Sign In

By signing in or creating an account, you agree with Associated Broadcasting Company's Terms & Conditions and Privacy Policy.

ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?

Benefits of ESI: ಸಂಘಟಿತ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಭದ್ರತೆಗೆಂದು ರೂಪಿಸಲಾದ ಇಎಸ್​ಐ ಸ್ಕೀಮ್ ಒಂದು ವಿಮಾ ಯೋಜನೆಯಾಗಿದ್ದು ಹಲವು ಪ್ರಯೋಜನಗಳನ್ನು ತರುತ್ತದೆ.

ESI: ಇಎಸ್​ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?
ಇಎಸ್​ಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 5:15 PM

ನೌಕರರ ರಾಜ್ಯ ಇನ್ಷೂರೆನ್ಸ್ ನಿಗಮದಿಂದ ನಡೆಸುವ ಇಎಸ್​ಐ ಯೋಜನೆ (ESI Scheme) ಹೆಸರು ಕೇಳಿರಬಹುದು. ಇಪಿಎಸ್​ನಂತೆ ಇದು ಕಡಿಮೆ ವೇತನ ವರ್ಗದ ನೌಕರರಿಗೆ ನೀಡಲಾಗುವ ವಿಮಾ ಸೌಲಭ್ಯವಾಗಿದೆ. ಇಎಸ್​ಐಸಿ ನಡೆಸುವ ಈ ಸ್ಕೀಮ್​ನಲ್ಲಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಮಾ ಕವರೇಜ್ ಕೊಡಲಾಗುತ್ತದೆ. ಸದಸ್ಯ ನೌಕರರಿಗೆ ಅನಾರೋಗ್ಯ, ತಾಯ್ತನ (Maternity), ಅಂಗವೈಕಲ್ಯಕ್ಕೆ (Disability) ಪರಿಹಾರ ಕೊಡಲಾಗುತ್ತದೆ. ಕೆಲಸ ಮಾಡುವಾಗ ಗಾಯಗೊಂಡು ಸಾವನ್ನಪ್ಪಿದರೆ ಪರಿಹಾರ ಸಿಗುತ್ತದೆ. ನೌಕರರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವೂ ಇರುತ್ತದೆ.

ದೇಶಾದ್ಯಂತ 1.5 ಕೋಟಿಗೂ ಹೆಚ್ಚು ಇಎಸ್​ಐ ಸದಸ್ಯರಿದ್ದಾರೆ. ಪ್ರತೀ ವರ್ಷ 10 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರ ಸೇರ್ಪಡೆ ಆಗುತ್ತಿದೆ. ಒಟ್ಟು ಫಲಾನುಭವಿಗಳ ಸಂಖ್ಯೆ 8 ಕೋಟಿಯಷ್ಟಿರುವುದು ತಿಳಿದುಬಂದಿದೆ.

ಏನಿದು ಇಎಸ್​ಐ ಯೋಜನೆ?

ಇದು ಸಂಘಟಿತ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಡಿಮೆ ಸಂಬಳದ ನೌಕರರಿಗೆಂದು ರೂಪಿಸಲಾದ ಯೋಜನೆ. 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಎಲ್ಲಾ ಸಂಸ್ಥೆಗಳು ಇಎಸ್​ಐ ಯೋಜನೆ ಜಾರಿಗೊಳಿಸುವುದು ಕಡ್ಡಾಯ. ತಿಂಗಳಿಗೆ 21,000 ರೂ ಹಾಗು ಅದಕ್ಕಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳನ್ನು ಇಎಸ್​ಐ ಸ್ಕೀಮ್​ಗೆ ಸೇರಿಸುವುದು ಆ ಸಂಸ್ಥೆಯ ಹೊಣೆಗಾರಿಕೆ. ಉದ್ಯೋಗಿಯ ಸಂಬಳದ ಶೇ. 3.25ರಷ್ಟು ಹಣವನ್ನು ಸಂಸ್ಥೆ ಹೆಚ್ಚುವರಿಯಾಗಿ ಹಾಕುತ್ತದೆ. ಉದ್ಯೋಗಿಯ ಸಂಬಳದಿಂದ ಶೇ. 0.75ರಷ್ಟು ಹಣ ಇದಕ್ಕೆ ಹೋಗುತ್ತದೆ. ಒಟ್ಟು ಶೇ. 4ರಷ್ಟು ಸಂಬಳವು ಇಎಸ್​ಐ ಸ್ಕೀಮ್​ಗೆ ಭರ್ತಿಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿAadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?

ಉದ್ಯೋಗಿಯ ಸಂಬಳ 21,000 ರೂ ಒಳಗೆ ಇರುವವರೆಗೂ ಈ ಯೋಜನೆ ಚಾಲೂ ಇರುತ್ತದೆ. ಕೆಲಸ ಬದಲಿಸಿದರೂ ಅದೇ ಇಎಸ್​ಐ ನಂಬರ್ ಮುಂದುವರಿಯುತ್ತಿರುತ್ತದೆ. ಆದರೆ ಆ ಸಂಬಳದ ಗಡಿ ದಾಟಿದರೆ ಸ್ಕೀಮ್ ನಿಂತುಹೋಗುತ್ತದೆ.

ಈ ಸ್ಕೀಮ್​ನಲ್ಲಿ ಇಎಸ್​ಐಸಿ ಸದಸ್ಯರಿಗೆ ವೈದ್ಯಕೀಯ ಕವರೇಜ್, ಮೆಟರ್ನಿಟಿ ಕವರೇಜ್ ಇರುತ್ತದೆ. ಕೆಲಸ ಮಾಡುವಾಗ ಅಂಗ ಊನವಾದರೆ ಅದಕ್ಕೆ ಪರಿಹಾರ ಇರುತ್ತದೆ. ಸದಸ್ಯರ ಕುಟುಂಬಕ್ಕೂ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಇರುತ್ತದೆ.

ಮತ್ತೊಂದು ವಿಶೇಷತೆ ಎಂದರೆ ಇಎಸ್​ಐ ಸದಸ್ಯ ಕೆಲಸ ಮಾಡುವಾಗ ಸಾವನ್ನಪ್ಪಿದರೆ ಅವರ ಅವಲಂಬಿತರೊಬ್ಬರಿಗೆ ತಿಂಗಳಿಗೆ ಕಂತುಗಳ ರೂಪದಲ್ಲಿ ಪರಿಹಾರ ಸಿಗುತ್ತಾ ಹೋಗುತ್ತದೆ.

ಸದಸ್ಯ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ವೆಚ್ಚಕ್ಕೆಂದು 15,000 ರೂ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ