AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Illicit Relationship: ಮಹಿಳೆಯೊಂದಿಗೆ ಅನೈತಿಕ ಸಂಬಂಧ; ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಿಂದ ಸಿಇಒ ಹೊರಕ್ಕೆ

NBCUniversal CEO Jeff Shell Ousted: ವಿಶ್ವದ ಮಾಧ್ಯಮ ದೈತ್ಯ ಸಂಸ್ತೆ ಎನ್​ಬಿಸಿ ಯೂನಿವರ್ಸಲ್​ನ ಸಿಇಒ ಜೆಫ್ ಶೆಲ್ ಹೊರನಡೆದಿದ್ದಾರೆ. ಕಂಪನಿಯೊಳಗೆ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಆರೋಪ ಎದುರಾದ್ದರಿಂದ ಶೆಲ್ ನಿರ್ಗಮನಕ್ಕೆ ಕಾರಣ.

Illicit Relationship: ಮಹಿಳೆಯೊಂದಿಗೆ ಅನೈತಿಕ ಸಂಬಂಧ; ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಿಂದ ಸಿಇಒ ಹೊರಕ್ಕೆ
ಜೆಫ್ ಶೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 24, 2023 | 12:06 PM

Share

ಮುಖ್ಯಾಂಶಗಳು

  • ಅಮೆರಿಕದ ಎನ್​ಬಿಸಿಯೂನಿವರ್ಸಲ್ ಸಂಸ್ಥೆಯಲ್ಲಿ ಮಹಿಳೆಯೊಂದಿಗೆ ಅನೈತಿಕ ಲೈಂಗಿಕ ಸಂಬಂಧ ಇಟ್ಟುಕೊಂಡ ಆರೋಪದ ಮೇಲೆ ಸಿಇಒ ಜೆಫ್ ಶೆಲ್ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ.
  • ಎನ್​ಬಿಸಿ ಯೂನಿವರ್ಸಲ್ ಸಂಸ್ಥೆ ಕಾಮ್​ಕ್ಯಾಸ್ಟ್ ಮಾಲೀಕತ್ವದಲ್ಲಿದೆ. ಸುದ್ದಿ ಮತ್ತು ಮನರಂಜನೆಯ ಕ್ಷೇತ್ರ, ಸೇರಿದಂತೆ ಸಂಸ್ಥೆಯ ವ್ಯಾಪ್ತಿ ವಿಸ್ತೃತವಾಗಿದೆ.
  • ಜೆಫ್ ಶೆಲ್ ಅವರು 19 ವರ್ಷಗಳಿಂದ ಎನ್​ಬಿಸಿ ಯೂನಿವರ್ಸಲ್​ನಲ್ಲಿ ಕೆಲಸ ಮಾಡಿದ್ದರು. 2020ರಲ್ಲಿ ಸಿಇಒ ಸ್ಥಾನಕ್ಕೆ ಏರಿದ್ದರು.

ನವದೆಹಲಿ: ಜಾಗತಿಕ ಮಾಧ್ಯಮ ದೈತ್ಯ ಸಂಸ್ಥೆ ಎನಿಸಿದ ಅಮೆರಿಕದ ಎನ್​ಬಿಸಿ ಯೂನಿವರ್ಸಲ್​ನಲ್ಲಿ (NBCUniversal) ಎದ್ದಿದ್ದ ಲೈಂಗಿಕ ಹಗರಣ ಇದೀಗ ಸಿಇಒ ತಲೆದಂಡದ ಹಂತಕ್ಕೆ ಮುಟ್ಟಿದೆ. ಮಹಿಳಾ ಉದ್ಯೋಗಿಯೊಂದಿಗೆ ಅನೈತಿಕ ಸಂಬಂಧ (Inappropriate Relationship With Woman) ಹೊಂದಿರುವ ಆರೋಪ ಎದುರಾದ ಹಿನ್ನೆಲೆಯಲ್ಲಿ ಎನ್​ಬಿಸಿ ಯೂನಿವರ್ಸಲ್ ಕಂಪನಿಯ ಸಿಇಒ ಜೆಫ್ ಶೆಲ್ (Jeff Shell) ಹೊರನಡೆಯುತ್ತಿದ್ದಾರೆ. ಜೆಫ್ ಶೆಲ್ ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಿಂದಲೇ ನಿರ್ಗಮಿಸುತ್ತಿರುವ ಸಂಗತಿಯನ್ನು ಅದರ ಮಾಲಕ ಸಂಸ್ಥೆ ಕಾಮ್​ಕ್ಯಾಸ್ಟ್ (Comcast) ತಿಳಿಸಿದೆ. ಜೆಫ್ ಶೆಲ್ ಕೂಡ ಈ ಸಂಸ್ಥೆಯಲ್ಲಿ ಇಂದು ತಮ್ಮದು ಕೊನೆಯ ದಿನ ಎಂದು ನಿನ್ನೆ ಏಪ್ರಿಲ್ 23ರಂದು ಹೇಳಿಕೆ ನೀಡಿದ್ದರು. ಎನ್​ಬಿಸಿ ಯೂನಿವರ್ಸಲ್​ನಲ್ಲಿ ಮಹಿಳೆಯೊಂದಿಗೆ ಜೆಫ್ ಶೆಲ್ ಅವರು ಅನೈತಿಕ ಸಂಬಂಧ ಹೊಂದಿರುವ ಸಂಗತಿ ಬಗ್ಗೆ ತನಿಖೆ ನಡೆದಿದೆ. ಈ ಹಿನ್ನೆಲೆಯಲ್ಲಿ ಶೆಲ್ ಅವರು ಎನ್​ಬಿಸಿ ಯೂನಿವರ್ಸಲ್​ನಿಂದ ಹೊರನಡೆಯಬೇಕಾಗಿದೆ ಎಂದು ವರದಿಗಳು ಹೇಳಿವೆ.

‘ಕಾಮ್​ಕ್ಯಾಸ್ಟ್ ಮತ್ತು ಎನ್​ಬಿಸಿ ಯೂನಿವರ್ಸಲ್​ನಲ್ಲಿರುವ ನನ್ನ ಸಹೋದ್ಯೋಗಿಗಳ ವಿಶ್ವಾಸಕ್ಕೆ ಧಕ್ಕೆ ತಂದಿರುವುದಕ್ಕೆ ನಿಜಕ್ಕೂ ನನಗೆ ವಿಷಾದ ಇದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಬಹಳ ಪ್ರತಿಭಾನ್ವಿತರು. ಕಳೆದ 19 ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಜೆಫ್ ಸೆಲ್ ಭಾನುವಾರ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: Crude Oil: ಜಾಗತಿಕವಾಗಿ ಅಗ್ಗವಾಗಿದೆ ಪೆಟ್ರೋಲಿಯಂ ಬೆಲೆ; ಈಗೆಷ್ಟಿವೆ ಕಚ್ಛಾ ತೈಲ ಬೆಲೆಗಳು? ಭಾರತದಲ್ಲಿ ಇನ್ನಷ್ಟು ಇಳಿಯುತ್ತಾ ಪೆಟ್ರೋಲ್ ಬೆಲೆ?

ಜೆಫ್ ಶೆಲ್ ಅವರು ಎನ್​ಬಿಸಿ ಯೂನಿವರ್ಸಲ್​ನಲ್ಲಿ 2004ರಿಂದಲೂ ಇದ್ದರು. 2020ರಲ್ಲಿ ಈ ಕಂಪನಿಗೆ ಸಿಇಒ ಆಗಿದ್ದರು. ಎನ್​ಬಿಸಿ ಯೂನಿವರ್ಸಲ್​ನ ವೈವಿಧ್ಯಮಯ ವ್ಯವಹಾರಗಳನ್ನು ಅವರು ಸಿಇಒ ಆಗಿ ನಿಭಾಯಿಸಿದ್ದರು. ನ್ಯೂಸ್ ಮತ್ತು ಎಂಟರ್ಟೈನ್ಮೆಂಟ್ ಟಿವಿ ನೆಟ್ವರ್ಕ್, ಮೋಷನ್ ಪಿಕ್ಚರ್ ಕಂಪನಿ, ಸ್ಪೋರ್ಟ್ಸ್ ಪ್ರೊಡಕ್ಷನ್ ಆಪರೇಶನ್, ಟಿವಿ ಸ್ಟೇಷನ್ಸ್ ಗ್ರೂಪ್, ಥೀಮ್ ಪಾರ್ಕ್ಸ್, ಸ್ಟ್ರೀಮಿಂಗ್ ಸರ್ವಿಸ್, ಹೀಗೆ ಸಂಸ್ಥೆಯ ವಿವಿಧ ಉದ್ದಿಮೆಗಳನ್ನು ಅವರು ನಿಭಾಯಿಸಿದ್ದರು. ಎನ್​ಬಿಸಿ ಯೂನಿವರ್ಸಲ್​ಗೆ ಸಿಇಒ ಆಗುವ ಮುನ್ನ ಜೆಫ್ ಶೆಲ್ ಅವರು ಎನ್​ಬಿಸಿ ಯೂನಿವರ್ಸಲ್ ಫಿಲಂ ಅಂಡ್ ಎಂಟರ್ಟೈನ್ಮೆಂಟ್​ನ ಛೇರ್ಮನ್ ಆಗಿದ್ದರು.

ಇದನ್ನೂ ಓದಿAkriti Chopra: ಈಕೆ ಆಕೃತಿ ಚೋಪ್ರಾ; ಉದ್ಯೋಗಿಯಾದವಳಿಗೆ ಸಿಕ್ತು ಸಹ-ಸಂಸ್ಥಾಪಕಿ ಪಟ್ಟ; ಗಂಡನ ಸಂಸ್ಥೆಯನ್ನೇ ಖರೀದಿಸಿತು ಈಕೆಯ ಕಂಪನಿ

ಜೆಫ್ ಶೆಲ್ ಹೊರಹೋಗುತ್ತಿರುವುದಕ್ಕೆ ಕಾಮ್​ಕ್ಯಾಸ್ಟ್ ಪ್ರತಿಕ್ರಿಯೆ ಇದು:

ಎನ್​ಬಿಸಿ ಯೂನಿವರ್ಸಲ್​ನಿಂದ ಸಿಇಒ ಜೆಫ್ ಶೆಲ್ ನಿರ್ಗಮಿಸುತ್ತಿರುವ ವಿಷಯವನ್ನು ಕಾಮ್​ಕ್ಯಾಸ್ಟ್ ನಿನ್ನೆ ಏಪ್ರಿಲ್ 23ರಂದು ಹೇಳಿಕೆ ನೀಡಿ ಖಚಿತಪಡಿಸಿತ್ತು. ಪರಸ್ಪರ ಸಮ್ಮತಿಯ ಮೇರೆಗೆ ಜೆಫ್ ಶೆಲ್ ಎನ್​ಬಿಸಿ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದೂ ಕಾಮ್​ಕ್ಯಾಸ್ಟ್ ಹೇಳಿದೆ. ಆದರೆ, ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಲ್ಲಿ ಸಿಇಒ ಆಗಿದ್ದ ಜೆಫ್ ಶೆಲ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಕಾಮ್​ಕ್ಯಾಸ್ಟ್ ಯಾವ ಸುಳಿವನ್ನೂ ನೀಡಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Mon, 24 April 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ