Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ

How To Register EPF Complaint on Grievance Portal: ನಿಮ್ಮ ಇಪಿಎಫ್ ಖಾತೆಯಲ್ಲಿ ಯಾವುದೇ ಸಮಸ್ಯೆಯಾಗಿದ್ದಲ್ಲಿ, ಕ್ಲೈಮ್ ಮಾಡಲು ಕಷ್ಟವಾದಲ್ಲಿ, ರೀಫಂಡ್ ಸಿಗುತ್ತಿಲ್ಲದಿದ್ದಲ್ಲಿ ಹೀಗೆ ಏನೇ ಸಮಸ್ಯೆಯಾಗಿದ್ದರೂ ದೂರು ದಾಖಲಿಸಲೆಂದು ಇಪಿಎಫ್​ಒದಿಂದ ವಿಶೇಷ ಪೋರ್ಟಲ್​ವೊಂದನ್ನು ರಚಿಸಲಾಗಿದೆ. ಈ ಪೋರ್ಟಲ್​ನಲ್ಲಿ ನಿಮ್ಮ ದೂರು ದಾಖಲಿಸುವುದು ಬಹಳ ಸುಲಭವಿದೆ. ಈ ನಿಟ್ಟಿನಲ್ಲಿ ಆ ಹಂತಹಂತದ ಪ್ರಕ್ರಿಯೆಗಳ ವಿವರ ಇಲ್ಲಿದೆ.

ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2023 | 4:15 PM

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಇಪಿಎಫ್ ಎಂಬುದು ಭಾರತದ ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ ಕಡ್ಡಾಯಪಡಿಸಲಾಗಿರುವ ಉದ್ಯೋಗಿ ಭವಿಷ್ಯ ಯೋಜನೆಯಾಗಿದೆ. ಪ್ರತಿಯೊಬ್ಬ ಉದ್ಯೋಗಿಯ ಹೆಸರಿನಲ್ಲೂ ಕಂಪನಿಗಳು ಪಿಎಫ್ (EPF) ಖಾತೆ ತೆರೆಯಬೇಕೆನ್ನುತ್ತದೆ ನಿಯಮ. ಈ ಖಾತೆಗೆ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಭಾಗದ ಹಣ ಸೇರ್ಪಡೆಯಾಗುತ್ತಿರಬೇಕು. ಇಷ್ಟೇ ಮೊತ್ತದ ಹಣವನ್ನು ಕಂಪನಿ ಸೇರಿಸಿ ತುಂಬಬೇಕು. ಸರ್ಕಾರ ಈ ಖಾತೆಯಲ್ಲಿರುವ ಹಣಕ್ಕೆ ವರ್ಷಕ್ಕೊಮ್ಮೆ ನಿರ್ದಿಷ್ಟ ಬಡ್ಡಿಹಣ ಜಮೆ ಮಾಡುತ್ತಾ ಹೋಗುತ್ತದೆ. ಹೀಗೆ, ಒಬ್ಬ ಉದ್ಯೋಗಿಯು ನಿವೃತ್ತಿಯಾಗುವಷ್ಟರಲ್ಲಿ ಅತನ ಇಪಿಎಫ್ ಖಾತೆಯಲ್ಲಿ ಸಾಕಷ್ಟು ಹಣ ಭರ್ತಿಯಾಗಿರುತ್ತದೆ. ಅವರ ನಿವೃತ್ತಿನಂತರದ ಬದುಕಿಗೆ ಈ ಉಳಿತಾಯ ಹಣ ಬಹಳ ಉಪಯುಕ್ತವಾಗುತ್ತದೆ.

ಕೆಲವೊಮ್ಮೆ ನಮ್ಮ ಇಪಿಎಫ್ ಖಾತೆಯಲ್ಲಿ ಸಮಸ್ಯೆಗಳು ತಲೆದೋರಬಹುದು. ಹಣ ಜಮೆ ಆಗುತ್ತಿಲ್ಲದೇ ಇರಬಹುದು. ನಿವೃತ್ತಿಗೆ ಮೊದಲು ಇಪಿಎಫ್ ಹಣದಲ್ಲಿ ಕೆಲ ಭಾಗವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಹಾಗೆ ಕ್ಲೈಮ್ ಮಾಡಿಕೊಳ್ಳಲು ಏನೋ ತಾಂತ್ರಿಕ ಸಮಸ್ಯೆ ತಲೆದೋರಬಹುದು. ಇಂಥ ಸಂದರ್ಭದಲ್ಲಿ ದೂರು ನೀಡಲು ಇಪಿಎಫ್​ಒ ಕಚೇರಿಗೆ ಹೋಗುವುದು ಅನಿವಾರ್ಯವಲ್ಲ. ಆನ್​ಲೈನ್ ಮೂಲಕವೇ ದೂರುಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇಪಿಎಫ್​ಒದಿಂದ ಇದಕ್ಕಾಗಿಯೇ ಐ ಗ್ರೀವೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ ಎಂಬ ವಿಶೇಷ ಪೋರ್ಟಲ್ ಆರಂಭಿಸಿದೆ. ಇಲ್ಲಿ ಇಪಿಎಫ್ ಸದಸ್ಯರು ತಮ್ಮ ದೂರುಗಳನ್ನು ದಾಖಲಿಸಬಹುದು. ಅಥವಾ ಯಾವುದಾದರೂ ಇಪಿಎಫ್ ವಿಷಯದ ಬಗ್ಗೆ ಅನುಮಾನಗಳಿದ್ದರೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

ಇಪಿಎಫ್ ಗ್ರೀವೆನ್ಸ್ ಪೋರ್ಟಲ್​ನಲ್ಲಿ ದೂರು ದಾಖಲಿಸುವ ಪ್ರಕ್ರಿಯೆಗಳು

  • ಇಪಿಎಫ್​ನ ಐ-ಗ್ರೀವೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ ಎಂಬ ಸ್ಪೆಷಲ್ ಪೋರ್ಟಲ್​ಗೆ ಹೋಗಿ. ಅದರ ವಿಳಾಸ ಇಂತಿದೆ: epfigms.gov.in
  • ಈ ಪೋರ್ಟಲ್​ನ ಮುಖ್ಯಪುಟದ ಮೆನುನಲ್ಲಿ ‘ರಿಜಿಸ್ಟರ್ ಗ್ರೀವೆನ್ಸ್’ ಅನ್ನು ಕ್ಲಿಕ್ ಮಾಡಿ
  • ಇಲ್ಲಿ ನಿಮಗೆ 4 ಸ್ಟೇಟಸ್ ಆಯ್ಕೆಗಳಿರುತ್ತವೆ. ನಿಮಗೆ ಅನ್ವಯ ಆಗುವ ಒಂದು ಆಯ್ಕೆ ಮಾಡಿಕೊಳ್ಳಿ.
  • ನೀವು ಉದ್ಯೋಗಿಯಾಗಿದ್ದಲ್ಲಿ ಮತ್ತು ಇಪಿಎಫ್​ಗೆ ಯುಎಎನ್ ನಂಬರ್ ಹೊಂದಿದ್ದಲ್ಲಿ ‘ಪಿಎಫ್ ಮೆಂಬರ್’ ಅನ್ನು ಆಯ್ಕೆ ಮಾಡಿ
  • ಕ್ಲೈಮ್ ಐಡಿ ಇದ್ದರೆ ಅದನ್ನು ಹಾಕಿ. ಇಲ್ಲವಾದರೆ ಯುಎಎನ್ ನಂಬರ್ ನಮೂದಿಸಿ, ಗೆಟ್ ಡೀಟೇಲ್ಸ್ ಒತ್ತಬೇಕು.
  • ಆಗ ನಿಮ್ಮ ಹೆಸರು, ಯುಎಎನ್, ಮೊಬೈಲ್ ನಂಬರ್, ಇಮೇಲ್ ಐಡಿ ವಿವರಗಳು ಪರದೆ ಮೇಲೆ ಕಾಣುತ್ತವೆ.
  • ಗೆಟ್ ಒಟಿಪಿ ಮೂಲಕ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಪಡೆದು ನಮೂದಿಸಿ.

ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?

  • ಪರ್ಸನಲ್ ಡೀಟೇಲ್ಸ್ ಸೆಕ್ಷನ್​ಗೆ ಹೋಗಿ ಪಿಎಫ್ ನಂಬರ್ ಅನ್ನು ಆಯ್ದುಕೊಳ್ಳಿ.
  • ಗ್ರೀವೆನ್ಸ್ ಡೀಟೇಲ್ಸ್ ಸೆಕ್ಷನ್​ಗೆ ಹೋಗಿ, ಅಲ್ಲಿ ನೀವು ಯಾವ ರೀತಿಯ ದೂರು ಸಲ್ಲಿಸಬೇಕು ಎಂಬುದನ್ನು ಆರಿಸಿಕೊಂಡು ಸರಿಯಾದ ವಿವರ ಕೊಡಿ.
  • ಅಗತ್ಯಬಿದ್ದಲ್ಲಿ ಪೂರಕ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಇದರೊಂದಿಗೆ ನಿಮ್ಮ ದೂರು ಈ ಪೋರ್ಟಲ್​ನಲ್ಲಿ ದಾಖಲಾಗುತ್ತದೆ. ರಿಜಿಸ್ಟ್ರೇಶನ್ ನಂಬರ್ ಅನ್ನು ಕಾಪಿ ಮಾಡಿಟ್ಟುಕೊಳ್ಳಿ. ನಿಮ್ಮ ಕಂಪ್ಲೇಂಟ್ ಸ್ಟೇಟಸ್ ಪರಿಶೀಲಿಸಲು ಇದು ಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ