ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರ​ ಜಂಟಿ ಕಾರ್ಯಾಚರಣೆ: ಉದಯಪುರದಲ್ಲಿ ಗುಂಡು ಹಾರಿಸಿ 4 ದರೋಡೆಕೋರರ ಬಂಧನ, 3 ಕೆಜಿ ಚಿನ್ನ ವಶ

| Updated By: ವಿವೇಕ ಬಿರಾದಾರ

Updated on: Jul 06, 2022 | 7:35 PM

ರಾಜಸ್ಥಾನದ ಉದಯಪುರದಲ್ಲಿ,  ಬೆಂಗಳೂರು ನಗರದ ಎಲೆಕ್ಟ್ರಾನಿಕ್​ಸಿಟಿ ಠಾಣೆ ಪೊಲೀಸರು ಮತ್ತು ರಾಜಸ್ಥಾನ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರ​ ಜಂಟಿ ಕಾರ್ಯಾಚರಣೆ: ಉದಯಪುರದಲ್ಲಿ ಗುಂಡು ಹಾರಿಸಿ 4 ದರೋಡೆಕೋರರ ಬಂಧನ, 3 ಕೆಜಿ ಚಿನ್ನ ವಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು/ ರಾಜಸ್ಥಾನ: ರಾಜಸ್ಥಾನದ (Rajsthan) ಉದಯಪುರದಲ್ಲಿ,  ಬೆಂಗಳೂರು (Bengaluru) ನಗರದ ಎಲೆಕ್ಟ್ರಾನಿಕ್​ಸಿಟಿ (Electronic City) ಠಾಣೆ ಪೊಲೀಸರು (Police) ಮತ್ತು ರಾಜಸ್ಥಾನ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಲೆಕ್ಟ್ರಾನಿಕ್​ಸಿಟಿ ಠಾಣೆ ಪೊಲೀಸರು ದರೋಡೆಕೋರರ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ (Arrested). ಬೆಂಗಳೂರಿನ ಹಲವೆಡೆ ದರೋಡೆ ಮಾಡಿದ್ದ ಕುಖ್ಯಾತ  ದರೋಡೆಕೋರರ ಗುಂಪನ್ನು ಬಂಧಿಸಲು ಕಾರ್ಯಾಚರಣೆಗೆ ಇಳಿದಿದ್ದ  ಪೊಲೀಸರ ಮೇಲೆ ಗ್ಯಾಂಗ್​ ಗುಂಡುಹಾರಿಸಿದೆ.

ಇದನ್ನು ಓದಿ: Crime News: ಬಕ್ರೀದ್​ಗಾಗಿ 250 ಮೇಕೆ ಕದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್​..!

ಈ ವೇಳೆ  ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ‌ ಪೊಲೀಸರು ಪ್ರತಿದಾಳಿ ನಡೆಸಿ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಕೆಜಿ ಚಿನ್ನ, 30 ಕೆಜಿ ಬೆಳ್ಳಿ, ಬಂದೂಕು, ಸಜೀವ ಗುಂಡುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಪ್ರಾಣ ಪಣಕ್ಕಿಟ್ಟು ಎಲೆಕ್ಟ್ರಾನಿಕ್ ಸಿಟಿ‌ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ರಾಜಸ್ಥಾನ ಪೊಲೀಸ್​​ ಅಭಿನಂದಿಸಿದ್ದಾರೆ.

ಕೆರೂರಿನ ಮಾರ್ಕೆಟ್​ನಲ್ಲಿ ಗುಂಪು ಘರ್ಷಣೆ, ಇಬ್ಬರಿಗೆ ಚಾಕು ಇರಿತ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣ ಕೆರೂರಿನ ಮಾರ್ಕೆಟ್​ನಲ್ಲಿ ಗುಂಪು ಘರ್ಷಣೆ ಸಂಭವಿಸಿ ಇಬ್ಬರಿಗೆ ಚಾಕು ಇರಿಯಲಾಗಿದೆ. ದುಷ್ಕರ್ಮಿಗಳು ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಎಂಬುವರಿಗೆ ಚಾಕು ಇರಿದಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: 5 ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಕೊಲೆಯ ಸುಳಿವು ನೀಡಿದ್ದ ಆರೋಪಿ! ಫೇಸ್​​ಬುಕ್​ ಪೋಸ್ಟ್​​ನಲ್ಲಿ ಏನಿದೆ?

ಅಲ್ಲದೆ ಕಿಡಿಗೇಡಿಗಳು ಒಂದು ಕೋಮಿನವರಿಗೆ ಸೇರಿದ ತರಕಾರಿಗಳನ್ನು ರಸ್ತೆಗೆ ಚೆಲ್ಲಿ, 2 ತಳ್ಳುವಗಾಡಿಗೆ ಬೆಂಕಿಹಚ್ಚಿದ್ದಾರೆ. ಗುಂಪು ಘರ್ಷಣೆ ವೇಳೆ 10 ಅಂಗಡಿ ಧ್ವಂಸವಾಗಿದ್ದು, 5 ಬೈಕ್​​ಗಳು ಜಖಂಗೊಂಡಿವೆ. ಕೆರೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.