LIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ

LIC New Jeevan Anand Policy Comparison With Bank Deposit: ವರ್ಷಕ್ಕೆ 10,922 ರೂ ಹಣವನ್ನು 21 ವರ್ಷ ಕಾಲ ಎಲ್​ಐಸಿ ನ್ಯೂಜೀವನ್ ಆನಂದ್ ಮತ್ತು ಬ್ಯಾಂಕ್ ಎಫ್​ಡಿಯಲ್ಲಿ ಇಟ್ಟರೆ ಅವುಗಳಿಂದ ಎಷ್ಟೆಷ್ಟು ರಿಟರ್ನ್ ಬರಬಹುದು ಎಂಬ ಲೆಕ್ಕಾಚಾರ ಇಲ್ಲಿದೆ...

LIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ
ಎಲ್​ಐಸಿ ವರ್ಸಸ್ ಬ್ಯಾಂಕ್ ಠೇವಣಿ
Follow us
|

Updated on: Jun 10, 2023 | 8:50 AM

ಇನ್ಷೂರೆನ್ಸ್ ಸ್ಕೀಮ್​ಗಳನ್ನು (Insurance Policies) ಬಹಳ ಮಂದಿ ತಪ್ಪಾಗಿ ಅರ್ಥ ಮಾಡಿಕೊಂಡಿರುವುದುಂಟು. ಹಲವು ಸ್ಕೀಮ್​ಗಳಲ್ಲಿ ನೀವು ಇಷ್ಟು ವರ್ಷ ಕಟ್ಟಿದ್ದಕ್ಕೆ ತಮಗೆ ಅಷ್ಟು ಮಾತ್ರವಾ ರಿಟರ್ನ್ ಎಂದು ಹೇಳುವುದುಂಟು. ಬ್ಯಾಂಕ್​ನಲ್ಲಿ ಎಫ್​ಡಿಯೋ, ಆರ್​ಡಿಯೋ ಇಟ್ಟಿದ್ದರೆ ಇದಕ್ಕಿಂತ ಹೆಚ್ಚು ಹಣ ರಿಟರ್ನ್ ಸಿಗುತ್ತಿತ್ತು ಎಂದು ಹೇಳುವವರಿದ್ದಾರೆ. ಇಲ್ಲಿ ಇನ್ಷೂರೆನ್ಸ್ ಸ್ಕೀಮ್​ಗಳ ಉದ್ದೇಶವೇ ಬೇರೆ, ಬ್ಯಾಂಕ್ ಠೇವಣಿಗಳ ಉದ್ದೇಶವೇ ಬೇರೆ ಎಂಬುದನ್ನು ಗಮನಿಸಬೇಕು.

ಬ್ಯಾಂಕ್ ಠೇವಣಿಗಳಾಗಲೀ, ಮ್ಯೂಚುವಲ್ ಫಂಡ್ ಎಸ್​ಐಪಿಗಳಾಗಲೀ ಅಪ್ಪಟ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಾಗಿವೆ. ಆದರೆ, ಇನ್ಷೂರೆನ್ಸ್ ಪ್ಲಾನ್​ಗಳು ನಿಮಗೆ ನಿರ್ದಿಷ್ಟ ರಿಟರ್ನ್ ಕೊಡುವುದಷ್ಟೇ ಅಲ್ಲ, ಆಕಸ್ಮಿಕವಾಗಿ ಸಾವಾದಾಗ ಪರಿಹಾರ ಕೊಡುತ್ತದೆ. ಹೀಗಾಗಿ, ವಿಮೆ ಮತ್ತು ಠೇವಣಿ ಸ್ಕೀಮ್​ಗಳ ಉದ್ದೇಶಗಳು ಭಿನ್ನ ಇರುತ್ತವೆ. ಆದಾಗ್ಯೂ ಬ್ಯಾಂಕ್ ಠೇವಣಿ ಮತ್ತು ಇನ್ಷೂರೆನ್ಸ್ ಪಾಲಿಸಿ ಬಗ್ಗೆ ಪ್ರಾಕ್ಟಿಕಲ್ ಆಗಿ ಲೆಕ್ಕ ಮಾಡಿ ಹೋಲಿಸುವ ಕೆಲಸ ಮಾಡಿಯೂ ನೋಡಬಹುದು.

ಎಲ್​ಐಸಿ ನ್ಯೂ ಜೀವನ್ ಆನಂದ್ ಮತ್ತು ಬ್ಯಾಂಕ್ ಆರ್​ಡಿ ಮಧ್ಯೆ ಒಂದು ಹೋಲಿಕೆ…. ಸುಮ್ಮನೆ ಉದಾಹರಣೆಗೆ ಮಾತ್ರ ಪಾಲಿಸಿಯನ್ನು ಆಯ್ಕೆ ಮಾಡಿದ್ದೇವೆ

ಎಲ್​ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ

  • ಸಮ್ ಅಷೂರ್ಡ್ (ಭರವಸೆ ಮೊತ್ತ): 2 ಲಕ್ಷ ರೂ
  • ಪಾಲಿಸಿ ಅವಧಿ: 21 ವರ್ಷ
  • ವರ್ಷದ ಪ್ರೀಮಿಯಂ: 10,922 ರೂ
  • ಒಟ್ಟು ಕಟ್ಟುವ ಹಣ: 2,29,362 ರೂ
  • ತೆರಿಗೆ ವಿನಾಯಿತಿ ಸೌಲಭ್ಯ ಉಪಯೋಗಿಸಿದರೆ: 22,936 ರೂ ಉಳಿತಾಯ
  • ಮೆಚ್ಯೂರ್ ಆದಾಗ ಸಿಗುವ ಮೊತ್ತ: ಅಂದಾಜು 4.36 ಲಕ್ಷ ರೂ

ಇದನ್ನೂ ಓದಿLIC Aadhaar Shila: ಎಲ್​ಐಸಿ ಆಧಾರ್ ಶಿಲಾ ಪಾಲಿಸಿ: ದಿನಕ್ಕೆ 58 ರೂನಂತೆ ಕಟ್ಟಿ, 8 ಲಕ್ಷ ರೂ ಲಾಭ ಮಾಡಿ

ಈಗ ನೀವು ಎಲ್​ಐಸಿ ಪಾಲಿಸಿಗೆ ಕಟ್ಟುವ ಹಣವನ್ನೇ ಬ್ಯಾಂಕ್ ಡೆಪಾಸಿಟ್ ಸ್ಕೀಮ್​ಗಳಲ್ಲಿ ಉಪಯೋಗಿಸಿದರೆ ಎಷ್ಟು ಸಿಗಬಹುದು? ಅದನ್ನೂ ಲೆಕ್ಕ ಮಾಡಿ ನೋಡೋಣ

ಬ್ಯಾಂಕ್ ಆರ್​ಡಿಯಲ್ಲಿ ಶೇ. 8ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ ಎಂದು ಪರಿಗಣಿಸೋಣ. ವರ್ಷಕ್ಕೆ 10,922 ರೂ ಹಣವನ್ನು 21 ವರ್ಷ ಕಟ್ಟಿದಾಗ ಎಷ್ಟು ಹಣ ಸಿಗುತ್ತೆ? ಮೆಚ್ಯೂರ್ ಆಗುವ ಮೊತ್ತ 5,94,776 ರೂ.

ಎಲ್​ಐಸಿಯಲ್ಲಿ ಮೆಚ್ಯೂರ್ ಆಗುವುದು 4.36 ಲಕ್ಷ ರೂ; ಆರ್​ಡಿಯಿಂದ ಬರುವುದು 5.95 ಲಕ್ಷ ರೂ. ಅಬ್ಬಾ 1.6 ಲಕ್ಷದಷ್ಟು ವ್ಯತ್ಯಾಸವಾ ಎಂದನಿಸಬಹುದು. ಆದರೆ, ಟ್ವಿಸ್ಟ್ ಸಿಗುವುದು ಇಲ್ಲಿಯೇ

ಆರ್​ಡಿಯಲ್ಲಿ ನೀವು ಪಡೆಯುವ ಬಡ್ಡಿ ಹಣಕ್ಕೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ನೀವು ಆರ್​ಡಿಯಿಂದ 21 ವರ್ಷದಲ್ಲಿ ಗಳಿಸುವ ಬಡ್ಡಿ 3.65 ಲಕ್ಷ ರೂನಷ್ಟು. ಇದಕ್ಕೆ ಆದಾಯ ತೆರಿಗೆ ಪಾವತಿಸಬೇಕಾದ್ದು 73,083 ರೂ. ಅಂದರೆ, ಮೆಚ್ಯೂರ್ ಮೊತ್ತವಾದ 5,94,776 ರೂನಿಂದ 73,083 ರೂ ಅನ್ನು ಕಳೆದರೆ ಉಳಿಯುವುದು 5,21,693 ರೂ.

ಇದನ್ನೂ ಓದಿLIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್​ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ

ಈಗ ಎಲ್​ಐಸಿಯಲ್ಲಿ ಮೆಚ್ಯೂರ್ ಆಗುವ ಮೊತ್ತ 4,35,800 ರೂ. ಈ ವೇಳೆ ನೀವು ತೆರಿಗೆ ಲಾಭ ಬಳಸಿಕೊಂಡರೆ 22,936 ರೂ ಉಳಿತಾಯ ಮಾಡಬಹುದು. ಅಂದರೆ ನಿಮಗೆ ಈ ಪಾಲಿಸಿಯಿಂದ ಸಿಗುವ ಲಾಭ 4,58,736 ರೂ.

ಆದಾಯ ತೆರಿಗೆ, ತೆರಿಗೆ ಉಳಿತಾಯ ಎಲ್ಲವನ್ನೂ ಗಣಿಸಿದಾಗಲೂ ಆರ್​ಡಿಯಿಂದ ಸಿಗುವ ಹಣ ಎಲ್​ಐಸಿಗಿಂತ 62,957 ರೂನಷ್ಟು ಹೆಚ್ಚು. ಆದರೆ, ಈ ಎಲ್​ಐಸಿ ಪಾಲಿಸಿ ಮೆಚ್ಯೂರ್ ಆದಾಗ ಸರೆಂಡರ್ ಮಾಡಿದಾಗ 60,000 ರೂ ಉಳಿಯುತ್ತದೆ. ಸುಮಾರು 3,000 ರೂನಷ್ಟು ವ್ಯತ್ಯಾಸ ಬರುತ್ತದೆ. ಎಲ್​ಐಸಿ ನ್ಯೂ ಜೀವನ್ ಆನಂದ್ ಪಾಲಿಸಿಯು ಮೆಚ್ಯೂರ್ ಆದ ಬಳಿಕವೂ ಲೈಫ್ ಕವರ್ ನೀಡುತ್ತದೆ. ಆಕಸ್ಮಿಕವಾಗಿ ಸತ್ತಾಗ 2,00,000 ರೂ ಹಣವು ವಾರಸುದಾರರಿಗೆ ಸಲ್ಲುತ್ತದೆ. ಈ ಕಾರಣದಿಂದ ನೋಡಿದಾಗ ಬ್ಯಾಂಕ್ ಆರ್​ಡಿಗಿಂತ ಎಲ್​ಐಸಿ ನ್ಯೂ ಜೀವನ್ ಆನಂದ್ ಕೈ ಮೇಲು ಎನಿಸುತ್ತದೆ. ಆದರೆ ಹೂಡಿಕೆ ದೃಷ್ಟಿಯಿಂದ ಬ್ಯಾಂಕ್​ನ ಠೇವಣಿ ಯೋಜನೆಗಳು ಉತ್ತಮ ಎನಿಸುತ್ತವೆ. ಆದರೆ, ಶೇ. 8ಕ್ಕಿಂತ ಕಡಿಮೆ ಬಡ್ಡಿ ದರ ಇದ್ದರೆ ಹೆಚ್ಚು ರಿಟರ್ನ್ ಸಿಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?