AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ

Vistara brand ends after 9 years: 2015ರಲ್ಲಿ ಆರಂಭವಾಗಿದ್ದ ವಿಸ್ತಾರಾ ಏರ್ಲೈನ್ಸ್ ಸಂಸ್ಥೆ ಇದೀಗ ಏರ್ ಇಂಡಿಯಾ ಜೊತೆ ವಿಲೀನಗೊಂಡಿದೆ. ವಿಸ್ತಾರಾ ಬ್ರ್ಯಾಂಡ್ ಅಡಿಯಲ್ಲಿ ವೈಮಾನಿಕ ಸೇವೆ ಇವತ್ತು ಮುಗಿಯುತ್ತದೆ. ನಾಳೆಯಿಂದ ಏರ್ ಇಂಡಿಯಾ ಹೆಸರಿನಲ್ಲಿ ವಿಸ್ತಾರಾ ಸೇವೆ ಮುಂದುವರಿಯಲಿದೆ. ಈಗ ವಿಸ್ತಾರವನ್ನು ನಿರ್ವಹಿಸುತ್ತಿರುವ ತಂಡಗಳೇ ಮುಂದೆಯೂ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ
ವಿಸ್ತಾರಾ ಏರ್ಲೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2024 | 10:39 AM

Share

ನವದೆಹಲಿ, ನವೆಂಬರ್ 11: ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ಸ್ ಸಂಸ್ಥೆಗಳು ವಿಲೀನಗೊಂಡಿವೆ. ವಿಸ್ತಾರಾ ಬ್ರ್ಯಾಂಡ್ ಇವತ್ತಿಗೆ ಮುಗಿಯುತ್ತದೆ. ವಿಸ್ತಾರಾದ ವಿಮಾನಗಳೆಲ್ಲವೂ ನವೆಂಬರ್ 12ರಿಂದ ಏರ್ ಇಂಡಿಯಾ ಬ್ರ್ಯಾಂಡ್ ಅಡಿ ಕಾರ್ಯಾಚರಿಸುವುದನ್ನು ಮುಂದುವರಿಸಲಿವೆ. ಟಾಟಾ ಗ್ರೂಪ್ ಸಂಸ್ಥೆ ತನ್ನ ಎಲ್ಲಾ ವೈಮಾನಿಕ ಸೇವೆ ಸಂಸ್ಥೆಗಳನ್ನು ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಸೇರಿಸುವ ಪ್ರಯತ್ನದ ಭಾಗವಾಗಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನ ನಡೆದಿದೆ.

2015ರಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ವಿಸ್ತಾರ ಏರ್ಲೈನ್ಸ್ ಅನ್ನು ಆರಂಭಿಸಿದ್ದವು. ಇದರಲ್ಲಿ ಸಿಂಗಾಪುರ್ ಏರ್ಲೈನ್ಸ್ ಪಾಲು ಶೇ. 49 ಇತ್ತು. ಈಗ ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಪಾಲು ಹೊಂದಿರಲಿದೆ. ಹೊಸ ಏರ್ ಇಂಡಿಯಾದಲ್ಲಿ ಸಿಂಗಾಪುರ್ ಏರ್ಲೈನ್ಸ್ 276 ಮಿಲಿಯನ್ ಡಾಲರ್ ಹೂಡಿಕೆ ಕೂಡ ಮಾಡಲಿದೆ.

ಇದನ್ನೂ ಓದಿ: ಒಂದು ದೇಶ ಸೂಪರ್​ಪವರ್ ಆಗಲು ಹೇಗಿರಬೇಕು? ಭಾರತದ ಬಗ್ಗೆ ಪುಟಿನ್ ನಿರೀಕ್ಷೆಗಳೇನು?

ಸರಿಯಾಗಿ ಒಂದು ವರ್ಷದ ಹಿಂದೆ, 2023ರ ನವೆಂಬರ್​ನಲ್ಲಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನವನ್ನು ಪ್ರಕಟಿಸಲಾಯಿತು. ಇದೀಗ ಎಲ್ಲಾ ಪ್ರಾಧಿಕಾರಗಳ ಅನುಮೋದನೆ ಸಿಕ್ಕಾಗಿದೆ. ನವೆಂಬರ್ 11, ಅಂದರೆ ಇವತ್ತಿಗೆ ವಿಸ್ತಾರ ಬ್ರ್ಯಾಂಡ್​ನಲ್ಲಿ ವಿಮಾನ ಸೇವೆ ಅಂತ್ಯಗೊಳ್ಳುತ್ತದೆ. ನವೆಂಬರ್ 12 ಹಾಗೂ ನಂತರ ದಿನಾಂಕಕ್ಕೆ ವಿಸ್ತಾರ ಟಿಕೆಟ್ ಬುಕ್ ಮಾಡಿದವರು ಏರ್ ಇಂಡಿಯಾ ಬ್ರ್ಯಾಂಡ್​ನ ವಿಮಾನದಲ್ಲಿ ಪ್ರಯಾಣ ಮಾಡಬಹುದು.

ವಿಸ್ತಾರ ವಿಮಾನಗಳಿಗೆ ಹೊಸ ಕೋಡ್

ವಿಸ್ತಾರಾ ಏರ್ಲೈನ್ಸ್​ನಲ್ಲಿರುವ ವಿಮಾನಗಳು ಮಾಮೂಲಿಯ ರೀತಿಯಲ್ಲೇ ಕಾರ್ಯಾಚರಿಸಲಿವೆ. ಆದರೆ, ವಿಸ್ತಾರಾ ಹೆಸರು ಬದಲು ಏರ್ ಇಂಡಿಯಾ ಬ್ರ್ಯಾಂಡಿಂಗ್ ಹೊಂದಿರಲಿವೆ. ಏರ್ ಇಂಡಿಯಾದಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಸಹಾಯವಾಗುವಂತೆ ಡಿಜಿಟಲ್ ಕೋಡ್ ಅನ್ನು ಬದಲಾಯಿಸಲಾಗಿದೆ. ಎಐ2 ಎಂಬುದನ್ನು ಸೇರಿಸಲಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ

ಉದಾಹರಣೆಗೆ, ವಿಸ್ತಾರಾ ಏರ್ಲೈನ್ಸ್ ವಿಮಾನಕ್ಕೆ ಯುಕೆ955 ಕೋಡ್ ಇದ್ದರೆ, ಅದನ್ನು ಎಐ2955 ಎಂದು ಬದಲಾಯಿಸಲಾಗುತ್ತದೆ. ವಿಮಾನದ ಮೇಲೆ ವಿಸ್ತಾರಾ ಏರ್ಲೈನ್ಸ್ ಬದಲು ಏರ್ ಇಂಡಿಯಾ ಎಂದು ಬರೆದಿರಲಾಗುತ್ತದೆ. ವಿಸ್ತಾರಾ ಏರ್ಲೈನ್ಸ್ ವಿಮಾನಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಇನ್ಮುಂದೆಯೂ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!