AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ

UPI rules changes from 2025 August: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಯುಪಿಐನಲ್ಲಿ ಆಗಸ್ಟ್ 1ರಿಂದ ಒಂದಷ್ಟು ನಿಯಮ ಬದಲಾವಣೆ ತರುತ್ತಿದೆ. ಯುಪಿಐ ಬಳಕೆದಾರರು ಬ್ಯಾಂಕ್ ಬ್ಯಾಲನ್ಸ್ ಅನ್ನು ಮಿತಿಗಿಂತ ಹೆಚ್ಚು ಬಾರಿ ಬಳಸಲು ಆಗುವುದಿಲ್ಲ. ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​ಗಳ ವಿವರವನ್ನು ಪರಿಶೀಲಿಸಲು ನಿರ್ಬಂಧ ಇದೆ.

ಯುಪಿಐ ಆ್ಯಪ್​ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ
ಫೋನ್​ಪೇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 27, 2025 | 6:57 PM

Share

ನವದೆಹಲಿ, ಜುಲೈ 27: ಯುಪಿಐ ಪೇಮೆಂಟ್ ಸಿಸ್ಟಂನಲ್ಲಿ (UPI) ಆಗಸ್ಟ್ 1ರಿಂದ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್​ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿಸಲು ಮತ್ತು ಸುಸ್ಥಿರಗೊಳಿಸಲು ಈ ಬದಲಾವಣೆ ಆಗುತ್ತಿದೆ.

ಬ್ಯಾಲನ್ಸ್ ಪರಿಶೀಲನೆಗೆ ಮಿತಿ

ಗೂಗಲ್ ಪೇ, ಪೇಟಿಎಂ, ಫೋನ್​ಪೇ ಇತ್ಯಾದಿ ಯುಪಿಐ ಬಳಕೆದಾರರು ಗಮನಿಸಬೇಕಾದ ಬೆಳವಣಿಗೆ ಇದು. ನೀವು ಒಂದು ಯುಪಿಐ ಆ್ಯಪ್​ನಲ್ಲಿ ಒಂದು ದಿನದಲ್ಲಿ 50 ಬಾರಿ ಮಾತ್ರ ಯಾವುದೇ ಬ್ಯಾಂಕ್ ಅಕೌಂಟ್​ನ ಬ್ಯಾಲನ್ಸ್ ಪರಿಶೀಲಿಸಬಹುದು. ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ಸ್ ಚೆಕ್ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಮಾಹಿತಿ

ನಿಮ್ಮ ಮೊಬೈಲ್ ನಂಬರ್​ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್​​ಗಳ ಬಗ್ಗೆ ಒಂದು ದಿನದಲ್ಲಿ 25 ಬಾರಿ ಮಾತ್ರ ಮಾಹಿತಿ ಪಡೆಯಬಹುದು.

ಆಟೊಡೆಬಿಟ್​ಗೆ ನಿರ್ಬಂಧ

ಒಟಿಟಿ ಪ್ಲಾಟ್​ಫಾರ್ಮ್​ಗಳು, ಮ್ಯುಚುವಲ್ ಫಂಡ್ ಎಸ್​ಐಪಿ ಇತ್ಯಾದಿಗೆ ನಿಯಮಿತವಾಗಿ ಹಣ ಪಾವತಿಸುತ್ತೇವೆ. ತನ್ನಂತಾನೇ ಇವು ಕಡಿತಗೊಳ್ಳಲು ಅಟೊಡೆಬಿಟ್ ಆಯ್ಕೆ ಇದೆ. ಕಡಿಮೆ ಟ್ರಾಫಿಕ್ ಇರುವ ಬೆಳಗಿನ 10 ಗಂಟೆಯೊಳಗಿನ ಅವಧಿ, ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗಿನ ಅವಧಿ, ಹಾಗೂ ರಾತ್ರಿ 9:30ರ ನಂತರದ ಅವಧಿಯಲ್ಲಿ ಆಟೊಡೆಬಿಟ್ ಆಗುವಂತೆ ನಿರ್ಬಂಧಿಸಲಾಗಿದೆ.

90 ಸೆಕೆಂಡ್ ಗ್ಯಾಪ್

ನೀವು ಮಾಡಿದ ಟ್​ರಾನ್ಸಾಕ್ಷನ್ ಇನ್ನೂ ಬಾಕಿ ಇದ್ದು, ಅದರ ಸ್ಟೇಟಸ್ ಪರಿಶೀಲಿಸಲು ನಿರ್ಬಂಧ ಹಾಕಲಾಗುತ್ತಿದೆ. ಮೂರು ಬಾರಿ ಮಾತ್ರ ಸ್ಟೇಟಸ್ ಪರಿಶೀಲಿಸಬಹುದು. ಪ್ರತೀ ಪರಿಶೀಲನೆ ನಡೆಯುವೆ ಕನಿಷ್ಠ 90 ಸೆಕೆಂಡ್ ಗ್ಯಾಪ್ ಇರಬೇಕು.

ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

ಈ ಯುಪಿಐ ನಿಯಮ ಬದಲಾವಣೆ ಯಾಕೆ?

ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು ತಿಂಗಳಲ್ಲಿ 1,600 ಕೋಟಿಯಷ್ಟು ಟ್ರಾನ್ಸಾಕ್ಷನ್​ಗಳು ಆಗುತ್ತವೆ. ಹೀಗಾಗಿ, ಯುಪಿಐ ನೆಟ್ವರ್ಕ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಇದನ್ನು ತಪ್ಪಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಈ ಕ್ರಮ ತೆಗೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Sun, 27 July 25

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ