Real Estate: ಹೈದರಾಬಾದ್​ನಲ್ಲಿ 4.3 ಲಕ್ಷ ಚದರಡಿಯ ಕಚೇರಿ ಕಟ್ಟಡಗಳು 247.5 ಕೋಟಿ ರೂಪಾಯಿಗೆ ಖರೀದಿ

ಹೈದರಾಬಾದ್​ನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಭಾರೀ ದೊಡ್ಡ ಮೊತ್ತಕ್ಕೆ ಕಚೇರಿ ಸ್ಥಳವನ್ನು ಖರೀದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇದು ದೊಡ್ಡ ಮೊತ್ತದ ವ್ಯವಹಾರ ಇದಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Real Estate: ಹೈದರಾಬಾದ್​ನಲ್ಲಿ 4.3 ಲಕ್ಷ ಚದರಡಿಯ ಕಚೇರಿ ಕಟ್ಟಡಗಳು 247.5 ಕೋಟಿ ರೂಪಾಯಿಗೆ ಖರೀದಿ
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on: Oct 14, 2021 | 2:43 PM

ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ವಾಣಿಜ್ಯ ಒಪ್ಪಂದಗಳಲ್ಲಿ ಇದೂ ಒಂದು. ರಿಯಲ್ ಎಸ್ಟೇಟ್ ಸಂಸ್ಥೆ ಅಪರ್ಣಾ ಕನ್​ಸ್ಟ್ರಕ್ಷನ್ಸ್ 4.3 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಕಟ್ಟಡಗಳನ್ನು ಹೈದರಾಬಾದ್​ನಲ್ಲಿ 247.5 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ಪ್ರಾಪ್ ಸ್ಟಾಕ್​ಗೆ ಲಭ್ಯವಾದ ದಾಖಲೆಗಳು ತೋರಿಸಿವೆ. ಮಾರಾಟ ಪತ್ರವನ್ನು ಸೆಪ್ಟೆಂಬರ್ 20, 2021ರಂದು ನೋಂದಾಯಿಸಲಾಗಿದೆ. ಕಚೇರಿ ಜಾಗವನ್ನು ಮಾರಾಟ ಮಾಡಿರುವುದು ENN ENN ಕಾರ್ಪ್ ಲಿಮಿಟೆಡ್. ಇದನ್ನು ಮೊದಲು ಅಭಿಷೇಕ್ ಗ್ರೂಪ್ ಆಫ್ ಕಂಪೆನಿ ಎಂದು ಕರೆಯಲಾಗುತ್ತಿತ್ತು. ಇದು ರಿಯಲ್ ಎಸ್ಟೇಟ್ ಅಭಿವೃದ್ಧಿ, ರಫ್ತು, ಕಾರ್ಬನ್ ಮುಕ್ತ ವಿದ್ಯುತ್ ಉತ್ಪಾದನೆ ಮತ್ತು ಅಸೆಟ್ ಲೀಸಿಂಗ್ ವ್ಯವಹಾರ ನಡೆಸುತ್ತಿದೆ. ಖರೀದಿದಾರರು ಹೈಟೆಕ್ ಸೈಬರ್‌ಪಜಿಯೊ ಎಲ್‌ಎಲ್‌ಪಿ, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ ಸಂಸ್ಥೆಯಾಗಿದೆ. ಕಂಪೆನಿಯು ತನ್ನ ಅಧಿಕೃತ ಪಾಲುದಾರ ಅಪರ್ಣಾ ಇನ್​ಫ್ರಾ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸುತ್ತದೆ ಎಂದು ದಾಖಲೆಗಳು ತೋರಿಸಿವೆ. ಇದು ಸಿ.ವೆಂಕಟೇಶ್ವರ ರೆಡ್ಡಿ ಮತ್ತು ಬಿ. ಸುಬ್ಬಾ ರೆಡ್ಡಿ ಅವರನ್ನು ಖರೀದಿ ಕಾರ್ಯಗತಗೊಳಿಸುವುದಕ್ಕೆ ಅಧಿಕಾರ ನೀಡಿದೆ.

ಮೊದಲ ಪ್ಲಾಟ್ – ಪ್ಲಾಟ್ 8, ಮಾದಾಪುರ ಮುಖ್ಯ ರಸ್ತೆ, ಇಲ್ಲಿ 2,52,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ಇದು ರೂ. 141.57 ಕೋಟಿಗೆ ಮಾರಾಟವಾಗಿದೆ. ಈ ಪ್ಲಾಟ್ ನೆಲ ಮತ್ತು ನಾಲ್ಕು ಮಹಡಿಗಳನ್ನು ಹೊಂದಿದೆ. ಇತರೆ ಪ್ಲಾಟ್‌ಗಳು 3 ಮತ್ತು 4 ಆಗಿದ್ದು, 1,81,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ನೆಲ ಮತ್ತು ಐದು ಮಹಡಿಗಳನ್ನು ಹೊಂದಿರುವ ಇವನ್ನು ರೂ. 105.93 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ತೋರಿಸಿವೆ. ಅಪರ್ಣಾ ಕನ್​ಸ್ಟ್ರಕ್ಷನ್ಸ್ ಅಥವಾ ಬಿ ಸುಬ್ಬಾ ರೆಡ್ಡಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಮೂರು ಪ್ಲಾಟ್‌ಗಳಿಗೆ ಅರ್ಜಿ ಸಲ್ಲಿಸಿತ್ತು ಎಲ್ ಅಂಡ್ ಟಿ ಇನ್ಫೋಸಿಟಿ ಲಿಮಿಟೆಡ್ 7.88 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಐಟಿ/ಐಟಿಇಎಸ್ ಚಟುವಟಿಕೆಗಳಿಗೆ ಮೀಸಲಾಗಿರುವ ಐಟಿ ಸೌಲಭ್ಯವನ್ನು ಸ್ಥಾಪಿಸಲು 2004ರಲ್ಲಿ ಈ ಮೂರು ಪ್ಲಾಟ್‌ಗಳಿಗೆ ಅರ್ಜಿ ಸಲ್ಲಿಸಿತ್ತು. ಅದೇ ವರ್ಷದಲ್ಲಿ ಕಂಪೆನಿಗೆ ಹಂಚಿಕೆ ಪತ್ರವನ್ನು ನೀಡಲಾಯಿತು. ಕಟ್ಟಡಗಳು 2005ರಲ್ಲಿ ಎದ್ದುನಿಂತವು. ಮಾರಾಟದ ದಾಖಲೆಗಳ ಪ್ರಕಾರ, L&T ನಂತರ 2011 ರಲ್ಲಿ ENN ENNಗೆ ಪ್ಲಾಟ್‌ಗಳನ್ನು ಮಾರಿತು. ENN ENN ಪಡೆದ ಸಾಲಗಳಿಗೆ SCB ಬ್ಯಾಂಕ್ ಆಸ್ತಿಯ ಮೇಲೆ ಹಕ್ಕನ್ನು ಹೊಂದಿತ್ತು. ಈ ಆಸ್ತಿಯಲ್ಲಿ ಬಾಡಿಗೆದಾರರು ಎಚ್‌ಎಸ್‌ಬಿಸಿ ಎಲೆಕ್ಟ್ರಾನಿಕ್ ಡಾಟಾ ಪ್ರೊಸೆಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಗಿದ್ದು, ಇದು ಇತ್ತೀಚೆಗೆ 2021ರ ಸೆಪ್ಟೆಂಬರ್​ನಲ್ಲಿ ಲೀಸ್ ನವೀಕರಿಸಿದೆ.

ಎಚ್‌ಎಸ್‌ಬಿಸಿ ಎಲೆಕ್ಟ್ರಾನಿಕ್ ಡೇಟಾ ಪ್ರೊಸೆಸಿಂಗ್ ಕಟ್ಟಡದಲ್ಲಿ ಎರಡು ಲೀಸ್​ಗಳನ್ನು ಜಾರಿಗೊಳಿಸಿದೆ. 1,81,500 ಚದರ ಅಡಿಯ ಮೊದಲನೆಯದು ಆಗಸ್ಟ್ 21 ರಿಂದ ಡಿಸೆಂಬರ್ 23ರವರೆಗೆ 29 ತಿಂಗಳ ಅವಧಿಗೆ ಪ್ರತಿ ಚದರ ಅಡಿಗೆ ರೂ. 64.5ರಂತೆ ತಿಂಗಳಿಗೆ ರೂ 1.16 ಕೋಟಿ ಬಾಡಿಗೆಗೆ ನಿಗದಿಯಾಗಿದೆ. ಕಂಪೆನಿಯು 6.97 ಕೋಟಿ ರೂ. ಠೇವಣಿ ಇಟ್ಟಿದೆ. ಎರಡನೇ ಲೀಸ್ 2,52,000 ಚದರ ಅಡಿ ವಿಸ್ತೀರ್ಣದಲ್ಲಿ ಪ್ರತಿ ಚದರ ಅಡಿಗೆ 43.7 ರೂಪಾಯಿಯಂತೆ ರೂ. 1.1 ಕೋಟಿ ಬಾಡಿಗೆಯಲ್ಲಿದೆ. ಕಂಪೆನಿಯು 6.57 ಕೋಟಿ ರೂಪಾಯಿ ಠೇವಣಿ ಪಾವತಿಸಿದೆ.

ಹೈದರಾಬಾದ್ ಕಚೇರಿ ವಹಿವಾಟಿನಲ್ಲಿ ಗಮನಾರ್ಹ ಬೆಳವಣಿಗೆ ನೈಟ್ ಫ್ರಾಂಕ್ ಇಂಡಿಯಾದ ಈಚಿನ ವರದಿ, ಇಂಡಿಯಾ ರಿಯಲ್ ಎಸ್ಟೇಟ್ ಅಪ್‌ಡೇಟ್ – Q3, 2021 ಎಂಬ ಶೀರ್ಷಿಕೆಯಡಿ ಬಂದಿದೆ. ಅದರಲ್ಲಿ ಹೇಳಿರುವಂತೆ, ಇತ್ತೀಚಿನ ತ್ರೈಮಾಸಿಕ ವರದಿಯು ಹೈದರಾಬಾದ್ ಕಚೇರಿ ವ್ಯಾಪ್ತಿಯಲ್ಲಿ 0.19 ಮಿಲಿಯನ್ ಚದರ ಮೀ (ಮಿಲಿಯನ್ ಚದರ ಅಡಿ) ನೊಂದಿಗೆ ಎರಡನೇ ಅತಿ ಹೆಚ್ಚು ವಹಿವಾಟುಗಳನ್ನು ನೋಂದಾಯಿಸಿದೆ ಎಂದು ಹೇಳಿದೆ, ಈ ಅವಧಿಯಲ್ಲಿ ಹೊಸ ಪೂರ್ಣಗೊಳಿಸುವಿಕೆ 0.20 ಮಿಲಿಯನ್ ಚದರ ಮೀ (2.2 ಮಿಲಿಯನ್ ಚದರ ಅಡಿ) ಆಗಿದೆ. 2021ರ ಮೊದಲ ಒಂಬತ್ತು ತಿಂಗಳ ಸಂಚಿತ ಕಚೇರಿ ವಹಿವಾಟುಗಳು 0.33 ಮಿಲಿಯನ್ ಚದರ ಮೀ. (3.7 ಮಿಲಿಯನ್ ಚದರ ಅಡಿ) ದಾಖಲಾಗಿದೆ. ಐಟಿ ಮತ್ತು ಉತ್ಪಾದನಾ ವಲಯದ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಕಚೇರಿ ವಹಿವಾಟಿನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಬಲವಾದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಸ್ನೇಹಿ ಸರ್ಕಾರದ ನೀತಿಗಳು ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್