Motor Insurance: ಪ್ರತೀ ವಾಹನದ ಮಾಹಿತಿಯೂ ಸರ್ಕಾರಕ್ಕಿದೆ; ಇನ್ಷೂರೆನ್ಸ್ ಮಾಡಿಸಿಲ್ಲದವರಿಗೆ ಕಾದಿದೆ ಬಿಗಿಕ್ರಮ; ಡೀಟೇಲ್ಸ್ ಓದಿ

Big Penalty For Driving Without Vehicle Insurance: ಇನ್ಷೂರೆನ್ಸ್ ಮಾಡಿಸದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆಗಳು ಶೀಘ್ರದಲ್ಲೇ ನೋಟೀಸ್ ಕೊಡಲಿವೆ. ನಿಮ್ಮ ವಾಹನಕ್ಕೆ ಇನ್ನೂ ಇನ್ಷೂರೆನ್ಸ್ ಮಾಡಿಸಿಲ್ಲದೇ ಇದ್ದರೆ ಅಥವಾ ರಿನಿವಲ್ ಮಾಡಿಸದೇ ಇದ್ದರೆ ಮೊದಲು ಆ ಕೆಲಸ ಮಾಡಿ...!

Motor Insurance: ಪ್ರತೀ ವಾಹನದ ಮಾಹಿತಿಯೂ ಸರ್ಕಾರಕ್ಕಿದೆ; ಇನ್ಷೂರೆನ್ಸ್ ಮಾಡಿಸಿಲ್ಲದವರಿಗೆ ಕಾದಿದೆ ಬಿಗಿಕ್ರಮ; ಡೀಟೇಲ್ಸ್ ಓದಿ
ಮೋಟಾರ್ ಇನ್ಷೂರೆನ್ಸ್
Follow us
|

Updated on:Mar 07, 2023 | 2:39 PM

ನವದೆಹಲಿ: ರಸ್ತೆಗೆ ಇಳಿಯುವ ವಾಹನಕ್ಕೆ ನಿಗದಿ ಪಡಿಸಲಾಗಿರುವ ಕಡ್ಡಾಯ ದಾಖಲೆಗಳಲ್ಲಿ ಮೋಟಾರ್ ಇನ್ಷೂರೆನ್ಸ್ (Vehicle insurance) ಕೂಡ ಒಂದು. ಆದರೆ, ಬಹಳ ಮಂದಿ ತಮ್ಮ ವಾಹನಗಳಿಗೆ ಇನ್ಷೂರೆನ್ಸ್ ಮಾಡಿಸುವುದೇ ಇಲ್ಲ. ವಾಹನ ಖರೀದಿಸುವಾಗ ಇನ್ಷೂರೆನ್ಸ್ ಮಾಡಿಸಿರುತ್ತಾರಾದರೂ ಅದರ ರಿನಿವಿಲ್ ಮಾಡಿಸದೇ ಹಾಗೆ ಬಿಟ್ಟುಬಿಡುತ್ತಾರೆ. ಇನ್ಷೂರೆನ್ಸ್ ಇಲ್ಲದ ಇಂಥ ಕೋಟ್ಯಂತರ ವಾಹನಗಳು ಭಾರತದಲ್ಲಿ ನಿತ್ಯವೂ ಸಂಚರಿಸುತ್ತಿವೆ. ವಾಹನಕ್ಕೆ ಇನ್ಷೂರೆನ್ಸ್ ಮಾಡಿಸುವುದು ಕಡ್ಡಾಯ ಇದೆ. ಆದರೂ ವಿಮೆ ಮಾಡಿಸದೇ ವಾಹನ ಚಲಾಯಿಸುವವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ವಿಮೆ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈಗಾಗಲೇ ಎಲ್ಲಾ ವಾಹನಗಳಿಗೆ ಇನ್ಷೂರೆನ್ಸ್ ಅಳವಡಿಕೆ ಖಚಿತಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಇನ್ಷೂರೆನ್ಸ್ ಮಾಡಿಸದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆಗಳು ಶೀಘ್ರದಲ್ಲೇ ನೋಟೀಸ್ ಕೊಡಲಿವೆ. ನಿಮ್ಮ ವಾಹನಕ್ಕೆ ಇನ್ನೂ ಇನ್ಷೂರೆನ್ಸ್ ಮಾಡಿಸಿಲ್ಲದೇ ಇದ್ದರೆ ಅಥವಾ ರಿನಿವಲ್ ಮಾಡಿಸದೇ ಇದ್ದರೆ ಮೊದಲು ಆ ಕೆಲಸ ಮಾಡಿ…!

ಒಂದು ವೇಳೆ ನೀವು ಇನ್ಷೂರೆನ್ಸ್ ಮಾಡಿಸದೇ ವಾಹನ ಚಲಾಯಿಸಿದ್ದೇ ಆದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿಮಗೆ 2,000 ರೂ ದಂಡ ಹಾಕಲಿದ್ದಾರೆ. ಪ್ರತೀ ರಾಜ್ಯದಲ್ಲೂ ಇಂಥ ವಾಹನಗಳನ್ನು ಗುರುತಿಸಲು ಒಂದು ಇನ್ಷೂರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ. ಇನ್ಷೂರೆನ್ಸ್ ಮಾಡಿಸದ ವಾಹನಗಳ ಪಟ್ಟಿಯನ್ನು ಸಾರಿಗೆ ಇಲಾಖೆ ಮತ್ತು ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಪ್ರತಿಯೊಂದು ವಾಹನದ ಬಗ್ಗೆ ಇನ್ಷೂರೆನ್ಸ್ ಇನ್ಫಾರ್ಮೇಶನ್ ಬ್ಯೂರೋಗೆ ಮಾಹಿತಿ ಇದೆ.

ಇದನ್ನೂ ಓದಿ: Women’s Preferences: ಹಣಕಾಸು ಸೇವೆಗಳಲ್ಲಿ ಯಾವುದಕ್ಕೆ ಮಹಿಳೆಯರ ಆದ್ಯತೆ?: ಆರ್​ಬಿಐ ವರದಿ ನೋಡಿ

ಇನ್ಷೂರೆನ್ಸ್ ಮಾಡಿಸದಿದ್ದರೆ ಏನಾಗುತ್ತದೆ?

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ ಇನ್ಷೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ 2,000 ರೂ ದಂಡ ವಿಧಿಸಬಹುದು. ಇಂಥ ವಾಹನವನ್ನು ಗುರುತಿಸಿ ಆ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ನೋಟೀಸ್ ಜಾರಿ ಮಾಡುತ್ತದೆ. ವಾಹನ ಮಾಲೀಕರು ದಂಡದ ಮೊತ್ತದ ಜೊತೆಗೆ ವಾಹನಕ್ಕೆ ಇನ್ಷೂರೆನ್ಸ್ ಕೂಡ ಮಾಡಿಸಬೇಕಾಗುತ್ತದೆ. ಈ ರೀತಿಯಾಗಿ ಎಲ್ಲಾ ವಾಹನಗಳಿಗೂ ಇನ್ಷೂರೆನ್ಸ್ ಇರುವುದನ್ನು ಖಚಿತಪಡಿಸಲು ಐಆರ್​ಡಿಎಐ ಈ ಕ್ರಮ ಅನುಸರಿಸುತ್ತಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 30 ಕೋಟಿಗೂ ಹೆಚ್ಚು ವಾಹನಗಳು ಭಾರತದಲ್ಲಿ ಸಂಚರಿಸುತ್ತಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ವಾಹನಗಳಿಗೆ ಇನ್ಷೂರೆನ್ಸ್ ಇಲ್ಲವೇ ಇಲ್ಲ. ಭಾರತದಲ್ಲಿ ಪ್ರತೀ ವರ್ಷವೂ 4-5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಲ್ಲಿ ಸುಮಾರು ಒಂದೂವರೆ ಲಕ್ಷ ಅಪಘಾತಗಳು ಗಂಭೀರ ಸ್ವರೂಪದ್ದಾಗಿರುತ್ತವೆ. 18ರಿಂದ 45 ವರ್ಷ ವಯೋಮಾನದ ಜನರೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿದ್ದಾರೆನ್ನಲಾಗಿದೆ. ಹಾಗೆಯೇ, ಹೀಗಾಗಿ ವಾಹನಗಳಿಗೆ ವಿಮೆ ಮಾಡಿಸುವುದು ಬಹಳ ಮುಖ್ಯ ಎಂದು ಸರ್ಕಾರ ಪರಿಗಣಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Tue, 7 March 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್