AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ. ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ […]

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ
KUSHAL V
| Edited By: |

Updated on:Jul 20, 2020 | 4:55 PM

Share

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ.

ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ ಎಂದು ನಕಲಿ ID ಕ್ರಿಯೆಟ್ ಮಾಡಿಕೊಂಡ.

ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಆ್ಯಪ್ ಮೂಲಕ ಹಲವು ಯುವತಿಯರನ್ನ ಪರಿಚಯ ಮಾಡಿಕೊಂಡಿದ್ದ ರಮೇಶ್ ಅವರನ್ನ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆಯುತಿದ್ದನಂತೆ. ನಂತರ ನಾನವನಲ್ಲ, ನಾನವನಲ್ಲ ಅಂತಾ ಹೇಳಿ ಹುಡುಗಿಯರಿಗೆ ಉಂಡೇ ನಾಮ ಹಾಕುತ್ತಿದ್ದನಂತೆ.

ಒಂದು ವೇಳು ಯುವತಿ ಕೊಂಚ ಧೈರ್ಯ ಮಾಡಿ ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಒಡ್ಡೋನಂತೆ ಈ ಕಿರಾತಕ. ಇದೇ ರೀತಿ 5ಕ್ಕೂ ಹೆಚ್ಚು ಯುವತಿಯರಿಗೆ ಟೋಪಿ ಹಾಕಿರುವ ಜಗನ್ನಾಥ ಬರೋಬ್ಬರಿ 25 ಲಕ್ಷ ರೂಪಾಯಿ ವಂಚಿಸಿದ್ದಾನಂತೆ.

ಕೊರೊನಾ ಭಯದಿಂದಲೋ ಏನೋ ನಗರದಿಂದ ಪರಾರಿಯಾಗಿದ್ದ ಖದೀಮ ಹಾಸನದಲ್ಲಿ ಮನೆ ಮಾಡಿದ್ದನಂತೆ. ಕೊನೆಗೂ ಧೈರ್ಯ ಮಾಡಿಕೊಂಡು ಬನಶಂಕರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಓರ್ವ ಯುವತಿ ವಂಚನೆ ಬಗ್ಗೆ ಕಂಪ್ಲೇಂಟ್​ ಕೊಟ್ಟೇಬಿಟ್ಟಳು.

ದೂರು ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೊನೆಗೂ ರಮೇಶ್​ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 6.8 ಲಕ್ಷ ನಗದು, 25 ಸಿಮ್​ ಕಾರ್ಡ್​, ಒಂದು ಕಾರ್ ಸಹ ಪಡೆದಿದ್ದಾರಂತೆ. ಜೊತೆಗೆ ಆರೋಪಿ ಮೂರು ವೋಟರ್​ ID ಸಹ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

Published On - 4:53 pm, Mon, 20 July 20

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!