AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು

ಆಂಧ್ರ ಪ್ರದೇಶದ ಚಿಂತಲಪಲ್ಲಿಯ ಅರಣ್ಯ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಯಾಗುತ್ತಿದ್ದು ಅಲ್ಲಿಂದ ವಿವಿಧ ಮಾದಕ ಪದಾರ್ಥಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು.

ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು
ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು
TV9 Web
| Updated By: ಸಾಧು ಶ್ರೀನಾಥ್​|

Updated on: Sep 29, 2022 | 7:02 PM

Share

ಬೆಂಗಳೂರು: ಬೆಂಗಳೂರಿಗೆ ಮಾದಕ ಸರಬರಾಜು ಆಗುವುದು ಇದು ಮೊದಲೇನಲ್ಲ. ಕಾಲೇಜು ಯುವಕರು, ಐಟಿ-ಬಿಟಿ ಉದ್ಯೋಗಿಗಳನ್ನ ಹೆಚ್ಚು ಹೆಚ್ಚು ತುಂಬಿಸಿಕೊಂಡು ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರವು ಮಾದಕ ದಂಧೆಕೋರರಿಗೆ ಹಾಟ್ ಸ್ಪಾಟ್ ಆಗಿಬಿಟ್ಟಿದೆ. ಪ್ರತಿನಿತ್ಯ ಮಾದಕ ಪದಾರ್ಥಗಳನ್ನ ಪೊಲೀಸರು ಜಪ್ತಿ ಮಾಡುತ್ತಲೇ ಇದ್ದರೂ ಸಹ ಅದು 10 % ಮಾತ್ರವೇ ಆಗಿದೆ. ಇನ್ನುಳಿದ 90 ಪ್ರತಿಶತ ಒಂದಿಲ್ಲೊಂದು ರೀತಿ ದಂಧೆಕೋರರ ಮೂಲಕ ವ್ಯಸನಿಗಳ ಕೈ ಸೇರುತ್ತಲೇ ಇದೆ.

ಈ ಬಾರಿ ಅದೇ ರೀತಿ ನಾಲ್ವರು ಮಾದಕ ದಂಧೆಕೋರರನ್ನ ( Drugs supply) ಪೊಲೀಸರು ಬಂಧಿಸಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಬಂಧಿತ ನಾಲ್ವರೂ ಸಹ ಮಹಿಳೆಯರು. ಅದರಲ್ಲಿಯೂ ನಮ್ಮ ನೆರೆಯ ರಾಜ್ಯದ ಅರಣ್ಯ ಪ್ರದೇಶದಿಂದ ಮಾದಕ ಪದಾರ್ಥಗಳಗಳನ್ನ ನೇರವಾಗಿ ದಂಧೆಕೋರರಿಗೆ ತಲುಪಿಸುತ್ತಿದ್ದವರು ಇವರು. ಆಂಧ್ರ ಪ್ರದೇಶದಿಂದ ಸರಬರಾಜಾಗುತ್ತಿದ್ದ ಮಾದಕದ ಮೂಲ ಬೆನ್ನತ್ತಿ ಹೊರಟ ಸಿಸಿಬಿ ಮಾದಕ ನಿಗ್ರಹ ದಳ ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯನ್ನು ಬಂಧಿಸಿದೆ. ಪುಷ್ಪಾ, ವಿಜಯಾ, ಪೊರನಮ್ಮ ಹಾಗೂ ದೇವಿ ಬಂಧಿತ ಆರೋಪಿಗಳು.

ಜೂನ್‌ನಲ್ಲಿ ವಿವೇಕ ನಗರ ಠಾಣಾ ಪೊಲೀಸರು ಮಾದಕ ವಸ್ತು ಸರಬರಾಜಿನಲ್ಲಿ ಸಕ್ರಿಯನಾಗಿದ್ದ ವಿದೇಶಿ ಮೂಲದ ಡಿಜೆ ಒಬ್ಬನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆರೋಪಿಗೆ ಮಾದಕ ಪದಾರ್ಥಗಳ ಪೂರೈಕೆ ಆಂಧ್ರ ಪ್ರದೇಶದಿಂದ ಆಗುತ್ತಿರುವುದರ ಮೂಲ ಹುಡುಕಿ ಹೊರಟ ಸಿಸಿಬಿ ಪೊಲೀಸರು (Central Crime Branch-CCB Bengaluru) ವಿಶೇಷ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ. ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಪುಟ್ಟಪರ್ತಿ ಬಳಿ ಬೆಂಗಳೂರು ಮೂಲದ ಪೆಡ್ಲರ್ಸ್​ಗೆ ಗಾಂಜಾ ಪೂರೈಸುವ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಚಿಂತಲಪಲ್ಲಿಯ ಅರಣ್ಯ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಯಾಗುತ್ತಿದ್ದು ಅಲ್ಲಿಂದ ವಿವಿಧ ಮಾದಕ ಪದಾರ್ಥಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು. ನಂತರ ರೈಲಿನಲ್ಲಿ ಅವುಗಳನ್ನು ಸಾಗಿಸಿ ನಿಗದಿಯಾದ ಸ್ಥಳಗಳಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳಿಗೆ ಡಿಲೆವರಿ ನೀಡಿ ವಾಪಸಾಗುತ್ತಿದ್ದರು.

ವಿವೇಕನಗರ ಠಾಣಾ ಪೊಲೀಸರಿಂದ ಬಂಧಿತನಾಗಿದ್ದ ವಿದೇಶಿ ಮೂಲದ ಡಿಜೆಯನ್ನು ವಿಚಾರಣೆ ನಡೆಸಿ, ಕಾರ್ಯಾಚರಣೆ ನಡೆಸಿದ ಸಿಸಿಬಿ‌ ಪೊಲೀಸರು, ಬರೋಬ್ಬರಿ 7 ಕೋಟಿ 80 ಲಕ್ಷ ಮೌಲ್ಯದ 1 ಕೆ. ಜಿ 4 ಗ್ರಾಂ ಮಾದಕ ಮಾತ್ರೆ, 8 ಕೆಜಿ ಹ್ಯಾಶಿಸ್​ ಆಯಿಲ್, 10 ಕೆಜಿ ಗಾಂಜಾ ಸಹಿತ ಆರೋಪಿ ಮಹಿಳೆಯರನ್ನ ಬಂಧಿಸಿದ್ದಾರೆ. ಆದರೆ ಚಿಂತಪಲ್ಲಿ ಅರಣ್ಯ ಪ್ರದೇಶದಲ್ಲಿ ಕುಳಿತು ಇಡೀ ಜಾಲ ನಡೆಸುತ್ತಿದ್ದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. (ವರದಿ: ವಿನಯ್)

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!