AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !

ವೃದ್ಧನ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು #Sorrysheru ನಡಿ ನಾಯಿಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !
ಆರೋಪಿ ಅಹ್ಮದ್​ ಶಾಹಿ
Lakshmi Hegde
|

Updated on:Mar 15, 2021 | 6:32 PM

Share

ಮುಂಬೈ: ಈ 68ವರ್ಷದ ವೃದ್ಧ ಅದೆಂಥಾ ವಿಕೃತ ಕಾಮಿ..30ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಅತ್ಯಾಚಾರ ಮಾಡಿ ಇದೀಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಸೋಷಿಯಲ್​ ಮೀಡಿಯಾದಲ್ಲಂತೂ ಕಾಮುಕ ವೃದ್ಧನಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ವೃದ್ಧನ ಹೆಸರು ಅಹ್ಮದ್​ ಶಾಹಿ. ಮುಂಬೈನ ಅಂಧೇರಿಯ ಜುಹು ಗಲ್ಲಿಯ ನಿವಾಸಿಯಾಗುವ ಈತ ತರಕಾರಿ ವ್ಯಾಪಾರಿ. ಎಡಗೈ ಇಲ್ಲದ ಅಂಗವಿಕಲ. ರಾತ್ರಿ 3 ರಿಂದ 4 ಗಂಟೆಯ ವೇಳೆಯಲ್ಲಿ ಬೀದಿ ನಾಯಿಗಳಿಗೆ ತಿಂಡಿಯ ಆಸೆ ತೋರಿಸಿ, ಹತ್ತಿರ ಕರೆದು ಬಳಿಕ ರೇಪ್​ ಮಾಡುತ್ತಿದ್ದ ಎಂದು ಡಿಎನ್​ ನಗರ ಪೊಲೀಸರು ತಿಳಿಸಿದ್ದಾರೆ.

ಬಾಂಬೆ ಪ್ರಾಣಿ ಹಕ್ಕು ರಕ್ಷಣಾ ಎನ್​ಜಿಒದ ವಿಜಯ್​ ಮೋಹ್ನಾನಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹ್ಮದ್​ ಶಾ ಹೆಣ್ಣುನಾಯಿಯೊಂದನ್ನು ರೇಪ್​ ಮಾಡುತ್ತಿರುವ ವಿಡಿಯೋವೊಂದನ್ನು ವಿಜಯ್​ ಪೊಲೀಸರಿಗೆ ನೀಡಿದ್ದಾರೆ. ಅಹ್ಮದ್​ ಶಾಹಿ ನಾಯಿಗಳಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದುದನ್ನು ಕೆಲವರು ಸ್ಥಳೀಯರು ನೋಡಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ಆತ ಕೇಳುತ್ತಿರಲಿಲ್ಲ. ಮತ್ತೆಮತ್ತೆ ಅದೇ ಹೊಲಸು ಕೆಲಸ ಮಾಡುತ್ತಿದ್ದ ಎಂದೂ ವಿಜಯ್​ ಮೋಹ್ನಾನಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಮೋಹ್ನಾನಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ವೃದ್ಧ ಜುಹು ಗಲ್ಲಿಯಲ್ಲಿ ವಾಸವಾಗಿದ್ದ. ಅಲ್ಲಿನವರೇ ಆದ ಅಸ್ಲಾಂ ಶೇಖ್​ ಎಂಬುವರು ಒಂದು ದಿನ ನನಗೆ ಕರೆ ಮಾಡಿ, ಅಹ್ಮದ್​ ಶಾಹಿ ಕೃತ್ಯದ ಬಗ್ಗೆ ತಿಳಿಸಿದರು. ಆತ ಪ್ರತಿದಿನವೂ ಬೀದಿ ನಾಯಿಗಳನ್ನು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಹೇಳಿದರು. ಅದಕ್ಕೆ ನಾನು ಸಾಕ್ಷಿ ಕೇಳಿದೆ.. ಆಗ 2020ರ ಡಿಸೆಂಬರ್​ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೋವೊಂದನ್ನು ನನಗೆ ಕಳಿಸಿದರು. ಅದನ್ನು ನೋಡಿ ನನಗೆ ತುಂಬ ಶಾಕ್​ ಆಯಿತು. ಕೂಡಲೇ ಡಿಎನ್​ ನಗರ ಪೊಲೀಸ್​ ಠಾಣೆಗೆ ತೆರಳಿ ದೂರು ಕೊಟ್ಟೆ. ವಿಡಿಯೋವನ್ನೂ ನೀಡಿದೆ ಎಂದು ತಿಳಿಸಿದ್ದಾರೆ.

ಶಾಹಿ ವಿಚಾರಣೆ ವೇಳೆ ತಾನು 30-40 ನಾಯಿಗಳನ್ನು ರೇಪ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತಿಂಡಿ, ಮಾಂಸದ ಆಸೆ ತೋರಿಸಿ ಹತ್ತಿರ ಕರೆಯುತ್ತಿದ್ದೆ. ನಾನು ರೇಪ್​ ಮಾಡುತ್ತಿದ್ದರೂ ನಾಯಿಗಳು ಪ್ರತಿರೋಧ ಒಡ್ಡುತ್ತಿರಲಿಲ್ಲ. ಹಾಗಾಗಿ ಅಪರಾಧ ಎನ್ನಿಸಲಿಲ್ಲ ಎಂದೂ ಹೇಳಿದ್ದಾನೆ. ಇದೊಂದು ಭೀಕರ, ಅಮಾನವೀಯ ಕೃತ್ಯ. ಜುಹು ಗಲ್ಲಿಯಲ್ಲಿರುವ ಎಲ್ಲ ಹೆಣ್ಣು ನಾಯಿಗಳ ಆರೋಗ್ಯವನ್ನೂ ನಮ್ಮ ಎನ್​ಜಿಒದಿಂದ ತಪಾಸಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಅತ್ಯಾಚಾರಕ್ಕೆ ಒಳಗಾದ ನಾಯಿಗಳ ಪಟ್ಟಿಯನ್ನು ನೀಡುತ್ತೇವೆ ಎಂದು ಮೊಹ್ನಾನಿ ಹೇಳಿದ್ದಾರೆ. ಡಿಎನ್​ ನಗರ ಠಾಣೆ ಹಿರಿಯ ಪೊಲೀಸ್​ ಅಧಿಕಾರಿ ಭರತ್ ಗಾಯಕ್​ವಾಡ್​ ಪ್ರತಿಕ್ರಿಯೆ ನೀಡಿ, ಶಾಹಿಯನ್ನು ಆತನ ಮನೆಯಿಂದಲೇ ಬಂಧಿಸಲಾಗಿದೆ. ವಿಡಿಯೋ ಚಿತ್ರೀಕರಣ ಆದ ದಿನಾಂಕ ಗೊತ್ತಿಲ್ಲ. ನಾವು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಟ್ವಿಟರ್​​ನಲ್ಲಿ ಟ್ರೆಂಡ್ ಆದ SorrySheru ವೃದ್ಧನ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು #Sorrysheru ನಡಿ ನಾಯಿಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆಯಿಂದಲೂ Sorry Sheru ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಕಾಮುಕ ಶಾಹಿಯನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ವೃದ್ಧನ ವಿರುದ್ಧ ಪೇಟಾ ಇಂಡಿಯಾ (Peta India) ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸುತ್ತಾರೆ.

Published On - 6:31 pm, Mon, 15 March 21

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್