ 15,000 ರೂಗಳಂತೆ ಎಸ್​ಐಪಿಗೆ ಹಣ ತೊಡಗಿಸಿಕೊಳ್ಳುತ್ತಾ ಹೋದರೆ 15 ವರ್ಷದಲ್ಲಿ ನಿಮ್ಮ ಸಂಪತ್ತು ಒಂದು ಕೋಟಿ ರೂ ಗಡಿ ಮುಟ್ಟುತ್ತದೆ. ಇದು ನಿಜವಾಗಬೇಕಾದರೆ ನಿಮ್ಮ ಹೂಡಿಕೆ ಶೇ. 15ರ ವಾರ್ಷಿಕ ದರದಲ್ಲಿ ಬೆಳೆಯಬೇಕು.

Investment Tips: ಒಂದು ಕೋಟಿ ರೂ ಕ್ರೋಢೀಕರಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು?
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 12:01 PM

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ… ಅನ್ನೋ ಗಾದೆ ಮಾತು ಯಾವತ್ತಿಗೂ ನಿಜವೇ. ಕೊನೆಯವರೆಗೂ ನಮ್ಮ ಹೊಟ್ಟೆಪಾಡು ಉಳಿಯಬೇಕಾದರೆ ಹಣ ಸಂಪಾದನೆ ಬಹಳ ಮುಖ್ಯ. ಹಣ ಸಂಪಾದನೆ, ಹಣ ಉಳಿತಾಯ ಮತ್ತು ಹಣ ಹೂಡಿಕೆ (Investment) ಈ ಮೂರು ಅಂಶಗಳು ಬಹಳ ಅಗತ್ಯ. ಬಹಳಷ್ಟು ಹಣ ಇದ್ದವರು ಮೊದಲ ಅಂಶ ಕೈಬಿಟ್ಟರೂ ನಡೆದೀತು, ಆದರೆ ಕೊನೆಯ ಎರಡು ಅಂಶಗಳು ತೀರಾ ಮುಖ್ಯ. ಹಣ ಹೂಡಿಕೆಗೆ ಇವತ್ತು ಹಲವು ಆಯ್ಕೆಗಳಿವೆ. ಅದರಲ್ಲಿ ಮ್ಯುಚುವಲ್ ಫಂಡ್ ಎಸ್​ಐಪಿಗಳು (Mutual Fund SIP) ಪ್ರಮುಖವಾದುವು. ಈಕ್ವಿಟಿ ಅಥವಾ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಗದವರು ಸರಳವಾಗಿ ಎಸ್​ಐಪಿಯೊಂದನ್ನು ಆರಿಸಿಕೊಂಡು ಹೂಡಿಕೆ ಮಾಡಬಹುದು.

15 X 15 X 15 ಸೂತ್ರ

ಮ್ಯುಚುವಲ್ ಫಂಡ್ ಎಸ್​ಐಪಿ ವಿಚಾರದಲ್ಲಿ 15 X 15 X 15 ಸೂತ್ರವೊಂದನ್ನು ತಜ್ಞರು ಮುಂದಿಡುತ್ತಾರೆ. ಇದು ಕೋಟ್ಯಧಿಪತಿ ಆಗಿಸುವಂತಹ ಸೂತ್ರ. ಎಸ್​ಐಪಿ ಸರಾಸರಿಯಾಗಿ ಶೇ. 15ರಷ್ಟು ವಾರ್ಷಿಕ ರಿಟರ್ನ್ ನೀಡುತ್ತದೆಂದು ನಿರೀಕ್ಷಿಸಬಹುದು. ಅದರಂತೆ ನೀವು ತಿಂಗಳಿಗೆ 15,000 ರೂಗಳಂತೆ ಎಸ್​ಐಪಿಗೆ ಹಣ ತೊಡಗಿಸಿಕೊಳ್ಳುತ್ತಾ ಹೋದರೆ 15 ವರ್ಷದಲ್ಲಿ ನಿಮ್ಮ ಸಂಪತ್ತು ಒಂದು ಕೋಟಿ ರೂ ಗಡಿ ಮುಟ್ಟುತ್ತದೆ. ಇದು ಸಾಧ್ಯವಾಗಬೇಕಾದರೆ ಎಸ್​ಐಪಿ ಇರುವ ಮ್ಯುಚುವಲ್ ಫಂಡ್ ವರ್ಷಕ್ಕೆ ಶೇ. 15ರ ದರದಲ್ಲಿ ಲಾಭ ತರಬೇಕು.

ಇದನ್ನೂ ಓದಿ: Mutual fund: 3 ವರ್ಷದಿಂದ ಶೇ. 44ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ ಎಸ್​ಬಿಐನ ಈ ಮ್ಯುಚುವಲ್ ಫಂಡ್

ಕಾಂಪೌಂಡಿಂಗ್ ಎಫೆಕ್ಟ್

ಹೂಡಿಕೆಯಲ್ಲಿ ಇನ್ನೂ ಒಂದು ಪ್ರಮುಖ ಅಂಶ ಇದೆ. ಅದು ಕಾಂಪೌಂಡಿಂಗ್ ಎಫೆಕ್ಟ್. ನಿಮ್ಮ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಬೀಳುವಂತೆ, ಹೂಡಿಕೆಯಲ್ಲೂ ಕೂಡ ನಿಮ್ಮ ಹಣಕ್ಕೆ ಬರುವ ಲಾಭ, ಆ ಲಾಭಕ್ಕೂ ಲಾಭ ಹೀಗೆ ಹಣ ಬೆಳೆಯುತ್ತಾ ಹೋಗುತ್ತದೆ.

ಇದನ್ನೂ ಓದಿ: ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?

ನೀವು ಮ್ಯುಚುವಲ್ ಫಂಡ್ ಎಸ್​ಐಪಿಯಲ್ಲಿ ಹೆಚ್ಚೆಚ್ಚು ಅವಧಿ ಹೂಡಿಕೆ ಮಾಡಿದಷ್ಟೂ ಹಣ ಬೆಳೆಯುವ ವೇಗ ಹೆಚ್ಚುತ್ತಾ ಹೋಗುತ್ತದೆ. ನಿಮ್ಮ ಹೂಡಿಕೆ ಮೊತ್ತ ದ್ವಿಗುಣಗೊಳ್ಳುವ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?