ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…

Difference between Term insurance and Life insurance: ಇನ್ಷೂರೆನ್ಸ್ ಪಾಲಿಸಿಗಳಲ್ಲಿ ನೀವು ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಬಗ್ಗೆ ಬಹಳಷ್ಟು ಕೇಳಿರಬಹುದು. ಯಾವ ಇನ್ಷೂರೆನ್ಸ್ ಆದರೇನು ಎಂದು ನೀವು ಭಾವಿಸಿದರೆ ಅದು ತಪ್ಪು. ಈ ಎರಡು ಇನ್ಷೂರೆನ್ಸ್ ಮಧ್ಯೆ ಪ್ರಮುಖ ವ್ಯತ್ಯಾಸ ಇದೆ. ಟರ್ಮ್ ಇನ್ಷೂರೆನ್ಸ್ ನಿಗದಿತ ಅವಧಿವರೆಗೆ ಕವರೇಜ್ ಕೊಡುತ್ತದೆ. ಮೆಚ್ಯೂರಿಟಿ ಬಳಿಕ ಲಾಭ ಇರುವುದಿಲ್ಲ. ಲೈಫ್ ಇನ್ಷೂರೆನ್ಸ್ ಇಡೀ ಜೀವಮಾನಕ್ಕೆ ಅನ್ವಯ ಆಗುತ್ತದೆ. ಆದರೆ, ಟರ್ಮ್ ಇನ್ಷೂರೆನ್ಸ್​ನಲ್ಲಿ ಪ್ರೀಮಿಯಮ್ ಬಹಳ ಕಡಿಮೆ ಇರುತ್ತದೆ.

ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ...
ಇನ್ಷೂರೆನ್ಸ್
Follow us
|

Updated on: Jun 18, 2024 | 3:38 PM

ನೀವು ಇನ್ಷೂರೆನ್ಸ್ ಮಾಡಿಸುವುದಿದ್ದರೆ ಮೊದಲೇ ಯಾವ ರೀತಿಯ ಪ್ಲಾನ್​ಗಳು ಸೂಕ್ತ ಎಂಬುದನ್ನು ಯೋಚಿಸುವುದು ಒಳ್ಳೆಯದು. ಬಹಳಷ್ಟು ಬಾರಿ ಏಜೆಂಟ್​ಗಳು ಅವರಿಗೆ ಹೆಚ್ಚು ಲಾಭ ತರುವ ಪ್ಲಾನ್​ಗಳನ್ನು ಮಾರ್ಕೆಟಿಂಗ್ ಮಾಡಲು ಯತ್ನಿಸುತ್ತಾರೆ. ಕೊನೆಗೆ, ನಿಮಗೆ ಅಗತ್ಯ ಇಲ್ಲದ ಇನ್ಷೂರೆನ್ಸ್ ಪಾಲಿಸಿ ನಿಮ್ಮ ಮೇಲೆ ಹೊರೆಯಾಗಿ ನಿಲ್ಲಬಹುದು. ವಿಮೆಯಲ್ಲಿ ನಾನಾ ವಿಧಗಳಿವೆ. ಟರ್ಮ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್, ಜನರಲ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಎಂದು ವಿಸ್ತೃತವಾಗಿ ವರ್ಗೀಕರಿಸಬಹುದು. ಈ ಪೈಕಿ ಎಲ್​ಐಸಿ ಸಂಸ್ಥೆ ನಿರ್ವಹಿಸುವ ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು (Difference between Term insurance and Life insurance) ಎಂದು ತಿಳಿಸುವ ಪ್ರಯತ್ನ ಇಲ್ಲಿದೆ…

ಟರ್ಮ್ ಇನ್ಷೂರೆನ್ಸ್ ಎಂದರೆ ಏನು?

ಟರ್ಮ್ ಎಂದರೆ ಅವಧಿ. ಟರ್ಮ್ ಇನ್ಷೂರೆನ್ಸ್ ಎಂಬುದು ನಿಗದಿತ ಅವಧಿಯವರೆಗೆ ಕವರೇಜ್ ನೀಡುವ ಪ್ಲಾನ್ ಆಗಿರುತ್ತದೆ. ಅಂದರೆ, ನೀವು 30 ವರ್ಷಕ್ಕೆ 50 ಲಕ್ಷ ರೂ ಕವರೇಜ್ ಇರುವ ಟರ್ಮ್ ಇನ್ಷೂರೆನ್ಸ್ ಮಾಡಿಸಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಸತ್ತರೆ ನಿಮ್ಮ ವಾರಸುದಾರರಿಗೆ 50 ಲಕ್ಷ ರೂ ಸಿಗುತ್ತದೆ. ಆದರೆ, ಇದು 30 ವರ್ಷದವರೆಗೆ ಮಾತ್ರವೇ ಅನ್ವಯ ಆಗುತ್ತದೆ. 30 ವರ್ಷದ ಬಳಿಕ ಪಾಲಿಸಿ ಅಂತ್ಯಗೊಳ್ಳುತ್ತದೆ.

ಇದನ್ನೂ ಓದಿ: ಟರ್ಮ್ ಲೈಫ್ ಇನ್ಷೂರೆನ್ಸ್ ಯಾಕೆ ಮುಖ್ಯ? ಎಷ್ಟು ಮಾಡಿಸಬೇಕು? ಯಾವ್ಯಾವ ಅಂಶಗಳು ಗಮನದಲ್ಲಿರಬೇಕು? ಇಲ್ಲಿದೆ ಡೀಟೇಲ್ಸ್

ಲೈಫ್ ಇನ್ಷೂರೆನ್ಸ್ ಎಂದರೆ ಏನು?

ಲೈಫ್ ಇನ್ಷೂರೆನ್ಸ್ ಎಂಬುದು ಪಾಲಿಸಿದಾರ ಬದುಕಿರುವವರೆಗೂ ಅನ್ವಯ ಆಗುತ್ತದೆ. ಆ ವ್ಯಕ್ತಿ ಸತ್ತ ಬಳಿಕ ವಾರಸುದಾರರಿಗೆ ಹಣ ಸಿಗುತ್ತದೆ.

ಟರ್ಮ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಅನುಕೂಲ, ಅನನುಕೂಲ ತಿಳಿಯಿರಿ…

ಟರ್ಮ್ ಇನ್ಷೂರೆನ್ಸ್ ನಿಗದಿತ ಅವಧಿ ಬಳಿಕ ಸಮಾಪ್ತಿಗೊಳ್ಳುತ್ತದೆಯಾದರೂ ಅದರ ಪ್ರೀಮಿಯಮ್ ಬಹಳ ಕಡಿಮೆ. ಉದಾಹರಣೆಗೆ, ಮೂವತ್ತು ವರ್ಷಕ್ಕೆ ಒಂದು ಕೋಟಿ ರೂ ಕವರೇಜ್ ಕೊಡುವ ಟರ್ಮ್ ಇನ್ಷೂರೆನ್ಸ್ ಪಾಲಿಸಿ ತೆಗೆದುಕೊಂಡರೆ ನೀವು ತಿಂಗಳಿಗೆ ಕಟ್ಟುವ ಪ್ರೀಮಿಯಮ್ 900 ರೂ ಆಸುಪಾಸು ಇರುತ್ತದೆ.

ಇಷ್ಟೇ ಮೊತ್ತಕ್ಕೆ ನೀವು ಲೈಫ್ ಇನ್ಷೂರೆನ್ಸ್ ಪ್ಲಾನ್ ಪಡೆದಲ್ಲಿ ತಿಂಗಳಿಗೆ ಕಟ್ಟಬೇಕಾದ ಪ್ರೀಮಿಯಮ್ 21,000 ರೂಗಿಂತಲೂ ಹೆಚ್ಚಿರುತ್ತದೆ. ಅಂದರೆ ಟರ್ಮ್ ಇನ್ಷೂರೆನ್ಸ್ ಎಂಬುದು ರಿಸ್ಕ್ ಕವರೇಜ್​ಗೆ ಇರುವ ಸ್ಕೀಮ್ ಆಗಿರುತ್ತದೆ. ಒಂದು ರೀತಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಇದ್ದಂತೆ.

ಇದನ್ನೂ ಓದಿ: ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ

ನೀವು ಬದುಕಿರುವಾಗಲೇ ಇನ್ಷೂರೆನ್ಸ್ ಹಣ ಪಡೆಯಬೇಕೆಂದಿದ್ದಲ್ಲಿ ಲೈಫ್ ಇನ್ಷೂರೆನ್ಸ್​ನಲ್ಲಿ ಎಂಡೋಮೆಂಟ್ ಪಾಲಿಸಿ ಮಾಡಿಸಬಹುದು. ಇಲ್ಲವಾದಲ್ಲಿ ಕಡಿಮೆ ಪ್ರೀಮಿಯಮ್ ಇರುವ ಟರ್ಮ್ ಇನ್ಷೂರೆನ್ಸ್ ಮಾಡಿಸುವುದು ಉತ್ತಮ. ಕೆಲ ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳು ಮೆಚ್ಯೂರಿಟಿ ಬಳಿಕ ಅಷ್ಟೂ ಪ್ರೀಮಿಯಮ್ ಹಣವನ್ನು ಮರಳಿಸುತ್ತವೆ. ಇವುಗಳ ಪ್ರೀಮಿಯಮ್ ತುಸು ಹೆಚ್ಚಿರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ