AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax

Income Tax

ಆದಾಯ ತೆರಿಗೆ ಎಂಬುದು ವ್ಯಕ್ತಿ ಹಾಗೂ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ. ಇದು ನೇರ ತೆರಿಗೆಗಳ ಗುಂಪಿಗೆ ಸೇರುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಎಂದು ವರ್ಗೀಕರಿಸಬಹುದು. ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇದೂ ಒಂದು. 2023-24ರ ಸಾಲಿನ ವರ್ಷದಲ್ಲಿ ಭಾರತದಲ್ಲಿ ಆದಾಯ ತೆರಿಗೆ ಸೇರಿದಂತೆ ಒಟ್ಟಾರೆ ನೇರ ತೆರಿಗೆಗಳ ಪ್ರಮಾಣ 18.90 ಲಕ್ಷ ಕೋಟಿ ರೂ ಇತ್ತು. ಸರ್ಕಾರ ಆದಾಯ ತೆರಿಗೆಯನ್ನು ಸ್ಲ್ಯಾಬ್ ದರಗಳಲ್ಲಿ ವಿಧಿಸುತ್ತದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ದರ ಇರುತ್ತದೆ. ತೀರಾ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ಹೆಚ್ಚಿದಂತೆ ತೆರಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಸಮಾಜದಲ್ಲಿ ಆರ್ಥಿಕ ಬೆಳವಣಿಗೆಯ ಅಸಮತೋಲನ ಕಡಿಮೆ ಮಾಡಲು ಈ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.

ಇನ್ನೂ ಹೆಚ್ಚು ಓದಿ

ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್​ಲೈನ್ ಮಿಸ್ ಆದವರಿಗೆ ಏನು ದಂಡ?

Advance Tax 2024-25, Payment Rules: ಮುಂಗಡ ತೆರಿಗೆ (Advance Tax) ಎಂದರೇನು? ಪ್ರಸಕ್ತ ಹಣಕಾಸು ವರ್ಷದ ಮೊದಲ ಕಂತು ಪಾವತಿಸಲು ಜೂನ್ 15 ಕೊನೆಯ ದಿನ. ₹10,000 ಕ್ಕಿಂತ ಹೆಚ್ಚು ತೆರಿಗೆ ಬಾಧ್ಯತೆ ಹೊಂದಿರುವ ಸಂಬಳದಾರರು, ಸ್ವಯಂ ಉದ್ಯೋಗಿಗಳು ಕಡ್ಡಾಯವಾಗಿ ಪಾವತಿಸಬೇಕು. ಹಿರಿಯ ನಾಗರಿಕರಿಗೆ ಕೆಲವು ವಿನಾಯಿತಿಗಳಿವೆ. ಗಡುವು ತಪ್ಪಿದರೆ ಬಡ್ಡಿ ದಂಡ ಬೀಳುತ್ತದೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಪಾವತಿಸುವ ವಿಧಾನ ಇಲ್ಲಿದೆ.

ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ

ಭಾರತ ಸರ್ಕಾರವು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಬಾಂಡ್ ಲಾಭಾಂಶ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ ಭಾರತೀಯ ಬಾಂಡ್‌ಗಳ ಸೇರ್ಪಡೆಯ ನಂತರ, ವಿದೇಶಿ ಬಂಡವಾಳವನ್ನು ಆಕರ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ವಿದೇಶಿ ಹಣದ ಒಳಹರಿವನ್ನು ಹೆಚ್ಚಿಸಿ, ರೂಪಾಯಿ ಮೌಲ್ಯವನ್ನು ಬಲಪಡಿಸಿ, ಸರ್ಕಾರದ ಸಾಲದ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುತ್ತದೆ.

ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

Income tax dept uploads video with step-by-step guidance to file ITR-1: ಸಂಬಳದ ಆದಾಯ ಇರುವವರು, ಪಿಂಚಣಿ ಪಡೆಯುತ್ತಿರುವವರು, ಎರಡು ಮನೆಗಳ ಮಾಲೀಕರು, ಫ್ಯಾಮಿಲಿ ಪೆನ್ಷನ್ ಪಡೆಯುತ್ತಿರುವವರು ಮೊದಲಾದ ಆದಾಯ ವರ್ಗದವರು ಐಟಿಆರ್-1 ನಮೂನೆಯನ್ನು ಆಯ್ದುಕೊಂಡು ಭರ್ತಿ ಮಾಡಿ ರಿಟರ್ನ್ಸ್ ಸಲ್ಲಿಸಬೇಕು. ಇದನ್ನು ಹೇಗೆ ಮಾಡುವುದು ಎಂದು ವಿವರಿಸುವ 16 ಹಂತಗಳ ಕ್ರಮ ಇಲ್ಲಿದೆ.

ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್

Understand Annual Information Statement to File Taxes Safely: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ, ನಿಮ್ಮ ವಾರ್ಷಿಕ ಮಾಹಿತಿ ಹೇಳಿಕೆ (AIS) ಪರಿಶೀಲಿಸುವುದು ಕಡ್ಡಾಯ. ITR ಮತ್ತು AIS ಮಾಹಿತಿ ತಾಳೆಯಾಗದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಹೆಚ್ಚು. AIS ನಲ್ಲಿನ ದೋಷಗಳನ್ನು ತಕ್ಷಣ ಸರಿಪಡಿಸಿ ಅಥವಾ ಪರಿಷ್ಕೃತ ITR ಸಲ್ಲಿಸಿ. ಇದು ಅನಗತ್ಯ ತೊಂದರೆ ತಪ್ಪಿಸಿ, ನಿಮ್ಮ ತೆರಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಕೊನೆಯ ದಿನಾಂಕದ ಮೊದಲು ಈ ಪರಿಶೀಲನೆ ಪೂರ್ಣಗೊಳಿಸಿ, ಜಾಣತನದಿಂದ ತೆರಿಗೆ ಸಲ್ಲಿಸಿ.

‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

Bezos Calls for zero Federal Tax for Lower Earners: ಜೆಫ್ ಬೆಜೋಸ್ ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸೂಚಿಸಿದ್ದಾರೆ. ಕಡಿಮೆ ಆದಾಯ ಗಳಿಸುವ ಕೆಳಹಂತದ 50% ಜನರಿಗೆ ಫೆಡರಲ್ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಅವರು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಅವರು 3% ತೆರಿಗೆ ಪಾವತಿಸುತ್ತಿದ್ದು, ಇದನ್ನು ಶೂನ್ಯಕ್ಕೆ ಇಳಿಸುವುದು ಆರ್ಥಿಕ ಅಸಮಾನತೆ ನಿವಾರಣೆಗೆ ಮತ್ತು ಬಡವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಬೆಜೋಸ್ ಅಭಿಪ್ರಾಯಪಟ್ಟಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ನಷ್ಟವಲ್ಲ, ಆದರೆ ಜನರಿಗೆ ದೊಡ್ಡ ಬೆಂಬಲ.

ಈ ತಂತ್ರ ಬಳಸಿದರೆ, 12 ಲಕ್ಷ ಮಾತ್ರವಲ್ಲ, 15 ಲಕ್ಷ ರೂವರೆಗೆ ಆದಾಯಕ್ಕೆ ಶೂನ್ಯ ತೆರಿಗೆ

Income tax tips: ಕೇಂದ್ರ ಸರ್ಕಾರವು ಹೊಸ ಟ್ಯಾಕ್ಸ್ ರಿಜೈಮ್ ಅನ್ನು ಆಕರ್ಷಕವಾಗಿಸಿದೆ. ಹಳೆಯ ರಿಜೈಮ್​ನಲ್ಲಿ ಬಹಳಷ್ಟು ಟ್ಯಾಕ್ಸ್ ಡಿಡಕ್ಷನ್​ಗಳಿವೆ. ಆದರೆ, ಹೊಸ ಸಿಸ್ಟಂನಲ್ಲಿ ಟ್ಯಾಕ್ಸ್ ಸ್ಲ್ಯಾಬ್ ದರಗಳನ್ನು ಇಳಿಸಲಾಗಿದೆ. ಟ್ಯಾಕ್ಸ್ ರಿಬೇಟ್ ಹೆಚ್ಚಿಸಿ, 12 ಲಕ್ಷ ರೂವರೆಗಿನ ಆದಾಯದವರಿಗೆ ಝೀರೋ ಟ್ಯಾಕ್ಸ್ ಹೊರೆ ತರಲಾಗಿದೆ. ಇನ್ನೂ ಕೆಲ ಭತ್ಯೆ ಮತ್ತು ಸೌಲಭ್ಯಗಳನ್ನು ಬಳಸಿದರೆ 15 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಬಾಧ್ಯತೆ ಇಲ್ಲದಂತಾಗುತ್ತದೆ.

ಚಿನ್ನದ ಮೇಲಿನ ವಿವಿಧ ಹೂಡಿಕೆಗಳಿಗೆ ವಿವಿಧ ತೆರಿಗೆಗಳು ಹೇಗೆ? ಇಲ್ಲಿದೆ ಡೀಟೇಲ್ಸ್

Capital Gains Tax on Gold in India: ಭಾರತದಲ್ಲಿ ಚಿನ್ನದ ಹೂಡಿಕೆ ಜನಪ್ರಿಯವಾಗಿದ್ದು, ಅದರ ಮೇಲೆ ಆದಾಯ ತೆರಿಗೆ ನಿಯಮಗಳು ವಿಭಿನ್ನವಾಗಿವೆ. ಭೌತಿಕ ಚಿನ್ನ, ಡಿಜಿಟಲ್ ಚಿನ್ನ, ಗೋಲ್ಡ್ ಇಟಿಎಫ್ ಮತ್ತು ಸಾವರಿನ್ ಗೋಲ್ಡ್ ಬಾಂಡ್ (SGB) ಮೇಲಿನ ಬಂಡವಾಳ ಲಾಭ ತೆರಿಗೆ (STCG, LTCG) ಹೂಡಿಕೆಯ ಅವಧಿಯನ್ನು ಅವಲಂಬಿಸಿ ಬದಲಾಗುತ್ತದೆ. ಇತ್ತೀಚಿನ ಬಜೆಟ್ ನಿಯಮಗಳನ್ನು ಅರಿತುಕೊಳ್ಳುವುದು ಮತ್ತು ನಿವ್ವಳ ಲಾಭದ ಮೇಲೆ ತೆರಿಗೆಯ ಪರಿಣಾಮವನ್ನು ಅಂದಾಜು ಮಾಡುವುದು ಹೂಡಿಕೆದಾರರಿಗೆ ಅತ್ಯಗತ್ಯ.

ಬಿಹಾರ್, ಜಾರ್ಖಂಡ್​ನಲ್ಲಿ ಆದಾಯ ತೆರಿಗೆ ಪಾವತಿಯಲ್ಲಿ ಉದ್ಯಮಿಗಳನ್ನೂ ಮೀರಿಸಿದ ಧೋನಿ

Income tax dept collects Rs 20,000 crore taxes in Jharkhand and Bihar: ಹಲವು ಬ್ಯುಸಿನೆಸ್​ಗಳನ್ನು ನಡೆಸುವ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬಹಳಷ್ಟು ಆದಾಯ ತೆರಿಗೆ ಪಾವತಿಸುತ್ತಾರೆ. 2025-26ರ ಹಣಕಾಸು ವರ್ಷದಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿಂದ ಆದಾಯ ತೆರಿಗೆ ಪಾವತಿಸಿದ ವ್ಯಕ್ತಿಗಳ ಪೈಕಿ ಧೋನಿ ನಂ. 1 ಎನಿಸಿದ್ದಾರೆ. ಈ ಎರಡು ರಾಜ್ಯಗಳಿಂದ ವೈಯಕ್ತಿಕ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಸೇರಿ ಒಟ್ಟು 20,000 ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್ ಆಗಿದೆ.

ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

Dhobi gets tax notice over Rs 598 crore diamond deals: ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಏನು ಅನಾಹುತವಾಗಬಹುದು ಎಂಬುದಕ್ಕೆ ಇನ್ನೊಂದು ನಿದರ್ಶನ ಸಿಕ್ಕಿದೆ. ರಾಜಸ್ಥಾನದ ಅಜ್ಮೇರ್​ನ ನಿವಾಸಿಯಾದ ಮತ್ತು ಧೋಬಿ ಕೆಲಸ ಮಾಡುವ ವ್ಯಕ್ತಿಯ ಹೆಸರಿನಲ್ಲಿ ನೂರಾರು ಕೋಟಿ ರೂ ವಹಿವವಾಟು ಆಗಿದೆ. ಆದಾಯ ತೆರಿಗೆ ಇಲಾಖೆ ಈತನ ಮೇಲೆ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಕೊಟ್ಟಿದೆ.

ITR Filing 2026: ಹೊಸ ವರ್ಷಕ್ಕೆ ಐಟಿಆರ್ ಫಾರ್ಮ್​ಗಳಲ್ಲಿ ಈ ಕೆಲ ಬದಲಾವಣೆಗಳನ್ನು ಗಮನಿಸಿ

New disclosures from this season ITR filing: 2025-26ರ ಹಣಕಾಸು ವರ್ಷಕ್ಕೆ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಐಟಿಆರ್ ಫಾರ್ಮ್​ಗಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. 80ಜಿ ಅಡಿಯಲ್ಲಿ ನೀಡಲಾಗುವ ವಿವಿಧ ದೇಣಿಗೆಗಳಿಗೆ ಡಿಡಕ್ಷನ್ ಸಿಗುತ್ತದೆ. ಈ ಸಂಬಂಧ ಕೆಲ ನಿಯಮಗಳು ಬದಲಾಗಿವೆ. ಎಫ್ ಅಂಡ್ ಒ ಟ್ರೇಡಿಂಗ್ ವಿಷಯದಲ್ಲೂ ನಿಯಮ ಬದಲಾವಣೆ ಇದೆ. ಸೆಕೆಂಡರಿ ಅಡ್ರೆಸ್ ಆಯ್ಕೆ ಇರುತ್ತದೆ.

ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

New Income Tax Act PAN rules: 2026ರ ಏಪ್ರಿಲ್ 1ರಿಂದ ಹೊಸ ಪ್ಯಾನ್ ನಿಯಮಗಳು ಚಾಲನೆಗೆ ಬಂದಿವೆ. ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಇರುವ ನಿಯಮ ಬದಲಾಗಿದೆ. ಕ್ಯಾಷ್ ಡೆಪಾಸಿಟ್, ವಿತ್​ಡ್ರಾಯಲ್​ಗೆ ಪ್ಯಾನ್ ನೀಡುವ ಕ್ರಮದಲ್ಲಿ ಬದಲಾವಣೆ ಇದೆ. ಇತರ ಕೆಲ ಹಣಕಾಸು ಕಾರ್ಯಗಳಿಗೆ ಪ್ಯಾನ್ ಬಳಕೆ ನಿಯಮದಲ್ಲಿ ಬದಲಾವಣೆ ಇದೆ.

ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

Important financial tasks to be done before March 31st: 2025-26ರ ಹಣಕಾಸು ವರ್ಷ ಮಾರ್ಚ್ 31ಕ್ಕೆ ಮುಗಿಯುತ್ತದೆ. ಏಪ್ರಿಲ್ 1ರಿಂದ 2026-27ರ ಹಣಕಾಸು ವರ್ಷ ಆರಂಭವಾಗುತ್ತದೆ. ಹೊಸ ವರ್ಷಕ್ಕೆ ಪ್ಯಾನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಕೆಲ ನಿಯಮ ಬದಲಾವಣೆಗಳು ಇವೆ. ಹಾಗೆಯೇ, ಉದ್ಯೋಗಿಗಳು ತಮ್ಮ ಸಂಬಳದಿಂದ ಟಿಡಿಎಸ್ ಕಡಿತಗೊಳ್ಳದೇ ಇರಲು ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.

ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ