AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax

Income Tax

ಆದಾಯ ತೆರಿಗೆ ಎಂಬುದು ವ್ಯಕ್ತಿ ಹಾಗೂ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ. ಇದು ನೇರ ತೆರಿಗೆಗಳ ಗುಂಪಿಗೆ ಸೇರುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಎಂದು ವರ್ಗೀಕರಿಸಬಹುದು. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. 2023-24ರ ಸಾಲಿನ ವರ್ಷದಲ್ಲಿ ಭಾರತದಲ್ಲಿ ಆದಾಯ ತೆರಿಗೆ ಸೇರಿದಂತೆ ಒಟ್ಟಾರೆ ನೇರ ತೆರಿಗೆಗಳ ಪ್ರಮಾಣ 18.90 ಲಕ್ಷ ಕೋಟಿ ರೂ ಇತ್ತು. ಸರ್ಕಾರ ಆದಾಯ ತೆರಿಗೆಯನ್ನು ಸ್ಲ್ಯಾಬ್ ದರಗಳಲ್ಲಿ ವಿಧಿಸುತ್ತದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ದರ ಇರುತ್ತದೆ. ತೀರಾ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ಹೆಚ್ಚಿದಂತೆ ತೆರಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಸಮಾಜದಲ್ಲಿ ಆರ್ಥಿಕ ಬೆಳವಣಿಗೆಯ ಅಸಮತೋಲನ ಕಡಿಮೆ ಮಾಡಲು ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.

ಇನ್ನೂ ಹೆಚ್ಚು ಓದಿ

ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ…

Income Tax Returns Refund Status: ಈ ಬಾರಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿದ ಹೆಚ್ಚಿನವರಿಗೆ ರೀಫಂಡ್ ವಿಳಂಬವಾಗಬಹುದು. ರೀಫಂಡ್​ಗಳಿಗೆ ಮಾಡಲಾದ ಕ್ಲೇಮ್​ಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ. ಹೀಗಾಗಿ, ವಿಳಂಬವಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಡಿಸೆಂಬರ್​ನೊಳಗೆ ರೀಫಂಡ್ ಕೊಡಲಾಗುವುದು ಎಂದು ಹೇಳಿದೆ.

ಟ್ಯಾಕ್ಸ್ ಒಪ್ಪಂದ ಇದ್ದಾಗ ಶೇ. 20 ಟಿಡಿಎಸ್ ಮುರಿದುಕೊಳ್ಳುವಂತಿಲ್ಲ: ಐಟಿ ಇಲಾಖೆಗೆ ಸುಪ್ರೀಂ ಆದೇಶ

Supreme Court ruling on TDS over foreign companies: ಟ್ಯಾಕ್ಸ್ ಒಪ್ಪಂದ ಇರುವ ದೇಶಗಳ ಕಂಪನಿಗಳಿಗೆ ಪಾವತಿಸುವ ಹಣಕ್ಕೆ ಶೇ. 10ಕ್ಕಿಂತ ಹೆಚ್ಚು ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಿದೇಶೀ ಕಂಪನಿಗಳಿಗೆ ಹಣ ಪಾವತಿಸುವಾಗ ಭಾರತೀಯ ಕಂಪನಿಗಳು ಶೇ. 20 ಟಿಡಿಎಸ್ ಮುರಿದುಕೊಳ್ಳಬೇಕು ಎಂಬುದು ಐಟಿ ತಾಕೀತಾಗಿತ್ತು. ವಿದೇಶೀ ಕಂಪನಿಗಳಿಗೆ ಪ್ಯಾನ್ ಇಲ್ಲದಿರುವುದರಿಂದ ಶೇ. 20 ಟಿಡಿಎಸ್ ಅನ್ವಯ ಆಗುತ್ತದೆ ಎನ್ನುವುದು ಐಟಿ ವಾದ.

Wedding Gift Tax: ಮದುವೆಗೆ ಕೊಡುವ ಗಿಫ್ಟ್​ಗೆ ಟ್ಯಾಕ್ಸ್ ಕಟ್ಟಬೇಕಾ?

Wedding gift tax rules in India: ಭಾರತದ ಗಿಫ್ಟ್​ಗಳಿಗೆ ಟ್ಯಾಕ್ಸ್ ಅನ್ವಯ ಆಗುತ್ತದೆ. ಗಿಫ್ಟ್ ಟ್ಯಾಕ್ಸ್ ನಿಯಮಗಳಿವೆ. ಬಂಧುಗಳಿಂದ ಬರುವ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ಇತರರಿಂದ ಬಂದ ಗಿಫ್ಟ್​ಗೆ ಟ್ಯಾಕ್ಸ್ ಇರುತ್ತದೆ. ಗಿಫ್ಟ್​​ನ ಮೌಲ್ಯ 50,000 ರೂಗಿಂತ ಹೆಚ್ಚಿದ್ದರೆ ಟ್ಯಾಕ್ಸ್ ರೂಲ್ಸ್ ಅನ್ವಯ ಆಗುತ್ತದೆ.

2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು, ಪರಿಹಾರವೇನು ಇತ್ಯಾದಿ ವಿವರ ಇಲ್ಲಿದೆ

PAN not linked with Aadhaar will become inoperative from Jan 1st: ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಇದೀಗ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಕೊಟ್ಟಿದೆ. 2025ರ ಡಿಸೆಂಬರ್ 31ರೊಳಗೆ ಆಧಾರ್​ಗೆ ಲಿಂಕ್ ಆಗದಿರುವ ಪ್ಯಾನ್ ನಂಬರ್​ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಸಿಬಿಡಿಟಿ ಹೇಳಿದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಅಸಾಧ್ಯವಾಗುತ್ತದೆ.

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?

Know how much taxes Indian cricket players pays on their income: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿದೆ. ಬಿಸಿಸಿಐನಿಂದ ತಂಡಕ್ಕೆ 51 ಕೋಟಿ ರೂ ಬಹುಮಾನ ಘೋಷಣೆಯಾಗಿದೆ. ಕ್ರಿಕೆಟಿಗರಿಗೆ ನೀಡುವ ಹಣದಲ್ಲಿ ಜಿಎಸ್​ಟಿ, ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಇದರ ಜೊತೆಗೆ ಒಟ್ಟು ವಾರ್ಷಿಕ ಆದಾಯಕ್ಕೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ.

ದಾಖಲೆಗಳಿಲ್ಲದ ಒಡವೆ ಸೀಜ್; ಅಧಿಕಾರಿ ಮಾಡಿದ ತಪ್ಪು ಮತ್ತು ಹೆಂಡತಿ ದೆಸೆಯಿಂದ ಕೇಸ್ ಗೆದ್ದ ಬೆಂಗಳೂರಿಗ

Bangalore Man's IT Victory: ಬೆಂಗಳೂರಿನಲ್ಲಿ 2019ರಲ್ಲಿ ಆದಾಯ ತೆರಿಗೆ ರೇಡ್ ವೇಳೆ ₹1.65 ಕೋಟಿ ಮೌಲ್ಯದ ದಾಖಲೆರಹಿತ ಚಿನ್ನಾಭರಣಗಳು ಪತ್ತೆಯಾದವು. ಆದಾಯ ತೆರಿಗೆ ಇಲಾಖೆ ತೆರಿಗೆ ವಿಧಿಸಲು ಮುಂದಾದರೂ, ಆ ವ್ಯಕ್ತಿ ಕಾನೂನು ಹೋರಾಟ ನಡೆಸಿ ಐಟಿಎಟಿ (ITAT) ನ್ಯಾಯಮಂಡಳಿಯಲ್ಲಿ ಗೆದ್ದರು. ಪತ್ನಿಯ ಹೇಳಿಕೆ ಒಪ್ಪಿ, ಗಂಡನ ಹೇಳಿಕೆ ತಿರಸ್ಕರಿಸಿದ ಅಧಿಕಾರಿಗಳ ತಪ್ಪೇ ವಿಜಯಕ್ಕೆ ಕಾರಣವಾಯಿತು.

ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್​ಗಳನ್ನು ಮಾಡುವಾಗ ಹುಷಾರ್

Common transactions in your savings account can be under I-T Dept radar: ನಿಮ್ಮ ಹಣದ ಚಟುವಟಿಕೆಯ ಜಾಡು ಹಿಡಿಯಲು ಐಟಿ ಇಲಾಖೆಯು ಸೇವಿಂಗ್ಸ್ ಅಕೌಂಟ್​ಗಳನ್ನು ಗಮನಿಸುತ್ತದೆ. ಸೇವಿಂಗ್ಸ್ ಅಕೌಂಟ್​ನಲ್ಲಿ ಕ್ಯಾಷ್ ಡೆಪಾಸಿಟ್, ಆಸ್ತಿ ವಹಿವಾಟು ಇತ್ಯಾದಿ ನಾನಾ ರೀತಿಯ ಟ್ರಾನ್ಸಾಕ್ಷನ್​ಗಳನ್ನು ಮಾಡಲಾಗುತ್ತದೆ. ಐಟಿ ಯಾವ್ಯಾವ ಸಂದರ್ಭದಲ್ಲಿ ಹೆಚ್ಚು ಅನುಮಾನ ಹೊಂದಿರುತ್ತದೆ ಎನ್ನುವ ವಿವರ ಇಲ್ಲಿದೆ...

ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳೂ ತೆರಿಗೆಮುಕ್ತವಲ್ಲ; ಟಿಡಿಎಸ್ ಕಡಿತವಾಗುವ ಕೆಲ ಸ್ಕೀಮ್​ಗಳಿವು

Post office scheme without tax benefits: ಹಣ ಉಳಿತಾಯಕ್ಕೆ ಅಂಚೆ ಕಚೇರಿ ಯೋಜನೆಗಳು ಉತ್ತಮ ಮಾರ್ಗ ಎನಿಸಿವೆ. ಬಹಳಷ್ಟು ಜನರು ಟ್ಯಾಕ್ಸ್ ಬೆನಿಫಿಟ್​ಗೆಂದು ಪೋಸ್ಟ್ ಆಫೀಸ್ ಸ್ಕೀಂಗಳಲ್ಲಿ ಹೂಡಿಕೆ ಮಾಡಲು ಮುಂದಾಗುವುದುಂಟು. ಆದರೆ, ಕೆಲ ಸ್ಕೀಮ್​ಗಳಲ್ಲಿ ಸಿಗುವ ಲಾಭಕ್ಕೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಈ ರೀತಿ ಟ್ಯಾಕ್ಸ್ ಬೆನಿಫಿಟ್ ಇಲ್ಲದ ಕೆಲ ಪೋಸ್ಟ್ ಆಫೀಸ್ ಸ್ಕೀಮ್​ಗಳ ಪಟ್ಟಿ ಇಲ್ಲಿದೆ.

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಗಡುವು ಅಕ್ಟೋಬರ್ 31ರವರೆಗೂ ವಿಸ್ತರಣೆ

Deadline to submit TAR is extended to Oct 31st: ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಡಿಟಿ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಕಾಲಾವಕಾಶ ವಿಸ್ತರಿಸಿದೆ. ಸೆಪ್ಟೆಂಬರ್ 30ಕ್ಕೆ ಇದ್ದ ಡೆಡ್​ಲೈನ್ ಅನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲಾಗಿದೆ. ನೈಸರ್ಗಿಕ ವಿಕೋಪ ಮತ್ತಿತರ ಕಾರಣಕ್ಕೆ ಬ್ಯುಸಿನೆಸ್ ಚಟುವಟಿಕೆ ಧಕ್ಕೆಯಾದ ಕಾರಣ ಸಕಾಲಕ್ಕೆ ಟಿಎಆರ್ ಸಲ್ಲಿಸಲು ಆಗುತ್ತಿಲ್ಲ ಎಂದು ವಿವಿಧ ಸಂಘಟನೆಗಳು ಕೋರ್ಟ್ ಮೊರೆ ಹೋಗಿದ್ದವು.

Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?

Reasons why ITR refunds getting delayed this year: ಸಾಮಾನ್ಯವಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿ ರೀಫಂಡ್​ಗೆ ಕ್ಲೇಮ್ ಮಾಡಿದವರಿಗೆ ಒಂದು ತಿಂಗಳಲ್ಲಿ ಹಣ ಸಿಗುತ್ತೆ. ಆಗಸ್ಟ್​ನಲ್ಲೇ ಐಟಿಆರ್ ಸಲ್ಲಿಸಿದವರಿಗೆ ಇನ್ನೂ ರೀಫಂಡ್ ಸಿಕ್ಕಿಲ್ಲ. ಆದರೆ, ಈ ವರ್ಷ ಹೊಸ ವೆರಿಫಿಕೇಶನ್ ಪ್ರಕ್ರಿಯೆ ಇರುವುದರಿಂದ ರೀಫಂಡ್ ವಿಳಂಬವಾಗುತ್ತಿದೆ. ಆದರೆ, ಯಾವಾಗೇ ರೀಫಂಡ್ ಬಂದರೂ ಶೇ. 6ರ ದರದಲ್ಲಿ ಬಡ್ಡಿ ಸೇರಿಸಿ ಕೊಡಲಾಗುತ್ತದೆ.

Income Tax Returns: ಕೇವಲ ಒಂದೇ ಒಂದು ದಿನ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ

Income tax returns filing deadline: ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಇನ್ನೂ ಒಂದು ದಿನ ವಿಸ್ತರಿಸಿದೆ. ಆದ್ದರಿಂದ, ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಈಗ ಸೆಪ್ಟೆಂಬರ್ 16, 2025 ಆಗಿದೆ. ಈ ಮೊದಲು ಈ ದಿನಾಂಕವನ್ನು ಸೆಪ್ಟೆಂಬರ್ 15 ಎಂದು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಐಟಿಆರ್ ಸಲ್ಲಿಸಲು ಆರಂಭಿಕ ಗಡುವು ಜುಲೈ 31, 2025 ಆಗಿತ್ತು, ಅದನ್ನು ಈಗಾಗಲೇ ವಿಸ್ತರಿಸಲಾಗಿತ್ತು.

ITR Filing Last Date: ಐಟಿಆರ್ ಫೈಲಿಂಗ್, ಡೆಡ್​ಲೈನ್ ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?

Income tax returns filing deadline: ಐಟಿಆರ್ ಫೈಲ್ ಮಾಡಲು ಸೆಪ್ಟೆಂಬರ್ 15ಕ್ಕೆ ಇರುವ ಡೆಡ್ಲೈನ್ ಅನ್ನು ಸೆ. 30ಕ್ಕೆ ವಿಸ್ತರಿಸಲಾಗಿದೆ ಎನ್ನುವ ಸುದ್ದಿ ಹರಡಿದೆ. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಗಡುವನ್ನು ಬದಲಾಯಿಸಲಾಗಿಲ್ಲ ಎಂದು ಹೇಳಿದೆ. ಆದಾಯ ತೆರಿಗೆ ವೆಬ್​ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಗಡುವನ್ನು ಹೆಚ್ಚಿಸಬೇಕು ಎನ್ನುವ ಕೂಗು ಮುಂದುವರಿದಿದೆ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ