Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ‌ವಾಗಿ ಎಡಿಟ್ ಮಾಡಿದ್ದ ಫೋಟೋ ತೋರಿಸಿ ಗಣ್ಯರಿಗೆ ಬ್ಲ್ಯಾಕ್​ಮೇಲ್: ಕೋಳಿ ಫಾರ್ಮ್​ ಓನರ್​ ಅರೆಸ್ಟ್​​

ಬೆಂಗಳೂರು: ನಗರದ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರೊಫೆಸರ್​ಗಳ ಫೋಟೋ ಮಾರ್ಫಿಂಗ್ ಮಾಡಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ವೈಟ್​ಫೀಲ್ಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್​ ಬಂಧಿತ ಆರೋಪಿ. ಆರೋಪಿ ವಿಶ್ವಾಸ್​ ನಗರದ ಹಲವು ಗಣ್ಯರು ತಮ್ಮ ಫೇಸ್​ಬುಕ್, WhatsApp, ಟ್ವಿಟರ್ ಹಾಗೂ ಇನ್​ಸ್ಟಾಗ್ರಾಮ್ ಖಾತೆಗಳಲ್ಲಿ ಅಪ್​ಲೋಡ್​ ಮಾಡ್ತಿದ್ದ ಫೋಟೋಗಳನ್ನು ಮಾರ್ಫಿಂಗ್ ಮಾಡುತ್ತಿದ್ದ. ಫೋಟೋಗಳನ್ನು ಅಶ್ಲೀಲ‌ವಾಗಿ ಎಡಿಟ್ ಮಾಡಿ ಬಳಿಕ ಗಣ್ಯರಿಗೆ ಅವುಗಳನ್ನು ತೋರಿಸಿ ಹಣಕ್ಕಾಗಿ ಡಿಮ್ಯಾಂಡ್​ ಇಡುತ್ತಿದ್ದನಂತೆ. ದುಡ್ಡು ಕೊಡದಿದ್ದರೆ ಎಡಿಟೆಡ್​ ಫೋಟೋವನ್ನು ಸಾಮಾಜಿಕ […]

ಅಶ್ಲೀಲ‌ವಾಗಿ ಎಡಿಟ್ ಮಾಡಿದ್ದ ಫೋಟೋ ತೋರಿಸಿ ಗಣ್ಯರಿಗೆ ಬ್ಲ್ಯಾಕ್​ಮೇಲ್: ಕೋಳಿ ಫಾರ್ಮ್​ ಓನರ್​ ಅರೆಸ್ಟ್​​
Follow us
KUSHAL V
|

Updated on: Oct 10, 2020 | 6:13 PM

ಬೆಂಗಳೂರು: ನಗರದ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರೊಫೆಸರ್​ಗಳ ಫೋಟೋ ಮಾರ್ಫಿಂಗ್ ಮಾಡಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ವೈಟ್​ಫೀಲ್ಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್​ ಬಂಧಿತ ಆರೋಪಿ. ಆರೋಪಿ ವಿಶ್ವಾಸ್​ ನಗರದ ಹಲವು ಗಣ್ಯರು ತಮ್ಮ ಫೇಸ್​ಬುಕ್, WhatsApp, ಟ್ವಿಟರ್ ಹಾಗೂ ಇನ್​ಸ್ಟಾಗ್ರಾಮ್ ಖಾತೆಗಳಲ್ಲಿ ಅಪ್​ಲೋಡ್​ ಮಾಡ್ತಿದ್ದ ಫೋಟೋಗಳನ್ನು ಮಾರ್ಫಿಂಗ್ ಮಾಡುತ್ತಿದ್ದ. ಫೋಟೋಗಳನ್ನು ಅಶ್ಲೀಲ‌ವಾಗಿ ಎಡಿಟ್ ಮಾಡಿ ಬಳಿಕ ಗಣ್ಯರಿಗೆ ಅವುಗಳನ್ನು ತೋರಿಸಿ ಹಣಕ್ಕಾಗಿ ಡಿಮ್ಯಾಂಡ್​ ಇಡುತ್ತಿದ್ದನಂತೆ. ದುಡ್ಡು ಕೊಡದಿದ್ದರೆ ಎಡಿಟೆಡ್​ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಸಹ ಒಡ್ಡುತ್ತಿದ್ದನಂತೆ. ಅಂದ ಹಾಗೆ, ಈ ಖದೀಮ ಡ್ಯಾಡಿ ಅಬೌವ್ 50 ಅನ್ನೋ WhatsApp ಗ್ರೂಪ್​ಗೆ ಎಂಟ್ರಿ ಕೊಟ್ಟು ಅಲ್ಲಿಂದ ಫೋಟೋ ಎಗರಿಸ್ತಿದ್ದ ಎಂದು ಹೇಳಲಾಗಿದೆ. ಐವತ್ತು ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿದ್ದ WhatsApp ಗ್ರೂಪ್​ನಲ್ಲಿ ಪ್ರತಿಷ್ಠಿತ ರಾಜಕಾರಣಿ, ಉದ್ಯಮಿಗಳು ಹಾಗೂ ಪ್ರೊಫೆಸರ್​ಗಳಿಗೆ ಈ ರೀತಿ ಬ್ಲ್ಯಾಕ್​ಮೇಲೆ ಮಾಡೋಕೆ ಮುಂದಾಗಿದ್ದ. ಅಂತೆಯೇ, ನಗರದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಒಬ್ಬರ ಪೋಟೋ ಮಾರ್ಫಿಂಗ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ.

ವಿಶ್ವಾಸ್​ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಆತ ಹಾಗೂ ಆತನ ಗ್ಯಾಂಗ್​ ವಿರುದ್ಧ ಪ್ರೊಫೆಸರ್ ಒಬ್ಬರು ವೈಟ್​ಫೀಲ್ಡ್ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆರೋಪಿ ವಿಶ್ವಾಸ್​ನನ್ನು ಬಂಧಿಸಿದ್ದಾರೆ. ಅರೋಪಿ ನಗರದ ಹೊರವಲಯದ ಚಿಕ್ಕಜಾಲದ ಸಮೀಪ ಕೋಳಿ ಫಾರಂ ಇಟ್ಟುಕೊಂಡಿದ್ದ ಎಂದು ಸಹ ತಿಳಿದುಬಂದಿದೆ. ಸದ್ಯ ಆರೋಪಿಗೆ ಖಾಕಿ ಪಡೆ ವಿಚಾರಣೆ ನಡೆಸುತ್ತಿದ್ದು ಆತನ ಸಹಚರರರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ