AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock in focus: ಡೆವಿಡೆಂಡ್ ಘೋಷಿಸಿದ ಎಲ್​ಐಸಿ, ಸತತ ಕುಸಿತ ಕಂಡಿದ್ದ ಷೇರು ಮೌಲ್ಯಕ್ಕೆ ತುಸು ಚೇತರಿಕೆ

ಸೌದಿ ಅರೇಬಿಯಾದ ಅರಾಮ್​ಕೊ (Aramco) ಮಾದರಿಯಲ್ಲಿ ಎಲ್​ಐಸಿ ಕೂಡ ದೊಡ್ಡಮಟ್ಟದ ಡಿವಿಡೆಂಡ್ ಘೋಷಿಸಬಹುದು ಎನ್ನುವ ಹೂಡಿಕೆದಾರರ ಆಸೆಯು ಹುಸಿಯಾಗಿದೆ.

Stock in focus: ಡೆವಿಡೆಂಡ್ ಘೋಷಿಸಿದ ಎಲ್​ಐಸಿ, ಸತತ ಕುಸಿತ ಕಂಡಿದ್ದ ಷೇರು ಮೌಲ್ಯಕ್ಕೆ ತುಸು ಚೇತರಿಕೆ
ಎಲ್​ಐಸಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Aug 25, 2022 | 10:41 AM

Share

ಮುಂಬೈ: ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಷೇರು ವಹಿವಾಟು ಇಂದು ಷೇರುಪೇಟೆಯಲ್ಲಿ ಎದ್ದುಕಾಣುವಂತಿದೆ. ಸತತ ಇಳಿಕೆ ಕಂಡು ಕಳಾಹೀನವಾಗಿದ್ದ ಎಲ್​ಐಸಿ ಷೇರು ಮೌಲ್ಯವು ಲಾಭಾಂಶ (Dividend) ಘೋಷಣೆಯ ನಂತರ ತುಸು ಏರುಗತಿ ಕಂಡಿವೆ. ಲಾಭಾಂಶ ಹಂಚಿಕೆಗೆ ಪರಿಗಣಿಸುವ ದಿನಾಂಕವಾಗಿ ಆಗಸ್ಟ್ 25 (ಇಂದು) ನಿಗದಿಯಾಗಿದೆ. ಪ್ರತಿ ಷೇರಿಗೆ 2021-22ರ ಹಣಕಾಸು ವರ್ಷಕ್ಕಾಗಿ ₹ 1.50 ಲಾಭಾಂಶ ಹಂಚಿಕೆ ಮಾಡುವುದಾಗಿ ಎಲ್​ಐಸಿ ಷೇರುಪೇಟೆ ನಿಯಂತ್ರಕರಿಗೆ ಮಾಹಿತಿ ನೀಡಿದೆ. ಲಾಭಾಂಶ ಹಂಚಿಕೆಗೆ ನಾಳೆ (26ನೇ ಆಗಸ್ಟ್ 2022) ರೆಕಾರ್ಡ್​ ಡೇಟ್ ಎಂದು ನಿಗದಿಪಡಿಸಲಾಗಿದೆ.

ಲಾಭಾಂಶ ಹಂಚಿಕೆ ಕುರಿತು ಆಡಳಿತ ಮೇ 30ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಎಲ್​ಐಸಿ ನಿರ್ಧಾರ ತೆಗೆದುಕೊಂಡಿತ್ತು. ₹ 10 ಮುಖಬೆಲೆಯ ಎಲ್​ಐಸಿ ಷೇರುಗಳಿಗೆ ₹ 1.50 ಲಾಭಾಂಶ ನಿಗದಿಪಡಿಸಲಾಗಿದೆ. ಎಲ್​ಐಸಿ ಷೇರು ನಿನ್ನೆ (ಆಗಸ್ಟ್ 24) ₹ 675.90 ಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಈ ಲೆಕ್ಕಾಚಾರದಲ್ಲಿ ಷೇರುದಾರರಿಗೆ ಸರಾಸರಿ ಶೇ 0.22 ಲಾಭಾಂಶ ಗಳಿಕೆ (Devidend Yield) ಸಿಕ್ಕಂತೆ ಆಗಿದೆ. ಸೌದಿ ಅರೇಬಿಯಾದ ಅರಾಮ್​ಕೊ (Aramco) ಮಾದರಿಯಲ್ಲಿ ಎಲ್​ಐಸಿ ಕೂಡ ದೊಡ್ಡಮಟ್ಟದ ಡಿವಿಡೆಂಡ್ ಘೋಷಿಸಬಹುದು ಎನ್ನುವ ಹೂಡಿಕೆದಾರರ ಆಸೆಯು ಹುಸಿಯಾಗಿದೆ.

ಎಲ್​ಐಸಿ ಐಪಿಒ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿತ್ತು. ಮೇ ತಿಂಗಳಲ್ಲಿ ₹ 902ರಿಂದ ₹ 949ರ ಪ್ರೈಸ್​ಬ್ಯಾಂಡ್​ನೊಂದಿಗೆ ಐಪಿಒ ಘೋಷಿಸಲಾಯಿತು. ಆದರೆ ಮಾರುಕಟ್ಟೆಗೆ ಬಂದ ಮೊದಲ ದಿನ ಹೂಡಿಕೆದಾರರಿಗೆ ನಷ್ಟ ಉಂಟು ಮಾಡುವಂತೆ ₹ 872ಕ್ಕೆ (ಎನ್​ಎಸ್​ಇ) ಲಿಸ್ಟ್ ಆಯಿತು. ನಂತರದ ದಿನಗಳಲ್ಲಿ ಸತತ ಕುಸಿತ ಕಂಡ ಷೇರುಗಳು ₹ 650ಕ್ಕೆ ಬಿದ್ದಿತ್ತು. ಐಪಿಒ ಮೂಲಕ ಷೇರು ಪಡೆದ ಹೂಡಿಕೆದಾರರು ಈವರೆಗೆ ಅಸಲನ್ನೂ ಕಂಡಿಲ್ಲ.

ಎಲ್​ಐಸಿ ಲಾಭಗಳಿಕೆ ಪ್ರಮಾಣ ಸುಧಾರಿಸಿರುವುದು ಹಾಗೂ ಭವಿಷ್ಯದ ವಹಿವಾಟು ಹೆಚ್ಚಾಗಬಹುದು ಎಂಬ ಆಶಯ ಇರುವುದರಿಂದ ಹಲವು ಬ್ರೋಕರೇಜ್ ಕಂಪನಿಗಳು ಎಲ್​ಐಸಿ ಮೇಲೆ ಆಸೆ ಇರಿಸಿಕೊಂಡಿವೆ. ‘ಹೂಡಿಕೆದಾರರು ತಾತ್ಕಾಲಿಕ ಏರಿಳಿತಗಳ ಕಡೆಗೆ ಗಮನ ಕೊಡದೆ, ದೀರ್ಘಾವಧಿ ದೃಷ್ಟಿ ಇರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಎಲ್​ಐಸಿ ಕಂಪನಿಯು ವಿಮಾ ಕಂತು (ಪ್ರೀಮಿಯಂ) ಸಂಗ್ರಹ ಗಮನಾರ್ಹ ಪ್ರಗತಿ ಕಂಡಿದೆ. ಈ ಅವಧಿಯಲ್ಲಿ ಸುಮಾರು ₹ 1 ಲಕ್ಷ ಕೋಟಿಯಷ್ಟು ಪ್ರೀಮಿಯಂ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 20.35ರಷ್ಟು ಪ್ರಗತಿ ಸಾಧಿಸಿದಂತೆ ಎಂದು ಕಂಪನಿ ಹೇಳಿಕೊಂಡಿದೆ.

Published On - 10:36 am, Thu, 25 August 22

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ