AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Profit: ಎಸ್​ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?

SBI, ITC Show Big Profits: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಶೇ. 89ಕ್ಕಿಂತ ಹೆಚ್ಚು ಲಾಭ ಹೆಚ್ಚಳ ಕಂಡಿದೆ. ಐಟಿಸಿ ಲಾಭದಲ್ಲೂ ಶೇ. 23ರಷ್ಟು ಹೆಚ್ಚಳವಾಗಿದೆ. ಎಸ್​ಬಿಐ ತನ್ನ ಷೇರುದಾರರಿಗೆ 11.30 ರೂಗಳ ಡಿವಿಡೆಂಡ್ ಘೋಷಿಸಿದೆ.

SBI Profit: ಎಸ್​ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2023 | 4:54 PM

Share

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್​ಬಿಐ (SBI- State Bank of India) ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬರೋಬ್ಬರಿ 16,694.51 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ. 2022ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಗಳಿಸಿದ್ದ 18,094 ಕೋಟಿ ರೂಗೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭದಲ್ಲಿ ಶೇ. 89.4ರಷ್ಟು ಹೆಚ್ಚಾಗಿದೆ. ಬಡ್ಡಿ ಮೂಲಕ ಗಳಿಸಿದ ಆದಾಯದಲ್ಲೂ ಶೇ. 31.4ರಷ್ಟು ಹೆಚ್ಚಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭದ ಹಿನ್ನೆಲೆಯಲ್ಲಿ ಬ್ಯಾಂಕ್​ನ ಷೇರುದಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಪ್ರತೀ ಈಕ್ವಿಟಿ ಷೇರಿಗೆ 11.30 ರೂ ಡಿವಿಡೆಂಡ್ ನೀಡಲು ಎಸ್​ಬಿಐನ ನಿರ್ದೇಶಕರ ಮಂಡಳಿ ನಿರ್ದರಿಸಿದೆ. 2023 ಜೂನ್ 14ಕ್ಕೆ ಲಾಭಾಂಶ ನೀಡಲು ದಿನ ಫಿಕ್ಸ್ ಮಾಡಲಾಗಿದೆ.

ಎಸ್​ಬಿಐ ಲಾಭ ಹೆಚ್ಚಾದರೂ ಷೇರುಬೆಲೆ ಕುಸಿತ

ಅಚ್ಚರಿಯ ಬೆಳವಣಿಗೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೆಡೆ ಅಭೂತಪೂರ್ವ ಲಾಭ ಗಳಿಸಿದರೆ, ಇನ್ನೊಂದೆಡೆ ಅದರ ಷೇರುಬೆಲೆ ಕುಸಿತ ಕಾಣುತ್ತಿದೆ. ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಎಸ್​ಬಿಐನ ಷೇರುಬೆಲೆ ಹೆಚ್ಚೂಕಡಿಮೆ 10 ರುಪಾಯಿಯಷ್ಟು ಕುಸಿತ ಕಂಡಿದೆ. ಮೇ 18, ಗುರುವಾರ ಮಧ್ಯಾಹ್ನ ಎಸ್​ಬಿಐ ಒಂದು ಷೇರಿಗೆ 576 ರೂ ಬೆಲೆಗೆ ಮಾರಾಟವಾಗುತ್ತಿತ್ತು. ಈ ಅನಿರೀಕ್ಷಿತ ಕುಸಿತಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಸ್​ಬಿಐನ ಷೇರುಗಳಿಗೆ ಒಳ್ಳೆಯ ಬೇಡಿಕೆ ಬರುವ ಸಾಧ್ಯತೆ ಇದೆ. ಹಲವು ಬ್ರೋಕರೇಜ್ ಕಂಪನಿಗಳು ಎಸ್​ಬಿಐನ ಷೇರಿಗೆ ಉತ್ತಮ ರೇಟಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿInsurance Bonus: ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್​ನಿಂದ ದಾಖಲೆ ಬೋನಸ್: 3,660 ಕೋಟಿ ರೂ ಘೋಷಣೆ; ಯಾರಿಗೆಲ್ಲಾ ಸಿಗುತ್ತೆ ಈ ಬೋನಸ್?

ಐಟಿಸಿ ನಿವ್ವಳ ಆದಾಯ ಶೇ. 23 ರಷ್ಟು ಏರಿಕೆ

ಐಟಿಸಿ ಸಂಸ್ಥೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ 5,175.48 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಅದು ಶೇ. 23.3ರಷ್ಟು ಹೆಚ್ಚು ಲಾಭ ತೋರಿಸಿದೆ. ಇದೂ ಕೂಡ 6.75 ರೂಗಳ ಫೈನಲ್ ಡಿವಿಡೆಂಡ್ ಹಾಗು 2.75 ರೂಗಳ ಸ್ಪೆಷಲ್ ಡಿವಿಡೆಂಡ್ ಘೋಷಿಸಿದೆ. 2022-23ರ ಹಣಕಾಸು ವರ್ಷದಲ್ಲಿ ಐಟಿಸಿಯ ಷೇರಿಗೆ ಸಿಕ್ಕಿರುವ ಒಟ್ಟಾರೆ ಡಿವಿಡೆಂಡ್ 15.50 ರೂ ಆಗುತ್ತದೆ. ಈಗ ಘೋಷಣೆ ಮಾಡಿರುವ 6.75 ರೂ ಮತ್ತು 2.75 ರೂ ಲಾಭಾಂಶವನ್ನು ಆಗಸ್ಟ್ 14ರಿಂದ 17ರವರೆಗೆ ಷೇರುದಾರರಿಗೆ ನೀಡಲಾಗುತ್ತದೆ.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಗೇಲ್ ಇಂಡಿಯಾ (GAIL India) ಲಾಭದಲ್ಲಿ ಇಳಿಕೆ

ಭಾರತದ ಅತಿದೊಡ್ಡ ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿ ಗೇಲ್ ಇಂಡಿಯಾದ (Gail India) ಲಾಭ ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ ಕಡಿಮೆ ಆಗಿದೆ. 2022ರ ಇದೇ ಅವಧಿಯಲ್ಲಿ 2,683 ಕೋಟಿ ರೂ ಇದ್ದ ಜಿಎಐಎಲ್​ನ ನಿವ್ವಳ ಲಾಭ 2023ರ ಈ ಅವಧಿಯಲ್ಲಿ 604 ರುಪಾಯಿಗೆ ಇಳಿದಿದೆ. ಇದರ ನಿವ್ವಳ ಲಾಭ ಶೇ. 77ರಷ್ಟು ಕುಸಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್