AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax

Income Tax

ಆದಾಯ ತೆರಿಗೆ ಎಂಬುದು ವ್ಯಕ್ತಿ ಹಾಗೂ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ. ಇದು ನೇರ ತೆರಿಗೆಗಳ ಗುಂಪಿಗೆ ಸೇರುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಎಂದು ವರ್ಗೀಕರಿಸಬಹುದು. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. 2023-24ರ ಸಾಲಿನ ವರ್ಷದಲ್ಲಿ ಭಾರತದಲ್ಲಿ ಆದಾಯ ತೆರಿಗೆ ಸೇರಿದಂತೆ ಒಟ್ಟಾರೆ ನೇರ ತೆರಿಗೆಗಳ ಪ್ರಮಾಣ 18.90 ಲಕ್ಷ ಕೋಟಿ ರೂ ಇತ್ತು. ಸರ್ಕಾರ ಆದಾಯ ತೆರಿಗೆಯನ್ನು ಸ್ಲ್ಯಾಬ್ ದರಗಳಲ್ಲಿ ವಿಧಿಸುತ್ತದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ದರ ಇರುತ್ತದೆ. ತೀರಾ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ಹೆಚ್ಚಿದಂತೆ ತೆರಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಸಮಾಜದಲ್ಲಿ ಆರ್ಥಿಕ ಬೆಳವಣಿಗೆಯ ಅಸಮತೋಲನ ಕಡಿಮೆ ಮಾಡಲು ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.

ಇನ್ನೂ ಹೆಚ್ಚು ಓದಿ

ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ

ನಾವು ಪಾವತಿಸುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೃಹತ್ ಸಾರ್ವಜನಿಕ ವೆಚ್ಚ ವ್ಯವಸ್ಥೆಯ ಭಾಗವಾಗುತ್ತದೆ. ರಾಜ್ಯಗಳು ಮತ್ತು ರಕ್ಷಣಾ ವಲಯದಿಂದ ಹಿಡಿದು ಬಡ್ಡಿ, ಪಿಂಚಣಿ ಹಾಗೂ ಸಹಾಯಧನಗಳವರೆಗೆ, ಸರ್ಕಾರದ ಹಣ ಹೇಗೆ ಚಲಿಸುತ್ತದೆ ಮತ್ತು ಸಾರ್ವಜನಿಕರು ಅದು ಎಲ್ಲಿಗೆ ತಲುಪುತ್ತದೆ ಎಂಬುದರ ಕುರಿತು ಏಕೆ ಗಮನ ಹರಿಸಬೇಕು ಎಂಬುದನ್ನು ಕೇಂದ್ರ ಬಜೆಟ್ ತೋರಿಸಿಕೊಡುತ್ತದೆ ಎಂದು ಟಿವಿ ನೆಟ್ವರ್ಕ್​ನ ಎಕ್ಸಿಕ್ಯೂಟಿವ್ ಸಂತೋಷ್ ನಾಯರ್ ಬರೆಯುತ್ತಾರೆ.

ಸೆಪ್ಟೆಂಬರ್ 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್​ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ

Important financial rule changes in 2026 September: ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿರುವ ಅಥವಾ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿರುವ 5 ಪ್ರಮುಖ ಹಣಕಾಸು ನಿಯಮ ಬದಲಾವಣೆಗಳ ವಿವರ ಇಲ್ಲಿದೆ. ಎಲ್​ಪಿಜಿ ಸಂಪರ್ಕ ಹೊಂದಿದಲ್ಲಿ ಅದರ ಬಯೋಮೆಟ್ರಿಕ್ ಕೆವೈಸಿ ಪೂರ್ಣಗೊಂಡಿರದಿದ್ದರೆ ಗ್ಯಾಸ್ ಸಿಗಲು ತೊಂದರೆಯಾಗಬಹುದು. ವಿದೇಶ ಪ್ರಯಾಣ ಹೋಗುವವರಿಗೆ ಖುಷಿಯ ಸುದ್ದಿಯೂ ಇದೆ.

ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು

Wife buys Rs 7.5 crore property from husband, claims tax exemption: ಮಹಿಳೆಯೊಬ್ಬರು ತಮ್ಮ ಪತಿಯಿಂದ ಆಸ್ತಿ ಖರೀದಿಸಲು ಮಾಡಿದ ವೆಚ್ಚಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್​ಗೆ ಪ್ರಯತ್ನಿಸಿದ್ದಾರೆ. ಆದರೆ, ಐಟಿ ಇಲಾಖೆ ಈ ಕ್ಲೇಮ್ ರಿಜೆಕ್ಟ್ ಮಾಡಿದೆ. ಆ ಮಹಿಳೆ, ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗಿ ನ್ಯಾಯ ಪಡೆಯುವಲ್ಲಿ ಸಫಲಳಾಗಿದ್ದಾಳೆ. ಈ ಪ್ರಕರಣದ ಮಾಹಿತಿ ಇಲ್ಲಿದೆ.

Income Tax Dept: ಸಂಶಯಾಸ್ಪದ ವಿದೇಶಿ ಹಣ ರವಾನೆ: ದೇಶಾದ್ಯಂತ ಪರಿಶೀಲನೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ

Income Tax Department launches nationwide verification drive into suspicious foreign remittances: ದೇಶದಿಂದ ಹೊರಗೆ ಅನುಮಾನಸ್ಪದ ರೀತಿಯಲ್ಲಿ ಹಣ ರವಾನೆ ಆಗುತ್ತಿರುವ ಪ್ರಕರಣಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಅಕ್ರಮ ಫಾರಿನ್ ರೆಮಿಟೆನ್ಸ್ ಅನ್ನು ತಡೆಯಲು ಇಲಾಖೆ ರಾಷ್ಟ್ರವ್ಯಾಪಿ ವೆರಿಫಿಕೇಶನ್ ಡ್ರೈವ್ ಕೈಗೊಂಡಿದೆ. ನೂರಾರು ಶೆಲ್ ಸಂಸ್ಥೆಗಳನ್ನು ಜಾಲಾಡಲಾಗುತ್ತಿದೆ. ಹಲವು ಲೆಕ್ಕ ಪರಿಶೋಧಕರನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ.

ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ

Government launches FAST-DS scheme: ಭಾರತೀಯರ ವಿದೇಶಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ FAST-DS ಸ್ಕೀಮ್ ಘೋಷಣೆ ಮಾಡಿದೆ. ಈ ಯೋಜನೆಯು, ಭಾರತೀಯರು ತಮ್ಮ ವಿದೇಶಿ ಆಸ್ತಿಗಳನ್ನು ಘೋಷಿಸಲು ಅವಕಾಶ ಕಲ್ಪಿಸುತ್ತದೆ. ವಿದೇಶೀ ಆಸ್ತಿ ಗಳಿಕೆಗೆ ಹಣದ ಮೂಲ ತಿಳಿಸದಿದ್ದರೆ ಅದಕ್ಕೆ ಅಸ್ತಿಮೌಲ್ಯದ ಶೇ. 30ರಷ್ಟು ತೆರಿಗೆ ಹಾಗು ಅಷ್ಟೇ ಪ್ರಮಾಣದ ಶುಲ್ಕ ತೆತ್ತು ಸಕ್ರಮ ಮಾಡಿಕೊಳ್ಳಬಹುದು. ತೆರಿಗೆ ಕಟ್ಟಲಾದ ಹಣದಲ್ಲಿ ಆಸ್ತಿ ಖರೀದಿಸಿದ್ದರೆ ಅದಕ್ಕೆ ಸಣ್ಣ ಪ್ರಮಾಣದ ಶುಲ್ಕ ಇರುತ್ತದೆ.

ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ

Direct tax collections this year rise drastically: ಭಾರತದಲ್ಲಿ ಈ ವರ್ಷ ತೆರಿಗೆ ಸಂಗ್ರಹ ಭರ್ಜರಿಯಾಗಿ ಹೆಚ್ಚಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿ ನೇರ ತೆರಿಗೆ ಸಂಗ್ರಹ 9.55 ಲಕ್ಷ ಕೋಟಿ ರೂ ಮುಟ್ಟಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಡೈರೆಕ್ಟ್ ಟ್ಯಾಕ್ಸ್ 8.11 ಲಕ್ಷ ಕೋಟಿ ರೂ ಇದೆ. ಕಳೆದ ವರ್ಷದಕ್ಕಿಂತ ಇದು ಶೇ. 23ರಷ್ಟು ಹೆಚ್ಚಳ ಇದೆ.

ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

Centre releases Rs 1,09,019 crore tax devolution to states: ಕೇಂದ್ರ ಸರ್ಕಾರ ರಾಜ್ಯಗಳಿಗೆ 1.09 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ ಮಾಡಿದೆ. ಇದು ಹೆಚ್ಚುವರಿ ಕಂತಿನ ಟ್ಯಾಕ್ಸ್ ಹಂಚಿಕೆಯಾಗಿದೆ. ಉತ್ತರಪ್ರದೇಶಕ್ಕೆ ಅತಿಹೆಚ್ಚು ತೆರಿಗೆ ಹಣ ಹೋಗಿದೆ. 19,208 ಕೋಟಿ ರೂ ಹಂಚಿಕೆಯಾಗಿದೆ. ಕರ್ನಾಟಕಕ್ಕೆ 4,504 ಕೋಟಿ ರೂ ಸಿಕ್ಕಿದೆ. 15ನೇ ಹಣಕಾಸು ಆಯೋಗ ನಿಗದಿ ಮಾಡಿರುವ ಸೂತ್ರದ ಪ್ರಕಾರ ಟ್ಯಾಕ್ಸ್ ಡಿವೊಲ್ಯೂಶನ್ ಮಾಡಲಾಗುತ್ತಿದೆ.

ಪೇಟಿಎಂನಲ್ಲೇ ಸಲ್ಲಿಸಿ ಐಟಿಆರ್; ಕೇವಲ 11 ರೂಗೆ ಜಂಜಾಟವಿಲ್ಲದೆ ಸರಳವಾಗಿ, ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸಿ

File ITR for Rs 11 at Paytm App: ಪೇಟಿಎಂನಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಶುಲ್ಕ ಕೇವಲ 11 ರೂ. ಬಹಳ ಸುಲಭವಾಗಿ ಮತ್ತು ಸರಳವಾಗಿ ಐಟಿಆರ್ ಭರ್ತಿ ಮಾಡಿ ಸಲ್ಲಿಸಬಹುದು. ಕ್ಲಿಯರ್ ಟ್ಯಾಕ್ಸ್ ಸಹಯೋಗದಲ್ಲಿ ಪೇಟಿಎಂ ಈ ಸೇವೆ ಆರಂಭಿಸಿದೆ. ರಿಜಿಸ್ಟರ್ ಆಗಿ ಪ್ಯಾನ್ ನಂಬರ್ ನಮೂದಿಸಿ, ಫಾರ್ಮ್ 16 ಅಪ್​ಲೋಡ್ ಮಾಡಿದರೆ ಬಹುತೇಕ ಫೈಲಿಂಗ್ ಮುಗಿದಂತೆ.

ಭಾರತದಲ್ಲಿ ನೂರು ಕೋಟಿ ರೂ ಕುಬೇರರ ಸಂಖ್ಯೆ 4 ವರ್ಷದಲ್ಲಿ 4 ಪಟ್ಟು ಹೆಚ್ಚಳ: ಸರ್ಕಾರದಿಂದ ಮಾಹಿತಿ

Rs 100 crore wealthy Indians: ಭಾರತದಲ್ಲಿ 100 ಕೋಟಿ ರೂಗೂ ಅಧಿಕ ಘೋಷಿತ ಆದಾಯ ಇರುವ ವ್ಯಕ್ತಿಗಳ ಸಂಖ್ಯೆ 2026ರ ಮಾರ್ಚ್ 31ರವರೆಗೆ 576 ಇದೆ. 2021-22ರ ವರ್ಷದಲ್ಲಿದ್ದವರಿಗೆ ಹೋಲಿಸಿದರೆ ಸಂಖ್ಯೆ 4 ಪಟ್ಟು ಹೆಚ್ಚಳವಾಗಿದೆ. ಈ ಮೇಲಿನದು ಐಟಿ ರಿಟರ್ನ್ಸ್​ನಲ್ಲಿ ಅಧಿಕೃತವಾಗಿ ಘೋಷಿಸಲಾದ ಆಸ್ತಿಯ ವಿವರವಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ITR filing, last minute checklist: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್ ಅನ್ನು ಕೊನೆಯ ದಿನಗಳಲ್ಲಿ ಸಬ್ಮಿಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಗಡಿಬಿಡಿಯಲ್ಲಿ ಕೆಲ ಮುಖ್ಯಾಂಶಗಳನ್ನೇ ಮರೆತು ಐಟಿಆರ್ ಸಲ್ಲಿಕೆ ಮಾಡುವ ಸಾಧ್ಯತೆ ಇರುತ್ತದೆ. ತಪ್ಪಾದ ಮಾಹಿತಿ ತುಂಬಿದರೆ, ಅಥವಾ ಮುಖ್ಯ ಮಾಹಿತಿಯನ್ನೇ ಕೈಬಿಟ್​ಟರೆ ಟ್ಯಾಕ್ಸ್ ನೋಟೀಸ್ ಬರಬಹುದು.

ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

Documents to be kept even after filing IT Returns: ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಾಗಿ ಆರು ವರ್ಷಗಳವರೆಗೆ ಕೆಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ಟ್ಯಾಕ್ಸ್ ಎಕ್ಸ್​ಪರ್ಟ್​ಗಳು ಸಲಹೆ ನೀಡುತ್ತಾರೆ. ತೆರಿಗೆ ಅಧಿಕಾರಿಗಳು ನಿಮ್ಮ ಐಟಿಆರ್​ಗಳನ್ನು ಯಾವಾಗ ಬೇಕಾದರೂ ಸ್ಕ್ರೂಟಿನಿ ಮಾಡಬಹುದಾದ್ದರಿಂದ ಕೆಲ ದಾಖಲೆಗಳು ಇಟ್ಟಿರಬೇಕಾಗುತ್ತದೆ. ಫೈಲ್ ಆದ ಐಟಿಆರ್, ಅಕ್ನಾಲೆಡ್ಮ್ಮೆಂಟ್, ಟಿಡಿಎಸ್ ಸರ್ವಿಫಿಕೇಟ್, ಫಾರ್ಮ್ 16 ಇತ್ಯಾದಿ ದಾಖಲೆಗಳು ಬೇಕಾಗುತ್ತವೆ.

Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

How to verify authenticity of Income Tax notice: ಐಟಿಆರ್​ನಲ್ಲಿ ನೀವು ಸಲ್ಲಿಸಿದ ಆದಾಯ ತೆರಿಗೆ ವಿವರಕ್ಕೂ, ನಿಮ್ಮ ನಿಜ ಆದಾಯ ಗಳಿಕೆಗೂ ಬಹಳಷ್ಟು ಅಂತರ ಇದ್ದರೆ ಇಲಾಖೆಯಿಂದ ನೋಟೀಸ್ ಬರುತ್ತದೆ. ವಂಚಕರು ಈ ಸಂದರ್ಭದಲ್ಲಿ ಸುಳ್ಳು ನೋಟೀಸ್ ನೀಡಿ ಜನರನ್ನು ಯಾಮಾರಿಸಲು ಯತ್ನಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ಕಮ್ ಟ್ಯಾಕ್ಸ್ ನೋಟೀಸ್ ಇಲಾಖೆಯಿಂದಲೇ ಬಂದಿದ್ದಾ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಬಹುದು.

ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ