AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಕುಡಿತದ ಚಟ ಬಿಡಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ನಾಟಕವಾಡಿದ ತಾಯಿ; ಹೆದರಿಸುವ ಬರದಲ್ಲಿ ಹಚ್ಚಿಯೇ ಬಿಟ್ಟಳು ಬೆಂಕಿ

ಅವನೊಬ್ಬ ಕುಡಿತದ ದಾಸನಾಗಿದ್ದ, ಕುಡಿದ ಅಮಲಿನಲ್ಲಿ ರಸ್ತೆ ಚರಂಡಿ ಖಾಲಿ ನಿವೇಶನ ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿದ್ದ, ಇದನ್ನ ಕೇಳಿ, ನೋಡಿ ತಾಯಿಗೆ ಬೇಸತ್ತು ಹೋಗಿತ್ತು. ಮಗನ ಕುಡಿತದ ಚಟ ಬಿಡಿಸಲು ಹೋಗಿ ಇದೀಗ ಮಗನನ್ನೇ ಕಳೆದುಕೊಂಡು ತಾಯಿ ಜೈಲು ಪಾಲಾಗಿದ್ದಾರೆ.

ಮಗನ ಕುಡಿತದ ಚಟ ಬಿಡಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ನಾಟಕವಾಡಿದ ತಾಯಿ; ಹೆದರಿಸುವ ಬರದಲ್ಲಿ ಹಚ್ಚಿಯೇ ಬಿಟ್ಟಳು ಬೆಂಕಿ
ಮಗನನ್ನೇ ಬೆಂಕಿ ಇಟ್ಟು ಕೊಂದಳು
ಬಿ ಮೂರ್ತಿ, ನೆಲಮಂಗಲ
| Edited By: |

Updated on:Jul 20, 2023 | 9:12 AM

Share

ಬೆಂಗಳೂರು ಗ್ರಾಮಾಂತರ, ಜು.20: ಮೃತ ಮಗನ ಹೆಸರು ಚಾಂದ್ ಪಾಷ, ಆರೋಪಿ ತಾಯಿ ಸೂಫಿಯಾಭೀ. ಇವರದ್ದು ಬೆಂಗಳೂರು ಉತ್ತರ ತಾಲೂಕು ಸೋಲದೇವನಹಳ್ಳಿ(Soladevanahalli) ಸಮೀಪದ ಚಿಕ್ಕಬಾಣವಾರ ಗ್ರಾಮ. 40 ವರ್ಷ ವಯಸ್ಸಿನ ಚಾಂದ್ ಪಾಷ ಕುಡಿತದ ದಾಸನಾಗಿದ್ದ ಕಾರಣ ಆತನನ್ನು ಹೆದರಿಸಲು ತಾಯಿ ಪ್ಲಾನ್ ಮಾಡಿದ್ದಳು. ಅದರಂತೆ ಸ್ಟವ್ ನಿಂದ ಸೀಮೆಎಣ್ಣೆಯನ್ನ ತಗೆದು ಮಗನ ಮೇಲೆ ಸುರಿದು ಸಾಯಿಸುವುದಾಗಿ ಹೆದರಿಸಿದ್ದಳು. ತಾಯಿಗೆ ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ, ಮಗನನ್ನು ಹೆದರಿಸುವ ಬರದಲ್ಲಿ ಬೆಂಕಿ ಕಡ್ಡಿಯನ್ನು ಹಚ್ಚಿದ್ದಳು. ಅಷ್ಟೇ ಆ ಬೆಂಕಿ‌ ಮಗ ಚಾಂದ್ ಪಾಷನಿಗೆ ತಗುಲಿ, ಕ್ಷಣಾರ್ಧದಲ್ಲಿ ಚಾಂದ್ ಪಾಷ ಸುಟ್ಟು ಕರಕಲಾಗಿದ್ದ.

ಹೌದು ಎಷ್ಟೇ ಆಗಲಿ ಹೆತ್ತವರಿಗೆ ಹೆಗ್ಗಣವೇ ಮುದ್ದು ಎನ್ನುವಂತೆ ಈ ಮೃತ ಮಗನ ಮೇಲೆ ತಾಯಿ ಸೂಫಿಯಾಭಿಗೆ ಎಲ್ಲಿಲ್ಲದ ಪ್ರೀತಿ. ಕುಡಿತದ ದಾಸನಾಗಿದ್ದ ಚಾಂದ್ ಪಾಷ ಕಳೆದ ಹತ್ತು ವರ್ಷಗಳ ಹಿಂದೆಯೇ ತನ್ನ ಹೆಂಡತಿಯನ್ನ ತೊರೆದು ಬಂದು ತಾಯಿ ಜೊತೆ ಸೇರಿಕೊಂಡಿದ್ದ. ನಿತ್ಯ ಕುಡಿಯುವುದನ್ನ ಅಭ್ಯಾಸ ಮಾಡಿಕೊಂಡಿದ್ದ ಈತ ಕುಡಿದು ಅಲ್ಲಿ ಇಲ್ಲಿ ಬೀಳುತ್ತಿದ್ದನಂತೆ. ಇದನ್ನ ಕಂಡ ಜನರು ಸೂಫಿಯಾಭೀಗೆ ವಿಚಾರ ತಿಳಿಸಿದ ಬಳಿಕ ಎಷ್ಟೆ ಆಗಲಿ ತಾಯಿ ಕರುಳು, ಹೋಗಿ ಅವನನ್ನ ಮನೆಗೆ ಕರೆ ತರುತಿದ್ದಳಂತೆ. ಅಷ್ಟೆ ಅಲ್ಲ ಅದೆಷ್ಟೋ ಭಾರಿ ಬೈದು ಬುದ್ದಿ ಹೇಳಿದ್ದಳಂತೆ. ಒಂದೊತ್ತಿನ ಊಟಕ್ಕೂ ಸಮಸ್ಯೆ ಇರುವಾಗ ಮಗನನ್ನೂ ಸಾಕಿಕೊಂಡು ಕಾಲ ಕಳೆಯುತ್ತಿದ್ದಾಗ ಮಗನ ಕುಡಿತ ಜಾಸ್ತಿಯಾಗಿತ್ತಂತೆ. ಹೇಗಾದರೂ ಮಾಡಿ ಕುಡಿತ ಬಿಡಿಸಬೇಕೆಂದು ಹೆದರಿಸಲು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವ ನಾಟಕವಾಡುವ ವೇಳೆ ಬೆಂಕಿ ಆಚಾನಕ್ ಹೊತ್ತಿಕೊಂಡು ಚಾಂದ್ ಪಾಷ್ ಧಗಧಗಿಸಿ ಹೋಗಿದ್ದಾನೆ.

ಇದನ್ನೂ ಓದಿ:ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾವು: ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಪೋಷಕರು

ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವೃದ್ಧ ತಾಯಿ ಸೂಫಿಯಾಳನ್ನ ವಶಕ್ಕೆ ಪಡೆದು ತನಿಖೆಗೆ ನಡೆಸಿ, ಜೈಲಿಗಟ್ಟಿದ್ದಾರೆ. ಮಗನನ್ನು ಹೆದರಿಸಲು ಹೋಗಿ ಮಗನನ್ನು ಕಳೆದುಕೊಂಡು ತಾಯಿಯು ಜೈಲು ಪಾಲಾಗಿರೋದು ದುರಂತವೇ ಸರಿ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:29 am, Thu, 20 July 23

Follow Us
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!