AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swiggy: ಸ್ವಿಗ್ಗಿಯಲ್ಲಿ ಊಟಕ್ಕೆ ಆರ್ಡರ್ ಮಾಡಿದರೆ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ; ಎಲ್ಲಾ ಫೂಡ್ ಆರ್ಡರ್​ಗೂ ಫೀಸ್ ಅನ್ವಯ; ಬೆಂಗಳೂರು, ಹೈದರಾಬಾದ್​ನಲ್ಲಿ ಆರಂಭಿಕ ಪ್ರಯೋಗ

Platform Fee of Rs 2 In Swiggy: ಆನ್​ಲೈನ್ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಸ್ವಿಗ್ಗಿಯಲ್ಲಿ ಮಾಡಲಾಗುವ ಎಲ್ಲಾ ಫುಡ್ ಆರ್ಡರ್​ಗೂ 2 ರೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಇದು ಸ್ವಿಗ್ಗಿ ಪ್ಲಾಟ್​ಫಾರ್ಮ್​ನ ಗುಣಮಟ್ಟ ಹೆಚ್ಚಿಸಲು ಬಳಕೆಯಾಗಲಿದೆ.

Swiggy: ಸ್ವಿಗ್ಗಿಯಲ್ಲಿ ಊಟಕ್ಕೆ ಆರ್ಡರ್ ಮಾಡಿದರೆ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ; ಎಲ್ಲಾ ಫೂಡ್ ಆರ್ಡರ್​ಗೂ ಫೀಸ್ ಅನ್ವಯ; ಬೆಂಗಳೂರು, ಹೈದರಾಬಾದ್​ನಲ್ಲಿ ಆರಂಭಿಕ ಪ್ರಯೋಗ
ಸ್ವಿಗ್ಗಿ ಡೆಲಿವರಿ ಬಾಯ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2023 | 7:28 PM

Share

ಮುಖ್ಯಾಂಶಗಳು

  • ಸ್ವಿಗ್ಗಿಯಲ್ಲಿ ಮಾಡಲಾಗುವ ಫುಡ್ ಆರ್ಡರ್​ಗೆ 2 ರೂ ಪ್ಲಾಪ್​ಫಾರ್ಮ್ ಶುಲ್ಕವನ್ನು ವಿಧಿಸಲಾಗುತ್ತಿದೆ.
  • ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಮಾತ್ರ ಸದ್ಯಕ್ಕೆ ಪ್ಲಾಟ್​ಫಾರ್ಮ್ ಫೀ ವಿಧಿಸುವ ಪ್ರಯೋಗವನ್ನು ಸ್ವಿಗ್ಗಿ ನಡೆಸಿದೆ.
  • ಆನ್​ಲೈನ್ ಡೆಲಿವರಿ ಬ್ಯುಸಿನೆಸ್ ಹಿನ್ನಡೆಯಲ್ಲಿರುವುದರಿಂದ ಸ್ವಿಗ್ಗಿ ಈ ಸಂಕಷ್ಟವನ್ನು ತಡೆದುಕೊಳ್ಳಲು ಪ್ಲಾಟ್​ಫಾರ್ಮ್ ಶುಲ್ಕದ ಕ್ರಮ ಕೈಗೊಂಡಿರಬಹುದು.

ಬೆಂಗಳೂರು: ಪ್ರತೀ ಫುಡ್ ಅರ್ಡರ್​ಗೂ 2 ರೂಗಳ ಪ್ಲಾಟ್​ಫಾರ್ಮ್ ಫೀ (Platform Fee) ಸಂಗ್ರಹಿಸುವ ಕೆಲಸವನ್ನು ಸ್ವಿಗ್ಗಿ (Swiggy) ಆರಂಭಿಸಿದೆ. ನೀವು ಸ್ವಿಗ್ಗಿ ಆ್ಯಪ್​ನಲ್ಲಿ ಆರ್ಡರ್ ಮಾಡುವ ಯಾವುದೇ ಆಹಾರಕ್ಕೂ (Food Orders) ಪ್ಲಾಟ್​ಫಾರ್ಮ್ ಶುಲ್ಕ ತೆರಬೇಕು. ಇದು ಮಾಮೂಲಿಯಾಗಿ ಇರುವ ಇತರ ಶುಲ್ಕ, ತೆರಿಗೆಗಳಿಗೆ ಹೆಚ್ಚುವರಿಯಾಗಿ ನೀಡುವ ಶುಲ್ಕವಾಗಿದೆ. ಸದ್ಯ ಈ ಹೊಸ ಪ್ರಯೋಗವನ್ನು ಸ್ವಿಗ್ಗಿ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಆರಂಭಿಸಿದೆ. ಸದ್ಯ ಎರಡು ರುಪಾಯಿಯನ್ನು ಪ್ಲಾಟ್​ಫಾರ್ಮ್ ಶುಲ್ಕವಾಗಿ ಪ್ರತಿಯೊಂದು ಆರ್ಡರ್​ಗೂ ಸ್ವಿಗ್ಗಿ ವಿಧಿಸುತ್ತಿದೆ. ಇತರ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈನಲ್ಲಿ ಸದ್ಯಕ್ಕೆ ಈ ಹೊಸ ಶುಲ್ಕ ಜಾರಿಗೆ ಬಂದಿಲ್ಲ. ಇನ್ನೂ ಒಂದು ಸಂಗತಿ ಎಂದರೆ ಸ್ವಿಗ್ಗಿ ಆ್ಯಪ್​ನಲ್ಲಿ ಲಭ್ಯ ಇರುವ ಇನ್ಸ್​ಟಾಮಾರ್ಟ್ ಡೆಲಿವರಿ ಸೇವೆಗೆ ಪ್ಲಾಟ್​ಫಾರ್ಮ್ ಫೀ ಜಾರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾಕೆ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸುತ್ತಿದೆ ಸ್ವಿಗ್ಗಿ?

ಫುಡ್ ಆರ್ಡರ್​ಗಳ ಪ್ಲಾಟ್​ಫಾರ್ಮ್ ಶುಲ್ಕದಿಂದ ಬರುವ ಹಣವನ್ನು ನಮ್ಮ ಪ್ಲಾಟ್​ಫಾರ್ಮ್ ಗುಣಮಟ್ಟ ವೃದ್ಧಿಸಲು ಮತ್ತು ಆ್ಯಪ್​ನ ಫೀಚರ್​ಗಳನ್ನು ಸುಧಾರಿಸಲು ಬಳಸಲಾಗುತ್ತದೆ ಎಂದು ಸ್ವಿಗ್ಗಿಯ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿInvestments: ಷೇರುಹೂಡಿಕೆಯಿಂದಲೇ ಸಿರಿವಂತರಾದ ಜುಂಜುನವಾಲ, ಕೇದಿಯಾ ಮೊದಲಾದವರ ಬಳಿ ಯಾವ್ಯಾವ ಕಂಪನಿಗಳ ಷೇರುಗಳಿವೆ? ಇಲ್ಲಿದೆ ಡೀಟೇಲ್ಸ್

ಆದರೆ, ಪ್ಲಾಟ್​ಫಾರ್ಮ್ ಶುಲ್ಕ ಹೇರುವ ಸ್ವಿಗ್ಗಿ ನಿರ್ಧಾರದ ಹಿಂದೆ ಈ ಕ್ಷೇತ್ರದಲ್ಲಾಗಿರುವ ಹಿನ್ನಡೆ ಕಾರಣ ಎನ್ನಲಾಗಿದೆ. ಸ್ವಿಗ್ಗಿಯಲ್ಲಿ 380 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಈ ಸಂಬಂಧ ಉದ್ಯೋಗಿಗಳಿಗೆ ಇಮೇಲ್ ಮೂಲಕ ಉದ್ಯಮ ಸಂಕಷ್ಟದ ಸ್ಥಿತಿಯನ್ನು ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇಟಿ ಅವರು ತಿಳಿಸಿದ್ದರು.

ಭಾರತದಲ್ಲಿ ಡೆಲಿವರಿ ಬ್ಯುಸಿನೆಸ್ ಮಂದಗೊಂಡಿದೆ. ನಮ್ಮ ಕಂಪನಿಯೂ ಇದರಿಂದ ಹೊರತಾಗಿಲ್ಲ ಎಂದು ಸ್ವಿಗ್ಗಿ ಸಹಸಂಸ್ಥಾಪಕರೂ ಆದ ಶ್ರೀಹರ್ಷ ತಮ್ಮ ಇಮೇಲ್​ನಲ್ಲಿ ತಿಳಿಸಿದ್ದರು.

ಇದನ್ನೂ ಓದಿBank Customers Alert: ಬ್ಯಾಂಕ್ ಗ್ರಾಹಕರೇ ಜಾಗ್ರತೆ! ಈ ಬ್ಯಾಂಕ್​ನಲ್ಲಿ ವಾರ್ಷಿಕ ಶುಲ್ಕಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ

ಫುಡ್ ಡೆಲಿವರಿ ಬ್ಯುಸಿನೆಸ್ ಬೆಳವಣಿಗೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕುಂಠಿತಗೊಂಡಿದೆ. ನಮ್ಮಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸುವಷ್ಟು ಸುಭದ್ರ ಹಣಕಾಸು ಸ್ಥಿತಿ ಇದೆಯಾದರೂ ಅದನ್ನೇ ನೆಚ್ಚಿಕೊಂಡಿರಲು ಅಗುವುದಿಲ್ಲ. ದೀರ್ಘ ಕಾಲ ಮುನ್ನಡೆಯಲು ನಾವು ಏನಾದರೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸ್ವಿಗ್ಗಿ ಸಿಇಒ ಅವರು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್​ನಲ್ಲಿ ಹೇಳಿದ್ದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Fri, 28 April 23

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!