AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಬದಲು ಬೇರೆಯೊಬ್ಬನನ್ನು ಪರೀಕ್ಷೆ ಬರೆಯಲು ಕಳಸಿದ ‘ಮನೋಹರ್ ಭಾಯಿ ಎಮ್​ಬಿಬಿಎಸ್’ ಪೊಲೀಸರಿಗೆ ಸಿಕ್ಕಿಬಿದ್ದ!

ಕೇಂದ್ರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಬಿಇ) ಹೆಸರಿನ ಸ್ತಾಯತ್ತ ಸಂಸ್ಥೆ ನಡೆಸುವ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (ಎಫ್​ಎಮ್​ಜಿಇ) ಮನೋಹರ್ ಸಿಂಗ್ ತನ್ನ ಹೆಸರು ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ತನ್ನ ಬದಲು ಬೇರೆಯೊಬ್ಬನನ್ನು ಪರೀಕ್ಷೆ ಬರೆಯಲು ಕಳಸಿದ ‘ಮನೋಹರ್ ಭಾಯಿ ಎಮ್​ಬಿಬಿಎಸ್’ ಪೊಲೀಸರಿಗೆ ಸಿಕ್ಕಿಬಿದ್ದ!
ಪೊಲೀಸರಿಗೆ ಸಿಕ್ಕಿಬಿದ್ದಿರುವ ಮನೋಹರ್ ಸಿಂಗ್
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 13, 2021 | 6:04 PM

Share

ನವದೆಹಲಿ: ತಜಿಕಿಸ್ತಾನಲ್ಲಿ ಎಮ್​ಬಿಬಿಎಸ್ ಪದವಿ ಪಡೆದು ಭಾರತದಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಲು ಅವಶ್ಯವಾಗಿರುವ ಪರೀಕ್ಷೆಯೊಂದನ್ನು ಬರೆಯಲು ತನ್ನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಪರೀಕ್ಷಾ ಕೇಂದ್ರಕ್ಕೆ ಕಳಿಸಿದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮನೋಹರ್ ಸಿಂಗ್ ಎಂದು ಗುರುತಿಸಲಾಗಿದೆ ಮತ್ತು ಈತ ಮನೋಹರ್ ರಾಜಸ್ತಾನ ಪಾಲಿ ಜಿಲ್ಲೆಯ ನಿವಾಸಿಯಾಗಿದ್ದಾನೆ.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್​ಬಿಇ) ಹೆಸರಿನ ಸ್ತಾಯತ್ತ ಸಂಸ್ಥೆ ನಡೆಸುವ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಗೆ (ಎಫ್​ಎಮ್​ಜಿಇ) ಮನೋಹರ್ ಸಿಂಗ್ ತನ್ನ ಹೆಸರು ನೋಂದಾಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ವಿದೇಶಗಳಲ್ಲಿ ಪ್ರಾಥಮಿಕ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆಯುವ ಭಾರತೀಯ ಇಲ್ಲವೇ ಭಾರತೀಯ ಮೂಲದ ವಿದೇಶೀ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಭಾರತದಲ್ಲಿ ವೃತ್ತಿ ಆರಂಭಿಸಲು ಪರವಾನಗಿ ದೊರೆಯುತ್ತದೆ.

ಎಫ್​ಎಮ್​ಜಿಇ ಡಿಸೆಂಬರ್ 4, 2020ರಂದು ನಡೆಸಿದ ಸ್ಕ್ರೀನಿಂಗ್ ಟೆಸ್ಟ್​ಗೆ ಹಾಜರಾದ ಮನೋಹರ್ ಸಿಂಗ್​ಗೆ ಮಥರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರವನ್ನು ನಿಗದಿಗೊಳಿಸಲಾಗಿತ್ತು ಎಂದು ಪೊಲೀಸ್​​ ಮೂಲಗಳು ಹೇಳಿವೆ.

ಮನೋಹರ್ ತನ್ನ ಅರ್ಜಿಗೆ ಲಗತ್ತಿಸಿದ ಫೋಟೋ ಮತ್ತು ಪರೀಕ್ಷಾ ದಿನದಂದು ತೆಗೆದ ಫೋಟೋಗಳಲ್ಲಿ ಸಾಮ್ಯತೆ ಕಾಣದೆ ಹೋಗಿದ್ದರಿಂದ ಅವನ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಮುಖದ ಗುರುತನ್ನು ಪರೀಶೀಲಿಸಲು ಮನೋಹರ್​ನನ್ನು ಫೆಬ್ರುವರಿ 3 ರಂದು ಮಂಡಳಿ ಎದುರು ಹಾಜರಾಗುವಂತೆ ತಿಳಿಸಲಾಗಿತ್ತು, ಆದರೆ ಆರೋಪಿಯು ಅಂದು ಹಾಜರಾಗಲಿಲ್ಲ.

Munna Bhai MBBS

ಮುನ್ನಾ ಭಾಯಿ ಎಮ್​ಬಿಬಿಎಸ್​ ಚಿತ್ರದಲ್ಲಿ ಸಂಜಯ್ ದತ್

‘ಬುಧವಾರದಂದು ಮನೋಹರ್ ಸಿಂಗ್ ಮುಖದ ಗುರುತು ಪರಶೀಲನೆಗೆ ಎನ್​ಬಿಇ ಕಚೇರಿಯಲ್ಲಿ ಹಾಜರಾಗಿದ್ದ. ಅಧಿಕಾರಿಗಳ ಗುಪೊಂದು ಅವನ ಅರ್ಜಿ ಮೇಲಿನ ಫೋಟೋ ಮತ್ತು ಅವನ ಮುಖಕ್ಕೆ ತಾಳೆ ಮಾಡಿ ನೋಡಿದಾಗ ಎರಡರಲ್ಲಿ ಸಾಮ್ಯತೆ ಕಂಡಿಲ್ಲ,’ ಎಂದು ದೆಹಲಿ ಆಗ್ನೇಯ ವಿಭಾಗದ ಡಿಸಿಪಿ ಅರ್ ಪಿ ಮೀನಾ ಹೇಳಿದರು.

ಅದಾದ ಮೇಲೆ ಅವನಿಗೆ ಪರೀಕ್ಷೆಯಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸುವಂತೆ ಹೇಳಲಾಯಿತು. ಆದರೆ ಅವನಿಂದ ಸರಿಯುತ್ತರ ಬರಲಿಲ್ಲ. ಅವನ ಮೇಲೆ ಅನುಮಾನ ಹೆಚ್ಚಾಗಿ ಪೊಲೀಸ್ ಸ್ಟೇಷನ್​ಗೆ ಕರೆದೊಯ್ಯಲಾಯಿತು ಎಂದು ಡಿಸಿಪಿ ಹೇಳಿದರು.

ನಂತರ ಮನೋಹರ್ ಸಿಂಗ್​ನನ್ನು ಬಂಧಿಸಿ ಅವನ ಪ್ರವೇಶ ಕಾರ್ಡ್, ಎಮ್​ಬಿಬಿಎಸ್​ ಪದವಿ ಪ್ರಮಾಣ ಪತ್ರ ಮತ್ತು ಅರ್ಜಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಮೀನಾ ಹೇಳಿದರು.

ಪೊಲೀಸ್ ವಿಚಾರಣೆಯಲ್ಲಿ ಆರೋಪಿಯು ತಾನು ತಜಿಕಿಸ್ತಾನನಲ್ಲಿ ಎಮ್​ಬಿಬಿಎಸ್ ಪದವಿ ಪಡೆದಿರುವುದಾಗಿ ಹೇಳಿದ್ದು ಕಳೆದ 6 ವರ್ಷಗಳಿಂದ ಎಫ್​ಎಮ್​ಜಿಇ ಪರೀಕ್ಷೆ ಪಾಸು ಮಾಡಲು ಪ್ರಯತ್ನಿಸುತ್ತಿದ್ದನಂತೆ, ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲೇ ಅವನು ಒಬ್ಬ ಡಾಕ್ಟರ್​ನನ್ನು ಭೇಟಿಯಾದಾಗ ಅವನು ಪರೀಕ್ಷೆ ತಾನು ಬರೆದು ಪಾಸು ಮಾಡುವುದಾಗಿ ಹೇಳಿದ್ದಾನೆ. ಈ ಕೆಲಸಕ್ಕಾಗಿ ಅವನು ಮನೋಹರ್​ನಿಂದ ರೂ. 4 ಲಕ್ಷ ‘ಫೀಸು’ ಪಡೆದಿದ್ದಾನೆ. ಸದರಿ ಡಾಕ್ಟರ್ ಡಿಸೆಂಬರ್ 20ರಂದು ಮನೋಹರ್​ ಬದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ ಎಂದು ಮೀನಾ ಹೇಳಿದರು.

ಇದನ್ನೂ ಓದಿ: ದಾವೂದ್​ ಇಬ್ರಾಹಿಂಗೆ ವಯಸ್ಸಾಯ್ತು; ಪಾತಕಲೋಕ ಆಳುವ ‘ಡಿ’ ಕಂಪನಿಗೆ ಉತ್ತರಾಧಿಕಾರಿ ಬೇಕಂತೆ..

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?