AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ. ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ […]

ಮದುವೆ ಆಗುವುದಾಗಿ ಯುವತಿಯರಿಗೆ ವಂಚಿಸುತ್ತಿದ್ದವ ಕೊನೆಗೂ ಅರೆಸ್ಟ್ ಆದ
KUSHAL V
| Updated By: ಸಾಧು ಶ್ರೀನಾಥ್​|

Updated on:Jul 20, 2020 | 4:55 PM

Share

ಬೆಂಗಳೂರು: ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾದಂತೆ ಹುಡುಗಿಯರನ್ನ ಮೋಹಿಸಿ ನಂತರ ಅವರನ್ನ ವಂಚಿಸುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ರಮೇಶ್ ಎಸ್ ಅಲಿಯಾಸ್​ ಜಗನ್ನಾಥ ಎಸ್ ಸಜ್ಜನ್ ಬಂಧಿತ ಆರೋಪಿ.

ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ನಕಲಿ ID ಕ್ರಿಯೆಟ್ ಮಾಡಿಕೊಂಡ ಭೂಪ ಮೂಲತಃ ವಿಜಯಪುರದ ಹಿಪ್ಪರಿಗೆಯನಾದ ಈ ಭೂಪ ಹಲವು ವರ್ಷಗಳಿಂದ ನಗರದಲ್ಲಿ ಉದ್ಯೋಗ ಮಾಡುತ್ತಿದ್ದ. ಈ ಮಧ್ಯೆ ಸುಂದರ ಯುವತಿಯರನ್ನ ಮದುವೆಯಾಗೊದಾಗಿ ನಂಬಿಸಿ ಅವರಿಂದ ಹಣ ಪಡೆಯಲು ಪ್ಲಾನ್​ ಮಾಡಿದ. ಅಂತೆಯೇ ಪ್ರತಿಷ್ಠಿತ ಮ್ಯಾಟ್ರಿಮೊನಿ ಆ್ಯಪ್​ನಲ್ಲಿ ರಾಮ್ ಎಂದು ನಕಲಿ ID ಕ್ರಿಯೆಟ್ ಮಾಡಿಕೊಂಡ.

ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಆ್ಯಪ್ ಮೂಲಕ ಹಲವು ಯುವತಿಯರನ್ನ ಪರಿಚಯ ಮಾಡಿಕೊಂಡಿದ್ದ ರಮೇಶ್ ಅವರನ್ನ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆಯುತಿದ್ದನಂತೆ. ನಂತರ ನಾನವನಲ್ಲ, ನಾನವನಲ್ಲ ಅಂತಾ ಹೇಳಿ ಹುಡುಗಿಯರಿಗೆ ಉಂಡೇ ನಾಮ ಹಾಕುತ್ತಿದ್ದನಂತೆ.

ಒಂದು ವೇಳು ಯುವತಿ ಕೊಂಚ ಧೈರ್ಯ ಮಾಡಿ ಮದ್ವೆ ಆಗು ಅಂತಾ ಕೇಳಿದರೆ ಜೀವ ಬೆದರಿಕೆ ಒಡ್ಡೋನಂತೆ ಈ ಕಿರಾತಕ. ಇದೇ ರೀತಿ 5ಕ್ಕೂ ಹೆಚ್ಚು ಯುವತಿಯರಿಗೆ ಟೋಪಿ ಹಾಕಿರುವ ಜಗನ್ನಾಥ ಬರೋಬ್ಬರಿ 25 ಲಕ್ಷ ರೂಪಾಯಿ ವಂಚಿಸಿದ್ದಾನಂತೆ.

ಕೊರೊನಾ ಭಯದಿಂದಲೋ ಏನೋ ನಗರದಿಂದ ಪರಾರಿಯಾಗಿದ್ದ ಖದೀಮ ಹಾಸನದಲ್ಲಿ ಮನೆ ಮಾಡಿದ್ದನಂತೆ. ಕೊನೆಗೂ ಧೈರ್ಯ ಮಾಡಿಕೊಂಡು ಬನಶಂಕರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಓರ್ವ ಯುವತಿ ವಂಚನೆ ಬಗ್ಗೆ ಕಂಪ್ಲೇಂಟ್​ ಕೊಟ್ಟೇಬಿಟ್ಟಳು.

ದೂರು ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೊನೆಗೂ ರಮೇಶ್​ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 6.8 ಲಕ್ಷ ನಗದು, 25 ಸಿಮ್​ ಕಾರ್ಡ್​, ಒಂದು ಕಾರ್ ಸಹ ಪಡೆದಿದ್ದಾರಂತೆ. ಜೊತೆಗೆ ಆರೋಪಿ ಮೂರು ವೋಟರ್​ ID ಸಹ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

Published On - 4:53 pm, Mon, 20 July 20

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್