AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swapna Shastra: ಹಾವು ಕಚ್ಚಿದಂತೆ ಕನಸು ಬಿದ್ದರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಹಾವು ಕಚ್ಚಿದಂತೆ ಕನಸು ಬಿದ್ದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದು ಕೆಲವು ಸೂಚನೆಗಳನ್ನು ನೀಡುತ್ತದೆ. ಇದು ಅನಾರೋಗ್ಯ, ಆರ್ಥಿಕ ನಷ್ಟ ಅಥವಾ ಗುಪ್ತ ಶತ್ರುಗಳ ಸಂಕೇತವಾಗಿರಬಹುದು. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆ, ಸುಬ್ರಹ್ಮಣ್ಯ ಆರಾಧನೆ ಮತ್ತು ನವನಾಗ ಸ್ತೋತ್ರ ಪಠಣದ ಮೂಲಕ ದೋಷ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನಷ್ಟು ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Swapna Shastra: ಹಾವು ಕಚ್ಚಿದಂತೆ  ಕನಸು ಬಿದ್ದರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಹಾವು ಕಚ್ಚಿದ್ದಂತೆ ಕನಸು
ಅಕ್ಷತಾ ವರ್ಕಾಡಿ
|

Updated on:Dec 05, 2025 | 11:08 AM

Share

ಹಾವು ಕಚ್ಚಿದಂತೆ ಕನಸು ಬಿದ್ದರೆ ಅದರ ಅರ್ಥ ಮತ್ತು ಪರಿಣಾಮಗಳ ಕುರಿತು ಸ್ವಪ್ನ ಶಾಸ್ತ್ರದ ಆಧಾರದ ಮೇಲೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಸ್ವಪ್ನ ಶಾಸ್ತ್ರವು ನಮ್ಮ ಸುಪ್ತಾವಸ್ಥೆಯಲ್ಲಿ ಕಾಣುವ ಕನಸುಗಳಿಗೆ ನಿರ್ದಿಷ್ಟ ಅರ್ಥಗಳನ್ನು ನೀಡುತ್ತದೆ. ಹಲವು ಜನರು ಕನಸಿನಲ್ಲಿ ಹಾವು ಕಚ್ಚಿದಾಗ ಆತಂಕಿತರಾಗಿ, ಅದರ ಪ್ರಭಾವದ ಬಗ್ಗೆ ಪದೇಪದೇ ಪ್ರಶ್ನಿಸುತ್ತಾರೆ. ಈ ಕನಸುಗಳ ಫಲಿತಾಂಶವು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ವ್ಯಕ್ತಿಯ ಬಾಲ್ಯಾವಸ್ಥೆ, ಯೌವನಾವಸ್ಥೆ, ಪ್ರೌಢಾವಸ್ಥೆ ಮತ್ತು ವೃದ್ಧಾವಸ್ಥೆಗಳಿಗೆ ಅನುಗುಣವಾಗಿ ಕನಸುಗಳ ಅರ್ಥ ಭಿನ್ನವಾಗಿರುತ್ತದೆ. ಕನಸು ಬಿದ್ದ ದಿನ ಮತ್ತು ತಿಥಿಯನ್ನು ಸಹ ಪರಿಗಣಿಸಲಾಗುತ್ತದೆ.

ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ರಾತ್ರಿ 12 ಗಂಟೆಯ ನಂತರ ಬಿದ್ದ ಕನಸುಗಳನ್ನು ಮುಂದಿನ ದಿನಕ್ಕೆ ಸಂಬಂಧಿಸಿದಂತೆ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಾವು ಕನಸಿನಲ್ಲಿ ಕಚ್ಚಿದಂತೆ ಕಂಡುಬಂದರೆ, ಇದು ಒಂದಷ್ಟು ಜಾಗರೂಕತೆಯನ್ನು ಸೂಚಿಸುತ್ತದೆ ಮತ್ತು ಇದು ಅಶುಭದ ಸಂಕೇತವಾಗಿರಬಹುದು ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ.

ಹಾವು ಕನಸಿನಲ್ಲಿ ಕಚ್ಚಿದರೆ ಉಂಟಾಗುವ ಸಂಭಾವ್ಯ ಪ್ರಭಾವಗಳು ಹೀಗಿವೆ:

  • ಆರೋಗ್ಯದ ಸಮಸ್ಯೆಗಳು: ವ್ಯಕ್ತಿಯು ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಕ್ರಿಯಾಶೀಲತೆ ಕಡಿಮೆಯಾಗಿ ನಿತ್ರಾಣದ ಭಾವನೆ ಕಾಡಬಹುದು.
  • ಆರ್ಥಿಕ ನಷ್ಟ: ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆಗಳಿರುತ್ತವೆ, ಇದು ವ್ಯಕ್ತಿಯ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.
  • ಮುಖಭಾವಕ್ಕೆ ತೊಂದರೆ: ಮುಖಭಾವಕ್ಕೆ (ವ್ಯಕ್ತಿಯ ವರ್ಚಸ್ಸಿಗೆ) ತೊಂದರೆ ಆಗುವ ಸಾಧ್ಯತೆ ಇರುತ್ತದೆ.
  • ಗುಪ್ತ ಶತ್ರುಗಳ ಕಾಟ: ಅಜ್ಞಾತ ಶತ್ರುಗಳಿಂದ ತೊಂದರೆಗಳು ಎದುರಾಗಬಹುದು.
  • ಪ್ರಗತಿಗೆ ಅಡ್ಡಿ: ನೀವು ಮಾಡುತ್ತಿರುವ ಕಾರ್ಯಗಳ ವೇಗಕ್ಕೆ ಅಡೆತಡೆಗಳು ಉಂಟಾಗಿ, ಪ್ರಗತಿಗೆ ಬ್ರೇಕ್ ಬೀಳಬಹುದು. ಇದು ಎಚ್ಚರಿಕೆಯಿಂದ ಮುನ್ನಡೆಯಬೇಕೆಂಬ ಸೂಚನೆಯಾಗಿರುತ್ತದೆ.

ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ನವನಾಗಗಳ ಅಂಶಗಳು ನಮ್ಮ ದೇಹದ ನಾಲಿಗೆ, ಹಣೆಯ ಮತ್ತು ಬೆನ್ನುಮೂಳೆಗಳಲ್ಲಿ ಇರುವುದನ್ನು ಸ್ವಪ್ನ ಶಾಸ್ತ್ರವು ಉಲ್ಲೇಖಿಸುತ್ತದೆ. ಆದ್ದರಿಂದ, ಮಾತನಾಡುವಾಗ ಜಾಗೃತರಾಗಿರಬೇಕು, ಯಾರ ಬಗ್ಗೆಯೂ ಕೆಟ್ಟದ್ದನ್ನು ಬಯಸಬಾರದು. ಬೆನ್ನುಮೂಳೆಯಲ್ಲಿರುವ ನಾಗನ ಅಂಶವು ಸಪ್ತ ಚಕ್ರಗಳಿಗೆ ಸಂಬಂಧಿಸಿದ್ದು, ಶುಭ ಕಾರ್ಯಗಳನ್ನು ಮಾಡುವವರ ಬೆನ್ನುಮೂಳೆ ಗಟ್ಟಿಯಾಗಿರುತ್ತದೆ ಎಂದು ಹೇಳಲಾಗುತ್ತದೆ, ಇದರಿಂದ ಅವರು ದೀರ್ಘಾಯುಷಿಗಳಾಗುತ್ತಾರೆ.

ಇಂತಹ ಕನಸು ಬಿದ್ದಾಗ ಭಯಭೀತರಾಗದೆ, ಕೆಲವು ಪರಿಹಾರ ಕ್ರಮಗಳನ್ನು ಅನುಸರಿಸಬಹುದು. ತಕ್ಷಣವೇ ನಾವು ನಮ್ಮ ವೇಗವನ್ನು ಕಡಿಮೆ ಮಾಡಿಕೊಂಡು, ಧನಾತ್ಮಕ ಚಿಂತನೆಗಳಿಗೆ ಒತ್ತು ನೀಡಬೇಕು. ಇದರ ಜೊತೆಗೆ, ಸುಬ್ರಹ್ಮಣ್ಯ ದೇವರನ್ನು ಆರಾಧಿಸುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ನವನಾಗ ಸ್ತೋತ್ರವಾದ “ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ, ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ” ಇದನ್ನು ಪ್ರತಿದಿನ ಕನಿಷ್ಠ 21 ಬಾರಿ, 6 ದಿನಗಳ ಕಾಲ ಪಠಿಸುವುದರಿಂದ, ಕನಸಿನಿಂದ ಉಂಟಾಗುವ ದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಒಟ್ಟಾರೆ, ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ ಮತ್ತು ಪ್ರತಿಯೊಂದು ಅನುಭವವೂ ನಮ್ಮ ಜೀವನದ ಭಾಗವಾಗಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Fri, 5 December 25

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ