AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Racket ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ: ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ವಂಚನೆ

ರಾಜ್ಯ ರಾಜಧಾನಿಯಲ್ಲಿ ಕೆಲವು ದಶಕಗಳ ಹಿಂದೆ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಗೆ ಕಾಲಕ್ರಮೇಣ ಬ್ರೇಕ್​ ಬಿದ್ದಿತ್ತು. ಆದರೆ, ಇದೀಗ ಸಿಲಿಕಾನ್​ ಸಿಟಿಯಲ್ಲಿ ಈ ಕರಾಳ ದಂಧೆ ಮತ್ತು ಅದರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Kidney Racket ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ: ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ವಂಚನೆ
ಸಾಂದರ್ಭಿಕ ಚಿತ್ರ
KUSHAL V
|

Updated on: Dec 17, 2020 | 4:35 PM

Share

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಶಕಗಳ ಹಿಂದೆ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಗೆ Kidney Racket ಕಾಲಕ್ರಮೇಣ ಬ್ರೇಕ್​ ಬಿದ್ದಿತ್ತು. ಆದರೆ, ಇದೀಗ ಸಿಲಿಕಾನ್​ ಸಿಟಿಯಲ್ಲಿ ಈ ಕರಾಳ ದಂಧೆ ಮತ್ತು ಅದರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಿಡ್ನಿ ಕೊಟ್ಟವರಿಗೆ 2 ಕೋಟಿ ಹಣ ಕೊಡುತ್ತೇವೆಂದು ನಂಬಿಸಿ ವಂಚನೆ ಮಾಡಿರುವ ಪ್ರಕರಣ ಇದೀಗ ನಡೆದಿದೆ. ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ಅಮಾಯಕರಿಗೆ ಕರೆ ಮಾಡುತ್ತಿದ್ದ ನಯವಂಚಕರು ಕಿಡ್ನಿ ಕೊಡಿಸ್ತೇವೆಂದು ರೋಗಿ ಸಂಬಂಧಿಕರಿಂದ ಮುಂಗಡ ಹಣ ಪಡೆಯುತ್ತಿದ್ದರು. ಇತ್ತ, ಕಿಡ್ನಿ ದಾನಿಗಳಿಗೆ 2 ಕೋಟಿ ಕೊಡುತ್ತೇವೆಂದು ನಂಬಿಸಿ ಕಿಡ್ನಿ ರೋಗಿ​ಗಳ ಜೊತೆ ಮಾತನಾಡಿಸುತ್ತಿದ್ದರು. ರೋಗಿಯ ಸಂಬಂಧಿಕರಿಗೆ ನಂಬಿಕೆ ಬಂದ ಮೇಲೆ ಅವರಿಂದ ಮುಂಗಡ ಹಣ ಪಡೆದ ಆಸಾಮಿಗಳು ಎಸ್ಕೇಪ್​!

ಅಂದ ಹಾಗೆ, ಈ ಕಿಡ್ನಿ ಕಿರಾತಕರು ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ಹಲವರಿಗೆ ವಂಚನೆ ಮಾಡಿದ್ದರು ಎಂದು ಹೇಳಲಾಗಿದೆ. ನಾನು ಹಾಸ್​ಮ್ಯಾಟ್​ ಆಸ್ಪತ್ರೆ ವೈದ್ಯನೆಂದು ಹೇಳಿ ವಂಚಿಸಿದ್ದನು ಎಂದು ತಿಳಿದುಬಂದಿದೆ. ಸದ್ಯ, ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ನಡುವೆ, ನಮ್ಮ​ ಆಸ್ಪತ್ರೆಯಲ್ಲಿ ಯಾರಿಂದಲೂ ಕಿಡ್ನಿ ಪಡೆಯುತ್ತಿಲ್ಲ. ಸಾರ್ವಜನಿಕರು ಮೋಸ ಹೋಗಬೇಡಿ. ನಮ್ಮ ಆಸ್ಪತ್ರೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಕಿಡ್ನಿ ಹೆಸರಲ್ಲಿ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ಸೂಚಿಸಿದೆ.

ಹಾಸ್​ಮ್ಯಾಟ್ ಆಸ್ಪತ್ರೆ ಹೆಸರಲ್ಲಿ ಯಾರಾದರೂ ಕರೆ ಮಾಡಿದ್ರೆ. ಆಸ್ಪತ್ರೆ ಆಡಳಿತ ಮಂಡಳಿ ಅಥವಾ ಪೊಲೀಸರಿಗೆ ದೂರು ನೀಡಿ. ಕಿಡ್ನಿ ಜಾಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಆಸ್ಪತ್ರೆಯ ಎಂಡಿ ಡಾ.ಅಜಿತ್ ಬೆನೆಡಿಕ್ಟ್​ ರಾಯನ್​ ಮನವಿ ಮಾಡಿದ್ದಾರೆ.

ಲಾರಿ ಡಿಕ್ಕಿ ಹೊಡೆದು.. ಪಾದಚಾರಿ ಸ್ಥಳದಲ್ಲೇ ದುರ್ಮರಣ, ಯಾವೂರಲ್ಲಿ?

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ