ITR Filing Last Date 2025: ಐಟಿ ರಿಟರ್ನ್ ಸಲ್ಲಿಸಲು ಡೆಡ್​ಲೈನ್ ಮತ್ತೆ ವಿಸ್ತರಣೆಯಾಗುತ್ತಾ?

ITR filing last date to be extended further: ಐಟಿ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15ಕ್ಕೆ ಇರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಟಿಆರ್ ಫಾರ್ಮ್​ಗಳನ್ನು ಅಪ್​ಡೇಟ್ ಮಾಡಲಾಗುತ್ತಿದ್ದುದ್ದರಿಂದ ಸರ್ಕಾರವು ಜುಲೈ 31 ಬದಲು ಸೆಪ್ಟೆಂಬರ್ 15 ಅನ್ನು ಡೆಡ್​ಲೈನ್ ಆಗಿ ನಿಗದಿ ಮಾಡಿತ್ತು. ಈಗ ಕೆಲ ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಗಡುವು ವಿಸ್ತರಣೆ ಆಗಬಹುದು.

ITR Filing Last Date 2025: ಐಟಿ ರಿಟರ್ನ್ ಸಲ್ಲಿಸಲು ಡೆಡ್​ಲೈನ್ ಮತ್ತೆ ವಿಸ್ತರಣೆಯಾಗುತ್ತಾ?
ಆದಾಯ ತೆರಿಗೆ ರಿಟರ್ನ್ಸ್

Updated on: Jul 30, 2025 | 1:05 PM

ನವದೆಹಲಿ, ಜುಲೈ 30: ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಲು ಸಾಮಾನ್ಯವಾಗಿ ಜುಲೈ 31ಕ್ಕೆ ಡೆಡ್​ಲೈನ್ ಇರುತ್ತದೆ. ವಿವಿಧ ಫಾರ್ಮ್​ಗಳು ಇನ್ನೂ ಬಿಡುಗಡೆ ಆಗದೇ ಇರುವುದು ಮತ್ತಿತರ ಕಾರಣಗಳಿಗೆ ಐಟಿಆರ್ ಸಲ್ಲಿಕೆಗೆ ಡೆಡ್​ಲೈನ್ ಅನ್ನು ಜುಲೈ 31ರಿಂದ ಸೆಪ್ಟೆಂಬರ್ 15ಕ್ಕೆ ಏರಿಸಲಾಗಿದೆ. ಈ ಗಡುವಿಗೆ ಇನ್ನು 50 ದಿನವೂ ಉಳಿದಿಲ್ಲ. ಇದೇ ವೇಳೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರವು ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಲು ವಿವಿಧ ಐಟಿಆರ್ ಫಾರ್ಮ್​ಗಳ ಪರಿಷ್ಕರಣೆ ನಡೆಸಿತತು. ಈ ಬದಲಾವಣೆಗಳಿಗಾಗಿ ಸೆಪ್ಟೆಂಬರ್ 15ರವರೆಗೆ ಡೆಡ್​ಲೈನ್ ವಿಸ್ತರಿಸಲಾಗಿತ್ತು. ಈಗ ಕೆಲ ಐಟಿಆರ್ ಫಾರ್ಮ್​ಗಳಿಗೆ ಬೇಕಾದ ಸಂಪನ್ಮೂಲಗಳು ತೆರಿಗೆ ಪಾವತಿದಾರರ ಬಳಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಐಟಿಆರ್ ಫಾರ್ಮ್ 5, 6 ಮತ್ತು 7ಕ್ಕೆ ಆನ್​ಲೈನ್ ಮತ್ತು ಆಫ್​ಲೈನ್ ಯುಟಿಲಿಟಿಗಳನ್ನು ಐಟಿ ಇಲಾಖೆ ಇನ್ನೂ ಬಿಡುಗಡೆ ಮಾಡಿಲ್ಲ. ಈ ಕಾರಣಕ್ಕೆ ಸೆಪ್ಟೆಂಬರ್ 15ರಂದು ಇರುವ ಡೆಡ್​ಲೈನ್ ಅನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಐಟಿ ಇಲಾಖೆಯಿಂದ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಡೆಡ್​ಲೈನ್ ವಿಸ್ತರಣೆ ಆಗುವುದಿದ್ದರೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸುತ್ತದೆ. ಹಿಂದಿನ ಇಂಥ ಕೆಲ ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಕೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಹೀಗಾಗಿ, ಈ ಬಾರಿಯೂ ಈ ಸಾಧ್ಯತೆಯಂತೂ ಇದೆ.

ಇದನ್ನೂ ಓದಿ: Income Tax Bill 2025: ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ

ಈ ಬಾರಿ ಸರ್ಕಾರದಿಂದಲೇ ಪದೇಪದೇ ವಿಳಂಬ…

ಈ ಬಾರಿ ಸರ್ಕಾರವು ಐಟಿಆರ್ ಸಲ್ಲಿಕೆಯ ತಾಂತ್ರಿಕ ಅಂಶಗಳನ್ನು ಅಪ್​ಡೇಟ್ ಮಾಡಲು ಹೋಗಿ ವಿಳಂಬ ಮಾಡಿದೆ. ಐಟಿಆರ್ ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ತಡವಾಗಿ ಬಿಡುಗಡೆ ಮಾಡಿದೆ. 5, 6 ಮತ್ತು 7 ಫಾರ್ಮ್​ಗಳಿಗೆ ಯುಟಿಲಿಟಿಗಳನ್ನು ರಿಲೀಸ್ ಮಾಡಲು ಮತ್ತಷ್ಟು ವಿಳಂಬ ಮಾಡಿದರೆ ಸೆಪ್ಟೆಂಬರ್ 15ಕ್ಕೆ ಇದ್ದ ಡೆಡ್​ಲೈನ್ ಮುಂದಕ್ಕೆ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us