AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಪನ್​ಎಐ ರಾದ್ದಾಂತ; ಸ್ಯಾಮ್ ಆಲ್ಟ್​ಮ್ಯಾನ್ ಮರಳುತ್ತಿದ್ದಂತೆಯೇ, ಹಳೆಯ ಬೋರ್ಡ್ ಸದಸ್ಯರ ಉಚ್ಛಾಟನೆ

OpenAI Development: ಓಪನ್​ಎಐನ ಮಂಡಳಿಯಲ್ಲಿ ನಾಲ್ವರು ಸದಸ್ಯರಿದ್ದರು. ಅವರ ಪೈಕಿ ಆ್ಯಡಂ ಡೀಎಂಜೆಲೋ ಹೊರತುಪಡಿಸಿ ಉಳಿದ ಮೂವರನ್ನು ವಜಾಗೊಳಿಸಲಾಗಿದೆ. ಈ ಮೂವರ ಬದಲು ಇಬ್ಬರು ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಾಗೆಯೇ, ಕಂಪನಿಯ ಮಂಡಳಿಗೆ ಇನ್ನೂ 6 ಮಂದಿ ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಂಡು ವಿಸ್ತರಿಸುವ ಸಾಧ್ಯತೆ ಇದೆ.

ಓಪನ್​ಎಐ ರಾದ್ದಾಂತ; ಸ್ಯಾಮ್ ಆಲ್ಟ್​ಮ್ಯಾನ್ ಮರಳುತ್ತಿದ್ದಂತೆಯೇ, ಹಳೆಯ ಬೋರ್ಡ್ ಸದಸ್ಯರ ಉಚ್ಛಾಟನೆ
ಓಪನ್​ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2023 | 2:01 PM

Share

ಕ್ಯಾಲಿಫೋರ್ನಿಯಾ, ನವೆಂಬರ್ 23: ಜಗತ್ತಿಗೆ ಚ್ಯಾಟ್​ಜಿಪಿಟಿ (ChatGPT) ಕೊಟ್ಟು ಕೃತಕ ಬುದ್ಧಿಮತ್ತೆಯ (Artificial Intelligence) ಅಗಾಧ ಸಾಧ್ಯತೆಯ ಕಿರುಪರಿಚಯ ಮಾಡಿಸಿದ್ದ ಓಪನ್​ಎಐ ಸಂಸ್ಥೆಯಲ್ಲಿನ ಬೆಳವಣಿಗೆಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತಿವೆ. ಓಪನನ್​ಎಐನ (OpenAI) ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ (Sam Altman) ಅವರನ್ನು ಕಳೆದ ವಾರ ದಿಢೀರ್ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಅವರು ಮರಳಿ ಬಂದಿದ್ದು, ತನ್ನನ್ನು ಉಚ್ಚಾಟಿಸಿದ ಬೋರ್ಡ್ ಸದಸ್ಯರನ್ನೇ ಮನೆಗೆ ಕಳುಹಿಸಿದ್ದಾರೆ. ಮೈಕ್ರೋಸಾಫ್ಟ್ ಬೆಂಬಲ, ಉದ್ಯೋಗಿಗಳ ಬೆಂಬಲದಿಂದ ಸ್ಯಾಮ್ ಅಲ್ಟ್​​ಮ್ಯಾನ್ ಈಗ ಸಿಇಒ ಆಗಿ ಓಪನ್​ಎಐನ ಚುಕ್ಕಾಣಿಯನ್ನು ಮರಳಿ ಹಿಡಿದಿದ್ದು, ಹೊಸ ಬೋರ್ಡ್ ಸದಸ್ಯರನ್ನು ಸೇರಿಸಿಕೊಂಡಿದ್ದಾರೆ.

ಓಪನ್​ಎಐನ ಮಂಡಳಿಯಲ್ಲಿ ನಾಲ್ವರು ಸದಸ್ಯರಿದ್ದರು. ಅವರ ಪೈಕಿ ಆ್ಯಡಂ ಡೀಎಂಜೆಲೋ (Adam D’Angelo) ಹೊರತುಪಡಿಸಿ ಉಳಿದ ಮೂವರನ್ನು ವಜಾಗೊಳಿಸಲಾಗಿದೆ. ಈ ಮೂವರ ಬದಲು ಇಬ್ಬರು ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಾಗೆಯೇ, ಕಂಪನಿಯ ಮಂಡಳಿಗೆ ಇನ್ನೂ 6 ಮಂದಿ ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಂಡು ವಿಸ್ತರಿಸುವ ಸಾಧ್ಯತೆ ಇದೆ.

ನಿರ್ಗಮಿಸಿದ ಓಪನ್​ಎಐ ಬೋರ್ಡ್ ಸದಸ್ಯರು

ಹೆಲೆನ್ ಟೋನರ್: ಇವರು ಜಾರ್ಜ್​ಟೌನ್ ಯೂನಿವರ್ಸಿಟಿಯ ಸೆಂಟರ್ ಫಾರ್ ಸೆಕ್ಯೂರಿಟಿ ಅಂಡ್ ಎಮರ್ಜಿಂಗ್ ಟೆಕ್ನಾಲಜಿ ವಿಭಾಗದ ಸಂಶೋಧಕಿ ಮತ್ತು ನಿರ್ದೇಶಕಿ. ಓಪನ್​ಎಐ ಸಂಸ್ಥೆ ಚ್ಯಾಟ್​ಜಿಪಿಟಿ ಬಿಡುಗಡೆ ಮಾಡಿದ್ದನ್ನು ಇವರು ಬಲವಾಗಿ ವಿರೋಧಿಸಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಇದು ಅಡ್ಡಿ ಆಗುತ್ತದೆ ಎಂಬುದು ಇವರ ವಾದ.

ಇದನ್ನೂ ಓದಿ: OpenAI ಸಿಇಒ ಆಗಿ ಮರಳಿ ಬರಲಿದ್ದಾರೆ ಸ್ಯಾಮ್ ಆಲ್ಟ್‌ಮನ್

ತಾಶಾ ಮೆಕಾಲೀ: ಜಿಯೋಸಿಮ್ ಸಿಸ್ಟಮ್ಸ್​ನ (Geosim Systems) ಮಾಜಿ ಸಿಇಒ ಆಗಿರುವ ತಾಶಾ ಮೆಕಾಲೀ ಅವರು ರಾಂಡ್ ಕಾರ್ಪೊರೇಶನ್ (Rand Corporation) ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ನಟ ಹಾಗು ನಿರ್ದೇಶಕ ಜೋಸೆಫ್ ಗಾರ್ಡಾನ್ ಲೆವಿಟ್ ಅವರ ಪತ್ನಿಯೂ ಹೌದು.

ಇಲ್ಯಾ ಸುಟ್​ಸ್ಕೆವೆರ್: ಓಪನ್​ಎಐನ ಸಹ-ಸಂಸ್ಥಾಪಕರಲ್ಲಿ ಇಲ್ಯಾ ಸುಟ್​ಸ್ಕೆವೆರ್ (Ilya Sutskever) ಕೂಡ ಒಬ್ಬರು. ಸಂಸ್ಥೆಯ ಚೀಫ್ ಸೈಂಟಿಸ್ಟ್ ಆಗಿದ್ದವರು. ಎಐ, ನ್ಯೂರಲ್ ನೆಟ್ವರ್ಕ್ಸ್, ಜೆನರೇಟಿವ್ ಎಐ ವಿಷಯಗಳಲ್ಲಿ ಸಾಕಷ್ಟು ಸಂಶೋದನಾ ವರದಿಗಳನ್ನು ಬರೆದಿದ್ದಾರೆ. ಸ್ಯಾಮ್ ಆಲ್ಟ್​ಮ್ಯಾನ್ ಅವರ ಉಚ್ಚಾಟನೆಗೆ ಇವರೂ ಒಂದು ಹಂತದಲ್ಲಿ ಬೆಂಬಲ ನೀಡಿದ್ದರೆನ್ನಲಾಗಿದೆ. ಆದರೆ, ಆಲ್ಟ್​ಮ್ಯಾನ್ ಮರಳಬೇಕೆಂದು ಸಹಿಹಾಕಿದವರಲ್ಲಿ ಇವರೂ ಒಬ್ಬರಾಗಿದ್ದು ಅಚ್ಚರಿ ತಂದಿದೆ. ಆದರೆ, ಸ್ಯಾಮ್ ಆಲ್ಟ್​ಮ್ಯಾನ್ ಅವರು ಮರಳಿ ಬಂದ ಬಳಿಕ ಇಲ್ಯಾ ಅವರನ್ನು ಇಟ್ಟುಕೊಳ್ಳಲಿಲ್ಲ.

ಓಪನ್​ಎಐ ಬೋರ್ಡ್​ಗೆ ಬಂದ ಹೊಸ ಸದಸ್ಯರು

ಬ್ರೆಟ್ ಚೇರ್: ಸೇಲ್ಸ್​ಫೋರ್ಸ್​ನ ಮಾಜಿ ಸಿಇಒ ಆದ ಇವರು ಈ ಹಿಂದೆ ಟ್ವಿಟ್ಟರ್, ಶಾಪಿಫೈನ ಬೋರ್ಡ್​ನಲ್ಲಿ ಇದ್ದವರು. ಅಚ್ಚರಿ ಎಂದರೆ ಆರು ತಿಂಗಳ ಹಿಂದೆ ಇವರು ತಮ್ಮದೇ ಎಐ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದೀಗ ಓಪನ್​ಎಐ ತೆಕ್ಕೆಗೆ ಬಂದಿರುವ ಇವರು ತಮ್ಮ ಕಂಪನಿಯನ್ನು ಅಲ್ಲಿಗೇ ನಿಲ್ಲಿಸುತ್ತಾರಾ ಅಥವಾ ಓಪನ್​ಎಐಗೆ ವಿಲೀನಗೊಳಿಸುತ್ತಾರಾ ಗೊತ್ತಿಲ್ಲ.

ಇದನ್ನೂ ಓದಿ: ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?

ಲ್ಯಾರಿ ಸಮರ್ಸ್: ಇವರು ಬಿಲ್ ಕ್ಲಿಂಟನ್ ಅಧ್ಯಕ್ಷ ಅವಧಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆರ್ಥಿಕ ತಜ್ಞರೂ ಆಗಿರುವ ಇವರು ರಾಜಕೀಯವಾಗಿ ಸಾಕಷ್ಟು ಸಂಪರ್ಕ ಇಟ್ಟುಕೊಂಡಿರುವುದು ಓಪನ್​ಎಐಗೆ ಅನುಕೂಲವಾಗಬಹುದು.

ಆ್ಯಡಂ ಡೀ ಏಂಜೆಲೋ: ಹಿಂದಿನ ಓಪನ್​ಎಐ ಬೋರ್ಡ್ ಸದಸ್ಯರ ಪೈಕಿ ಸ್ಥಾನ ಉಳಿಸಿಕೊಂಡಿದ್ದು ಇವರೊಬ್ಬರೆಯೇ. ಕೋರಾ ಪ್ಲಾಟ್​ಫಾರ್ಮ್​ನ (Quora) ಸಿಇಒ ಆಗಿರುವ ಡಿ ಏಂಜೆಲೋ ಅವರು ಸ್ಯಾಮ್ ಮರಳಿ ಬರಲು ಸಾಧ್ಯವಾಗಿಸಿದವರಲ್ಲಿ ಒಬ್ಬರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್