AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಮೋಸ ಹೋಗಿದ್ದಕ್ಕೆ ಬೇರೆಯವರಿಗೂ ಉಂಡೆನಾಮ ಹಾಕಿದ Online ವಂಚಕ ಅಂದರ್​

ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್​ಲೈನ್ ವಂಚಕನನ್ನು ತಿಲಕ್​ ನಗರ​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್​ ನಂದೀಶ್ ರೆಡ್ಡಿ ಅಲಿಯಾಸ್​ ಬಾಬು ಅಲಿಯಾಸ್​ ಭರತ್ ಅಲಿಯಾಸ್​ ಶಿವಾಜಿರಾವ್ ಎಂದು ಗುರುತಿಸಲಾಗಿದೆ. ಆನ್​ಲೈನ್​ ಮಾರಾಟದ ವೆಬ್​ಸೈಟ್​ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ. ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ […]

ತಾನು ಮೋಸ ಹೋಗಿದ್ದಕ್ಕೆ ಬೇರೆಯವರಿಗೂ ಉಂಡೆನಾಮ ಹಾಕಿದ Online ವಂಚಕ ಅಂದರ್​
KUSHAL V
|

Updated on: Aug 30, 2020 | 1:58 PM

Share

ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್​ಲೈನ್ ವಂಚಕನನ್ನು ತಿಲಕ್​ ನಗರ​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್​ ನಂದೀಶ್ ರೆಡ್ಡಿ ಅಲಿಯಾಸ್​ ಬಾಬು ಅಲಿಯಾಸ್​ ಭರತ್ ಅಲಿಯಾಸ್​ ಶಿವಾಜಿರಾವ್ ಎಂದು ಗುರುತಿಸಲಾಗಿದೆ.

ಆನ್​ಲೈನ್​ ಮಾರಾಟದ ವೆಬ್​ಸೈಟ್​ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ.

ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬರುವವರನ್ನೇ ಬಳಸಿಕೊಂಡ ನಂದೀಶ್​ ಅವರ ಹೆಸರಲ್ಲಿ ಹೊಸ ಸಿಮ್ ಖರೀದಿಸುತ್ತಿದ್ದನಂತೆ. ನಂತರ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂನಲ್ಲಿನ ಕಾರುಗಳ ಫೋಟೊ ತೆಗದು ಜಾಹಿರಾತು ಹಾಕಿ ಕಡಿಮೆ ಬೆಲೆಗೆ ಕಾರು ಮಾರಾಟಕ್ಕಿದೆ ಎಂದು ಜನರನ್ನ ನಂಬಿಸಿ ಲಕ್ಷ ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿದ್ದನಂತೆ.

ಕಾರ್ ಮಾಲೀಕರು ಹಾಗೂ ಗ್ರಾಹಕರಿಬ್ಬರಿಗೂ ಅನುಮಾನ ಬಾರದ ರೀತಿಯಲ್ಲಿ ಕೃತ್ಯವೆಸಗುತ್ತಿದ್ದ ನಂದೀಶ್​ ಇದಲ್ಲದೆ ಬೇರೆ ಬೇರೆ ಹೆಸರಿನಲ್ಲಿ ನನಗೆ ಸೆಕೆಂಡ್ ಹ್ಯಾಂಡ್ ಕಾರ್ ಅಥವಾ ಬೈಕ್​ ಬೇಕು ಅಂತಾ ನಕಲಿ ಜಾಹಿರಾತು ಸಹ ನೀಡುತ್ತಿದ್ದನಂತೆ. ಒಂದು ವೇಳೆ ಯಾರಾದ್ರೂ ಇವನನ್ನ ಸಂಪರ್ಕಿಸಿದರೆ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರ್ ಅಥವಾ ಬೈಕ್​ನ ಕದ್ದು ಪರಾರಿಯಾಗುತ್ತಿದ್ದನಂತೆ.

ಹೀಗೆ, ಹಲವಾರು ಬಾರಿ ಜನರಿಗೆ ವಂಚನೆ ಮಾಡಿದ್ದ ನಂದೀಶ್ ಬಂದ ಹಣದಿಂದ ಐಷಾರಾಮಿ ವಸ್ತುಗಳನ್ನು ಖರೀದಿಸಿ ಎನ್ಜಾಯ್ ಮಾಡ್ತಿದ್ದ. ಈತನ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಂದೀಶ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತನಿಂದ 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಒಂದು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!