AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆ ಮಸಣ ಸೇರಿದಳು

ಚಿತ್ರದುರ್ಗ: ಅವ್ನು ಸಿನಿಮಾ ಸ್ಟೈಲ್​ನಲ್ಲಿ ಬಂದು ಮದ್ವೆ ಮಾತುಕತೆಗೆ ಅಡ್ಡ ಹಾಕಿದ್ದ. ಅವಳು ಅಪ್ಪಟ ಪ್ರೇಮದಾಸಿಯಾಗಿ ಪೋಷಕರನ್ನ ಒಪ್ಪಿಸಿ ಇನಿಯನ ಜೊತೆ ಮದ್ವೆಗೆ ಸಜ್ಜಾಗಿದ್ಲು. ಆದ್ರೆ ಕೊನೇ ಗಳಿಗೆಯಲ್ಲಿ ಪ್ರಿಯತಮ ಅದೇನ್ ಹೇಳಿದ್ನೋ ಗೊತ್ತಿಲ್ಲ. ಪರಿಣಾಮ ಆಗಿದ್ದು ಮಾತ್ರ ಪ್ರೀತಿಯ ಸಾವು. ಹೀಗೆ ಪ್ರೀತಿಯ ಗುಂಗಲ್ಲಿ ಗುನುಗ್ತಿದ್ಲು.. ಖುಷಿಯ ಅಲೆಯಲ್ಲಿ ತೇಲ್ತಿದ್ಲು.. ರೆಕ್ಕೆ ಬಂದ ಪಕ್ಷಿಯಂತೆ ಹಾರಾಡ್ತಿದ್ಲು.. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡು ನಾಚಿ ನೀರಾಗ್ತಿದ್ಲು.. ನಿನ್ನ ಒಲವು ಇನ್ನೂ ಬೇಕಾಗಿದೆ ಅಂತಾ ಚಡಪಡಿಸ್ತಿದ್ಲು. ಇದೇ […]

ಪ್ರಿಯತಮ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆ ಮಸಣ ಸೇರಿದಳು
Follow us
ಸಾಧು ಶ್ರೀನಾಥ್​
|

Updated on:Dec 23, 2019 | 1:20 PM

ಚಿತ್ರದುರ್ಗ: ಅವ್ನು ಸಿನಿಮಾ ಸ್ಟೈಲ್​ನಲ್ಲಿ ಬಂದು ಮದ್ವೆ ಮಾತುಕತೆಗೆ ಅಡ್ಡ ಹಾಕಿದ್ದ. ಅವಳು ಅಪ್ಪಟ ಪ್ರೇಮದಾಸಿಯಾಗಿ ಪೋಷಕರನ್ನ ಒಪ್ಪಿಸಿ ಇನಿಯನ ಜೊತೆ ಮದ್ವೆಗೆ ಸಜ್ಜಾಗಿದ್ಲು. ಆದ್ರೆ ಕೊನೇ ಗಳಿಗೆಯಲ್ಲಿ ಪ್ರಿಯತಮ ಅದೇನ್ ಹೇಳಿದ್ನೋ ಗೊತ್ತಿಲ್ಲ. ಪರಿಣಾಮ ಆಗಿದ್ದು ಮಾತ್ರ ಪ್ರೀತಿಯ ಸಾವು.

ಹೀಗೆ ಪ್ರೀತಿಯ ಗುಂಗಲ್ಲಿ ಗುನುಗ್ತಿದ್ಲು.. ಖುಷಿಯ ಅಲೆಯಲ್ಲಿ ತೇಲ್ತಿದ್ಲು.. ರೆಕ್ಕೆ ಬಂದ ಪಕ್ಷಿಯಂತೆ ಹಾರಾಡ್ತಿದ್ಲು.. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡು ನಾಚಿ ನೀರಾಗ್ತಿದ್ಲು.. ನಿನ್ನ ಒಲವು ಇನ್ನೂ ಬೇಕಾಗಿದೆ ಅಂತಾ ಚಡಪಡಿಸ್ತಿದ್ಲು. ಇದೇ ಥರ ಸಂತಸದಲ್ಲಿದ್ದ ರಾಜೇಶ್ವರಿ ಅನ್ನೋ ಹುಡ್ಗಿಗೆ ಪೋಷಕರು ಒಂದ್ ಶಾಕಿಂಗ್ ನ್ಯೂಸ್ ಕೊಟ್ಟಿದ್ರು. ಏಕಾಏಕಿ ರಾಜೇಶ್ವರಿಯನ್ನ ನೋಡೋಕೆ ಗಂಡಿನ ಕಡೆಯವ್ರು ಬಂದ್ಬಿಟ್ಟಿದ್ರು. ಆಗ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆರೆಯಾಗಲಹಳ್ಳಿಯ ರಾಜೇಶ್ವರಿ ಮನೆಗೆ ಹೀರೋ ರೇಂಜ್​ಗೆ ಒಬ್ನು ಎಂಟ್ರಿ ಕೊಟ್ಟಿದ್ದ. ಆತ ಬೇರೆ ಯಾರೂ ಅಲ್ಲ ರಾಜೇಶ್ವರಿಯ ಲವ್ ಬಾಯ್ ತಿಪ್ಪೇಸ್ವಾಮಿ.

ಫಿಲ್ಮ್ ಸ್ಟೈಲ್​ನಲ್ಲಿ ಬಂದ ತಿಪ್ಪೇಸ್ವಾಮಿ ನಾನು ರಾಜೇಶ್ವರಿಯನ್ನ ಮದ್ವೆ ಆಗ್ತೀನಿ ಅಂದ. ಕೆಲ ದಿನಗಳು ಬಿಟ್ಟು ಮದ್ವೆ ಮಾತುಕತೆಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ. ಆಗ 5 ಲಕ್ಷ ವರದಕ್ಷಿಣೆ, 3 ತೊಲೆ ಚಿನ್ನ ಹಾಗೂ ಛತ್ರದಲ್ಲಿ ಮದ್ವೆ ಮಾಡಿಕೊಡಿ ಅಂತಾ ಡಿಮ್ಯಾಂಡ್ ಮಾಡಿದ್ನಂತೆ. ಅಷ್ಟು ಕೊಡೋಕೆ ಆಗಲ್ಲ ಅಂದಾಗ ಎದ್ದು ಹೋದ್ರಂತೆ. ಬಳಿಕ ರಾಜೇಶ್ವರಿಗೆ ಫೋನ್ ಮಾಡಿದ ತಿಪ್ಪೇಸ್ವಾಮಿ, ನನ್ನ ಅಪ್ಪನ ಅಮ್ಮನ ಮಾತು ಮೀರಿ ನಿನ್ನ ಮದ್ವೆ ಆಗೋಕೆ ಆಗಲ್ಲ ಅಂದ್ನಂತೆ. ಇದ್ರಿಂದ ನೊಂದ ರಾಜೇಶ್ವರಿ ನೇಣಿಗೆ ಕೊರಳೊಡ್ಡಿದ್ಲು. ಆದ್ರೆ ಮಗ್ಳು ತೀರಿಕೊಂಡ 15 ದಿನಗಳ ಬಳಿಕ ಇದೀಗ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇನ್ನು ಸಾವಿಗೂ ಮುನ್ನ ರಾಜೇಶ್ವರಿ ಡೆತ್​ನೋಟ್ ಬರೆದಿಟ್ಟಿದ್ದಾಳೆ. ನನ್ನ ಸಾವಿಗೆ ನನ್ನ ಗಂಡನೇ ಕಾರಣ, ಅವ್ನು ಮೋಸ ಮಾಡ್ತಾನೆ ಅನ್ಕೊಂಡಿರಲಿಲ್ಲ. ನಾನು ಅವನನ್ನ ಕ್ಷಮಿಸಲ್ಲ ಅಂದಿದ್ದಾಳೆ. ಈ ಬಗ್ಗೆ ಹೊಳಲ್ಕೆರೆ ಠಾಣೆಯಲ್ಲಿ ಕೇಸ್ ದಾಖಲಾಗಿ ಎರಡು ವಾರಗಳೇ ಆದ್ರೂ ತಿಪ್ಪೇಸ್ವಾಮಿ ಕುಟುಂಬಸ್ಥರನ್ನ ಬಂಧಿಸಿಲ್ಲ.

ಇಷ್ಟು ದಿನ ಸೈಲೆಂಟ್ ಇದ್ದ ರಾಜೇಶ್ವರಿ ಕುಟುಂಬಸ್ಥರು ಈಗ ಎಸ್​ಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ನಮ್ಗೆ ನ್ಯಾಯ ಬೇಕು ಅಂದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್​ಪಿ, ತಿಪ್ಪೇಸ್ವಾಮಿ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಸಿಕ್ಕ ಮೇಲೆ ಅವ್ರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತೀವಿ ಅಂತಿದ್ದಾರೆ. ಒಟ್ನಲ್ಲಿ ದುಡ್ಡಿನ ಮೇಲೆ ಆಸೆಗೋ, ಪೋಷಕರು ಏನಾದ್ರೂ ಹೇಳಿದ್ರೋ ಗೊತ್ತಿಲ್ಲ. ಆದ್ರೆ ತಿಪ್ಪೇಸ್ವಾಮಿ ಕೈಕೊಟ್ಟಿದ್ದಕ್ಕೆ ರಾಜೇಶ್ವರಿ ಸಾವಿನ ಕದ ತಟ್ಟಿದ್ದು ಮಾತ್ರ ದುರಂತ.

Published On - 8:10 am, Fri, 20 December 19

ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ