AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ. ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ […]

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ
KUSHAL V
| Edited By: |

Updated on:Jul 20, 2020 | 4:55 PM

Share

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ.

ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ ಎಂದು ನಕಲಿ ID ಕ್ರಿಯೆಟ್ ಮಾಡಿಕೊಂಡ.

ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಆ್ಯಪ್ ಮೂಲಕ ಹಲವು ಯುವತಿಯರನ್ನ ಪರಿಚಯ ಮಾಡಿಕೊಂಡಿದ್ದ ರಮೇಶ್ ಅವರನ್ನ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆಯುತಿದ್ದನಂತೆ. ನಂತರ ನಾನವನಲ್ಲ, ನಾನವನಲ್ಲ ಅಂತಾ ಹೇಳಿ ಹುಡುಗಿಯರಿಗೆ ಉಂಡೇ ನಾಮ ಹಾಕುತ್ತಿದ್ದನಂತೆ.

ಒಂದು ವೇಳು ಯುವತಿ ಕೊಂಚ ಧೈರ್ಯ ಮಾಡಿ ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಒಡ್ಡೋನಂತೆ ಈ ಕಿರಾತಕ. ಇದೇ ರೀತಿ 5ಕ್ಕೂ ಹೆಚ್ಚು ಯುವತಿಯರಿಗೆ ಟೋಪಿ ಹಾಕಿರುವ ಜಗನ್ನಾಥ ಬರೋಬ್ಬರಿ 25 ಲಕ್ಷ ರೂಪಾಯಿ ವಂಚಿಸಿದ್ದಾನಂತೆ.

ಕೊರೊನಾ ಭಯದಿಂದಲೋ ಏನೋ ನಗರದಿಂದ ಪರಾರಿಯಾಗಿದ್ದ ಖದೀಮ ಹಾಸನದಲ್ಲಿ ಮನೆ ಮಾಡಿದ್ದನಂತೆ. ಕೊನೆಗೂ ಧೈರ್ಯ ಮಾಡಿಕೊಂಡು ಬನಶಂಕರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಓರ್ವ ಯುವತಿ ವಂಚನೆ ಬಗ್ಗೆ ಕಂಪ್ಲೇಂಟ್​ ಕೊಟ್ಟೇಬಿಟ್ಟಳು.

ದೂರು ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೊನೆಗೂ ರಮೇಶ್​ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 6.8 ಲಕ್ಷ ನಗದು, 25 ಸಿಮ್​ ಕಾರ್ಡ್​, ಒಂದು ಕಾರ್ ಸಹ ಪಡೆದಿದ್ದಾರಂತೆ. ಜೊತೆಗೆ ಆರೋಪಿ ಮೂರು ವೋಟರ್​ ID ಸಹ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

Published On - 4:53 pm, Mon, 20 July 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ