AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ

HSBC report on amount needed for retirement life: ಭಾರತದಲ್ಲಿ ನಿವೃತ್ತಿಯಾಗಿ ನೆಮ್ಮದಿಯಿಂದ ಇರಲು ಮೂರೂವರೆ ಕೋಟಿ ರೂ ಸೇವಿಂಗ್ಸ್ ಇರಬೇಕು ಎಂದು ಎಚ್​ಎಸ್​ಬಿಸಿ ವರದಿಯೊಂದರಲ್ಲಿ ಹೇಳಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಆಯಾ ಜೀವನವೆಚ್ಚ ಮತ್ತು ಜೀವನಶೈಲಿಗೆ ಅನುಗುಣವಾಗಿ ಸೇವಿಂಗ್ಸ್ ಅವಶ್ಯಕತೆ ಬದಲಾಗುತ್ತದೆ. ಅಮೆರಿಕದಲ್ಲಿ 15 ಲಕ್ಷ ಡಾಲರ್, ಚೀನಾದಲ್ಲಿ 10 ಲಕ್ಷ ಡಾಲರ್ ಇದ್ದರೆ ನಿವೃತ್ತರಾಗಿ ನೆಮ್ಮದಿಯಾಗಿರಬಹುದು.

ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2025 | 5:42 PM

Share

ನವದೆಹಲಿ, ಜುಲೈ 30: ಭಾರತದಲ್ಲಿ ದುರ್ದೈವವಶಾತ್ ಹೆಚ್ಚಿನ ಜನರ ನಿವೃತ್ತಿ ಕಾಲದ ಬಗ್ಗೆ ಮುಂದಾಲೋಚನೆಯೇ ಮಾಡಿರುವುದಿಲ್ಲ. 50-55 ವರ್ಷ ಗಡಿ ದಾಟಿದ ಬಳಿಕ ರಿಟೈರ್ಮೆಂಟ್ ಲೈಫ್ (retirement life) ಬಗ್ಗೆ ಯೋಚಿಸುವುದುಂಟು. ವೃತ್ತಿ ಜೀವನದ ಆರಂಭದಿಂದಲೇ ಒಂದಷ್ಟು ಸೇವಿಂಗ್ಸ್ (savings) ಅನ್ನು ನಿವೃತ್ತಿಗೆಂದು ತೆಗೆದಿರಿಸಬಹುದಿತ್ತಲ್ಲಾ ಎಂದು ಕೊರಗಬಹುದು. ಅಷ್ಟಕ್ಕೂ ನಿವೃತ್ತಿಯಾದಾಗ ಎಷ್ಟು ಹಣ ಹೊಂದಿರಬೇಕು ಎನ್ನುವ ಸಹಜ ಜಿಜ್ಞಾಸೆ ಪ್ರತಿಯೊಬ್ಬರಿಗೂ ಬರುತ್ತದೆ. ಹಾಗಾದರೆ, ಆರಾಮವಾಗಿ ರಿಟೈರ್ಡ್ ಲೈಫ್ ಕಳೆಯಲು ಎಷ್ಟು ಹಣ ಬೇಕು? ಎಚ್​ಎಸ್​ಬಿಸಿ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರಸಕ್ತ ಸುರಕ್ಷಿತ ನಿವೃತ್ತಿಗೆ 3.5 ಕೋಟಿ ರೂ ಬೇಕಂತೆ.

ಮೂರೂವರೆ ಕೋಟಿ ರೂ ಅಂದರೆ ಸುಮಾರು 4 ಲಕ್ಷ ಡಾಲರ್. ಇದು ಭಾರತೀಯರಿಗೆ ನಿವೃತ್ತಿ ನಂತರ ಬದುಕಲು ಬೇಕಾಗಬಹುದಾದ ಹಣ. ಹಣದುಬ್ಬರ, ಅಧಿಕ ಆಯಸ್ಸು ಇತ್ಯಾದಿ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಅಂಕಿಯನ್ನು ನೀಡಲಾಗಿದೆ. ಇದು ಸರಾಸರಿ ಮೊತ್ತ. ವ್ಯಕ್ತಿಯ ಜೀವನಶೈಲಿ ಹಾಗೂ ನಿರ್ದಿಷ್ಟ ಪ್ರದೇಶದ ಜೀವನವೆಚ್ಚಕ್ಕೆ ಅನುಗುಣವಾಗಿ ತುಸು ಏರುಪೇರಾಗಬಹುದು.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಹಾಗಾದರೆ, ಬೇರೆ ದೇಶಗಳಲ್ಲಿ ರಿಟೈರ್ಮೆಂಟ್ ಲೈಫ್​ಗೆ ಎಷ್ಟು ಬೇಕಾಗುತ್ತದೆ? ಎಚ್​ಎಸ್​ಬಿಸಿ ವರದಿ ಪ್ರಕಾರ ಸಿಂಗಾಪುರದಲ್ಲಿ ಜನರು ರಿಟೈರ್ ಆದ ಬಳಿಕ ಆರಾಮವಾಗಿ ಬದುಕಲು 1.39 ಮಿಲಿಯನ್ ಡಾಲರ್ ಬೇಕಾಗುತ್ತದೆ. ಹಾಂಕಾಂಗ್​ನಲ್ಲಾದರೆ 1.1 ಮಿಲಿಯನ್ ಡಾಲರ್, ಅಮೆರಿಕದಲ್ಲಾದರೆ 1.57 ಮಿಲಿಯನ್ ಡಾಲರ್, ಚೀನಾದಲ್ಲಾದರೆ 1.09 ಮಿಲಿಯನ್ ಡಾಲರ್ ಬೇಕಾಗುತ್ತದೆ ಎಂದು ಹೇಳಲಾಗಿದೆ.

ಭಾರತೀಯರು ಮೂರೂವರೆ ಕೋಟಿ ರೂ ಹೊಂದಿಸಲು ಕಷ್ಟವಾ?

ಎಚ್​ಎಸ್​ಬಿಸಿ ವರದಿ ಕೆಲ ಕುತೂಹಲಕಾರಿ ಅಂಶಗಳನ್ನು ಎತ್ತಿತೋರಿಸಿದೆ. ಭಾರತೀಯರು ರಿಟೈರ್ಮೆಂಟ್​ಗಾಗಿ ದೂರಾಲೋಚನೆ ಮಾಡುವುದು ಬಹಳ ಕಡಿಮೆ. ಪ್ರವಾಸ, ಶಿಕ್ಷಣ, ಮನೆ, ಜಮೀನು, ಮದುವೆ ಇತ್ಯಾದಿ ಕಾರ್ಯಗಳಿಗೆ ಎಲ್ಲಾ ಸೇವಿಂಗ್ಸ್ ಬಳಸುತ್ತಾರೆ. ರಿಟೈರ್ಮೆಂಟ್ ಬಗ್ಗೆ ಯೋಚಿಸುವುದಿಲ್ಲ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

ಮೂವತ್ತರ ವಯಸ್ಸಿನಿಂದಲೇ ರಿಟೈರ್ಮೆಂಟ್ ಪ್ಲಾನಿಂಗ್ ಮಾಡುತ್ತಿರುವವರು ಮತ್ತು ಆ ನಿಟ್ಟಿನಲ್ಲಿ ಹೂಡಿಕೆ ಮತ್ತು ಸೇವಿಂಗ್ಸ್ ಮಾಡುತ್ತಿರುವವರು ತಮ್ಮ ಗುರಿಯಲ್ಲಿ ಸಫಲರಾಗುವ ಸಾಧ್ಯತೆ ಇದೆ. ತಡವಾಗಿ ರಿಟೈರ್ಮೆಂಟ್ ಪ್ಲಾನ್ ಮಾಡುತ್ತಿರುವವರಿಗೆ ಗುರಿ ಮುಟ್ಟುವುದು ಕಷ್ಟವಾಗಬಹುದು. ಅದರ ಪರಿಣಾಮವಾಗಿ, ನಿವೃತ್ತಿ ನಂತರದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್