AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ […]

ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​
KUSHAL V
|

Updated on:Oct 10, 2020 | 4:06 PM

Share

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಗ್ಯಾಂಗ್​ ಒಂದು ಪತ್ತೆಯಾಗಿದೆ. ನಗರದ ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ ಹಾಗೂ ಕಂದಾಯ ಭವನಕ್ಕೆ ಬರುವವರೇ ಇವರ ಟಾರ್ಗೆಟ್​. ಇವರ ಕೃತ್ಯಗಳು ರಾಜ್ಯ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಆದರೆ, ಇದು ಮತ್ತಷ್ಟು ಬೆಳೆದು ಪೆಡಂಭೂತವಾಗಿ ರಾಜ್ಯವನ್ನು ಕಾಡುವ ಮುನ್ನವೇ ಖಾಕಿ ಪಡೆ ಇದನ್ನು ಚಿವುಟು ಹಾಕಿದೆ.

ಸ್ವಾರಸ್ಯಕರ ಸಂಗತಿಯೆಂದರೆ ಈ ನಕಲಿ ಛಾಪಾ ಕಾಗದ ದಂಧೆಯ ಕಿಂಗ್​ಪಿನ್​ ಹೆಸರು ಛೋಟಾ ತೆಲಗಿ! ಹೌದು, ಇದೀಗ ಛೋಟಾ ತೆಲಗಿ ಸೇರಿದಂತೆ ನಾಲ್ವರು ಆರೋಪಿಗಳನ್ನ SJ ಪಾರ್ಕ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಆರೋಪಿಗಳು ಸೆರೆಯಾಗಿದ್ದು ದಂಧೆಯ ಕಿಂಗ್​ಪಿನ್​ ಆಗಿದ್ದ ಹುಸೇನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ಸೇರಿದಂತೆ ಸಿಟಿ ಸಿವಿಲ್ ಕೋರ್ಟ್​ ಬಳಿ ಟೈಪ್​ರೈಟಿಂಗ್​ಮಾಡುತ್ತಿದ್ದ ಹರೀಶ್​, ಶವರ್ ಅಲಿಯಾಸ್ ಸೀಮಾ ಹಾಗೂ ಕಂದಾಯ ಭವನದಲ್ಲಿ ಟೈಪಿಸ್ಟ್​ ಆಗಿದ್ದ ನಜ್ಮಾ ಫಾತಿಮಾರನ್ನು ಖಾಕಿ ಪಡೆ ಅರೆಸ್ಟ್​ ಮಾಡಿದೆ. ಕೋರ್ಟ್​ಗಳಲ್ಲಿ ಕೇಸ್ ದಾಖಲಿಸಲು ಬರುತ್ತಿದ್ದ ಜನರು; ಜಿಪಿಎ, ವಿಲ್ ಮತ್ತು ಕರಾರು ಪತ್ರ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಈ ಗ್ಯಾಂಗ್​ ನಕಲಿ ಛಾಪಾ ಕಾಗದ ತಯಾರಿಸಿಕೊಡುತ್ತಿತ್ತು. ಈ ಮುಖಾಂತರ ಸರ್ಕಾರಕ್ಕೆ ಸಾವಿರಾರು ರೂಪಾಯಿ ಆದಾಯದಿಂದ ವಂಚಿಸಿದ್ದರು. ಈ ಹಿಂದೆ ಹುಸೇನ್ ಮೋದಿ ಬಾಬುನನ್ನು ಹಲಸೂರು ಗೇಟ್​ ಪೊಲೀಸರು ಬಂಧಿಸಿದ್ದರು. ಆದರೆ, ಈತ ಜಾಮೀನಿನ ಮೇಲೆ ಹೊರಬಂದು ಮತ್ತೆ ದಂಧೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತರಿಂದ ಪೊಲೀಸರು 443 ನಕಲಿ ಛಾಪಾ ಕಾಗದ ಜಪ್ತಿಮಾಡಿದ್ದಾರೆ.

Published On - 4:05 pm, Sat, 10 October 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್