AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ, ಜೊತೆಗೆ ಜೀವಮಾನ ಭದ್ರತೆಯೂ!

Postal Life Insurance Scheme Suraksha: ಒಟ್ಟು ಪಾಲಿಸಿ ಅವಧಿಯಲ್ಲಿ ರೋಹಿತ್ ಎಂಬಾತ 4,62,000 ರೂ. ಹಣ ಕಟ್ಟುತ್ತಾನೆ. ರೋಹಿತ್ ಗೆ 80 ವರ್ಷವಾದಾಗ, ಪಾಲಿಸಿ ಮೆಚ್ಯುರಿಟಿಗೆ ಬರುತ್ತದೆ. ಪಾಲಿಸಿ ಮುಕ್ತಾಯವಾದಾಗ ರೋಹಿತ್​ ಗೆ ಆರಂಭದಲ್ಲಿ 5 ಲಕ್ಷ ರೂ. ವಿಮಾ ಮೊತ್ತ ಮತ್ತು 13,30,000 ರೂ. ಬೋನಸ್ ಅಂದರೆ ಒಟ್ಟು ರೂ. 18,30,000 ಕೈಗೆ ಬರಲಿದೆ.

ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ, ಜೊತೆಗೆ ಜೀವಮಾನ ಭದ್ರತೆಯೂ!
ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ! ಜೊತೆಗೆ ಜೀವಮಾನ ಭದ್ರತೆಯೂ!
TV9 Web
| Edited By: |

Updated on: Jul 19, 2022 | 10:48 PM

Share

ಕಡಿಮೆ ಮೊತ್ತ ಹೂಡಿಕೆ ಮಾಡಿ, ಮೆಚ್ಯೂರಿಟಿ ಬಳಿಕ ಭಾರೀ ಮೊತ್ತವನ್ನು ಪಡೆಯಲು ಬಯಸುವಿರಾ.. ಹಾಗಾದರೆ ನಿಮಗೆ ಒಂದು ಪವಾಡ ರೀತಿಯ ಯೋಜನೆ ಬಗ್ಗೆ ಇಲ್ಲಿ ಮಾಹಿತಿ ಇದೆ ನೋಡಿ. ಇದರಲ್ಲಿ ತಿಂಗಳಿಗೆ 1100 ರೂ. ಅಂದರೆ ದಿನಕ್ಕೆ 35 ರೂ. ಠೇವಣಿ ಹೂಡುತ್ತಾ ಹೋದರೆ ಮೆಚ್ಯೂರಿಟಿ ವೇಳೆಗೆ 18 ಲಕ್ಷ ರೂ. ಕ್ಕಿಂತ ಹೆಚ್ಚು ಮೊತ್ತ ಪಡೆಯಬಹುದು. ಆದರೆ, ಈ ಯೋಜನೆಯಲ್ಲಿ ಇನ್ನೂ ಒಂದು ವಿಶೇಷವಿದೆ. ಈ ವಿಶಿಷ್ಟ ಯೋಜನೆಯು ಅಲ್ಪ ಮೊತ್ತದ ಹಣವನ್ನು ಠೇವಣಿ ಮಾಡುವ ಮೂಲಕ ಲಕ್ಷಗಳ ಆದಾಯವನ್ನು ನೀಡುತ್ತದೆ ಜೊತೆಗೆ, ಜೀವನಪೂರ್ತಿ ನಿಮಗೆ ವಿಮಾ ರಕ್ಷಣೆಯನ್ನೂ ನೀಡುತ್ತದೆ. ಅಂದರೆ ವಿಮಾ ಯೋಜನಾ ಅವಧಿಯಲ್ಲಿ ನಿಮ್ಮ ಜೀವಕ್ಕೆ ಏನಾದರೂ ಅವಘಡ ಸಂಭವಿಸಿದರೆ ವಿಮಾ ರಕ್ಷಣೆಯ ಸಂಪೂರ್ಣ ಖಾತ್ರಿಯಿದೆ. ನಾಮಿನಿಗೆ ಬಡ್ಡಿ, ಅಸಲು ಸಂಪೂರ್ಣವಾಗಿ ಕೈಗೆ ಸಿಗುತ್ತದೆ. ಇದನ್ನು ಬೋನಸ್ ಪಾಲಿಸಿ ಎಂದು ಕರೆಯಲಾಗುತ್ತದೆ. ಇಂತಹ ಅಮೂಲ್ಯ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance Scheme Suraksha) ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ ನೀಡಲಾಗಿದೆ.

ಈ ಅಂಚೆ ವಿಮಾ ಪಾಲಿಸಿಯನ್ನು 19 ವರ್ಷದಿಂದ 55 ವರ್ಷ ವಯಸ್ಸಿನವರು ತೆಗೆದುಕೊಳ್ಳಬಹುದು. ಪ್ರೀಮಿಯಂ ಪಾವತಿಸಲು ನೀವು 4 ಆಯ್ಕೆಗಳನ್ನು ಪಡೆಯುತ್ತೀರಿ. ನೀವು ಪ್ರೀಮಿಯಂ ಅನ್ನು 55 ವರ್ಷ ಅಥವಾ 58 ವರ್ಷ ವಯಸ್ಸಿನವರೆಗೆ. 60 ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ ಪಾವತಿಸಬಹುದು. ಈ ಪಾಲಿಸಿಯನ್ನು ಕನಿಷ್ಠ 20,000 ರೂ. ಮತ್ತು ಗರಿಷ್ಠ 50 ಲಕ್ಷ ರೂ. ವಿಮಾ ಮೊತ್ತದೊಂದಿಗೆ ತೆಗೆದುಕೊಳ್ಳಬಹುದು. ಈ ಅಂಚೆ ಜೀವ ವಿಮೆಯ ಹೆಸರು ಸುರಕ್ಷಾ.

ಇಲ್ಲೊಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ..

ಈಗ ನಾವು ಈ ಪಾಲಿಸಿಯಲ್ಲಿನ ಭದ್ರತೆಯ ವಿಧಾನ ಅರ್ಥ ಮಾಡಿಕೊಳ್ಳೋಣ. 35 ವರ್ಷದ ರೋಹಿತ್ ಅಂಚೆ ಕಚೇರಿಯಿಂದ ಈ ಭದ್ರತಾ ಸ್ಕೀಂ ಆಯ್ಕೆ ಮಾಡಿಕೊಂಡಿದ್ದಾರೆ ಅಂತಿಟ್ಟುಕೊಳ್ಳೋಣ. ರೋಹಿತ್ 5 ಲಕ್ಷ ರೂ. ಪಾಲಿಸಿ ತೆಗೆದುಕೊಂಡರು. ಪಾಲಿಸಿ ನಿಯಮಗಳ ಪ್ರಕಾರ, ರೋಹಿತ್ 80 ವರ್ಷ ವಯಸ್ಸು ಪೂರೈಸುವವರೆಗೆ ಸಂಪೂರ್ಣ ಕವರೇಜ್ ಲಭ್ಯವಿರುತ್ತದೆ. ಅಂದರೆ ರೋಹಿತ್ ಅವರ ಪಾಲಿಸಿ ಅವಧಿಯು 45 ವರ್ಷಗಳು. ರೋಹಿತ್ 70 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅವರು 35 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಮೂಲಕ ರೋಹಿತ್ ಸುಮಾರು 1100 ರೂ. ಪಾವತಿಸಬೇಕು. ಅಂದರೆ ಒಂದು ದಿನಕ್ಕೆ ಈ ಮೊತ್ತ ಸುಮಾರು 35 ರೂ. ಬರುತ್ತದೆ. ರೋಹಿತ್ ಅವರು ಬಯಸಿದಲ್ಲಿ 13,200 ರೂ. ವಾರ್ಷಿಕ ಪ್ರೀಮಿಯಂ ಪಾವತಿಸಬಹುದು.

ಮೆಚ್ಯುರಿಟಿ ನಂತರ..

ಒಟ್ಟು ಪಾಲಿಸಿ ಅವಧಿಯಲ್ಲಿ ಅಂದರೆ 35 ವರ್ಷಗಳಲ್ಲಿ ರೋಹಿತ್ 4,62,000 ರೂ. ಪ್ರೀಮಿಯಂ ಕಟ್ಟುತ್ತಾರೆ. ರೋಹಿತ್ 80 ವರ್ಷಕ್ಕೆ ಕಾಲಿಟ್ಟಾಗ, ಪಾಲಿಸಿ ಮೆಚ್ಯುರಿಟಿ ಆಗುತ್ತದೆ. ಆಗ ರೋಹಿತ್ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾನೆ. ಮೆಚ್ಯೂರಿಟಿ ವೇಳೆ ರೋಹಿತ್​ ಗೆ ಮೊದಲು ರೂ. 5 ಲಕ್ಷ ವಿಮಾ ಮೊತ್ತ, ರೂ.13,30,000 ಬೋನಸ್ ಎಂದರೆ ಒಟ್ಟಾರೆಯಾಗಿ 18,30,00 0 ರೂ. ಸಿಗುತ್ತದೆ.

35 ವರ್ಷದ ರೋಹಿತ್ 35 ವರ್ಷಗಳ ಪಾಲಿಸಿ ಅವಧಿಯಲ್ಲಿ ಒಟ್ಟು 4,62,000 ರೂ. ಪಾವತಿಸಿ 18,30,000 ರೂ. ಮೆಚ್ಯೂರ್ ಅಮೌಂಟ್​ ಆಗಿರುವುದನ್ನು ಇಲ್ಲಿ ಗಮನಿಸಬಹುದು. ಹಾಗೆಯೇ, 80 ವರ್ಷಗಳ ಜೀವ ಭದ್ರತೆಯನ್ನೂ ಪಡೆದರು. ಅದಕ್ಕಾಗಿಯೇ ಈ ವಿಶೇಷ ಅಂಚೆ ಪಾಲಿಸಿಯನ್ನು ಜೀವ ವಿಮೆ ಪಾಲಿಸಿ ಎಂದು ಕರೆಯಲಾಗುತ್ತದೆ.

ಸಾವಿನ ಗಂಡಾಂತರದಿಂದ ದೊರಕುವ ಪ್ರಯೋಜನಗಳು:

ರೋಹಿತ್ ಗೆ ಆತನ 80 ವರ್ಷ ವಯಸ್ಸಿನವರೆಗೆ ಈ ಪಾಲಿಸಿಯು ಜೀವ ವಿಮೆ ಭದ್ರತೆಯನ್ನು ಕಲ್ಪಿಸುತ್ತದೆ. ಪಾಲಿಸಿ ಮೆಚ್ಯುರಿಟಿಗೂ ಮೊದಲು ರೋಹಿತ್ ಗೆ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಅಂತಹ ಗಂಡಾಂತರ ಪರಿಸ್ಥಿತಿಯಲ್ಲಿ, ಸಂರಕ್ಷಣಾ ನೀತಿಯ ಅಡಿಯಲ್ಲಿ ನಾಮಿನಿಗೆ ಪಾಲಿಸಿಯ ಪ್ರಯೋಜನವನ್ನು ನೀಡಲಾಗುತ್ತದೆ. ನಾಮಿನಿಯು ಪಾಲಿಸಿದಾರನ ಮರಣದ ಪ್ರಯೋಜನವನ್ನು ಪಡೆಯುತ್ತಾನೆ. ಇದರಲ್ಲಿ 5 ಲಕ್ಷ ರೂ. ಬೋನಸ್ ಗ್ಯಾರೆಂಟಿ ದೊರೆಯುತ್ತದೆ. ಇದಲ್ಲದೆ, ನಾಮಿನಿಗೆ ಬೋನಸ್ ಹಣವೂ ಸಿಗುತ್ತದೆ.

ಪಾಲಿಸಿ ಜಾರಿಯಲ್ಲಿರುವ ಎಲ್ಲಾ ದಿನಗಳವರೆಗೆ ನಾಮಿನಿಗೆ ಬೋನಸ್ ಲಭಿಸುತ್ತದೆ. ಪಾಲಿಸಿಯ 5 ವರ್ಷಗಳ ನಂತರ, ರೋಹಿತ್‌ಗೆ ಯಾವುದೇ ಅಹಿತಕರ ಘಟನೆಗೆ ತುತ್ತಾದ ಸಂದರ್ಭದಲ್ಲಿ, ಆತನ ನಾಮಿನಿಗೆ ವಾರ್ಷಿಕ 38,000 ರೂ. ರಂತೆ 5 ಲಕ್ಷ ರೂ. ಮೊತ್ತ ಖಾತರಿಯಾಗಿ ಸಿಗುತ್ತದೆ. 5 ವರ್ಷಗಳ ಬೋನಸ್ 1,90,000 ರೂ. ಸಿಗುತ್ತದೆ. ಈ ರೀತಿ, 5 ವರ್ಷಗಳವರೆಗೆ ಪಾಲಿಸಿಯನ್ನು ಜಾರಿಯಲ್ಲಿಟ್ಟಿದರೆ, ನಾಮಿನಿಗೆ 6,90,000 ರೂ. ಹೊಂದುತ್ತಾರೆ. ಐದು ವರ್ಷಗಳಲ್ಲಿ ಕೇವಲ 5,500 ರೂ. ಪ್ರೀಮಿಯಂ ಪಾವತಿಸಿರುತ್ತಾರೆ ಎಂಬುದು ಗಮನಾರ್ಹ.

To read in telugu click here

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ