AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು

[lazy-load-videos-and-sticky-control id=”OOvv86kktkU”] ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ. ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ […]

ಕ್ಯಾಸಿನೊ ಕಿಂಗ್ ಶೇಖ್ ಫಾಝಿಲ್ ಬಂಧನಕ್ಕೆ CCB ಕ್ಷಣಗಣನೆ ಶುರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 15, 2020 | 2:15 PM

Share

[lazy-load-videos-and-sticky-control id=”OOvv86kktkU”]

ಬೆಂಗಳೂರು: ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ ಮಂದಿಯನ್ನು ಜಾಲಾಡುತ್ತಿದ್ದಾರೆ. ಅದರಲ್ಲಿ ಚಾಮರಾಜಪೇಟೆಯವನೇ ಆದ ಪ್ರಸ್ತುತ ಶ್ರೀಲಂಕಾದಲ್ಲಿ ಕ್ಯಾಸಿನೋ ಕೇಂದ್ರದ ಮಾಲೀಕನಾಗಿರುವ ಶೇಕ್ ಫಾಝಿಲ್​ಗಾಗಿ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದಾರೆ. ಪ್ರಮುಖವಾಗಿ ನಟಿ ಸಂಜನಾ ಗಲ್ರಾನಿ ಮತ್ತು ಕೆಲ ರಾಜಕಾರಣಿಗಳ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾನೆ ಎಂಬುದು ಪೊಲೀಸರ ತನಿಖಾ ವಿಷಯವಾಗಿದೆ.

ಆದ್ರೆ ಹಲವು ದಿನಗಳಿಂದ ನಾಪತ್ತೆಯಾಗಿರುವ ಈ ಶೇಕ್ ಫಾಝಿಲ್ ನಾಪತ್ತೆಯಾಗಿದ್ದಾನೆ. ಶೇಕ್ ಸಿಕ್ಕರೆ ಸಂಜನಾಳ ಬಗ್ಗೆ ಸಿಸಿಬಿಗೆ ಇನ್ನಷ್ಟು ಮಾಹಿತಿ ಬಯಲಾಗುವ ಅಂದಾಜಿದೆ. ಶೇಖ್ ಫಾಝಿಲ್ ಸೆರೆ ಸಿಕ್ಕರೆ, ನಟಿ ಸಂಜನಾ ಮಾತ್ರವಲ್ಲದೆ ಶಾಸಕ ಜಮೀರ್ ಜಾತಕವನ್ನೂ ಹೊರಹಾಕಬಹುದು ಎಂಬುದು ಸಿಸಿಬಿ ಲೆಕ್ಕಾಚಾರವಾಗಿದೆ.

ಜಮೀರ್ ಪರವಾಗಿ ಶೇಖ್ ಫಾಝಿಲ್ ಹಣ ಹೂಡಿಕೆ ಮಾಡಿರುವ ಅನುಮಾನ ಸಿಸಿಬಿಗೆ ದಟ್ಟವಾಗಿದೆ. ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಜಮೀರ್ ಪರವಾಗಿ ಫಾಝಿಲ್ ಹಣ ಹೂಡಿಕೆ ಮಾಡಿರಬಹುದು ಎಂಬುದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಶೇಖ್ ಫಾಝಿಲ್​ನನ್ನ ಸರೆಂಡರ್ ಮಾಡಿಸುವುದಾಗಿ ಅವನ ಕುಟುಂಬದವರು ಭರವಸೆ ನೀಡಿದ್ದಾರೆ. ಆದ್ರೆ ಸರೆಂಡರ್ ಬಗ್ಗೆ ಒಪ್ಪದೆ ಶೇಖ್ ಬಂಧನಕ್ಕೆ ಸಿಸಿಬಿ ಪ್ಲ್ಯಾನ್ ಹಾಕಿದೆ. ಹಾಗಾಗಿ ಸಿಸಿಬಿಯಿಂದ ಶೇಖ್ ಫಾಝಿಲ್ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Published On - 9:07 am, Tue, 15 September 20

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ