AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡ್ನಾಪ್​ ಎಡವಟ್ಟು: ಉದ್ಯಮಿ ಬದಲು ಕೆಲಸಗಾರರನ್ನು ಅಪಹರಿಸಿದ ಕಿಡ್ನಾಪರ್ಸ್ ಅಂದರ್

ಬೆಂಗಳೂರು: ಅಡ್ಡದಾರಿಯಲ್ಲಿ ದುಡ್ಡು ಮಾಡಿ ರಾತ್ರೋರಾತ್ರಿ ಶ್ರೀಮಂತರಾಗಲು ಹೊರಟ ಮೂವರು ಮಹಾಶಯರು ಮಾಡಿಕೊಂಡ ಕಿಡ್ನಾಪ್ ಎಡವಟ್ಟೊಂದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀಮಂತನೊಬ್ಬನನ್ನು ಅಪಹರಿಸಿ ಆತನ ಕುಟುಂಬದಿಂದ ಹಣ ಪಡೆದು ನಂತರ ಸುಲಭವಾಗಿ ಪರಾರಿಯಾಗಲು ಪ್ಲಾನ್​ ಹಾಕಿದ್ದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್ ಎಂಬ ಮೂವರು ಆರೋಪಿಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೂವರು ಕಿಡ್ನಾಪ್​ ಮಹಾಶಯರ ಎಡವಟ್ಟು ಸಿಲಿಕಾನ್​ ಸಿಟಿಯ ಶ್ರೀಮಂತರೊಬ್ಬರನ್ನು ಕಿಡ್ನಾಪ್​ ಮಾಡಿದರೆ ಸುಲಭವಾಗಿ ಹಣ ಮಾಡಬಹುದು ಎಂದು ನಿರ್ಧರಿಸಿದ ಇಮ್ರಾನ್, […]

ಕಿಡ್ನಾಪ್​ ಎಡವಟ್ಟು: ಉದ್ಯಮಿ ಬದಲು ಕೆಲಸಗಾರರನ್ನು ಅಪಹರಿಸಿದ ಕಿಡ್ನಾಪರ್ಸ್ ಅಂದರ್
ಆಯೇಷಾ ಬಾನು
|

Updated on:Jun 11, 2020 | 4:20 PM

Share

ಬೆಂಗಳೂರು: ಅಡ್ಡದಾರಿಯಲ್ಲಿ ದುಡ್ಡು ಮಾಡಿ ರಾತ್ರೋರಾತ್ರಿ ಶ್ರೀಮಂತರಾಗಲು ಹೊರಟ ಮೂವರು ಮಹಾಶಯರು ಮಾಡಿಕೊಂಡ ಕಿಡ್ನಾಪ್ ಎಡವಟ್ಟೊಂದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀಮಂತನೊಬ್ಬನನ್ನು ಅಪಹರಿಸಿ ಆತನ ಕುಟುಂಬದಿಂದ ಹಣ ಪಡೆದು ನಂತರ ಸುಲಭವಾಗಿ ಪರಾರಿಯಾಗಲು ಪ್ಲಾನ್​ ಹಾಕಿದ್ದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್ ಎಂಬ ಮೂವರು ಆರೋಪಿಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೂವರು ಕಿಡ್ನಾಪ್​ ಮಹಾಶಯರ ಎಡವಟ್ಟು ಸಿಲಿಕಾನ್​ ಸಿಟಿಯ ಶ್ರೀಮಂತರೊಬ್ಬರನ್ನು ಕಿಡ್ನಾಪ್​ ಮಾಡಿದರೆ ಸುಲಭವಾಗಿ ಹಣ ಮಾಡಬಹುದು ಎಂದು ನಿರ್ಧರಿಸಿದ ಇಮ್ರಾನ್, ಮುಬಾರಕ್ ಮತ್ತು ಸಾದಿಕ್​ರ ಕಣ್ಣಿಗೆ ಬಿದ್ದಿದ್ದು ಗೌಥಮ್​ ಎಂಬ ಉದ್ಯಮಿ. ಅದರಂತೆಯೇ ಗೌಥಮ್​ ಚಲನವಲನವನ್ನು ಗಮನಿಸಿದ್ದಾರೆ. ಗೌಥಮ್​ ಬಗ್ಗೆ ತಿಳಿಯಲು ಗಾರ್ಮೆಂಟ್ಸ್​ ಫ್ಯಾಕ್ಟರಿಯ ಮಾಲೀಕರೊಬ್ಬರ ಫ್ರೆಂಡ್​ ಎಂದು ಸುಳ್ಳು ಹೇಳಿ ಫ್ಯಾಕ್ಟರಿಯ ಕೆಲವು ನೌಕರರನ್ನು ವಿಚಾರಿಸಿದರೆ ಇನ್ನಷ್ಟು ಮಾಹಿತಿ ಕಲೆಹಾಕಬಹುದು ಅಂತಾ ಕೊನೆಗೆ ನೌಕರರನ್ನೇ ಮೊದಲು ಅಪಹರಿಸುವ ಸ್ಕಚ್ ಹಾಕಿದರು.

ಯೋಚಿಸಿದ್ದೇ ಒಂದು, ಆಗಿದ್ದೇ ಬೇರೆ! ಜೂನ್​ 9ರಂದು ನಕಲಿ ಪೊಲೀಸರ ಸೋಗಿನಲ್ಲಿ ತೆರಳಿದ ಮೂವರು ಆರೋಪಿಗಳು ಮೊದಲಿಗೆ ಜಹೀರ್​ವುಲ್ಲಾ ಹಸೇನ್ ಎಂಬ ಫ್ಯಾಕ್ಟರಿಯ ನೌಕರನನ್ನು ಹೊಂಗಸಂದ್ರದ ಬಳಿ ಅಡ್ಡಗಟ್ಟಿ ನಿಮ್ಮ ಮಾಲೀಕರ ಗೆಳೆಯರಾದ ಗೌಥಮ್​ ಎಲ್ಲಿದ್ದಾರೆ ತೋರಿಸು ಅಂತಾ ಕರೆದುಕೊಂಡು ಹೋದರು. ಇದೇ ವೇಳೆ ಮಾರ್ಗ ಮಧ್ಯೆ ಮೊಹಬೂಬ್ ಹಾಗೂ ಕಾಬೂಲ್ ಎಂಬ ಇನ್ನಿಬ್ಬರು ನೌಕರರನ್ನು ಸಹ ಕಿಡ್ನಾಪ್ ಮಾಡಿದರು. ಬಳಿಕ ಮೂವರು ನೌಕರನ್ನು ಬಿಟಿಎಂ ಲೇಔಟ್ ಬಳಿ ಇರುವ ಎಂ.ಎಸ್​ ಪಾಳ್ಯದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಟ್ಟಿದ್ದರು.

ನಂತರ ಮೂವರು ಕಿಡ್ನಾಪರ್ಸ್​ಗಳಿಗೆ ಅದೇನಾಯ್ತೋ ಏನೋ. ಪಾಲಿಗೆ ಬಂದಿದ್ದು ಪಂಚಾಮೃತ ಅಂತಾ ಈ ಮೂವರು ನೌಕರರಿಂದಲೇ ಹಣ ವಸೂಲಿ ಮಾಡೋಣ ಅಂತಾ ಡಿಸೈಡ್​ ಮಾಡಿ ಅವರ ಮನೆಗಳಿಗೆ ಕರೆಮಾಡಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟರು. ಇದರಿಂದ ಗಾಬರಿಗೊಂಡ ನೌಕರರ ಕುಟುಂಬಸ್ಥರು ಪೊಲೀಸರ ಮೊರೆ ಹೋದರು. ಕೂಡಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಬೊಮ್ಮನಹಳ್ಳಿ ಹಾಗೂ ಮೈಕೋ ಲೇಔಟ್ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದಾರೆ.

ಆದರೆ ಇಂಥ ಎಡವಟ್ಟು ಪ್ಲಾನ್​ ಮಾಡಿದ್ದವರನ್ನು ಹಿಡಿಯೋದು ಅಷ್ಟು ಸುಲಭವಿರಲಿಲ್ಲ. ಯಾಕಂದ್ರೆ ಸಿನಿಮಾ ಸ್ಟೈಲ್​ನಲ್ಲಿ ಮೂವರು ಆರೋಪಿಗಳು ಸ್ಥಳ ಬದಲಿಸುತ್ತಿದ್ದರು. ಅಲ್ಲಿ ಬನ್ನಿ, ಇಲ್ಲಿ ಬನ್ನಿ ಅಂತಾ ಕುಟುಂಬಸ್ಥರಿಗೆ ತಿಳಿಸಿ ನಂತರ ಸ್ಥಳದಲ್ಲಿ ಅವರನ್ನು ದೂರದಿಂದ ಗಮನಿಸುತ್ತಿದ್ದರು.

ಹೀಗೆ 2-3 ಬಾರಿ ಮಾಡಿದ ಕಿಡ್ನಾಪರ್ಸ್ ಅಂತಿಮವಾಗಿ ರಾಜಾಜಿನಗರದ ರಾಮಮಂದಿರ ಬಳಿ ಬರಲು ಸೂಚಿಸಿದರು. ಕುಟುಂಬಸ್ಥರ ವೇಷದಲ್ಲಿ ಹಣ ತೆಗೆದುಕೊಂಡು ಬಂದ ವೇಳೆ ಸ್ಥಳಕ್ಕೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಮ್ರಾನ್​ನನ್ನು ಮಫ್ತಿಯಲ್ಲಿ ಪೊಲೀಸರು ಗಮನಿಸಿದರು. ಕೂಡಲೇ ಅವನನ್ನು ಹಿಡಿದು ವಿಚಾರಿಸಿದಾಗ ಇನ್ನಿಬ್ಬರು ಕಿಡ್ನಾಪರ್ಸ್​ ಮತ್ತು ಗಾರ್ಮೆಂಟ್ಸ್​ ನೌಕರರನ್ನ ಅವಿತಿಟ್ಟಿದ್ದ ಸ್ಥಳ ಪತ್ತೆಯಾಯ್ತು. ಆಶ್ಚರ್ಯವೆಂದರೆ ಪ್ರಕರಣ ದಾಖಲಾದ ಕೇವಲ 7 ಗಂಟೆಗಳೊಳಗೆ ಪೊಲೀಸರು ಈ ಎಡವಟ್ಟು ಕಿಡ್ನಾಪರ್ಸ್​ಗಳನ್ನು ಬಂಧಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಕಿಡ್ನಾಪ್​ ಮಾಡಲು ಮುಂದಾದ ಮೂವರ ಸ್ಕೆಚ್​ ಕೊನೆಗೂ ಫ್ಲಾಪ್​ ಆಗಿ ಈಗ ಕಂಬಿ ಎಣಿಸುವ ಸ್ಥಿತಿ ಎದುರಾಗಿದೆ.

Published On - 3:48 pm, Thu, 11 June 20

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು