AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬ್ಯಾಂಕ್​ನಿಂದ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡಲು ಆಗುತ್ತಿಲ್ಲವೇ? ಏಕೆಂಬ ಕಾರಣ ಇಲ್ಲಿದೆ

ನೀವು ಗಳಿಸಿದ ಬಡ್ಡಿಯ ಆದಾಯಕ್ಕೆ (Interest Income) ಬ್ಯಾಂಕ್​ನಂಥ ಸಂಸ್ಥೆಗಳು ಟಿಡಿಎಸ್​ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಶೇ 20ರಷ್ಟು ಕಡಿತ ಮಾಡಬಹುದು. ಒಂದು ವೇಳೆ ಅದಾಗಲೇ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಪಾವತಿ ಮಾಡಿದ್ದಲ್ಲಿ, ಅದನ್ನು ಒಟ್ಟಾರೆ ತೆರಿಗೆ ಜವಾಬ್ದಾರಿಗೆ ಹೊಂದಿಸಬಹುದು. ಇನ್ನು ತೆರಿಗೆ ಜವಾಬ್ದಾರಿಗಿಂತ ಹೆಚ್ಚಿನದನ್ನು ಕಡಿತ ಮಾಡಿದ್ದಲ್ಲಿ ರೀಫಂಡ್​ಗೆ ಕ್ಲೇಮ್ ಮಾಡಬಹುದು. ತೆರಿಗೆ ಪಾವತಿದಾರರು ತೆರಿಗೆ- ಪೂರ್ವ ಅಥವಾ ಗ್ರಾಸ್ ಆದಾಯವನ್ನು ಐಟಿಆರ್​ನಲ್ಲಿ ತೋರಿಸಬೇಕು. ಮತ್ತು ತೆರಿಗೆ ಪಾವತಿಸಿರುವ ಕ್ರೆಡಿಟ್​ ಅನ್ನು ಪ್ರತ್ಯೇಕವಾಗಿ […]

ನಿಮ್ಮ ಬ್ಯಾಂಕ್​ನಿಂದ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡಲು ಆಗುತ್ತಿಲ್ಲವೇ? ಏಕೆಂಬ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 30, 2021 | 12:57 PM

Share

ನೀವು ಗಳಿಸಿದ ಬಡ್ಡಿಯ ಆದಾಯಕ್ಕೆ (Interest Income) ಬ್ಯಾಂಕ್​ನಂಥ ಸಂಸ್ಥೆಗಳು ಟಿಡಿಎಸ್​ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಶೇ 20ರಷ್ಟು ಕಡಿತ ಮಾಡಬಹುದು. ಒಂದು ವೇಳೆ ಅದಾಗಲೇ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಪಾವತಿ ಮಾಡಿದ್ದಲ್ಲಿ, ಅದನ್ನು ಒಟ್ಟಾರೆ ತೆರಿಗೆ ಜವಾಬ್ದಾರಿಗೆ ಹೊಂದಿಸಬಹುದು. ಇನ್ನು ತೆರಿಗೆ ಜವಾಬ್ದಾರಿಗಿಂತ ಹೆಚ್ಚಿನದನ್ನು ಕಡಿತ ಮಾಡಿದ್ದಲ್ಲಿ ರೀಫಂಡ್​ಗೆ ಕ್ಲೇಮ್ ಮಾಡಬಹುದು. ತೆರಿಗೆ ಪಾವತಿದಾರರು ತೆರಿಗೆ- ಪೂರ್ವ ಅಥವಾ ಗ್ರಾಸ್ ಆದಾಯವನ್ನು ಐಟಿಆರ್​ನಲ್ಲಿ ತೋರಿಸಬೇಕು. ಮತ್ತು ತೆರಿಗೆ ಪಾವತಿಸಿರುವ ಕ್ರೆಡಿಟ್​ ಅನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕು. ಆದರೂ ಟಿಡಿಎಸ್​ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಕಷ್ಟ ಎದುರಾಗಬಹುದು. ಫಾರ್ಮ್ 26ASನಲ್ಲಿ ಅದು ರಿಫ್ಲೆಕ್ಟ್ ಆಗುವುದಿಲ್ಲ. ಏಕೆಂದರೆ ಬ್ಯಾಂಕ್​ಗೆ PAN ನೀಡಿರುವುದಿಲ್ಲ. ಬ್ಯಾಂಕ್​ನಿಂದ ಫೈಲ್​ ಮಾಡಿರುವ ಟಿಡಿಎಸ್​ ರಿಟರ್ನ್​ನಲ್ಲಿ, “ಪ್ಯಾನ್ ಲಭ್ಯವಿಲ್ಲ” ಎಂದು ಬರುತ್ತದೆ.

ಬ್ಯಾಂಕ್​ಗಳು ಸೇರಿದಂತೆ ಯಾವುದೇ ವ್ಯಕ್ತಿಯು ಟಿಡಿಎಸ್​ ಕಡಿತ ಮಾಡುವಾಗ ಯಾವ ವ್ಯಕ್ತಿಯ ಟಿಡಿಎಸ್​ ಕಡಿತ ಮಾಡುತ್ತಿದ್ದಾರೋ ಮತ್ತು ಹಣ ಪಾವತಿಸುತ್ತಿದ್ದಾರೋ ಅವರ ಪ್ಯಾನ್​ ನಂಬರ್ (ಮತ್ತು ಟ್ಯಾಕ್ಸ್​ ಖಾತೆ ಸಂಖ್ಯೆ ಅಥವಾ TAN) ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ತೆರಿಗೆ ಕಡಿತ ಮಾಡುವವರು ತ್ರೈಮಾಸಿಕ ಸ್ಟೇಟ್​ಮಂಟ್ (ಟಿಡಿಎಸ್ ರಿಟರ್ನ್ಸ್) ಸಲ್ಲಿಸಬೇಕು. ಹೀಗೆ ಆ ವ್ಯಕ್ತಿಗಳ ಸರಿಯಾದ PAN/TAN ಸಂಖ್ಯೆಯನ್ನು ಹಾಕಿ, ಟಿಡಿಎಸ್ ಕಡಿತ ಮಾಡಿ, ಪಾವತಿಸಲಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಪ್ಯಾನ್ ಆಧಾರದ ಮೇಲೆ ಟಿಡಿಎಸ್ ರಿಟರ್ನ್ಸ್ ಫೈಲ್ ಮತ್ತು ಟಿಡಿಎಸ್ ಕ್ರೆಡಿಟ್ಸ್​ ಪಡೆಯಲಾಗುತ್ತದೆ. ಈಗ ಒಂದು ವೇಳೆ ಬ್ಯಾಂಕ್​ ಬಳಿ ಖಾತೆದಾರರ ಪ್ಯಾನ್​ ಕಾರ್ಡ್​ ಮಾಹಿತಿ ಇಲ್ಲದಿದ್ದಲ್ಲಿ ಅಥವಾ ತಪ್ಪಾದ ಪ್ಯಾನ್ ಇದ್ದಲ್ಲಿ ಆಗಲೂ ಟಿಡಿಎಸ್​ ಕಡಿತ ಮಾಡಿ- ಪಾವತಿಸುತ್ತಾರೆ. ಆದರೆ ಟಿಡಿಎಸ್ ರಿಟರ್ನ್ ಸರಿಯಾದ ಪ್ಯಾನ್ ಸಂಖ್ಯೆ ತೋರಿಸುವುದಿಲ್ಲ. ಆದ್ದರಿಂದ ಪ್ಯಾನ್​ ಸಂಖ್ಯೆಯ ಆಧಾರದಲ್ಲಿ ಟಿಡಿಎಸ್ ಕ್ರೆಡಿಟ್ ಎಷ್ಟಾಗಿದೆ ಎಂದು ಸಿಸ್ಟಮ್​ನಲ್ಲಿ ಅಪ್​ಡೇಟ್ ಆಗುವುದಿಲ್ಲ.

ಆ ಕಾರಣಕ್ಕೆ ಈ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಅಗತ್ಯ ಮಾಹಿತಿ ಬೇಕಾಗುತ್ತದೆ. ಮೊದಲೇ ಹೇಳಿದಂತೆ ಸಿಸ್ಟಮ್​ನಲ್ಲಿ ಇದು ಅಪ್​ಡೇಟ್ ಆಗುವುದಿಲ್ಲ. ಇದು ಹೇಗೆಂದರೆ, ಒಬ್ಬ ವ್ಯಕ್ತಿ ನಿಮ್ಮ ಹಣವನ್ನು ತಪ್ಪಾದ ಬ್ಯಾಂಕ್​ ಖಾತೆ ಸಂಖ್ಯೆಗೆ ಪಾವತಿಸಿದಂತೆ. ಅವರು ಪ್ರಯತ್ನಿಸಿ, ಹಣವನ್ನು ವರ್ಗಾವಣೆ ಮಾಡಬಹುದು. ಆದರೆ ಅದು ನಿಮ್ಮ ಖಾತೆಗೆ ತಲುಪುವುದಿಲ್ಲ. ಆದ್ದರಿಂದ ಟಿಡಿಎಸ್ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಇರುವ ಒಂದೇ ದಾರಿ ಅಂದರೆ, ಸರಿಯಾದ ಪ್ಯಾನ್​ ಸಂಖ್ಯೆಯನ್ನು ಬ್ಯಾಂಕ್​ ಜತೆಗೆ ಅಪ್​ಡೇಟ್ ಮಾಡಬೇಕು. ಟಿಡಿಎಸ್​ ರಿಟರ್ನ್ಸ್​ ಪರಿಷ್ಕೃತಗೊಳಿಸುವಂತೆ ಕೇಳಬೇಕು.

ಇದನ್ನೂ ಓದಿ: Income Tax Return: ಯಾಮಾರಿದ್ರೆ ಬೀಳುತ್ತೆ ಹೊರೆ: ಐಟಿ ರಿಟರ್ನ್​, ಟಿಡಿಎಸ್​ನಲ್ಲಿ ಏನಿದು ಹೊಸ ನಿಯಮ? ಐಟಿ ಇಲಾಖೆ ಹೇಗೆ ಚೆಕ್ ಮಾಡುತ್ತೆ?

(Your Bank Unable To Claim TDS Credits Here Is The Reason Why )

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್