AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಮೋಸ ಹೋಗಿದ್ದಕ್ಕೆ ಬೇರೆಯವರಿಗೂ ಉಂಡೆನಾಮ ಹಾಕಿದ Online ವಂಚಕ ಅಂದರ್​

ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್​ಲೈನ್ ವಂಚಕನನ್ನು ತಿಲಕ್​ ನಗರ​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್​ ನಂದೀಶ್ ರೆಡ್ಡಿ ಅಲಿಯಾಸ್​ ಬಾಬು ಅಲಿಯಾಸ್​ ಭರತ್ ಅಲಿಯಾಸ್​ ಶಿವಾಜಿರಾವ್ ಎಂದು ಗುರುತಿಸಲಾಗಿದೆ. ಆನ್​ಲೈನ್​ ಮಾರಾಟದ ವೆಬ್​ಸೈಟ್​ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ. ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ […]

ತಾನು ಮೋಸ ಹೋಗಿದ್ದಕ್ಕೆ ಬೇರೆಯವರಿಗೂ ಉಂಡೆನಾಮ ಹಾಕಿದ Online ವಂಚಕ ಅಂದರ್​
KUSHAL V
|

Updated on: Aug 30, 2020 | 1:58 PM

Share

ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್​ಲೈನ್ ವಂಚಕನನ್ನು ತಿಲಕ್​ ನಗರ​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್​ ನಂದೀಶ್ ರೆಡ್ಡಿ ಅಲಿಯಾಸ್​ ಬಾಬು ಅಲಿಯಾಸ್​ ಭರತ್ ಅಲಿಯಾಸ್​ ಶಿವಾಜಿರಾವ್ ಎಂದು ಗುರುತಿಸಲಾಗಿದೆ.

ಆನ್​ಲೈನ್​ ಮಾರಾಟದ ವೆಬ್​ಸೈಟ್​ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ.

ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬರುವವರನ್ನೇ ಬಳಸಿಕೊಂಡ ನಂದೀಶ್​ ಅವರ ಹೆಸರಲ್ಲಿ ಹೊಸ ಸಿಮ್ ಖರೀದಿಸುತ್ತಿದ್ದನಂತೆ. ನಂತರ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂನಲ್ಲಿನ ಕಾರುಗಳ ಫೋಟೊ ತೆಗದು ಜಾಹಿರಾತು ಹಾಕಿ ಕಡಿಮೆ ಬೆಲೆಗೆ ಕಾರು ಮಾರಾಟಕ್ಕಿದೆ ಎಂದು ಜನರನ್ನ ನಂಬಿಸಿ ಲಕ್ಷ ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿದ್ದನಂತೆ.

ಕಾರ್ ಮಾಲೀಕರು ಹಾಗೂ ಗ್ರಾಹಕರಿಬ್ಬರಿಗೂ ಅನುಮಾನ ಬಾರದ ರೀತಿಯಲ್ಲಿ ಕೃತ್ಯವೆಸಗುತ್ತಿದ್ದ ನಂದೀಶ್​ ಇದಲ್ಲದೆ ಬೇರೆ ಬೇರೆ ಹೆಸರಿನಲ್ಲಿ ನನಗೆ ಸೆಕೆಂಡ್ ಹ್ಯಾಂಡ್ ಕಾರ್ ಅಥವಾ ಬೈಕ್​ ಬೇಕು ಅಂತಾ ನಕಲಿ ಜಾಹಿರಾತು ಸಹ ನೀಡುತ್ತಿದ್ದನಂತೆ. ಒಂದು ವೇಳೆ ಯಾರಾದ್ರೂ ಇವನನ್ನ ಸಂಪರ್ಕಿಸಿದರೆ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರ್ ಅಥವಾ ಬೈಕ್​ನ ಕದ್ದು ಪರಾರಿಯಾಗುತ್ತಿದ್ದನಂತೆ.

ಹೀಗೆ, ಹಲವಾರು ಬಾರಿ ಜನರಿಗೆ ವಂಚನೆ ಮಾಡಿದ್ದ ನಂದೀಶ್ ಬಂದ ಹಣದಿಂದ ಐಷಾರಾಮಿ ವಸ್ತುಗಳನ್ನು ಖರೀದಿಸಿ ಎನ್ಜಾಯ್ ಮಾಡ್ತಿದ್ದ. ಈತನ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಂದೀಶ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತನಿಂದ 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಒಂದು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದೆ.

Follow Us
KUSHAL V
KUSHAL V
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ