ಮರುಭೂಮಿ ಹಲ್ಲಿಗಳನ್ನ ಮಾರಾಟ ಮಾಡಲು‌ ಯತ್ನ, ಆರೋಪಿಗಳು ಪೊಲೀಸರ ಬಲೆಗೆ

ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು‌ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್‌, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು. ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು: ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ‌ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ […]

ಮರುಭೂಮಿ ಹಲ್ಲಿಗಳನ್ನ ಮಾರಾಟ ಮಾಡಲು‌ ಯತ್ನ, ಆರೋಪಿಗಳು ಪೊಲೀಸರ ಬಲೆಗೆ
ಸಾಧು ಶ್ರೀನಾಥ್​

Updated on: Dec 12, 2019 | 4:02 PM

ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು‌ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್‌, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು.

ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು:
ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ‌ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ ನೀಡಿದ್ದ ಮತ್ತೋರ್ವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Published On - 3:49 pm, Thu, 12 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us