ಚಿತ್ರದುರ್ಗ: 210 ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಲುಕ್ ಔಟ್ ​​ನೋಟಿಸ್​ ಮೂಲಕ ಬಂಧನ

| Updated By: ವಿವೇಕ ಬಿರಾದಾರ

Updated on: Jun 26, 2024 | 1:12 PM

ಕರ್ನಾಟಕ ಸೇರಿದಂತೆ ಅಂತ್ಯಾರಾಜ್ಯದ ಸಾವಿರಾರು ಜನರಿಗೆ ನೂರಾರು ಕೋಟಿ ರೂ. ವಂಚಿಸಿದ್ದ ಆರೋಪಿಯನ್ನು ಚಿತ್ರದುರ್ಗ ಸೆನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಕೋಡೆ ರಮಣಯ್ಯ ಚಿತ್ರದುರ್ಗ ಜಿಲ್ಲೆ ಒಂದರಲ್ಲೇ 106 ಜನರಿಗೆ ವಂಚಿಸಿದ್ದಾರೆ.

ಚಿತ್ರದುರ್ಗ: 210 ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಲುಕ್ ಔಟ್ ​​ನೋಟಿಸ್​ ಮೂಲಕ ಬಂಧನ
ಚಿತ್ರದುರ್ಗ ಸೆನ್ ಪೊಲೀಸ್​ ಠಾಣೆ, ಆರೋಪಿ ಕೋಡೆ ರಮಣಯ್ಯ
Follow us on

ಚಿತ್ರದುರ್ಗ, ಜೂನ್​ 26: ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಬಂಧನ ಚಿತ್ರದುರ್ಗ ಸೆನ್ ಠಾಣೆ ಪೊಲೀಸರು (Chitradurga Cen Station Police) ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಕೋಡೆ ರಮಣಯ್ಯ ಬಂಧಿತ ಆರೋಪಿ. ಆರೋಪಿ ಕೋಡೆ ರಮಣಯ್ಯ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈ.ಲಿ. ಹೆಸರಿನ ಕಂಪನಿ ತೆರದಿದ್ದನು. ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದರೆ, 60 ದಿನಗಳಲ್ಲೇ ಹಣ ದ್ವಿಗುಣ ಆಗುತ್ತೆ ಎಂದು ಆಮಿಷ ಒಡ್ಡಿ, ಹಣ ಪಡೆದು ವಂಚನೆ ಎಸಗುತ್ತಿದ್ದನು.

ಆರೋಪಿ ಕೋಡೆ ರಮಣಯ್ಯ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲ್ವೆ ಇಲಾಖೆ ನೌಕರ ರಮೇಶ್​ ಎಂಬುವರಿಗೆ ಸಂಪರ್ಕಿಸಿ “ನಿಮ್ಮ ಹಣ ದ್ವೀಗುಣವಾಗುತ್ತೆ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿ” ಎಂದು ಆಮಿಷವೊಡ್ಡಿದ್ದನು. ಆರೋಪಿ ಕೋಡೆ ರಮಣಯ್ಯ ಮಾತು ನಂಬಿ, ರಮೇಶ್​ 1 ಲಕ್ಷ 4 ಸಾವಿರ ರೂ. ಹೂಡಿದ್ದರು. ಬಳಿಕ ಆರೋಪಿ ಕೋಡೆ ರಮಣಯ್ಯ ಈ ಹಣ ತೆಗೆದುಕೊಂಡು ರಮೇಶ್​ ಅವರ ಸಂಪರ್ಕಕ್ಕೆ ಸಿಗಲಿಲ್ಲ. ಚಿತ್ರದುರ್ಗ ಸೆನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.

ಆರೋಪಿ ಕೋಡೆ ರಮಣಯ್ಯ ಈ ರೀತಿ ಚಿತ್ರದುರ್ಗದಲ್ಲಿ ಸುಮಾರು 106 ಜನರಿಗೆ ವಂಚಿಸಿದ್ದು, ದೂರು ದಾಖಲಾಗಿವೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲೇ ಆರೋಪಿ ಕೋಡೆ ರಮಣಯ್ಯ ಸುಮಾರು 4.79 ಕೋಟಿ ರೂ. ಹಣ ಪಡೆದು ವಂಚಿಸಿದ್ದಾನೆ. ಚಿತ್ರದುರ್ಗದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕೋಡೆ ರಮಣಯ್ಯ ವಿದೇಶಕ್ಕೆ ಹಾರಿದ್ದು, ವಿಯಟ್ನಾಂನಲ್ಲಿ ತಲೆಮರೆಸಿಕೊಂಡಿದ್ದನು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್, ಏನಿದು ನೋಟಿಸ್? ಪ್ರಜ್ವಲ್ ಮೇಲಾಗುವ ಪರಿಣಾಮವೇನು?

ಬಳಿಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದರು. ಆರೋಪಿ ಕೋಡೆ ರಮಣಯ್ಯ ಆರು ತಿಂಗಳ ಬಳಿಕ ಪ್ರಶ್ಚಿಮ ಬಂಗಾಳದ ಕಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಅಲ್ಲಿಯ ಸ್ಥಳೀಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳಿಕ, ಚಿತ್ರದುರ್ಗ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಚಿತ್ರದುರ್ಗ ಪೊಲೀಸರು ಆರೋಪಿ ಕೋಡೆ ರಮಣಯ್ಯ ಕೊಲ್ಕತ್ತಾದಿಂದ ಕರೆತಂದಿದ್ದಾರೆ. ಆರೋಪಿ ಕೋಡೆ ರಮಣಯ್ಯ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ವಂಚಿಸಿದ್ದಾನೆ.

ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವಂತೆ ಡಿಜಿ, ಐಜಿಗೆ ಮನವಿ ಚಿತ್ರದುರ್ಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.

ಏನಿದು ಲುಕ್‌ಔಟ್ ನೋಟೀಸ್?

ಯಾವುದೇ ಒಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ತನಿಖಾ ಸಂಸ್ಥೆಗಳು ಅನುಸರಿಸುವ ಕ್ರಮವಾಗಿದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ಅಂತಾರಾಷ್ಟ್ರೀಯ ಗಡಿ, ಬಂದರು, ವಿಮಾನ ನಿಲ್ದಾಣ ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಸಂಬಂಧಪಟ್ಟ ಆರೋಪಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗುತ್ತದೆ. ಹೀಗಾಗಿ ಆರೋಪಿ ಇರುವ ದೇಶದಿಂದ ಬೇರೆ ಕಡೆಗೆ ಲೀಗಲ್ ಆಗಿ ಹೋಗಲು ಸಾಧ್ಯವಿಲ್ಲ. ಯಾವುದೇ ವಿಮಾನ ನಿಲ್ದಾಣ, ಬಂದರು, ಅಂತಾರಾಷ್ಟ್ರೀಯ ಗಡಿಗೆ ಹೋದರು ಅಲ್ಲಿರುವ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆಯಬಹುದು.

ಜೂಜಾಟವಾಡುತ್ತಿದ್ದ ಐವರು ಆರೋಪಿಗಳ ಬಂಧನ

ಕೋಲಾರ: ಬಣಕನಹಳ್ಳಿ ಬಳಿ ಜೂಜಾಟವಾಡುತ್ತಿದ್ದ ಐವರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ 22,200 ನಗದು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಎಂಡಿಎಂಎ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಪ್ರಶಾಂತ್ ನಗರ ನಿವಾಸಿ ಸಮೀರ್ ಪಾಷಾನನ್ನು ಬಂಧಿಸಿದ ಗಲ್​ಪೇಟೆ ಠಾಣೆ ಪೊಲೀಸರು; ಬಂಧಿತನ ಬಳಿ ಇದ್ದ 1800 ಗ್ರಾಂ ಮಾದಕ ವಸ್ತು ಹಾಗೂ ಒಂದು ಕಾರು ಜಪ್ತಿ; ಕೋಲಾರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Wed, 26 June 24