ಮಾರಕಾಸ್ತ್ರಗಳಿಂದ ಕೊಚ್ಚಿ ಜಿಮ್​ ಟ್ರೈನರ್​ ಬರ್ಬರ ಹತ್ಯೆ

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಜಿಮ್​ ಟ್ರೈನರ್​ ಒಬ್ಬರನ್ನು ಆನೇಕಲ್ ತಾಲೂಕಿನ ಬನ್ನೇರುಘಟ್ಟದ ರಾಮಸಂದ್ರದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.  ಮೃತಪಟ್ಟವರನ್ನು ಕಿರಣ್ ಎಂದು ಗುರುತಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಕೊಲೆಗೈದಿರುವ ಶಂಕೆ ಜಿಮ್​ನಲ್ಲಿ ಟ್ರೈನರ್ ಆಗಿ‌ ಕೆಲಸ‌ ಮಾಡುತ್ತಿದ್ದ ಕಿರಣ್​ನ ಬನ್ನೇರುಘಟ್ಟ ಬಳಿಯ ಕಲ್ಕೆರೆ ನಿವಾಸಿ. ಕೆಲವು ಪರಿಚಯಸ್ಥರು ಇಂದು ಮಧ್ಯಾಹ್ನ ನಿನ್ನೊಟ್ಟಿಗೆ ಮಾತಾಡಬೇಕು ಎಂದು ಕರೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ […]

ಮಾರಕಾಸ್ತ್ರಗಳಿಂದ ಕೊಚ್ಚಿ ಜಿಮ್​ ಟ್ರೈನರ್​ ಬರ್ಬರ ಹತ್ಯೆ
Edited By:

Updated on: Jun 18, 2020 | 6:50 PM

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಜಿಮ್​ ಟ್ರೈನರ್​ ಒಬ್ಬರನ್ನು ಆನೇಕಲ್ ತಾಲೂಕಿನ ಬನ್ನೇರುಘಟ್ಟದ ರಾಮಸಂದ್ರದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.  ಮೃತಪಟ್ಟವರನ್ನು ಕಿರಣ್ ಎಂದು ಗುರುತಿಸಲಾಗಿದೆ.

ಹಳೆ ದ್ವೇಷದ ಹಿನ್ನೆಲೆ ಕೊಲೆಗೈದಿರುವ ಶಂಕೆ
ಜಿಮ್​ನಲ್ಲಿ ಟ್ರೈನರ್ ಆಗಿ‌ ಕೆಲಸ‌ ಮಾಡುತ್ತಿದ್ದ ಕಿರಣ್​ನ ಬನ್ನೇರುಘಟ್ಟ ಬಳಿಯ ಕಲ್ಕೆರೆ ನಿವಾಸಿ. ಕೆಲವು ಪರಿಚಯಸ್ಥರು ಇಂದು ಮಧ್ಯಾಹ್ನ ನಿನ್ನೊಟ್ಟಿಗೆ ಮಾತಾಡಬೇಕು ಎಂದು ಕರೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Follow Us