Sam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

OpenAI CEO vs Indian Startups CEOs Duel: ನನ್ನ ಹೇಳಿಕೆಯ ಸಾಂದರ್ಭಿಕತೆ ಭಿನ್ನವಾಗಿತ್ತು. ನನಗೆ ಕೇಳಿದ ಪ್ರಶ್ನೆಯೇ ತಪ್ಪಾಗಿತ್ತು. ಭಾರತೀಯ ಕಂಪನಿಗಳ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ ಎಂದು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಹೇಳಿದ್ದಾರೆ.

Sam Altman vs Indian CEOs: ನನ್ನ ನೀನು ಗೆಲ್ಲಲಾರೆ... ಚಾಲೆಂಜ್... ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ
ಸ್ಯಾಮ್ ಆಲ್ಟ್​ಮ್ಯಾನ್
Follow us
|

Updated on: Jun 11, 2023 | 11:37 AM

ನವದೆಹಲಿ: ಚ್ಯಾಟ್​ಜಿಪಿಟಿ ಎಂಬ ಕೃತಕಬುದ್ಧಿಮತ್ತೆ ಮಾಯಾಜಾಲದ ರೂವಾರಿ ಓಪನ್​ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ (OpenAI CEO Sam Altman) ಮೊನ್ನೆ ಭಾರತ ಭೇಟಿ ಮಾಡಿದ್ದು ಹಲವರಿಗೆ ಗೊತ್ತಿರಬಹುದು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೂ ಅಲ್ಲದೇ ಭಾರತದ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಸಂವಾದದಲ್ಲೂ ಭಾಗಿಯಾಗಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಗೂಗಲ್ ಇತ್ಯಾದಿ ದಿಗ್ಗಜ ಸಂಸ್ಥೆಗಳನ್ನೂ ತಲೆಕೆಡಿಸಿಕೊಳ್ಳುವಂತೆ ಮಾಡಿರುವ ಓಪನ್​ಎಐ ಬಹಳ ಆಳಕ್ಕೆ ಜಿಗಿದಿರುವಂತೆ ಭಾಸವಾಗುತ್ತಿದೆ. ಓಪನ್​ಎಐ ಸಂಸ್ಥೆ ಮಾಡಿರುವ ಸಾಧನೆಯನ್ನು ಭಾರತದ ಕಂಪನಿಯೊಂದು ಮಾಡಲು ಸಾಧ್ಯವಾ ಎಂಬ ಪ್ರಶ್ನೆಯೊಂದಕ್ಕೆ ಸ್ಯಾಮ್ ಆಲ್ಟ್​​ಮ್ಯಾನ್ ‘ಹೋಪ್​ಲೆಸ್’ ಎಂದು ಉತ್ತರಿಸಿದರೆಂದು ಮೊನ್ನೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸಂವಾದ ಹೇಗಿತ್ತು, ಭಾರತೀಯ ಸಿಇಒಗಳ ಪ್ರತಿಕ್ರಿಯೆ ಹೇಗಿತ್ತು, ಸ್ಯಾಮ್ ಅಂತಿಮವಾಗಿ ಕೊಟ್ಟ ಸ್ಪಷ್ಟನೆ, ಎಲ್ಲವೂ ಕುತೂಹಲ ಮೂಡಿಸುವಂತಿದೆ….

ಹೋಪ್​ಲೆಸ್ ಎಂದರಾ ಚ್ಯಾಟ್​ಜಿಪಿಟಿ ರೂವಾರಿ…?

ದಿ ಎಕನಾಮಿಟ್ ಟೈಮ್ಸ್ ಪತ್ರಿಕೆ ಆಯೋಜಿಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಸ್ಯಾಮ್ ಆಲ್ಟ್​ಮ್ಯಾನ್ ಹಾಗೂ ವಿವಿಧ ಭಾರತೀಯ ಸಿಇಒಗಳು ಪಾಲ್ಗೊಂಡಿದ್ದರು. ಈ ವೇಳೆ ಗೂಗಲ್ ಇಂಡಿಯಾದ ಮಾಜಿ ಮುಖ್ಯಸ್ಥ ಹಾಗೂ ಹೂಡಿಕೆದಾರರೂ ಆದ ರಾಜನ್ ಆನಂದನ್ ಒಂದು ಪ್ರಶ್ನೆ ಹಾಕಿದರು:

‘ಓಪನ್​ಎಐ ಅಭಿವೃದ್ಧಿಪಡಿಸಿದ ಎಐ ಮಾದರಿ ರೀತಿಯಲ್ಲಿ ಭಾರತದ ಸ್ಟಾರ್ಟಪ್​ಗಳಿಂದ ಸಾಧ್ಯವಾಗಬಹುದಾ?’ ಎಂದು ಕೇಳಿದರು.

ಇದನ್ನೂ ಓದಿಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5

ಇದಕ್ಕೆ ಸ್ಯಾಮ್ ಆಲ್ಟ್​ಮ್ಯಾನ್ ಒಂದು ಪದದ ಉತ್ತರ ‘ಹೋಪ್​ಲೆಸ್’ ಎಂದಾಗಿತ್ತು. ‘ಎಐ ಮಾದರಿಗಳ ತಯಾರಿಕೆಯಲ್ಲಿ ನಮ್ಮ ಜೊತೆ ಸ್ಪರ್ಧೆಗೆ ಇಳಿಯುವುದು ನಿಮ್ಮ ಪಾಲಿಗೆ ಹೋಪ್​ಲೆಸ್ ಎಂದು ಹೇಳಬಯಸುತ್ತೇನೆ. ನೀವು ಈ ನಿಟ್ಟಿನಲ್ಲಿ ಪ್ರಯತ್ನಿಸಲೇಬಾರದು. ನೀವು ಪ್ರಯತ್ನಿಸಿದರೆ ಅದರ ಜವಾಬ್ದಾರಿ ನಿಮ್ಮದೇಎರಡೂ ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ. ಆದರೆ, ನಿಮಗೆ ಯಶಸ್ಸಿನ ಸಾಧ್ಯತೆ ಬಹಳ ಕಡಿಮೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ’ ಎಂದು ಓಪನ್​ಎಐ ಸಿಇಒ ಅಭಿಪ್ರಾಯಪಟ್ಟರು.

ಟ್ವಿಟ್ಟರ್​ನಲ್ಲಿ ಈ ವಿಚಾರ ಮುನ್ನೆಲೆಗೆ ತಂದ ರಾಜನ್ ಆನಂದನ್, ‘ಭಾರತದ ವ್ಯಾವಹಾರಿಯನ್ನು ಯಾವತ್ತೂ ಕಡಿಮೆ ಅಂದಾಜು ಮಾಡಬಾರದು ಎಂಬುದಕ್ಕೆ 5,000 ವರ್ಷಗಳ ಭಾರತೀಯ ಉದ್ಯಮ ನಮಗೆ ತೋರಿಸಿಕೊಟ್ಟಿದೆ. ನಾವು ಪ್ರಯತ್ನಿಸುವ ಉದ್ದೇಶದಲ್ಲಿದ್ದೇವೆ’ ಎಂದು ಸ್ಯಾಮ್ ಆಲ್ಟ್​ಮ್ಯಾನ್​ಗೆ ಸವಾಲು ಹಾಕಿದರು.

ಟೆಕ್ ಮಹೀಂದ್ರ ಕಂಪನಿಯ ಸಿಇಒ ಸಿ.ಪಿ. ಗುರ್ನಾನಿ ಕೂಡ ಟ್ವಿಟ್ಟರ್ ವೇದಿಕೆಯಲ್ಲಿ ಈ ಬಗ್ಗೆ ಸ್ಪಂದಿಸಿ, ಸ್ಯಾಮ್ ಆಲ್ಟ್​ಮ್ಯಾನ್​ಗೆ ಚಾಲೆಂಜ್ ಅಕ್ಸೆಪ್ಟೆಡ್ ಎಂದು ಸವಾಲು ಹಾಕಿದ್ದಾರೆ.

ನಾನು ಹಾಗೆ ಹೇಳಿಲ್ಲನನ್ನ ಮಾತನ್ನು ತಪ್ಪು ತಿಳಿಯಲಾಗಿದೆ ಎಂದು ಸ್ಯಾಮ್ ಸ್ಪಷ್ಟನೆ

ಇದೇ ವೇಳೆ, ಟ್ವಿಟ್ಟರ್​ನಲ್ಲಿ ಭಾರತೀಯ ಕಂಪನಿಗಳ ಸಿಇಒಗಳು ಭಾರತದಲ್ಲಿ ಸ್ವಂತವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಧನಗಳನ್ನು ರೂಪಿಸುವ ಬಗ್ಗೆ ಸವಾಲು ಹಾಕುತ್ತಿರುವಂತೆಯೇ ಸ್ಯಾಮ್ ಆಲ್ಟ್​ಮ್ಯಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ….

ಇದನ್ನೂ ಓದಿRRR vs RC: ರಘುರಾಮ್ ರಾಜನ್ ಆರ್​ಬಿಐ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ

10 ಮಿಲಿಯನ್ ಡಾಲರ್ (ಸುಮಾರು 82 ಕೋಟಿ ರೂ) ಹಣದಲ್ಲಿ ನಮಗೆ ಸರಿಸಮಾನವಾಗಿ ಎಐ ಸಾಧನಗಳನ್ನು ತಯಾರಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಆದರೂ ತಾವು ಪ್ರಯತ್ನಿಸಿ ಎಂದು ನಾನು ಹೇಳಿದೆ. ನನ್ನ ಪ್ರಕಾರ ಅಗ ಕೇಳಿದ ಪ್ರಶ್ನೆಯೇ ತಪ್ಪಾಗಿತ್ತು

‘ಈ ಹಿಂದೆ ಎಂದೂ ಮಾಡದ ಯಾವ ಕಾರ್ಯವನ್ನು ಒಂದು ಸ್ಟಾರ್ಟಪ್ ಮಾಡಿ ಈ ವಿಶ್ವಕ್ಕೆ ಹೊಸದೊಂದನ್ನು ಕೊಡಬಹುದು ಎಂಬುದು ಸರಿಯಾದ ಪ್ರಶ್ನೆ ಆಗಿರುತ್ತಿತ್ತು. ಭಾರತೀಯ ಸ್ಟಾರ್ಟಪ್​ಗಳು ಈ ಕೆಲಸವನ್ನು ಮಾಡುವಷ್ಟು ಸಾಮರ್ಥ್ಯ ಹೊಂದಿರುವುದರಲ್ಲಿ ನನಗೆ ಅನುಮಾನ ಇಲ್ಲ….’ ಎಂದು ಸ್ಯಾಮ್ ಆಲ್ಟ್​ಮ್ಯಾನ್ ಟ್ವೀಟ್​ಗಳ ಮೂಲಕ ಉತ್ತರಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಟೆಕ್ ಮಹೀಂದ್ರ ಸಿಇಒ ಸಿ.ಪಿ. ಗುರ್ನಾನಿ, ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕೆ ಸ್ಯಾಮ್​ಗೆ ಧನ್ಯವಾದ ಹೇಳಿ, ಎಐ ವಾರ್ ಅಂತ್ಯಗೊಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!