AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ […]

3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?
ಸಾಧು ಶ್ರೀನಾಥ್​
|

Updated on:Feb 06, 2020 | 6:26 PM

Share

ಬೆಂಗಳೂರು: ನಗರದ ಕೆ ಆರ್​ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್​ಗಾಗಿ ಅಂಡಮಾನ್​ಗೆ ಎಸ್ಕೇಪ್​ ಆಗಿದ್ದ ಅಮೃತಾ- ಶ್ರೀಧರ್​ ಪ್ರಕರಣಕ್ಕೆ ಟ್ವಿಸ್ಟ್​ಗೆ ಸಿಕ್ಕಿದೆ. ಅಂಡಮಾನ್​ನಲ್ಲಿ ಬೈಕ್​ ರೈಡ್​ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್​ ಪುರಂ ಇನ್ಸ್​ಪೆಕ್ಟರ್​ ಅಂಬರೀಷ್​ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ.

ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್​ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ ಶ್ರೀಧರ್ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಆದರೂ ಪ್ರಕರಣದ ಸಂಪೂರ್ಣ ವಿವರ, ವಿವಿಧ ಆಯಾಮಗಳು ಬಯಲಿಗೆ ಬರಬೇಕಿವೆ ಎಂದೂ ಪೊಲೀಸರು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಏನಾಗಿತ್ತೆಂದ್ರೆ..

2017ರಲ್ಲಿ ಹೊಸಕೋಟೆ ಬಳಿ ಕಾರು ಅಪಘಾತವೊಂದು ನಡೆದಿತ್ತು. ವೇಗವಾಗಿ ಕಾರ್ ಚಲಾಯಿಸಿ ಮೇಲಿನ ಇಬ್ಬರೂ ಆರೋಪಿಗಳು ಆ ಕೃತ್ಯ ಎಸಗಿದ್ದರು. ಪ್ರಕರಣವೊಂದರಲ್ಲಿ ಮೂವರು ಮೃತಪಟ್ಟು, ಒಬ್ಬರಿಗೆ ಗಂಭೀರ ಗಾಯವಾಗಿತ್ತು. ಪ್ರಕರಣದಲ್ಲಿ ಕಾರು ಸಂಪೂರ್ಣವಾಗಿ ಜಖಂ ಆಗಿತ್ತು. ಅಪಘಾತ ಪ್ರಕರಣ ಮತ್ತು ಕಾರಿಗಾಗಿ ಲಕ್ಷಾಂತರ ರೂ. ಖರ್ಚು ತಗುಲಿತ್ತು. ಈ ಖರ್ಚಿಗಾಗಿ ಅಮೃತಾ ₹15 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಆ ಪ್ರಕರಣದಿಂದಾಗಿಯೇ ಅಮ್ಮನನ್ನು ಸಾಯಿಸುವ ಪ್ರಮೇಯ ಬಂತು ಎಂದು ಅಮೃತಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

https://www.facebook.com/Tv9Kannada/videos/2972775902754961/

Published On - 4:24 pm, Thu, 6 February 20