32 ಲಕ್ಷ ಮೌಲ್ಯದ ಚಿನ್ನ ಮೈಗೆ ಮೆತ್ತಿಕೊಂಡು ದುಬೈನಿಂದ ಹಾರಿ ಬಂದ ಭೂಪ.. ಕೊನೆಗೆ ಏನಾದ?

ಮಂಗಳೂರು:ಇಲ್ಲೊಬ್ಬ ಭೂಪ ಲಕ್ಷಾಂತರ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ನೀಡಿದ್ದಾನೆ. ಏನಿಲ್ಲಾ ಸಿಂಪಲ್ಲಾಗಿ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಿದ್ದಾನೆ. ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ಧರಿಸಿದ ಭೂಪ! ಆದ್ರೆ ಹೀಗೆ ಚಿನ್ನದ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಅನುಮಾನ ಬಾರದಂತೆ ದೇಹಕ್ಕೇ ಚಿನ್ನವನ್ನು ಲೇಪಿಸಿಕೊಂಡು […]

32 ಲಕ್ಷ ಮೌಲ್ಯದ ಚಿನ್ನ ಮೈಗೆ ಮೆತ್ತಿಕೊಂಡು ದುಬೈನಿಂದ ಹಾರಿ ಬಂದ ಭೂಪ.. ಕೊನೆಗೆ ಏನಾದ?
ಸಾಧು ಶ್ರೀನಾಥ್​

Updated on: Oct 29, 2020 | 10:38 AM

ಮಂಗಳೂರು:ಇಲ್ಲೊಬ್ಬ ಭೂಪ ಲಕ್ಷಾಂತರ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ನೀಡಿದ್ದಾನೆ. ಏನಿಲ್ಲಾ ಸಿಂಪಲ್ಲಾಗಿ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಿದ್ದಾನೆ.

ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ಧರಿಸಿದ ಭೂಪ!
ಆದ್ರೆ ಹೀಗೆ ಚಿನ್ನದ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಅನುಮಾನ ಬಾರದಂತೆ ದೇಹಕ್ಕೇ ಚಿನ್ನವನ್ನು ಲೇಪಿಸಿಕೊಂಡು ಬಂದಿದ್ದ. ಹೀಗೆ ಬಂದಿದ್ದ ಆರೋಪಿಯ ದೇಹದಿಂದ 24 ಕ್ಯಾರೆಟ್ ನ 614 ಗ್ರಾಂ ತೂಕದಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 32,96,300 ರೂಪಾಯಿಯಷ್ಟಿದೆ ಎಂದು ಅಂದಾಜಿಸಲಾಗಿದೆ.

Published On - 10:36 am, Thu, 29 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us