AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯರಾತ್ರಿ ನಂತರ ಎಸ್​ಬಿಐನ ಯುಪಿಐ ಕೆಲಸ ಮಾಡೋದಿಲ್ಲ; ಎಷ್ಟು ಹೊತ್ತು ಸರ್ವಿಸ್ ಡೌನ್ ಆಗಿರುತ್ತೆ, ಏನು ಕಾರಣ, ನೋಡಿ ಮಾಹಿತಿ

SBI UPI Transaction Down: ನವೆಂಬರ್ 26ರಂದು ರಾತ್ರಿ 12:30ರಿಂದ ಮುಂಜಾವು 3ರವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್​ಗಳು ಲಭ್ಯ ಇರುತ್ತವೆ ಎಂದು ಎಸ್​ಬಿಐ ಶನಿವಾರ ಟ್ವೀಟ್ ಮಾಡಿದೆ.

ಇಂದು ಮಧ್ಯರಾತ್ರಿ ನಂತರ ಎಸ್​ಬಿಐನ ಯುಪಿಐ ಕೆಲಸ ಮಾಡೋದಿಲ್ಲ; ಎಷ್ಟು ಹೊತ್ತು ಸರ್ವಿಸ್ ಡೌನ್ ಆಗಿರುತ್ತೆ, ಏನು ಕಾರಣ, ನೋಡಿ ಮಾಹಿತಿ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 25, 2023 | 6:26 PM

Share

ನವದೆಹಲಿ, ನವೆಂಬರ್ 25: ನಿಮ್ಮ ಯುಪಿಐ ಆ್ಯಪ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದೀರಾ? ನವೆಂಬರ್ 26, ಅಂದರೆ ನಾಳೆ ಭಾನುವಾರದಂದು ಎಸ್​ಬಿಐನ ಯುಪಿಐ ವಹಿವಾಟುಗಳು ಸಾಧ್ಯವಾಗುವುದಿಲ್ಲ. ಎಸ್​ಬಿಐನ ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡಲಾಗುತ್ತಿರುವುದರಿಂದ ಭಾನುವಾರ ಹಲವು ಹೊತ್ತು ಅದರ ವಹಿವಾಟು ಸ್ಥಗಿತಗೊಂಡಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಅಲರ್ಟ್ ಮಾಡಿದೆ. ಅದರ ಪ್ರಕಾರ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾವಿನ ಮಧ್ಯೆ ಎರಡೂವರೆ ಗಂಟೆ ಕಾಲ ಸರ್ವಿಸ್ ಡೌನ್ ಅಗಿರುತ್ತದೆ.

‘26-11-2023ರಂದು 00:30ರಿಂದ 3:00 ಗಂಟೆಯವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್​ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್​ಗಳು ಲಭ್ಯ ಇರುತ್ತವೆ,’ ಎಂದು ಎಸ್​ಬಿಐ ಇಂದು ಟ್ವೀಟ್ ಮಾಡಿದೆ.

ಅಂದರೆ, ಶನಿವಾರ ಮಧ್ಯರಾತ್ರಿ 12:30ರಿಂದ ಮುಂಜಾವು 3 ಗಂಟೆಯವರೆಗೆ ಅದರ ಯುಪಿಐ ವಹಿವಾಟು ಕೆಲಸ ಮಾಡುವುದಿಲ್ಲ. ಆ ಸಮಯದಲ್ಲಿ ಹಣದ ವಹಿವಾಟು ಮಾಡಬೇಕೆನ್ನುವವರಿಗೆ ಇತರ ಅವಕಾಶಗಳು ಇದ್ದೇ ಇವೆ. ಎಟಿಎಂ, ಇಂಟರ್ನನೆಟ್ ಬ್ಯಾಂಕಿಂಗ್, ಯೋನೋ ಬ್ಯಾಂಕಿಂಗ್ ಆ್ಯಪ್ ಇತ್ಯಾದಿಯನ್ನು ಬಳಸಬಹುದು. ಫೋನ್ ಬ್ಯಾಂಕಿಂಗ್ ಕೂಡ ನಡೆಯುತ್ತದೆ.

ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ

ಭಾರತದಲ್ಲಿ ಯುಪಿಐ ಅತಿಹೆಚ್ಚು ಬಳಸಲಾಗುತ್ತಿರುವ ಡಿಜಿಟಲ್ ಪೇಮೆಂಟ್ ಪ್ಲಾಟ್​ಫಾರ್ಮ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯುಪಿಐ ಪ್ಲಾಟ್​ಫಾರ್ಮ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ದೂರು ಸಾಕಷ್ಟು ಕೇಳಿಬಂದಿದೆ. 44 ಕೋಟಿ ಗ್ರಾಹಕರ ಬಳಗ ಹೊಂದಿರುವ ಎಸ್​ಬಿಐಗೆ ಇದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ತಂತ್ರಜ್ಞಾನ ಉನ್ನತೀಕರಣ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Sat, 25 November 23

Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ