Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯರಾತ್ರಿ ನಂತರ ಎಸ್​ಬಿಐನ ಯುಪಿಐ ಕೆಲಸ ಮಾಡೋದಿಲ್ಲ; ಎಷ್ಟು ಹೊತ್ತು ಸರ್ವಿಸ್ ಡೌನ್ ಆಗಿರುತ್ತೆ, ಏನು ಕಾರಣ, ನೋಡಿ ಮಾಹಿತಿ

SBI UPI Transaction Down: ನವೆಂಬರ್ 26ರಂದು ರಾತ್ರಿ 12:30ರಿಂದ ಮುಂಜಾವು 3ರವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್​ಗಳು ಲಭ್ಯ ಇರುತ್ತವೆ ಎಂದು ಎಸ್​ಬಿಐ ಶನಿವಾರ ಟ್ವೀಟ್ ಮಾಡಿದೆ.

ಇಂದು ಮಧ್ಯರಾತ್ರಿ ನಂತರ ಎಸ್​ಬಿಐನ ಯುಪಿಐ ಕೆಲಸ ಮಾಡೋದಿಲ್ಲ; ಎಷ್ಟು ಹೊತ್ತು ಸರ್ವಿಸ್ ಡೌನ್ ಆಗಿರುತ್ತೆ, ಏನು ಕಾರಣ, ನೋಡಿ ಮಾಹಿತಿ
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 25, 2023 | 6:26 PM

ನವದೆಹಲಿ, ನವೆಂಬರ್ 25: ನಿಮ್ಮ ಯುಪಿಐ ಆ್ಯಪ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದೀರಾ? ನವೆಂಬರ್ 26, ಅಂದರೆ ನಾಳೆ ಭಾನುವಾರದಂದು ಎಸ್​ಬಿಐನ ಯುಪಿಐ ವಹಿವಾಟುಗಳು ಸಾಧ್ಯವಾಗುವುದಿಲ್ಲ. ಎಸ್​ಬಿಐನ ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡಲಾಗುತ್ತಿರುವುದರಿಂದ ಭಾನುವಾರ ಹಲವು ಹೊತ್ತು ಅದರ ವಹಿವಾಟು ಸ್ಥಗಿತಗೊಂಡಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಅಲರ್ಟ್ ಮಾಡಿದೆ. ಅದರ ಪ್ರಕಾರ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾವಿನ ಮಧ್ಯೆ ಎರಡೂವರೆ ಗಂಟೆ ಕಾಲ ಸರ್ವಿಸ್ ಡೌನ್ ಅಗಿರುತ್ತದೆ.

‘26-11-2023ರಂದು 00:30ರಿಂದ 3:00 ಗಂಟೆಯವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್​ಗಳು ಲಭ್ಯ ಇರುತ್ತವೆ,’ ಎಂದು ಎಸ್​ಬಿಐ ಇಂದು ಟ್ವೀಟ್ ಮಾಡಿದೆ.

ಅಂದರೆ, ಶನಿವಾರ ಮಧ್ಯರಾತ್ರಿ 12:30ರಿಂದ ಮುಂಜಾವು 3 ಗಂಟೆಯವರೆಗೆ ಅದರ ಯುಪಿಐ ವಹಿವಾಟು ಕೆಲಸ ಮಾಡುವುದಿಲ್ಲ. ಆ ಸಮಯದಲ್ಲಿ ಹಣದ ವಹಿವಾಟು ಮಾಡಬೇಕೆನ್ನುವವರಿಗೆ ಇತರ ಅವಕಾಶಗಳು ಇದ್ದೇ ಇವೆ. ಎಟಿಎಂ, ಇಂಟರ್ನನೆಟ್ ಬ್ಯಾಂಕಿಂಗ್, ಯೋನೋ ಬ್ಯಾಂಕಿಂಗ್ ಆ್ಯಪ್ ಇತ್ಯಾದಿಯನ್ನು ಬಳಸಬಹುದು. ಫೋನ್ ಬ್ಯಾಂಕಿಂಗ್ ಕೂಡ ನಡೆಯುತ್ತದೆ.

ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ

ಭಾರತದಲ್ಲಿ ಯುಪಿಐ ಅತಿಹೆಚ್ಚು ಬಳಸಲಾಗುತ್ತಿರುವ ಡಿಜಿಟಲ್ ಪೇಮೆಂಟ್ ಪ್ಲಾಟ್​ಫಾರ್ಮ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯುಪಿಐ ಪ್ಲಾಟ್​ಫಾರ್ಮ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ದೂರು ಸಾಕಷ್ಟು ಕೇಳಿಬಂದಿದೆ. 44 ಕೋಟಿ ಗ್ರಾಹಕರ ಬಳಗ ಹೊಂದಿರುವ ಎಸ್​ಬಿಐಗೆ ಇದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ತಂತ್ರಜ್ಞಾನ ಉನ್ನತೀಕರಣ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Sat, 25 November 23

ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು