AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ […]

ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​
KUSHAL V
|

Updated on:Oct 10, 2020 | 4:06 PM

Share

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಗ್ಯಾಂಗ್​ ಒಂದು ಪತ್ತೆಯಾಗಿದೆ. ನಗರದ ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ ಹಾಗೂ ಕಂದಾಯ ಭವನಕ್ಕೆ ಬರುವವರೇ ಇವರ ಟಾರ್ಗೆಟ್​. ಇವರ ಕೃತ್ಯಗಳು ರಾಜ್ಯ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಆದರೆ, ಇದು ಮತ್ತಷ್ಟು ಬೆಳೆದು ಪೆಡಂಭೂತವಾಗಿ ರಾಜ್ಯವನ್ನು ಕಾಡುವ ಮುನ್ನವೇ ಖಾಕಿ ಪಡೆ ಇದನ್ನು ಚಿವುಟು ಹಾಕಿದೆ.

ಸ್ವಾರಸ್ಯಕರ ಸಂಗತಿಯೆಂದರೆ ಈ ನಕಲಿ ಛಾಪಾ ಕಾಗದ ದಂಧೆಯ ಕಿಂಗ್​ಪಿನ್​ ಹೆಸರು ಛೋಟಾ ತೆಲಗಿ! ಹೌದು, ಇದೀಗ ಛೋಟಾ ತೆಲಗಿ ಸೇರಿದಂತೆ ನಾಲ್ವರು ಆರೋಪಿಗಳನ್ನ SJ ಪಾರ್ಕ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಆರೋಪಿಗಳು ಸೆರೆಯಾಗಿದ್ದು ದಂಧೆಯ ಕಿಂಗ್​ಪಿನ್​ ಆಗಿದ್ದ ಹುಸೇನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ಸೇರಿದಂತೆ ಸಿಟಿ ಸಿವಿಲ್ ಕೋರ್ಟ್​ ಬಳಿ ಟೈಪ್​ರೈಟಿಂಗ್​ಮಾಡುತ್ತಿದ್ದ ಹರೀಶ್​, ಶವರ್ ಅಲಿಯಾಸ್ ಸೀಮಾ ಹಾಗೂ ಕಂದಾಯ ಭವನದಲ್ಲಿ ಟೈಪಿಸ್ಟ್​ ಆಗಿದ್ದ ನಜ್ಮಾ ಫಾತಿಮಾರನ್ನು ಖಾಕಿ ಪಡೆ ಅರೆಸ್ಟ್​ ಮಾಡಿದೆ. ಕೋರ್ಟ್​ಗಳಲ್ಲಿ ಕೇಸ್ ದಾಖಲಿಸಲು ಬರುತ್ತಿದ್ದ ಜನರು; ಜಿಪಿಎ, ವಿಲ್ ಮತ್ತು ಕರಾರು ಪತ್ರ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಈ ಗ್ಯಾಂಗ್​ ನಕಲಿ ಛಾಪಾ ಕಾಗದ ತಯಾರಿಸಿಕೊಡುತ್ತಿತ್ತು. ಈ ಮುಖಾಂತರ ಸರ್ಕಾರಕ್ಕೆ ಸಾವಿರಾರು ರೂಪಾಯಿ ಆದಾಯದಿಂದ ವಂಚಿಸಿದ್ದರು. ಈ ಹಿಂದೆ ಹುಸೇನ್ ಮೋದಿ ಬಾಬುನನ್ನು ಹಲಸೂರು ಗೇಟ್​ ಪೊಲೀಸರು ಬಂಧಿಸಿದ್ದರು. ಆದರೆ, ಈತ ಜಾಮೀನಿನ ಮೇಲೆ ಹೊರಬಂದು ಮತ್ತೆ ದಂಧೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತರಿಂದ ಪೊಲೀಸರು 443 ನಕಲಿ ಛಾಪಾ ಕಾಗದ ಜಪ್ತಿಮಾಡಿದ್ದಾರೆ.

Published On - 4:05 pm, Sat, 10 October 20

Follow Us
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!