AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್

Reliance Jio Tops: 2023ರ ಅಕ್ಟೋಬರ್ ತಿಂಗಳಲ್ಲಿ ರಿಲಾಯನ್ಸ್ ಜಿಯೋಗೆ 31.59 ಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಏರ್ಟೆಲ್​ಗೆ 3.52 ಲಕ್ಷ ಹೊಸ ಗ್ರಾಹಕರು ಸಿಕ್ಕಿದ್ದಾರೆ. ವೊಡಾಫೋನ್ ಐಡಿಯಾ ಸಂಸ್ಥೆ ಇದೇ ಅವಧಿಯಲ್ಲಿ 20.44 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಜಿಯೋದಲ್ಲಿ 45.23 ಕೋಟಿ, ಏರ್ಟೆಲ್​ನಲ್ಲಿ 37.81 ಕೋಟಿ, ವೊಡಾಫೋನ್​ನಲ್ಲಿ 22.54 ಕೋಟಿ ವೈರ್ಲೆಸ್ ಸೇವೆ ಪಡೆಯುವ ಗ್ರಾಹಕರಿದ್ದಾರೆ.

ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್
ಮೊಬೈಲ್ ಗ್ರಾಹಕರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 04, 2024 | 5:03 PM

ನವದೆಹಲಿ, ಜನವರಿ 4: ಭಾರತದ ಟೆಲಿಕಾಂ ಕಂಪನಿಗಳು (telecom companies) ಹೊಸ ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸುವುದು ಮುಂದುವರಿದಿದೆ. ಈ ಕಾರ್ಯದಲ್ಲಿ ಜಿಯೋ ಅತಿಹೆಚ್ಚು ಗ್ರಾಹಕರನ್ನು ಸೆಳೆದಿದೆ. ವೊಡಾಫೋನ್ ಐಡಿಯಾ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡದೆ. ಟ್ರಾಯ್ ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ಸಬ್​ಸ್ಕ್ರೈಬರ್ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಆ ಒಂದು ತಿಂಗಳಲ್ಲಿ 31.59 ಲಕ್ಷ ಮೊಬೈಲ್ ಬಳಕೆದಾರರನ್ನು ಹೊಸದಾಗಿ ಗಳಿಸಿದೆ. ಭಾರ್ತಿ ಏರ್ಟೆಲ್ ಸಂಸ್ಥೆ ಗಳಿಸಿದ ಗ್ರಾಹಕ ಸಂಖ್ಯೆ ಕೇವಲ 3.52 ಲಕ್ಷ ಮಾತ್ರ. ಇದೇ ವೇಳೆ, ಅಕ್ಟೋಬರ್ ತಿಂಗಳಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆ 20.44 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.

ಈ ಬೆಳವಣಿಗೆ ಬಳಿಕ ರಿಲಾಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಎಂಬ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. ಸೆಪ್ಟೆಂಬರ್​ನಲ್ಲಿ 44.92 ಕೋಟಿ ಇದ್ದ ಜಿಯೋ ವೈರ್ಲೆಸ್ ಬಳಕೆದಾರರ ಸಂಖ್ಯೆ ಅಕ್ಟೋಬರ್ ಅಂತ್ಯದಲ್ಲಿ 45.23 ಕೋಟಿಗೆ ಏರಿದೆ.

ಇನ್ನು, ಭಾರ್ತಿ ಏರ್ಟೆಲ್​ನ ಮೊಬೈಲ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ ಅಕ್ಟೋಬರ್​ನಲ್ಲಿ 37.81 ಕೋಟಿಗೆ ಹೆಚ್ಚಾಗಿದೆ.

ಬಂಡವಾಳದ ಕೊರತೆ ಎದುರಿಸುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆಯ ವೈರ್ಲೆಸ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ 22.54 ಕೋಟಿಗೆ ಇಳಿಮುಖವಾಗಿದೆ.

ಇದನ್ನೂ ಓದಿ: Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ

ಅಕ್ಟೋಬರ್ 2023ರಲ್ಲಿ ಟೆಲಿಕಾಂ ಸಬ್​ಸ್ಕ್ರೈಬರ್​ಗಳ ಸಂಖ್ಯೆ…

  • ರಿಲಾಯನ್ಸ್ ಜಿಯೋ: 45.23 ಕೋಟಿ
  • ಭಾರ್ತಿ ಏರ್ಟೆಲ್: 37.81 ಕೋಟಿ
  • ವೊಡಾಫೋನ್ ಐಡಿಯಾ: 22.54 ಕೋಟಿ

ವೊಡಾಫೋನ್ ಐಡಿಯಾ ಸೆಟಿಲೈಟ್ ಸೇವೆಗೆ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಇತ್ತು. ಇದಾದ ಬಳಿಕ ವೊಡಾಫೋನ್​ನ ಷೇರುಬೆಲೆ ಏರತೊಡಗಿತು. ಆದರೆ, ವಿಐಎಲ್ ಈ ಸುದ್ದಿಯನ್ನು ನಿರಾಕರಿಸುತ್ತಿರುವಂತೆಯೇ ಅದರ ಷೇರುಬೆಲೆ ಕುಸಿಯತೊಡಗಿದೆ.

ಇನ್ನು, ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಇಬ್ಬರು ಹಿರಿಯ ಎಕ್ಸಿಕ್ಯೂಟಿವ್​ಗಳು ರಾಜೀನಾಮೆ ನೀಡಿರುವುದೂ ಕೂಡ ಸಂಸ್ಥೆಗೆ ಹಿನ್ನಡೆ ತಂದಿದೆ. ಸಿಇಒ ಮತ್ತು ಸಿಆರ್​​ಒಗಳು ಕಂಪನಿ ತೊರೆದಿದ್ದಾರೆ.

ಇದನ್ನೂ ಓದಿ: Cyber Criminals: ಎರಡೂವರೆ ವರ್ಷದಲ್ಲಿ ಭಾರತದಿಂದ 10,300 ಕೋಟಿ ರೂ ಲಪಟಾಯಿಸಿದ್ದಾರೆ ಸೈಬರ್ ಕ್ರಿಮಿನಲ್​ಗಳು

ಅತ್ತ, ಭಾರತದ ನಂಬರ್ ಒನ್ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋದಲ್ಲಿ ನಾಯಕತ್ವದಲ್ಲಿ ಸರಾಗ ಬದಲಾವಣೆ ಆಗಿದೆ. ಜಿಯೋ ಛರ್ಮನ್ ಆಗಿದ್ದ ಮುಕೇಶ್ ಅಂಬಾನಿ ಕೆಳಗಿಳಿದಿದ್ದಾರೆ. ಆ ಸ್ಥಾನಕ್ಕೆ ಮಗ ಆಕಾಶ್ ಅಂಬಾನಿ ಏರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು