Cough Syrups: ಕೆಮ್ಮಿನ ಸಿರಪ್​ನಿಂದ ಸಾವು; ಭಾರತದ 7, ಇಂಡೋನೇಷ್ಯಾದ 13 ಔಷಧಗಳತ್ತ ಡಬ್ಲ್ಯೂಎಚ್​ಒ ಬೊಟ್ಟು

WHO Flags 7 Indian Made Cough Syrups: ಜಾಗತಿಕವಾಗಿ ಕೆಮ್ಮಿನ ಸಿರಪ್ ಕುಡಿದು ಜನರು ಸಾವನ್ನಪ್ಪಿದ ಘಟನೆಗಳ ತನಿಖೆ ನಡೆಸಿದ ಡಬ್ಲ್ಯೂಎಚ್​ಒ ಇದೀಗ ಭಾರತದ 7 ಮತ್ತು ಇಂಡೋನೇಷ್ಯಾದ 13 ಸಿರಪ್​ಗಳನ್ನು ಹೆಸರಿಸಿದೆ.

Cough Syrups: ಕೆಮ್ಮಿನ ಸಿರಪ್​ನಿಂದ ಸಾವು; ಭಾರತದ 7, ಇಂಡೋನೇಷ್ಯಾದ 13 ಔಷಧಗಳತ್ತ ಡಬ್ಲ್ಯೂಎಚ್​ಒ ಬೊಟ್ಟು
ಸಾಂದರ್ಭಿಕ ಚಿತ್ರ
Follow us
|

Updated on: Jun 20, 2023 | 3:49 PM

ನವದೆಹಲಿ: ವಿಶ್ವಾದ್ಯಂತ 200ಕ್ಕೂ ಹೆಚ್ಚು ಮಂದಿಗೆ ಕಾರಣ ಎನ್ನಲಾದ ಕಳಪೆ ದರ್ಜೆಯ ಕೆಮ್ಮಿನ ಸಿರಪ್​ಗಳು (Cough Syrup) 20 ಕಂಪನಿಗಳಿಂದ ಪೂರೈಕೆ ಆಗಿರುವುದು ವಿಶ್ವ ಆರೋಗ್ಯ ಸಂಸ್ಥೆ (World Health Organisation) ನಡೆಸಿದ ತನಿಖೆ ಪತ್ತೆ ಮಾಡಿದೆ. 20 ಔಷಧಗಳಿಂದ ಈ ಸಾವಾಗಿದ್ದು ಇದರಲ್ಲಿ ಏಳು ಔಷಧಗಳು ಭಾರತೀಯ ಕಂಪನಿಗಳಿಂದ ತಯಾರಿಸಲಾಗಿದೆ. ಇನ್ನುಳಿದ 13 ಸಿರಪ್​ಗಳು ಇಂಡೋನೇಷ್ಯಾದಿಂದ ಸರಬರಾಜು ಆಗಿವೆ ಎಂದು ಡಬ್ಲ್ಯೂಎಚ್​ಒ ಅಧಿಕಾರಿಗಳು ಹೇಳಿದ್ದಾರೆ ಎನ್​ಡಿಟಿವಿ ವರದಿ ಮಾಡಿದೆ.

ಹಲವು ಆಫ್ರಿಕನ್ ದೇಶಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಜನರ ಸಾವನ್ನಪ್ಪಿದ ಘಟನೆಗಳು ವರದಿಯಾಗಿದ್ದವು. ಈ ಸಿರಪ್​ಗಳು ಭಾರತದಲ್ಲಿ ತಯಾರಾಗಿದ್ದವು ಎಂದೂ ಆರೋಪಿಸಲಾಗಿತ್ತು. ಡಬ್ಲ್ಯೂಎಚ್​ಒನ ತಂಡವೊಂದು ಈ ಘಟನೆಯ ತನಿಖೆ ನಡೆಸಿದೆ. ಡೈಎತಿಲಿನ್ ಮತ್ತು ಎತಿಲಿನ್ ಗ್ಲೈಕೋಲ್ ಅಂಶಗಳು ಈ ಸಿರಪ್​ನಲ್ಲಿ ಅಧಿಕವಾಗಿದ್ದರಿಂದ ಅದನ್ನು ಕುಡಿದ ಜನರಿಗೆ ಸಾವಾಗಿದೆ ಎಂಬ ಸಂಗತಿಯನ್ನು ಡಬ್ಲ್ಯುಎಚ್​ಒ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿNandan Nilekani: ತಾನು ಓದಿದ ಶಿಕ್ಷಣ ಸಂಸ್ಥೆಗೆ 400 ಕೋಟಿ ರೂ ದೇಣಿಗೆ ಕೊಟ್ಟ ನಂದನ್ ನಿಲೇಕಣಿ

ಒಟ್ಟು 20 ಕೆಮ್ಮಿನ ಸಿರಪ್​ಗಳನ್ನು ತನಿಖೆಯಲ್ಲಿ ಹೆಸರಿಸಲಾಗಿದೆ. 7 ಸಿರಪ್​ಗಳು ಮೇಡ್ ಇನ್ ಇಂಡಿಯಾದ್ದಾದರೆ, 13 ಸಿರಪ್​ಗಳು ಇಂಡೋನೇಷ್ಯಾ ಕಂಪನಿಗಳಿಂದ ತಯಾರಿಸಲಾಗಿದ್ದಾಗಿವೆ. ಭಾರತದ ಆ ಏಳು ಕಳಂಕಿತ ಸಿರಪ್​ಗಳನ್ನು ತಯಾರಿಸಿದ್ದು ಹರ್ಯಾಣ ಮೂಲದ ಮೇಡನ್ ಫಾರ್ಮಾಸ್ಯೂಟಿಕಲ್ಸ್, ಮಾರಿಯಾನ್ ಬಯೋಟೆಕ್, ಕ್ಯೂಪಿ ಫಾರ್ಮಾ ಕೆಮ್ ಈ ಮೂರು ಕಂಪನಿಗಳು ಎಂದೆನ್ನಲಾಗಿದೆ.

ಇಷ್ಟಾದರೂ ಕೆಮ್ಮಿನ ಸಿರಪ್ ಕುಡಿದು ಜನರು ಸಾವನ್ನಪ್ಪುತ್ತಿರುವ ಘಟನೆಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೇ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು 12 ಮಕ್ಕಳು ಸಾವನ್ನಪ್ಪಿದ್ದಾರೆನ್ನಲಾಗಿದೆ. ಅಲ್ಲಿನ ಅಧಿಕಾರಿಗಳು ಈ ಸಾವಿಗೆ ಭಾರತೀಯ ಸಿರಪ್​ಗಳೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲಿನ ಅಧಿಕಾರಿಗಳು ಈ ಸಿರಪ್​ಗಳ ಫೋಟೋ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ಸಿರಪ್ ಅನ್ನು ಮಧ್ಯಪ್ರದೇಶದ ರೀಮ್ಯಾನ್ ಲ್ಯಾಬ್ಸ್ ಸಂಸ್ಥೆ ತಯಾರಿಸುವ ಔಷಧಕ್ಕೆ ಹೋಲುತ್ತದೆ.

ಇದನ್ನೂ ಓದಿTax Evasion: ಪ್ಯಾನ್, ಆಧಾರ್ ಕದ್ದು ಶೆಲ್ ಕಂಪನಿ ಮೂಲಕ ತೆರಿಗೆ ವಂಚಿಸುತ್ತಿದ್ದ ಜಾಲಗಳು ಬೆಳಕಿಗೆ; 30,000 ಕೋಟಿ ರೂ ಕರ್ಮಕಾಂಡ ಬಯಲು

ಈ ಬಗ್ಗೆ ರೀಮ್ಯಾನ್ ಸಂಸ್ಥೆಯ ನಿರ್ದೇಶಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೆಮ್ಮಿನ ಸಿರಪ್ ತಮ್ಮದಕ್ಕೆ ಹೋಲುತ್ತದೆಯಾದರೂ ಅದು ನಕಲಿಯಾಗಿದ್ದಿರಬಹುದು ಎಂದು ಶಂಕಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಬಹಳ ಕಠಿಣವಾದ ಕ್ವಾಲಿಟಿ ಕಂಟ್ರೋಲ್ ವ್ಯವಸ್ಥೆ ಇದ್ದು ಕಳಪೆ ದರ್ಜೆಯ ಉತ್ಪನ್ನಕ್ಕೆ ಅವಕಾಶವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ