AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ

Public Provident Fund investment tricks: ಪಿಪಿಎಫ್​ನಲ್ಲಿ ಒಂದು ವರ್ಷದಲ್ಲಿ 500 ರೂನಿಂದ 1,50,000 ರೂವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. ಈ ಯೋಜನೆಯಲ್ಲಿ ವಾರ್ಷಿಕ ಬಡ್ಡಿ ಶೇ. 7.1 ಇದೆಯಾದರೂ ಮಾಸಿಕವಾಗಿ ಬಡ್ಡಿಯನ್ನು ಗಣಿಸಲಾಗುತ್ತದೆ. ಒಂದು ತಿಂಗಳ 5ನೇ ತಾರೀಖಿನಿಂದ ಕೊನೆಯ ದಿನದವರೆಗೂ ಇರುವ ಮಿನಿಮಮ್ ಬ್ಯಾಲನ್ಸ್ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ಆರನೇ ತಾರೀಖು ಹಣ ಡೆಪಾಸಿಟ್ ಮಾಡಿದರೆ ಆ ತಿಂಗಳಲ್ಲಿ ಆ ಹಣಕ್ಕೆ ಬಡ್ಡಿ ಸಿಗುವುದಿಲ್ಲ. ಈ ರೀತಿ ನೀವು 15 ವರ್ಷದಲ್ಲಿ 20,000 ರೂಗೂ ಹೆಚ್ಚು ಆದಾಯನಷ್ಟ ಕಾಣಬೇಕಾಗಬಹುದು.

ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ
ಪಬ್ಲಿಕ್ ಪ್ರಾವಿಡೆಂಟ್ ಫಂಡ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 2:53 PM

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮಧ್ಯಮಾವಧಿ ಅಥವಾ ದೀರ್ಘಾವಧಿ ಹೂಡಿಕೆಗಳಲ್ಲಿ ಒಂದು. ಹೂಡಿಕೆ ಜೊತೆಗೆ ತೆರಿಗೆ ಲಾಭವನ್ನೂ ಕೊಡುವ ಸ್ಕೀಮ್ ಇದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ನೀವು ಪಿಪಿಎಫ್​ನಲ್ಲಿ (PPF- Public Provident Fund) ಹೂಡಿಕೆ ಮಾಡಬಹುದು. ಆ ಮೊತ್ತದ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ಸಿಗುವಷ್ಟು ಬಡ್ಡಿ ಆದಾಯ ಪಿಪಿಎಫ್ ಮೇಲಿನ ಹೂಡಿಕೆಗೆ ಸಿಗುತ್ತದೆ. ಪಿಪಿಎಫ್ ಹೂಡಿಕೆದಾರರಿಗೆ ಇವೆಲ್ಲವೂ ಗೊತ್ತಿರುವ ಸಂಗತಿಯೇ. ಹೆಚ್ಚು ಮಂದಿಗೆ ತಿಳಿಯದ ಕೆಲ ವಿಚಾರಗಳೂ ಪಿಪಿಎಫ್​ನಲ್ಲಿವೆ. ಪಿಪಿಎಫ್​ನಲ್ಲಿ ಒಂದು ತಿಂಗಳ ಐದನೇ ತಾರೀಖಿನೊಳಗೆ ಹೂಡಿಕೆ ಮಾಡುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಆ ತಿಂಗಳ ನಿಮ್ಮ ಹೂಡಿಕೆಗೆ ಬಡ್ಡಿ ಸಿಕ್ಕೋದಿಲ್ಲ.

ಪಿಪಿಎಫ್​ನಲ್ಲಿ ಒಂದು ವರ್ಷದ ಹೂಡಿಕೆಯನ್ನು ನೀವು ಒಮ್ಮೆಗೇ ಮಾಡಬಹುದು, ಅಥವಾ ಕಂತು ಕಂತುಗಳಲ್ಲಿ ನಿಮಗೆ ಅನುಕೂಲ ಬಂದಂತೆ ಕಟ್ಟಲು ಅವಕಾಶ ಇದೆ. ಈ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ಶೇ. 7.1 ನಿಗದಿಯಾಗಿದೆಯಾದರೂ ಮಾಸಿಕವಾಗಿ ಬಡ್ಡಿದರವನ್ನು ಗಣಿಸಲಾಗುತ್ತದೆ. ಅಂದರೆ ಪ್ರತೀ ತಿಂಗಳು ಬಡ್ಡಿ ಹಣವು ಒಟ್ಟಾರೆ ಹೂಡಿಕೆಗೆ ಸೇರ್ಪಡೆಯಾಗುತ್ತದೆ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಒಂದು ತಿಂಗಳಲ್ಲಿ ಕನಿಷ್ಠ ಬ್ಯಾಲನ್ಸ್ ಮೊತ್ತಕ್ಕೆ ಬಡ್ಡಿ ಹಣ ಸಂದಾಯವಾಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಯಾವುದೇ ತಿಂಗಳಲ್ಲಿ ಐದನೇ ತಾರೀಖಿನಿಂದ ಹಿಡಿದು ಕೊನೆಯ ದಿನದವರೆಗೆ ಇರುವ ಕನಿಷ್ಠ ಬ್ಯಾಲನ್ಸ್ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ಅಂದರೆ ಒಂದರಿಂದ ಐದನೇ ತಾರೀಖಿನೊಳಗೆ ನೀವು ಡೆಪಾಸಿಟ್ ಮಾಡಿದರೆ ಆ ತಿಂಗಳ ಬಡ್ಡಿಹಣ ನಿಮ್ಮ ಹೂಡಿಕೆಗೆ ಸೇರ್ಪಡೆಯಾಗುತ್ತದೆ.

ಉದಾಹರಣೆಗೆ, ನೀವು ಈ ತಿಂಗಳು ಏಪ್ರಿಲ್ 6ರಂದು ಪಿಪಿಎಫ್​ ಖಾತೆಗೆ ಹಣ ಡೆಪಾಸಿಟ್ ಮಾಡಿದರೆ, ಆ ಹಣಕ್ಕೆ ಏಪ್ರಿಲ್ ತಿಂಗಳ ಬಡ್ಡಿಹಣ ಸಿಗುವುದಿಲ್ಲ. ಐದನೇ ತಾರೀಖಿನ ಒಳಗೆ ನೀವು ತುಂಬಿಸಬೇಕು. ಒಂದೇ ಬಾರಿಗೆ ಇಡೀ ವರ್ಷದ ಡೆಪಾಸಿಟ್ ಹಣವನ್ನು ಹಾಕುತ್ತಿರುವವರಿಗಂತೂ ಈ ಅಂಶ ಮುಖ್ಯ ಎನಿಸುತ್ತದೆ. ಸಾವಿರಾರು ರೂನಷ್ಟು ಬಡ್ಡಿ ಆದಾಯ ಕೈತಪ್ಪಬಹುದು.

ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನ ಖಾತೆಯನ್ನು ಕೆಲ ಆಯ್ದ ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಕಚೇರಿಗಳಲ್ಲಿ ತೆರೆಯಬಹುದು. 15 ವರ್ಷಗಳಿಗೆ ಮೆಚ್ಯೂರಿಟಿ ಅವಧಿ ಇರುತ್ತದೆ. ಅದಾದ ಬಳಿಕವೂ ಇಚ್ಛಿಸಿದರೆ ಹೂಡಿಕೆ ಮುಂದುವರಿಸಬಹುದು.

ಒಂದು ವರ್ಷದಲ್ಲಿ 500 ರೂನಿಂದ ಆರಂಭವಾಗಿ ಒಂದೂವರೆ ಲಕ್ಷ ರೂವರೆಗೆ ಪಿಪಿಎಫ್ ಅಕೌಂಟ್​ಗೆ ಹಣ ಹಾಕಬಹುದು. ಒಂದು ವರ್ಷ ಒಂದು ಲಕ್ಷ, ಮತ್ತೊಂದು ವರ್ಷ ಒಂದೂವರೆ ಲಕ್ಷ, ಮಗದೊಂದು ವರ್ಷ ಒಂದು ಲಕ್ಷ ಹೀಗೆ ಗರಿಷ್ಠ ಒಂದೂವರೆ ಲಕ್ಷ ರೂವರೆಗೆ ಎಷ್ಟು ಬೇಕಾದರೂ ಹಣವನ್ನು ಒಂದು ವರ್ಷದಲ್ಲಿ ಹಾಕಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ