AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್​ಐ ಕಚೇರಿಗಳ ಮೇಲೆ ದಾಳಿ ಪ್ರಕರಣ, 14 ಮಂದಿ ಅರೆಸ್ಟ್: ಹೇಗಿತ್ತು ಗೊತ್ತಾ ಪೊಲೀಸರ ಪ್ರೀ ಪ್ಲಾನ್?

ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪಿಎಫ್​ಐ ಕಚೇರಿಗಳ ಮೆಲೆ ದಾಳಿ ನಡೆಸಿದ ಸಂದರ್ಭದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ. ಈ ಪೊಲೀಸ್ ಕಾರ್ಯಾಚರಣೆ ಹಿಂದಿನ ರಹಸ್ಯ ಟಿವಿ9ಗೆ ಲಭ್ಯವಾಗಿದೆ.

ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್​ಐ ಕಚೇರಿಗಳ ಮೇಲೆ ದಾಳಿ ಪ್ರಕರಣ, 14 ಮಂದಿ ಅರೆಸ್ಟ್: ಹೇಗಿತ್ತು ಗೊತ್ತಾ ಪೊಲೀಸರ ಪ್ರೀ ಪ್ಲಾನ್?
ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ PFI ಕಚೇರಿಗಳ ಮೇಲೆ ದಾಳಿ ಪ್ರಕರಣ, 14 ಮಂದಿ ಅರೆಸ್ಟ್ (ಸಾಂದರ್ಭಿಕ ಚಿತ್ರ)
TV9 Web
| Updated By: Rakesh Nayak Manchi|

Updated on: Sep 23, 2022 | 10:28 AM

Share

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್​ಐ (PFI) ಕಚೇರಿಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಿ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿಟ್ಟು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಗುರುವಾರ (ಸೆ.22) ರಾಜ್ಯದಲ್ಲಿ ನಡೆದ ಪೊಲೀಸರ ಕಾರ್ಯಾಚರಣೆಯ ಹಿಂದೆ ಒಂದು ರಹಸ್ಯ ಪ್ರೀ ಪ್ಲಾನ್ ಇದೆ. ಇದು ಟಿವಿ9ಗೆ ಲಭ್ಯವಾಗಿದೆ. ಎನ್​ಐಎ ಜೊತಗೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ದಿನ ಮುಂಚೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಿಟ್ ಲಿಸ್ಟ್​ ಸಿದ್ದಪಡಿಸಲಾಗಿತ್ತು. ಅದರಂತೆ ಮರುದಿನ ಅಖಾಡಕ್ಕಿಳಿದ ಎನ್​ಐಎ ಮತ್ತು ಪೊಲೀಸರು 14 ಜನರನ್ನು ಬಂಧಿಸಿದ್ದಾರೆ.

ಎನ್​ಐಎ, ಇಡಿ ಸೇರಿದಂತೆ ವಿವಿಧ ತನಿಖಾ ತಂಡಗಳ ಕಾರ್ಯಾಚರಣೆ ಎಂದರೆ ಅದು ಗೌಪ್ಯವಾಗಿರುತ್ತದೆ. ದಾಳಿ ನಡೆಸಿದ ನಂತರವೇ ವಿಚಾರ ತಿಳಿದುಬರುತ್ತದೆ. ಅದರಂತೆ ಎನ್​ಐಎ ಅಧಿಕಾರಿಗಳು ಸೆ.22ರಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಸ್​ಡಿಪಿಐ ಮತ್ತು ಪಿಎಫ್​ಐಗೆ ಸೇರಿದ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ಕರ್ನಾಟಕದ 20 ಮಂದಿ ಸೇರಿದ ದೇಶದಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಬೆಂಗಳೂರು ನಗರದ ಕೆ.ಜಿ.ಹಳ್ಳಿ ಪೊಲೀಸರು ಒಟ್ಟು 14 ಮಂದಿಯನ್ನು ಅರೆಸ್ಟ್ ಮಾಡಿದ್ದರು.

ಕೆಜಿ ಹಳ್ಳಿ ಪೊಲೀಸರಿಂದ ಪಿಎಫ್​ಐ ವಿರುದ್ದ ಸೆ.21ರಂದು ಪ್ರಕರಣ ದಾಖಲಿಸಿ ಎನ್​ಐಎ ಜೊತೆ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ಬಂಧಿಸಿದೆ. ಈ ಕಾರ್ಯಾಚರಣೆಗೂ ಮುನ್ನ ಅಂದರೆ ಸೆಪ್ಟೆಂಬರ್ 21ರಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಎನ್​ಐಎ ಮತ್ತು ಕೇಂದ್ರ ಐಬಿ ಅಧಿಕಾರಿಗಳು ಸೇರಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ಹತ್ತೊಂಬತ್ತು ಜನರ ಲಿಸ್ಟ್ ಸಿದ್ಧಪಡಿಸಲಾಗಿದೆ. ಅದರಂತೆ ಸೆ.22ರಂದು ಅಖಾಡಕ್ಕಿಳಿದು 19 ಮಂದಿಯಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳು ಸಿದ್ಧಪಡಿಸಿದ್ದ ಪಟ್ಟಿಯಲ್ಲಿರುವ 19 ಮಂದಿಯ ಹೆಸರು

A1 ನಾಸೀರ್ ಪಾಷಾ- ಬೆಂಗಳೂರು, A2 ಮನ್ಸೂರ್ ಅಹಮದ್ – ಬೆಂಗಳೂರು, A3 ಶೇಕ್ ಇಜಾಜ್ ಅಲಿ – ಕಲಬುರಗಿ, A4 ಮೊಹಮದ್ ಕಲಿಮುಲ್ಲಾ – ಮೈಸೂರು, A5 ಮೊಹಮ್ಮದ್ ಅಶ್ರಫ್ ಅಂಕಜಲ್ – ಮಂಗಳೂರು, A6 ಮೊಹಮದ್ ಶರೀಫ್ -ಸ ಮಂಗಳೂರು, A7 ಅಬ್ದುಲ್ ಖಾದೀರ್ ದಕ್ಷಿಣ ಕನ್ನಡದ ಪುತ್ತೂರು, A8 ಮೊಹಮ್ಮದ್ ತಪ್ಸೀರ್ – ದಕ್ಷಿಣ ಕನ್ನಡದ ಬಂಟ್ವಾಳ, A9 ಮೊಹಿಯುದ್ದಿನ್ – ಮಂಗಳೂರು, A10 ನವಾಜ್ ಕಾವುರ್ – ಮಂಗಳೂರು, A11 ಅಶ್ರಫ್ – ಮಂಗಳೂರು, A12 ಅಬ್ದುಲ್ ರಜಾಕ್ – ಪುತ್ತೂರು, A13 ಅಯುಬ್ ಕೆ – ಪುತ್ತೂರು, A14 ಶಾಹಿದ್ ಖಾನಗ – ಶಿವಮೊಗ್ಗ, A15 ತಾಹಿರ್ – ದಾವಣಗೆರೆ, A16 ಇಮಾದುದ್ದೀನ್ – ದಾವಣಗೆರೆ, A17 ಅಬ್ದುಲ್ ಅಜಿಜ್ ಅಬ್ದುಲ್ – ಶಿರಸಿ ಉತ್ತರ ಕನ್ನಡ, A18 ಮೌಸಿನ್ ಅಬ್ದುಲ್ ಶಾಕುರ್ – ಶಿರಸಿ ಉತ್ತರ ಕನ್ನಡ, A19 ಮೊಹಮ್ಮದ್ ಫಯಾಜ್ – ಗಂಗಾವತಿ ಕೊಪ್ಪಳ.

ಮಹತ್ವದ ಸಭೆಯಲ್ಲಿ 19 ಮಂದಿ ಆರೋಪಿಗಳ ಪಟ್ಟಿ ಸಿದ್ಧಪಡಿಸಿ ಅವರ ವಿಳಾಸ ಸಹಿತಿ ಮಾಹಿತಿ ಕಲೆಹಾಕಿಕೊಳ್ಳಲಾಗಿದೆ. ಈ ಯೋಜನೆಯಂತೆ ಸೆ.22 ರಂದು ಸಿಸಿಬಿ ಡಿಸಿಪಿ ಶರಣಪ್ಪ, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ನೇತ್ರತ್ವದಲ್ಲಿ ಹತ್ತೊಂಬತ್ತು ತಂಡ ರಚಿಸಿ ದಾಳಿ ನಡೆಸಲಾಗಿತ್ತು. ಸೆ.21ರಂದು ಸಂಜೆ 4 ಗಂಟೆಗೆ ದಾಖಲು ಮಾಡಿದ್ದ ಪ್ರಕರಣ ಸಂಬಂಧ ಇದುವರೆಗೆ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ