AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax

Income Tax

ಆದಾಯ ತೆರಿಗೆ ಎಂಬುದು ವ್ಯಕ್ತಿ ಹಾಗೂ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ. ಇದು ನೇರ ತೆರಿಗೆಗಳ ಗುಂಪಿಗೆ ಸೇರುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಎಂದು ವರ್ಗೀಕರಿಸಬಹುದು. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. 2023-24ರ ಸಾಲಿನ ವರ್ಷದಲ್ಲಿ ಭಾರತದಲ್ಲಿ ಆದಾಯ ತೆರಿಗೆ ಸೇರಿದಂತೆ ಒಟ್ಟಾರೆ ನೇರ ತೆರಿಗೆಗಳ ಪ್ರಮಾಣ 18.90 ಲಕ್ಷ ಕೋಟಿ ರೂ ಇತ್ತು. ಸರ್ಕಾರ ಆದಾಯ ತೆರಿಗೆಯನ್ನು ಸ್ಲ್ಯಾಬ್ ದರಗಳಲ್ಲಿ ವಿಧಿಸುತ್ತದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ದರ ಇರುತ್ತದೆ. ತೀರಾ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ಹೆಚ್ಚಿದಂತೆ ತೆರಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಸಮಾಜದಲ್ಲಿ ಆರ್ಥಿಕ ಬೆಳವಣಿಗೆಯ ಅಸಮತೋಲನ ಕಡಿಮೆ ಮಾಡಲು ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.

ಇನ್ನೂ ಹೆಚ್ಚು ಓದಿ

Year of Reforms: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

2025, Year of Reforms: 2025ನ್ನು ಒಮ್ಮೆ ತಿರುಗಿ ನೋಡಿದರೆ ಸಾಕು, ಸುಧಾರಣೆಗಳ ಪರ್ವವೇ ಕಣ್ಣಮುಂದೆ ಬರುತ್ತದೆ. ದೇಶದ ಆರ್ಥಿಕತೆ, ಆಡಳಿತ ಹಾಗೂ ಸಾಮಾಜಿಕ ಭದ್ರತೆ ಬಲಪಡಿಸುವ ಉದ್ದೇಶದಿಂದ ದೊಡ್ಡ ಬದಲಾವಣೆಗಳನ್ನು ಕಂಡ ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ, ಅಭಿವೃದ್ಧಿಗಾಗಿ ಇರುವ ತುಡಿತದಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು.

Pakistan: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

Income tax payers in Pakistan: ಪಾಕಿಸ್ತಾನದಲ್ಲಿ ನೊಂದಾಯಿತ ಟ್ಯಾಕ್ಸ್ ಪೇಯರ್ಸ್ ಸಂಖ್ಯೆ 59 ಲಕ್ಷದಷ್ಟಿದೆ ಎಂದು ಹೇಳಲಾಗುತ್ತಿದೆ. ಇವರ ಪೈಕಿ 3 ಲಕ್ಷ ರೂ (ಪಿಕೆಆರ್) ಮೇಲ್ಪಟ್ಟ ಮಾಸಿಕ ಸಂಬಳದ ಆದಾಯದವರ ಸಂಖ್ಯೆ ಕೆಲವೇ ಲಕ್ಷ ಇರಬಹುದು. ಪಾಕಿಸ್ತಾನದಲ್ಲಿ ಆದಾಯ ತೆರಿಗೆಗಳಿಂದ ಸುಮಾರು 9 ಲಕ್ಷ ಕೋಟಿ ರೂ ಆದಾಯ ಸಿಗುತ್ತಿರಬಹುದು.

ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

Reasons why many tax payers not yet received refunds: 2024-25ರ ಹಣಕಾಸು ವರ್ಷಕ್ಕೆ ಸಲ್ಲಿಸಲಾದ ಐಟಿ ರಿಟರ್ನ್​ನಲ್ಲಿ ಬಹಳ ಜನರಿಗೆ ಕ್ಲೇಮ್ ಮಾಡಿರುವ ರೀಫಂಡ್ ಇನ್ನೂ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಹೆಚ್ಚಿನ ಮೌಲ್ಯದ ರೀಫಂಡ್ ಕ್ಲೇಮ್ ಮಾಡಿದ್ದರೆ, ಅಥವಾ ಐಟಿಆರ್​ನಲ್ಲಿ ದೋಷ ಮತ್ತು ವ್ಯತ್ಯಾಸಗಳು ಕಂಡುಬಂದಲ್ಲಿ ಇಲಾಖೆ ಪರಿಶೀಲಿಸುತ್ತದೆ. ಈ ಕಾರಣಕ್ಕೆ ರೀಫಂಡ್ ವಿಳಂಬವಾಗುತ್ತಿರಬಹುದು ಎನ್ನಲಾಗಿದೆ.

ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ

New Income Tax law come into effect from 2026 April 1st: 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಆದಾಯ ತೆರಿಗೆ ಕಾಯ್ದೆ ರೂಪಿಸಲಾಗಿದೆ. ಮುಂಬರುವ ಬಜೆಟ್​ನಲ್ಲಿ ಇದನ್ನು ಘೋಷಿಸಲಾಗುತ್ತಿದ್ದು, ಏಪ್ರಿಲ್ 1ರಂದು ಜಾರಿಗೆ ತರಲಾಗುತ್ತದೆ. ಈ ಕಾಯ್ದೆಗೆ ಸಂಸತ್ತಿನ ಅನುಮೋದನೆ ಇದೆ. ಹೊಸ ಕಾಯ್ದೆಯಲ್ಲಿ ನಿಯಮಗಳು ಸರಳಗೊಂಡಿವೆ.

ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ

Use sections 54 and 54f when selling assets for buying a home: ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಆಸ್ತಿಗಳನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದನ್ನು ತಪ್ಪಿಸಲು ಸೆಕ್ಷನ್ 54 ಮತ್ತು ಸೆಕ್ಷನ್ 54ಎಫ್ ಅವಕಾಶ ಕೊಡುತ್ತದೆ. ನೀವು ಆಸ್ತಿ ಮಾರಿದ ಹಣವನ್ನು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದರೆ ಆಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್​ನಿಂದ ವಿನಾಯಿತಿ ಪಡೆಯಬಹುದು.

PAN-Aadhaar Link: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?

PAN and Aadhaar linking Dec 31st Deadline over, know what happens now: ಆಧಾರ್ ಜೊತೆ ಪ್ಯಾನ್ ಅನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೆ ನೀಡಿದ್ದ ಗಡುವು ಮುಗಿದಿದೆ. ಜನವರಿ 1ರಿಂದ ಲಿಂಕ್ ಆಗದ ಪ್ಯಾನ್ ನಂಬರ್​ಗಳು ಇನಾಪರೇಟಿವ್ ಆಗುತ್ತವೆ. ಹೀಗೆ ನಿಷ್ಕ್ರಿಯಗೊಂಡ ಪ್ಯಾನ್ ಇದ್ದರೆ ಹಲವು ಹಣಕಾಸು ವಹಿವಾಟು ಸಮಸ್ಯೆಗಳು ಕಾಣಿಸಬಹುದು. ಈ ಬಗ್ಗೆ ಒಂದು ವರದಿ:

ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ

Registered sale deed and tax notice: ಆಸ್ತಿ ಮಾರಿ ಬಂದ ಸ್ವಲ್ಪ ಕ್ಯಾಷ್ ಹಣದಲ್ಲಿ 13 ಲಕ್ಷ ರೂ ಅನ್ನು ಬ್ಯಾಂಕ್ ಅಕೌಂಟ್​ಗೆ ಡೆಪಾಸಿಟ್ ಮಾಡಿದ್ದ ಮಹಿಳೆಗೆ ಟ್ಯಾಕ್ಸ್ ನೋಟೀಸ್ ಬಂದಿತ್ತು. ಆ ವರ್ಷ ಮಹಿಳೆ ಐಟಿಆರ್ ಫೈಲ್ ಮಾಡದ್ದರಿಂದ 13 ಲಕ್ಷ ರೂ ಕ್ಯಾಷ್ ಅನ್ನು ಅಘೋಷಿತ ಆಸ್ತಿ ಎಂದು ಪರಿಗಣಿಸಲಾಗಿತ್ತು. ಆದರೆ, ಮುಂಬೈನ ಐಟಿ ಟ್ರಿಬ್ಯುನಲ್ ಆ ಮಹಿಳೆ ಪರವಾಗಿ ತೀರ್ಪು ಕೊಟ್ಟಿದೆ.

ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್​ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು

India's 2025 Economic Reforms: 2025ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ಹಲವು ಮಹತ್ವದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಜಿಎಸ್‌ಟಿ 2.0 ಮೂಲಕ ತೆರಿಗೆ ಸ್ಲ್ಯಾಬ್‌ಗಳ ಕಡಿತ, 12 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ, ಆಧುನಿಕ ಕಾರ್ಮಿಕ ಕಾನೂನುಗಳು, ಮತ್ತು ಪರಮಾಣು-ವಿಮಾ ವಲಯಗಳಲ್ಲಿ ಖಾಸಗಿ/ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಈ ಸುಧಾರಣೆಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ, ನಿಯಮಗಳನ್ನು ಸರಳೀಕರಿಸಿ, ನಾಗರಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿವೆ.

ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?

PAN Aadhaar linking final deadline on 2025 Dec 31st: ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31 ಡೆಡ್​ಲೈನ್ ಆಗಿದೆ. ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್​ಗಳು 2026ರ ಜನವರಿ 1ರಿಂದ ಇನಾಪರೇಟಿವ್ ಆಗುತ್ತವೆ. ನಿಮ್ಮ ಬಳಿ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹಲವು ಹಣಕಾಸು ವಹಿವಾಟುಗಳು ಸಾಧ್ಯವಾಗದೇ ಹೋಗಬಹುದು.

Tax Collections: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

Govt gets Rs 17 lakh crore net direct taxes this FY: ಈ ವರ್ಷ ಇಲ್ಲಿಯವರೆಗೆ (2025ರ ಏಪ್ರಿಲ್ 1ರಿಂದ ಡಿ. 17) ಸರ್ಕಾರಕ್ಕೆ 20 ಲಕ್ಷ ಕೋಟಿ ರೂಗೂ ಅಧಿಕ ನೇರ ತೆರಿಗೆ ಸಿಕ್ಕಿದೆ. ಇದರಲ್ಲಿ ರೀಫಂಡ್​ಗಳನ್ನು ಕಳೆದು ಉಳಿಯುವ ನಿವ್ವಳ ನೇರ ತೆರಿಗೆ 17.04 ಲಕ್ಷ ಕೋಟಿ ರೂ ಆಗಿದೆ. ಬಹುತೇಕ ಅರ್ಧದಷ್ಟು ತೆರಿಗೆಯು ಕಾರ್ಪೊರೇಟ್ ಟ್ಯಾಕ್ಸ್ ರೂಪದಲ್ಲಿ ಸರ್ಕಾರಕ್ಕೆ ಸಿಕ್ಕಿದೆ.

ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ…

Income Tax Returns Refund Status: ಈ ಬಾರಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿದ ಹೆಚ್ಚಿನವರಿಗೆ ರೀಫಂಡ್ ವಿಳಂಬವಾಗಬಹುದು. ರೀಫಂಡ್​ಗಳಿಗೆ ಮಾಡಲಾದ ಕ್ಲೇಮ್​ಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ. ಹೀಗಾಗಿ, ವಿಳಂಬವಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಡಿಸೆಂಬರ್​ನೊಳಗೆ ರೀಫಂಡ್ ಕೊಡಲಾಗುವುದು ಎಂದು ಹೇಳಿದೆ.

ಟ್ಯಾಕ್ಸ್ ಒಪ್ಪಂದ ಇದ್ದಾಗ ಶೇ. 20 ಟಿಡಿಎಸ್ ಮುರಿದುಕೊಳ್ಳುವಂತಿಲ್ಲ: ಐಟಿ ಇಲಾಖೆಗೆ ಸುಪ್ರೀಂ ಆದೇಶ

Supreme Court ruling on TDS over foreign companies: ಟ್ಯಾಕ್ಸ್ ಒಪ್ಪಂದ ಇರುವ ದೇಶಗಳ ಕಂಪನಿಗಳಿಗೆ ಪಾವತಿಸುವ ಹಣಕ್ಕೆ ಶೇ. 10ಕ್ಕಿಂತ ಹೆಚ್ಚು ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿದೇಶೀ ಕಂಪನಿಗಳಿಗೆ ಹಣ ಪಾವತಿಸುವಾಗ ಭಾರತೀಯ ಕಂಪನಿಗಳು ಶೇ. 20 ಟಿಡಿಎಸ್ ಮುರಿದುಕೊಳ್ಳಬೇಕು ಎಂಬುದು ಐಟಿ ತಾಕೀತಾಗಿತ್ತು. ವಿದೇಶೀ ಕಂಪನಿಗಳಿಗೆ ಪ್ಯಾನ್ ಇಲ್ಲದಿರುವುದರಿಂದ ಶೇ. 20 ಟಿಡಿಎಸ್ ಅನ್ವಯ ಆಗುತ್ತದೆ ಎನ್ನುವುದು ಐಟಿ ವಾದ.

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ