AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್​ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ

ಈ ಗುಂಪು ಕಳೆದ ಒಂದು ವರ್ಷದಿಂದ ಹಲವು ಕಾರ್​ಗಳಿಂದ ಸೈಲೆನ್ಸರ್ ಕಳವು ಮಾಡಿದ್ದ ಸಂಗತಿ ಈ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್​ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ
ಸೈಲೆನ್ಸರ್ ಕಳ್ಳರಿಗೆ ಬೇಕಿರುವ ಅಪರೂಪದ ಲೋಹಗಳಿರುವ ಹನಿಕಾಂಬ್
TV9 Web
| Edited By: |

Updated on:Apr 23, 2022 | 8:09 AM

Share

ಬೆಂಗಳೂರು: ಮನೆಗಳ ಮುಂದೆ ನಿಂತಿರುವ ಕಾರ್​ಗಳ ಸೈಲೆನ್ಸರ್​ಗಳನ್ನು ಕಳವು ಮಾಡುತ್ತಿದ್ದ ಕಳ್ಳರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಕಳೆದ ಒಂದು ವರ್ಷದಿಂದ ಹಲವು ಕಾರ್​ಗಳಿಂದ ಸೈಲೆನ್ಸರ್ ಕಳವು ಮಾಡಿದ್ದ ಸಂಗತಿ ಈ ವೇಳೆ ಬೆಳಕಿಗೆ ಬಂದಿದೆ. ಕಾರು ಇದ್ದ ಜಾಗದಲ್ಲಿಯೇ ಇರುವುದರಿಂದ ಅದರ ಮಾಲೀಕರೂ ಸಹ ಸೈಲೆನ್ಸರ್ ಕಳುವಾಗಿರುವುದನ್ನು ಗಮನಿಸಿ ದೂರು ಕೊಡುವುದು ತಡವಾಗುತ್ತದೆ. ಸೈಲೆಂಟ್ ಆಗಿ ಕಾರ್ ಕೆಳಗಿನ ಸೈಲೆನ್ಸರ್ ಕದ್ದು ತಪ್ಪಿಸಿಕೊಳ್ಳುತ್ತಾರೆ. ನಗರದಲ್ಲಿ ಈವರೆಗೆ 15ಕ್ಕೂ ಹೆಚ್ಚು ಸೈಲೆನ್ಸರ್ ಕಳವು ಪ್ರಕರಣಗಳು ವರದಿಯಾಗಿವೆ. ಸೈಲೆನ್ಸರ್​ಗಳಲ್ಲಿ ಪಲೋಡಿಯಂ, ಪ್ಲಾಟಿನಂ, ರೊಡಿಯಂ ಬಳಕೆಯಾಗಿವೆ. ಈ ಲೋಹಗಳನ್ನು ಪುಡಿ ಮಾಡಿ ಮಾರುವುದನ್ನು ಕಳ್ಳರು ರೂಢಿಸಿಕೊಂಡಿದ್ದಾರೆ. ಹೈಫೈ ಕಾರುಗಳು ಮಾತ್ರವಲ್ಲ, ಮಧ್ಯವರ್ಗದ ಮೆಚ್ಚಿನ ಕಾರು ಎನಿಸಿರುವ ‘ಮಾರುತಿ ಇಕೋ’ ಕಾರಿನ ಸೈಲೆನ್ಸರ್​ಗಳಿಗೂ ಭಾರಿ ಬೇಡಿಕೆಯಿದೆ. ಸೈಲೆನ್ಸರ್ ಕಳವು ಪ್ರಕರಣಗಳ ಬಗ್ಗೆ ಕೊಣನಕುಂಟೆ, ತಲಘಟ್ಟಪುರ ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.

ನಗರದಲ್ಲಿ 2021ರಿಂದಲೂ ಸೈಲೆನ್ಸರ್ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಕಾರಿನಲ್ಲಿರುವ ಸೈಲೆನ್ಸರ್​ನ ಕೆಲ ವಸ್ತುಗಳು ಕಾರ್ ಉಗುಳುವ ಹೊಗೆಯ ಅಪಾಯಕಾರಿ ವಸ್ತುಗಳನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಬಳಕೆಯಾಗುವ ರಾಸಾಯನಿಕಗಳು ಹಾಗೂ ಲೋಹಗಳಿಗೆ ಬೇಡಿಕೆಯಿದೆ. ಹೀಗಾಗಿ ಸೈಲೆನ್ಸರ್​ಗಳನ್ನು ಸ್ಕ್ರೂಡೈವರ್ ಮೂಲಕ ಹೊರ ತೆಗೆದು, ಪುಡಿ ಮಾಡಿ ಮಾರುತ್ತಾರೆ. ಸೈಲೆನ್ಸರ್​ನಲ್ಲಿರುವ ಹನಿಕಾಂಬ್​ಗಳನ್ನು ಪುಡಿ ಮಾಡಿ ಮಾರುವುದನ್ನು ರೂಢಿಸಿಕೊಂಡಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಈ ಪುಡಿಗೆ ಭಾರಿ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

ಕುಖ್ಯಾತ ಮನೆಗಳ್ಳರ ಬಂಧನ; 79 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತುಗಳ ಜಪ್ತಿ

ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ತೆಲಂಗಾಣ ಮೂಲದ ವಿನೋದ್, ಪಶ್ಚಿಮ ಬಂಗಾಳ ಮೂಲದ ರೋಹಿತ್ ಮಂಡಲ್ ಬಂಧಿತ ಆರೋಪಿಗಳು. ಇವರು ಎರಡು ತಿಂಗಳಿಂದ ಮನೆ ಕಳವು ಮಾಡ್ತಿದ್ದ ಆರೋಪಿಗಳು. ಹಗಲು ಮನೆಗಳನ್ನ ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ರು. ರಾತ್ರಿ ಆಗುತ್ತಿದ್ದಂತೆ ಕಿಟಕಿ ಕಂಬಿಗಳನ್ನ ಮುರಿದು ಕಳ್ಳತನ ಮಾಡುತ್ತಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಬಂಧಿತರಿಂದ 79 ಲಕ್ಷ ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತೆಲಂಗಾಣ ಮೂಲದವನಾಗಿದ್ದ ವಿನೋದ್ ಕುಮಾರ್, ಮನೆಗಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹೀಗಾಗಿ ಆತನ ಮನೆಯವರು ಹೊರಹಾಕಿದ್ದರು. 2016ರಲ್ಲಿ ಕಲ್ಕತ್ತಾಗೆ ಹೋಗಿ ರೋಹಿತ್ ಮಂಡಲ್ ಜೊತೆ 3 ವರ್ಷ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. 2019ರಲ್ಲಿ ಬಾಂಗ್ಲಾ ಯುವತಿಯನ್ನ ಪ್ರೀತಿಸಿ ಮದುವೆಯಾಗಿ ಬಾಂಗ್ಲಾಗೆ ತೆರಳಿದ್ದ. ಮೂವರೂ ಹೆಸರು ಬದಲಾಯಿಸಿಕೊಂಡು 1 ವರ್ಷ ಢಾಕಾದಲ್ಲಿ ವಾಸವಿದ್ರು. ಜೀವನ ನಿರ್ವಹಣೆ ಕಷ್ಟವಾದಾಗ ಮೂವರೂ ಭಾರತಕ್ಕೆ ಮರಳಿದ್ದರು. ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ವಿನೋದ್ ಕುಮಾರ್. ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ ಆರಂಭಿಸಿದ್ದ. ಬಳಿಕ ಪತ್ನಿಯನ್ನ ವಾಪಾಸ್ ಬಾಂಗ್ಲಾಗೆ ಕರೆದೊಯ್ದು ಬಿಟ್ಟು ಬಂದಿದ್ದ. ರೋಹಿತ್ ಮಂಡಲ್ ಜೊತೆ ಸೇರಿ ಕಳ್ಳತನ ಮುಂದುವರೆಸಿದ್ದ.

ಇದನ್ನೂ ಓದಿ: ಬೆಳಗ್ಗೆ ಸ್ಕೆಚ್ ಹಾಕಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿದ್ದ ಕುಖ್ಯಾತ ಮನೆಗಳ್ಳರ ಬಂಧನ; 79 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತುಗಳ ಜಪ್ತಿ

ಇದನ್ನೂ ಓದಿ: ಚಲಿಸುವ ಬೈಕ್ ಮೇಲೆ ರೊಮಾನ್ಸ್: ಪ್ರಕರಣ ದಾಖಲಿಸಿ ಯುವಕ, ಬೈಕ್ ವಶಕ್ಕೆ ಪಡೆದ ಚಾಮರಾಜನಗರ ಪೊಲೀಸರು

Published On - 8:08 am, Sat, 23 April 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ